Advertisement
ಅಕ್ಷಯ ಕಾಂತಬೈಲು ಬರೆದ ಈ ದಿನದ ಕವಿತೆ

ಅಕ್ಷಯ ಕಾಂತಬೈಲು ಬರೆದ ಈ ದಿನದ ಕವಿತೆ

ಒಳಗೆ ಯಾರೊಬ್ಬರೂ ಇಲ್ಲ

ಅವಳು ಬೆನ್ನು ಹಾಕಿ ಕುಳಿತಿದ್ದಳು
ಚಿಗುರು ಎಲೆಯಂತೆ ಹಸಿಯಾಗಿದ್ದಳು
ಭೂಪಟದ ಹಿಂಭಾಗದಂತೆ ವಿಸ್ತರಿಸಿದ್ದಳು
ಭೂಮಿಯ ಒತ್ತುವರಿ ಪ್ರದೇಶಗಳು
ನನಗೆ ಗೋಚರಿಸಲಿಲ್ಲ
ಅವನು ‘ಬಾರೆ’ ಎಂದಾಗ
ಕರಿಮಣಿಯ ಸಪ್ಪಳವೂ ಕೇಳಿಸಲಿಲ್ಲ!

ನದಿಯ ಆಚೆ ಅವರ ಮನೆ
ಅದಕೂ ಮುಂಚೆ ಬರುವ ಗಾಢ ಕಾಡು
ಆ ಮನೆಯ ಎದುರು ಅಂಗಳ

ಅಂಗಳದ ಮೂಲೆಗೆ ಕೋಳಿಗೂಡು
ಮನೆಗೆ ಹೊದೆಸಿದ ಹೆಂಚಿನ ಮಾಡು
ಆ ಮಾಡಿನ ಮೇಲೆ ಬೋಳು ಆಕಾಶ

ಆಕಾಶದಡಿ ಸೂರ್ಯನ ಅಡಗಿಸಿಟ್ಟ ಗುಡ್ಡ
ಆ ಮನೆಯ ಎಡಗಡೆ ದನದ ಕೊಟ್ಟಿಗೆ
ಕೊಟ್ಟಿಗೆಯ ಬಲಗಡೆ ಗೊಬ್ಬರದ ಹೊಂಡ

ಆ ಮನೆಯ ಒಳಗಿನ ಮಾತು ಹೇಳಲು
ಯಾರೊಬ್ಬರೂ ಇಲ್ಲ…..

ಅಕ್ಷಯ ಕಾಂತಬೈಲು ತರುಣ ಕವಿ.
ಎಂಜಿನಿಯರಿಂಗ್ ಪದವಿಯ ನಂತರ ಅಪ್ಪನಿಗೆ ಕೃಷಿಯಲ್ಲಿ ಸಹಾಯ ಮಾಡುತ್ತಿರುವವರು.
ಸಾಹಿತ್ಯ, ಕೃಷಿ ಇಷ್ಟದ ವಿಷಯಗಳು.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ