Advertisement

Tag: ಕೆಂಡಸಂಪಿಗೆ

ಮಂಜುನಾಯಕ ಚಳ್ಳೂರು ಬರೆದ ಕತೆ “ಫೂ….”

ಆ ಹೊತ್ತು ಅವಳು ಹುಚ್ಚಿಯಂತೆ ಕಾಣುತ್ತಿದ್ದಳು ನನಗೆ. ಮುಖದ ತುಂಬ ಕೈಯಾಡಿಸಿದಳು. ತಲೆ ಸವರಿದಳು. ಯಾಕೋ ಎಷ್ಟೊತ್ತಾದರೂ ನನ್ನ ಬಿಡಲೇ ಇಲ್ಲ. ಅವ್ವ ಅಲ್ಲಿಂದಲೇ, `ಸಾಕ್ ಹೋಗು ಚಂದ್ರಪ್ಪಾ. ಬುಟ್ರ ಲಂಗದಾಗ್ ಸುರುಗ್ಸ್ಯಂತಾಳ್ ಈ ಅಡಾವುಡಿ ನಿನ್ನಾ…’ ಎಂದಳು. ಅತ್ತೆ, `ಯೇ ಮಂಗಾ.. ಬಾಯೈತಂತ ಏನೇನರ ಬೊಗಳ್ಬ್ಯಾಡ. ನನ ಹೊಟ್ಯಾಗ್ ಹುಟ್ಬೇಕಾದದ್ ಇದು. ತಪ್ಪಿ ನಿನ್ ಹೊಟ್ಯಾಗ್ ಹುಟ್ಟೇತಿ.’ ಎಂದುತ್ತರಿಸಿದಳು. ಆಗವಳ ಕೈಗಳು ನಡುಗುತ್ತಿದ್ದವು. ಕೆಂಡದಂತೆ ಬೆಚ್ಚಗಾಗಿದ್ದವು.
ಮಂಜುನಾಯಕ ಚಳ್ಳೂರು ಅವರ “ಫೂ..” ಕಥಾಸಂಕಲನದ ಶೀರ್ಷಿಕೆ ಕತೆ ನಿಮ್ಮ ಈ ಭಾನುವಾರದ ಓದಿಗೆ

Read More

ಮಂಜುನಾಯಕ ಚಳ್ಳೂರ ಕಥಾಲೋಕ…

“ಧಾರವಾಡದಲ್ಲಿ ಪಿಯುಸಿಯಲ್ಲಿದ್ದಾಗ ‘ಗಾಳಿಪಟ’ ಎಂಬ ಕತೆ ಬರೆದಿದ್ದೆ‌‌. ಅದಕ್ಕೂ ಮುನ್ನ ‘ಗೋಧಾವರಿ’ ಎಂಬ ಕತೆಯನ್ನು ಬರೆದು ಸ್ನೇಹಿತರ ಮುಂದೆ ಇಟ್ಟಾಗ, ಹಾಸ್ಟೇಲಿನ ದೋಸ್ತರೆಲ್ಲ ಅದನ್ನು ಓದಿ “ಚೊಲೋ ಬರ್ದಿ” ಎಂದು ಬೆನ್ನುತಟ್ಟಿದ್ದರು‌. ತುಷಾರ ಕಥಾ ಸ್ಪರ್ಧೆಗೆಂದು ಬರೆದಿದ್ದ ಕತೆ ಅದು. ಕೈಬರಹದಲ್ಲಿದ್ದ ಆ ಕತೆಯ ಪ್ರತಿಯನ್ನು, ಮತ್ತೊಮ್ಮೆ ಓದಿ ಕೊಡುವುದಾಗಿ ನನ್ನಿಂದು ಇಸಿದುಕೊಂಡು ಹೋದ ದೋಸ್ತ ಇನ್ನೂ ವಾಪಸ್ ಕೊಟ್ಟಿಲ್ಲ. ಮಂಜುನಾಯಕ ಚಳ್ಳೂರರ “ಫೂ” ಕಥಾಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ಸಿಕ್ಕಿದ್ದು ಇದೇ ಸಂದರ್ಭದಲ್ಲಿ ಅವರ ಕಥಾಲೋಕದ ಕುರಿತು ರೂಪಶ್ರೀ ಕಲ್ಲಿಗನೂರ್‌ ಬರಹ

Read More

ಬ್ರಿಸ್ಬೇನ್ – ಬೆಂಗಳೂರು ಕೊಂಡಿ ಕಥೆಗಳು: ವಿನತೆ ಶರ್ಮ ಅಂಕಣ

ಇಲ್ಲಿ ಕಾಣುವುದು ಹಳತೊಂದು ಸಮಾಜದ ಹೆಗ್ಗುರುತಾದ ಕಸುಬುಗಾರಿಕೆಗಳ ಮುಂದುವರಿಕೆ. ಇಪ್ಪತ್ತೊಂದನೇ ಶತಮಾನದ ಮಾಲ್, ಸೂಪರ್ ಮಾರ್ಕೆಟ್ ಮತ್ತು ಮೆಟ್ರೋಗಳ ಪ್ರಪಂಚದಲ್ಲಿ ಐಟಿ ಮತ್ತು ಗ್ಲೋಬಲ್ ಕಾರ್ಪೊರೇಟ್ ಪೈಪೋಟಿಗಳ ನಡುವೆ ಬದುಕುತ್ತಾ ಇನ್ನೂ ಕಂಗೊಳಿಸುತ್ತಿರುವ ಅಂಕುಡೊಂಕು ಪೇಟೆ ಬೀದಿಗಳಲ್ಲಿ ಕಾರ್ಯತತ್ಪರರಾಗಿರುವ ಸಾವಿರಾರು ಕಸುಬುದಾರರನ್ನು ನೋಡಿದರೆ ಕ್ಯಾಪಿಟಲಿಸ್ಟ್ ಪ್ರಪಂಚದ ಟೊಳ್ಳು, ಭ್ರಮೆ ಮನಸ್ಸಿಗೆ ತಟ್ಟುತ್ತದೆ.
ಡಾ. ವಿನತೆ ಶರ್ಮ ಬರೆಯುವ ಆಸ್ಟ್ರೇಲಿಯಾ ಪತ್ರ

Read More

ಸ್ಯಾಂಕಿ ಟ್ಯಾಂಕ್ ಎಂಬ ಬೆಂಗಳೂರಿಗರ ಕಾಶಿ!: ದೀಪಾ ಫಡ್ಕೆ ಬರಹ

ಸ್ಯಾಂಕಿಯ ಇನ್ನೊಂದು ಮೂಲೆಗೆ ತಲುಪುವ ಹೊತ್ತಿಗೆ ನೀರಿನಲ್ಲಿರುವ ತುಂಡು ಮರದ ಮೇಲೆ ಈ ನೀರುಕಾಗೆಗಳದು ಸನ್ ಬೇದಿಂಗ್ ನಡೆಯುತ್ತಿರುತ್ತದೆ. ಎರಡೂ ರೆಕ್ಕೆಗಳನ್ನು ಇಷ್ಟಗಲಕ್ಕೆ ಬಿಡಿಸಿಕೊಂಡು ತಿರುಗುವ ಟೇಬಲ್ ಫ್ಯಾನಿನಂತೇ ಸೂರ್ಯನ ಮುಂದೆ ಮೈಯೊಣಗಿಸಿಕೊಂಡು ನಿಂತಿರುತ್ತದೆ. ಇಲ್ಲಿರುವ ಮರಗಳ ಮೇಲಿನ ಸಂಸಾರದ ಕತೆಯೂ ವಿಶಿಷ್ಟವೇ. ಗೂಬೆಗಳ, ಮಿಂಚುಳ್ಳಿಗಳ ಸಂಸಾರ ಬೆಳೆಯುವುದನ್ನು ಕಂಡಿದ್ದೇವೆ. ಒಂದೇ ಒಂದು ಸಾರಿ ಅಚ್ಚ ಹಳದಿ ಬಣ್ಣದ ಗೋಲ್ಡನ್ ಓರಿಯಲ್ ನೋಡಿದ ಧನ್ಯತೆ ನಮ್ಮದು.
ಬೆಂಗಳೂರಿನ ಸುಪ್ರಸಿದ್ಧ ಸ್ಯಾಂಕಿ ಕೆರೆಯ ಕುರಿತು ದೀಪಾ ಫಡ್ಕೆ ಬರಹ ನಿಮ್ಮ ಓದಿಗೆ

Read More

ಐಪಿಎಲ್-2023: ಇ.ಆರ್.‌ ರಾಮಚಂದ್ರನ್‌ ಅಂಕಣ

ಚೆನ್ನೈ ಸೂಪರ್‌ ಕಿಂಗ್ಸ್ – ಸಿಎಸ್ಕೆ ಟೀಮಿನ ನಾಯಕ ಮಹೇಂದ್ರ ಸಿಂಘ್ ಧೋನಿಯವರ ಕೊಡುಗೆ ಅವರ ಟೀಮಿಗೆ ಈ ಸಲ ಬಹಳ ಅಪಾರವಾದದ್ದು. ಕಾಲಿಗೆ ಏಟು ಬಿದ್ದು ಅವರು ಕೊನೆಯ ತನಕ ಕುಂಟಿಕೊಂಡೇ ಆಡಬೇಕಾಯಿತು. ಅವರಿಗೆ ರವೀಂದ್ರ ಜಡೇಜ ಮತ್ತು ಮೊಯಿನ್ ಆಲಿಯಲ್ಲಿ ಇಬ್ಬರು ಒಳ್ಳೇ ಸ್ಪಿನ್ನರ್‌ಗಳಿದ್ದರು. ಜೊತೆಗೆ ಶ್ರೀಲಂಕಾದ ತೀಕ್ಷಣ, ಪಥಿರಾಣ ಎಂಬ ಯುವಕ ಬೋಲರ್‌ಗಳಿದ್ದರು. ಬ್ಯಾಟಿಂಗ್‌ನಲ್ಲಿ ರುತುರಾಜ್ ಗಾಯ್ಕ್ವಾಡ್, ಕಾನ್ವೆ, ರಾಯುಡು, ಶುಭಂ ದೂಬೆ ಮುಂತಾದ ಒಳ್ಳೆ ಆಟಗಾರರಿದ್ದರು.
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ