Advertisement

Tag: Sanjotha Purohith

ಕೂರಾಪುರಾಣ ೧೧: ಅವನಿದ್ದರೆ ಮನೆ ತುಂಬಿದಂತೆ, ಮನಸ್ಸು ಅರಳಿದಂತೆ…

ನಮ್ಮನ್ನು ಕಾಡುತ್ತಿದ್ದ ಒಂದು ಸಂಗತಿಯೆಂದರೆ ಇಡೀ ದಿನ ಅವರು ನಾಯಿಯನ್ನು ಮನೆಯಲ್ಲಿಯೇ ಬಿಟ್ಟು ಹೋಗುತ್ತಿದ್ದುದು. ಕೂರಾನಿಗೆ ಅದು ಅಭ್ಯಾಸವಿರದೇ ಇದ್ದುದ್ದರಿಂದ ಅವನು ಹೇಗೆ ವರ್ತಿಸುತ್ತಾನೋ ಎಂಬ ಚಿಂತೆ. ಅವರ ಮನೆಯಲ್ಲಿನ ವೈರ್, ಬೆಡಶೀಟ್, ಟವೆಲ್ ಎಲ್ಲವನ್ನು ಕಚ್ಚಿ ಹಾಕುವವನೇ.. ನಾವು ಭಾರತಕ್ಕೆ ಹಾರಿದ ಮೇಲೆ ಇಲ್ಲಿ ಅವನಿಗೆ ತೊಂದರೆಯಾದರೆ ಎಂದೆಲ್ಲ ಯೋಚನೆಗಳು ಬರತೊಡಗಿ ಮತ್ತಾರಾದರು ಆ ಆಪ್‌ನಲ್ಲಿ ನಮಗೆ ಹೊಂದುವಂತವರು ಸಿಗುತ್ತಾರೇನೋ ಎಂದು ನೋಡಹತ್ತಿದೆವು.
ಸಂಜೋತಾ ಪುರೋಹಿತ ಬರೆಯುವ “ಕೂರಾಪುರಾಣ” ಸರಣಿ

Read More

ಕೂರಾಪುರಾಣ ೧೦: ಬೆಳ್ಳಿ ಮೂಡಿತೋ ಕೋಳಿ ಕೂಗಿತೋ, ಫ್ರೆಂಡು ಊಳಿಟ್ಟಿತೋ..

ಪಾರ್ಕಿನಲ್ಲಿ ಹಲವಾರು ನಾಯಿಗಳು ಬಂದರು ಅವನು ಆಟವಾಡುವುದು ಕೆಲವೊಂದು ನಾಯಿಗಳ ಜೊತೆಗೆ ಮಾತ್ರ. ಶಾಲೆಯಲ್ಲಿ ನಡೆಯುವ ಹಾಗೆ ಇಲ್ಲಿಯೂ ಬುಲ್ಲಿ ಆಗುತ್ತದೆ. ಕೆಲವೊಂದು ಡಾಮಿನೇಟಿಂಗ್ ನಾಯಿಗಳಿರುತ್ತವೆ. ತಮ್ಮ ಮಟ್ಟದ ನಾಯಿಗಳ ಜೊತೆಗೆ ಮಾತ್ರ ಬೆರೆಯುವ ಇವು ಉಳಿದವುಗಳನ್ನ ತುಚ್ಛವಾಗಿ ನೋಡುತ್ತ ಕೆಲವೊಮ್ಮೆ ಗುಂಪು ಕಟ್ಟಿಕೊಂಡು ಅಟ್ಟಾಡಿಸುತ್ತವೆ.
ಸಂಜೋತಾ ಪುರೋಹಿತ ಬರೆಯುವ “ಕೂರಾಪುರಾಣ” ಸರಣಿಯ ಹತ್ತನೆಯ ಕಂತು

Read More

ಕೂರಾಪುರಾಣ ೯: ಕಾರು ಪ್ರಯಾಣವೆಂದರೆ ಮೇಲೇಳುತ್ತವೆ ಕಿವಿಗಳು..

ಕೂರಾ ಇಲ್ಲದಿದ್ದಾಗ ತರಕಾರಿ, ಕಿರಾಣಿ, ಮತ್ತಿತರೆ ಸಾಮಾನುಗಳನ್ನು ಹಿಂದಿನ ಸೀಟಿನಲ್ಲಿ ತುಂಬುತ್ತಿದ್ದ ನಾವು ಈಗ ಅವೆಲ್ಲವನ್ನು ಡಿಕ್ಕಿಯಲ್ಲಿ ಹೇರಿ ಅಲ್ಲಿ ಜಾಗ ಸಾಲದಾದರೆ ನಮ್ಮ ಕಾಲ ಬಳಿಯೇ ಇಟ್ಟುಕೊಂಡು ಇಕ್ಕಟ್ಟು ಮಾಡಿಕೊಳ್ಳುತ್ತೆವೆಯೇ ಹೊರತು ಹಿಂದೆ ಪವಡಿಸುವ ನಮ್ಮ ಮಹಾರಾಜರಿಗೆ ಒಂದಿನಿತು ಅಸೌಕರ್ಯ ಮಾಡುವುದಿಲ್ಲ.
ಸಂಜೋತಾ ಪುರೋಹಿತ ಬರೆಯುವ “ಕೂರಾಪುರಾಣ” ಸರಣಿಯ ಒಂಭತ್ತನೆಯ ಕಂತು

Read More

ಕೂರಾಪುರಾಣ ೭: ಏನ್ರೀ ಸಂಜಮ್ಮಾ ನಿಮ್ದು ಯಾವ ಜಾತಿಯ ನಾಯಿ?

ನನ್ನಂತೆಯೇ ಹಲವರಿದ್ದಾರೆ, ಈಗಲೂ ಅವರಿಗೆ ನಾಯಿಗಳ ಬಗ್ಗೆ ಹೆಚ್ಚಿನದ್ದೇನೂ ಗೊತ್ತಿಲ್ಲ ಎಂಬ ಕಾರಣಕ್ಕಾಗಿಯೇ ಕೂರಾಪುರಾಣ ಶುರು ಮಾಡಿದ್ದು. ಥಿಯರಿ ಓದಿದರೆ ಪ್ರಾಕ್ಟಿಕಲ್ ಮಾಡಲು ಸ್ವಲ್ಪ ಧೈರ್ಯ ಹುಟ್ಟಬಹುದು ಎಂಬ ಕಾರಣಕ್ಕೆ. ಯಾಕೆಂದರೆ ನಾಯಿಗಳೊಡನೆ ಹುಟ್ಟಿಕೊಳ್ಳುವ ನಂಟು, ಅವುಗಳ ಸ್ನೇಹಕ್ಕೆ ಭಾಜನರಾಗುವ ಯೋಗ್ಯತೆ, ಮುಗ್ಧ ಪ್ರೀತಿಯನ್ನು ಅನುಭವಿಸುವ ಯೋಗವನ್ನು ಎಲ್ಲರು ಪಡೆದುಕೊಳ್ಳಬೇಕು ಎಂಬುದೇ ನನ್ನ ಆಸೆ.
ಸಂಜೋತಾ ಪುರೋಹಿತ ಬರೆಯುವ “ಕೂರಾಪುರಾಣ” ಸರಣಿಯ ಏಳನೆಯ ಕಂತು

Read More

ಕೂರಾಪುರಾಣ ೬: ಪರಚುವ ಉಗುರುಗಳು ಮತ್ತು ಮೊಂಡು ನಾಯಿಗಳು

ನಾಯಿಗಳ ಸಲೂನಿನಲ್ಲಿ ಉಗುರುಗಳನ್ನು ಕತ್ತರಿಸುತ್ತಾರೆಂದು ಗೊತ್ತಾಗಿ ಅಲ್ಲಿಗೆ ಕರೆದುಕೊಂಡು ಹೋದೆವು. ಅಲ್ಲಿ ಅವನ ಯಾವ ತಂತ್ರಗಳು ನಡೆಯದೇ, ಆಕೆಗಿರುವ ಅನುಭವದಿಂದ ಉಗುರುಗಳನ್ನು ಕತ್ತರಿಸಿಯೇ ತೀರುತ್ತಾಳೆ ಎಂದು ನಾವು ಮನಸ್ಸಿನಲ್ಲಿ ಮಂಡಿಗೆ ಮೆಲ್ಲುತ್ತ ಹೊರಗೆ ಕಾಯುತ್ತಿದ್ದೆವು. ಸ್ವಲ್ಪ ಹೊತ್ತಿನ ನಂತರ ಹೊರಗೆ ಬಂದ ಆಕೆಯನ್ನು ನೋಡಿ ಬೆಟ್ಟದ ಚಾಮುಂಡಿದೇವಿಯೇ ದರ್ಶನ ಕೊಟ್ಟಂತಾಯಿತು. ಆದರೆ.. ಅವಳು ಸಹ ತನಗೆ ಆಗಲಿಲ್ಲ ಎಂದು ಕೂರಾನನ್ನು ಕರೆತಂದು ಕೊಟ್ಟು ಬಿಟ್ಟಳು!
ಸಂಜೋತಾ ಪುರೋಹಿತ ಬರೆಯುವ “ಕೂರಾಪುರಾಣ” ಸರಣಿಯ ಆರನೆಯ ಕಂತು

Read More
  • 1
  • 2

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ