Advertisement

Tag: ಕುಮಾರ ಬೇಂದ್ರೆ

ಭಾವವಿರೇಚನಗೊಳಿಸುವ ದೃಶ್ಯಕಾವ್ಯ ‘ಬಂಧಮುಕ್ತ’: ಡಾ. ಪ್ರಭು ಗಂಜಿಹಾಳ ಬರಹ

`ಬಂಧಮುಕ್ತ’ ಚಿತ್ರ ಇಂದಿನ ಕಾಲಘಟ್ಟದಲ್ಲಿ ಯಾಕೆ ವಿಶೇಷವಾದದ್ದು ಎಂಬುದರ ಕುರಿತು ವಿವರಿಸುವುದಾದರೆ; ಮೊದಲನೇಯದಾಗಿ ಈ ಚಿತ್ರದ ಶೀರ್ಷಿಕೆಯೇ ಒಂದು ಸಕಾರಾತ್ಮಕ ಸಂದೇಶ ನೀಡುವಂತಹದು. ಮನುಷ್ಯ ಹುಟ್ಟಿನಿಂದ ಸಾವಿನವರೆಗೆ ಯಾವುದಾದರೊಂದು ಹಿಡಿತಕ್ಕೆ ಸಿಲುಕಿ ಅದರಿಂದ ಹೊರ ಬರಲು ಹೆಣಗಾಡುತ್ತಿರುತ್ತಾನೆ. ಸಾವು ಮಾತ್ರ ಮನುಷ್ಯನ ನಿಜವಾದ ಬಿಡುಗಡೆ ಎಂದು ಹೇಳಬಹುದಾದರೂ ಸಾವಿಗೂ ಮುನ್ನವೇ ಬಂಧನಗಳಿಂದ ಮುಕ್ತವಾಗುವ ಮನಸ್ಥಿತಿಯೇ ಬಿಡುಗಡೆಯ ಮಾರ್ಗ ಎಂದು ವಾಖ್ಯಾನಿಸಬಹುದು. ಇದು ಮನೋವಿಜ್ಞಾನ ಮತ್ತು ಆಧ್ಯಾತ್ಮಿಕ ತತ್ವವನ್ನು ತಿಳಿಸುವ ವಿಚಾರ.
ಕುಮಾರ ಬೇಂದ್ರೆ ನಿರ್ದೇಶನದ “ಬಂಧಮುಕ್ತ” ಸಿನಿಮಾದ ಕುರಿತು ಡಾ. ಪ್ರಭು ಗಂಜಿಹಾಳ ಬರಹ

Read More

ಹಲವು ಹೃದಯಗಳ ಮುಟ್ಟಿದ ಚಲನಚಿತ್ರೋತ್ಸವ..

ಮೂರನೇ ಅತ್ತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿರುವ ʻಫೋಟೋʼ ಚಿತ್ರದ್ದು ಬೇರೆಯದೇ ರೀತಿಯ ಛಾಪು. ಚಿತ್ರೋತ್ಸವದ ಎರಡನೇ ದಿನ 4ನೇ ಪರದೆಯಲ್ಲಿ ಮೊದಲ ಪ್ರದರ್ಶನ ಕಂಡ ಈ ಚಿತ್ರ ನೋಡಲು ಪ್ರೇಕ್ಷಕರು ಕಿಕ್ಕಿದು ತುಂಬಿದ್ದರು. ಆಸನಗಳು ಸಾಲದಕ್ಕೆ ಚಿತ್ರಮಂದಿರದ ನಿಯಮವನ್ನೂ ಮುರಿದು ಮೆಟ್ಟಿಲುಗಳ ಮೇಲೆ ಕುಳಿತು ಸಹ ಹಲವರು ಚಿತ್ತ ಬದಲಿಸದೇ ನೆಟ್ಟ ದೃಷ್ಟಿಯಲ್ಲೇ ಚಿತ್ರವನ್ನು ವೀಕ್ಷಿಸಿದರು.
‘ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ದಲ್ಲಿ ನೋಡಿದ ಸಿನಿಮಾಗಳ ಕುರಿತು ಕುಮಾರ ಬೇಂದ್ರೆ ಬರಹ

Read More

ಭಾರತದ ಮೊದಲ ಮಕ್ಕಳ ಮೂಕಿ ಚಿತ್ರ ʻದಿ ಗಾರ್ಡ್‌ʼ

ಮಾತುಗಳು ಇರಬೇಕಾದ ಜಾಗದಲ್ಲಿ ಭಾವ ಸಂವೇದನೆ ಮತ್ತು ಸಂಜ್ಞೆಗಳನ್ನು ಪ್ರತಿಮಾತ್ಮಕವಾಗಿ ಸೃಷ್ಟಿಸಿ ಮೌನ ಪ್ರತಿಮೆ, ಭಾವರೂಪಕಗಳಲ್ಲೇ ಕತೆ ಹೇಳುವ ಪ್ರಯೋಗದಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಇದು ಹಿರಿಯರ ಚಿತ್ರವಾಗಿದ್ದರೂ ಅಷ್ಟೇನೂ ಮಹತ್ವ ಅಥವಾ ಹೊಸತನದ ವಿಶೇಷತೆ ಇದಕ್ಕೆ ಸಲ್ಲುತ್ತಿರಲಿಲ್ಲ. ಈ ರೀತಿಯ ಮಕ್ಕಳ ಚಿತ್ರವನ್ನು ನಿರ್ಮಿಸಿದ ದಾಖಲೆ ಭಾರತೀಯ ಚಲನಚಿತ್ರ ಇತಿಹಾಸದಲ್ಲೇ ಇಲ್ಲ. ಹಾಗಾಗಿ ʻದಿ ಗಾರ್ಡ್‌ʼ ಚಿತ್ರ ಆ ಸ್ಥಾನವನ್ನು ತುಂಬಿ ಕನ್ನಡದ ಹೆಚ್ಚುಗಾರಿಕೆ ಮೆರೆದಿದೆ.
ಉಮೇಶ್‌ ಬಡಿಗೇರ ನಿರ್ದೇಶನದ ಭಾತರದ ಮೊದಲ ಮಕ್ಕಳ ಮೂಕಿ ಚಿತ್ರ ʻದಿ ಗಾರ್ಡ್‌ʼ ಕುರಿತು ಕುಮಾರ ಬೇಂದ್ರೆ ಬರಹ

Read More

ಕನ್ನಡಕ್ಕೆ ಮತ್ತೊಂದು ಗರಿ ʻಹದಿನೇಳೆಂಟುʼ

ಹರಿ ಒಬ್ಬ ಸದ್ಗುಣ ಯುವಕನೇ ಆಗಿದ್ದರೂ ಅರಿವಿನ ಕೊರತೆಯಿಂದ ಆ ವಿಡಿಯೋವನ್ನು ತನ್ನ ಸ್ನೇಹಿತರಿಗೆ ತೋರಿಸಿ ಅದು ತನ್ನ ಸಾಧನೆ ಎಂಬಂತೆ ಬಿಂಬಿಸಿಕೊಂಡ. ಅಲ್ಲಿಗೆ ಸುಮ್ಮನಾಗದೇ, ತನ್ನ ಮೇಲೆ ನಂಬಿಕೆ ವಿಶ್ವಾಸವಿಟ್ಟು ತನ್ನ ದೇಹವನ್ನೇ ಹಂಚಿಕೊಂಡ ದೀಪಾಳಿಗೆ ಅದರಿಂದ ಏನಾದೀತು ಎನ್ನುವ ಸಾಮಾನ್ಯ ವಿವೇಚನೆಯನ್ನೂ ಮಾಡದೇ ಆ ವಿಡಿಯೋವನ್ನು ಒಬ್ಬ ಫೇಸ್‌ಬುಕ್‌ಸ್ನೇಹಿತನೊಂದಿಗೆ ಹಂಚಿಕೊಂಡ!
ಈ ವರ್ಷದ ಪನೋರಮಕ್ಕೆ ಆಯ್ಕೆಯಾದ ಮತ್ತೊಂದು ಚಲನಚಿತ್ರ ʻಹದಿನೇಳೆಂಟುʼ ಕುರಿತು ಕುಮಾರ ಬೇಂದ್ರೆ ಬರಹ

Read More

ವಿಶಿಷ್ಟ ದೃಶ್ಯಕಾವ್ಯ ʻನಾನು ಕುಸುಮಾʼ ಪನೋರಮಕ್ಕೆ

ಹೀಗೆ ಎಲ್ಲವೂ ಆಗಿದ್ದ ತಂದೆಯನ್ನು ಕಳೆದುಕೊಂಡ ಮೇಲೆ ಒಂಟಿ ತರುಣಿ ಕುಸುಮ ಮುಂದೆ ಏನಾದಳು ಎಂಬುದನು ಸ್ಮರಿಸಿಕೊಂಡರೆ ಕೈ ಕಾಲುಗಳು ನಡುಗುತ್ತವೆ. ಎಷ್ಟೊಂದು ಸುಂದರವಾಗಿ ಕಾಣುವ ಈ ಜಗತ್ತು ಮತ್ತು ವ್ಯವಸ್ಥೆಯ ಕರಾಳ ಮುಖವನ್ನು ಕಂಡು ಎಂಥವರಲ್ಲೂ ಆಕ್ರೋಶ ಪುಟಿದೇಳುತ್ತದೆ. ಕುಸುಮಳ ಆ ಸ್ಥಿತಿಗೆ ಕಾರಣವಾದವರನ್ನು ಸುಟ್ಟುಹಾಕಬೇಕೆನ್ನುವಷ್ಟು ಸಿಟ್ಟು ಎಲ್ಲ ಸಾತ್ವಿಕ ಮತ್ತು ಸತ್ಯ ಪರವಾದ ಮನಸ್ಸುಗಳಲ್ಲಿ ಉಕ್ಕುತ್ತದೆ! ಆದರೂ ಈ ವ್ಯವಸ್ಥೆಯನ್ನು ಬದಲಾಯಿಸಲು ಸಾಧ್ಯವೆ ಎಂಬುದೇ ವಿಷಾದದ ಪ್ರಶ್ನೆ!
ಈ ವರ್ಷದ ಪನೋರಮಕ್ಕೆ ಆಯ್ಕೆಯಾದ ʻನಾನು ಕುಸುಮಾʼ ಚಿತ್ರದ ಕುರಿತು ಕುಮಾರ ಬೇಂದ್ರೆ ಬರಹ

Read More
  • 1
  • 2

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ