Advertisement
ಅಭಿಷೇಕ ಬಳೆ ಮಸರಕಲ್ ಬರೆದ ಗಝಲ್

ಅಭಿಷೇಕ ಬಳೆ ಮಸರಕಲ್ ಬರೆದ ಗಝಲ್

ಧರ್ಮ ಜೋಲಿ ಹೊಡೆಯಲಿ ಬಿಡು ದೇವರು ನನ್ನಂತಾಗುತ್ತಾನೆ ಮಧುಶಾಲೆಯಲ್ಲಿ ಸಾಕಿ
ಹೊಟ್ಟೆಯ ಹಸಿವಿಗಿಂತ ಧರ್ಮದ ಹಸಿವು ಬಲು ವಿಷಕಾರಿ ಜಗದಲ್ಲಿ ಸಾಕಿ

ಧರ್ಮದ ಹಂಗಿನ ಬದುಕಿಗಿಂತ ಇಲ್ಲಿ ಸಾಕಿಯ ಸತ್ಸಂಗವೆ ಲೇಸು
ಸನ್ಮಾರ್ಗ ತೋರುವ ಜ್ಞಾನದ ಅಮಲನ್ನು ತುಂಬಿಕೊಡು ಮಧುಬಟ್ಟಲಲ್ಲಿ ಸಾಕಿ

ಪ್ರೇಮವೆ ದೇವರು ಮಧುಶಾಲೆಯೆ ದೇಗುಲ ಮದಿರೆಯ ಧ್ಯಾನವೆ ಸ್ವರ್ಗ
ಧರ್ಮಗುರು ಬೋಧಿಸುವ ಯಾವುದೇ ಸ್ವರ್ಗವಿಲ್ಲ ಮೇಲಿನ ಆಗಸದಲ್ಲಿ ಸಾಕಿ

ನೀರನ್ನು ಸವಿ ದ್ರಾಕ್ಷರಸವಾಗಿಸಿದ ಮಹಾತ್ಮರು ಮತ್ತೇ ಮತ್ತೇ ಜನಿಸಲಿ
ಶರೀಫರಿಗೆ ಮಧುಶಾಲೆಯೆ ಕಂಡಿತು ತಾಯಿ ದ್ಯಾಮವ್ವನ ಮೂಗುತಿಯಲ್ಲಿ ಸಾಕಿ

ಎಲ್ಲರ ಸಾವು ಒಂದೆ ಹೆಗಲ ಮೇಲೆ ಊರ ಹೊರಗಿನ ಸ್ಮಶಾನದಲಿ
“ಅಭಿ”ಗೆ ಯಾರು ಭೇದ ಮಾಡಲಿಲ್ಲ ಮಧುಶಾಲೆಯ ದರ್ಶನ ಕೂಟದಲ್ಲಿ ಸಾಕಿ

 

ಅಭಿಷೇಕ್ ಬಳೆ ರಾಯಚೂರು ಜಿಲ್ಲೆಯ ಮಸರಕಲ್ ಊರಿನವರು.
ಬಿ.ಎಸ್ಸಿ, ಬಿ.ಎಡ್ ವ್ಯಾಸಂಗ ಮಾಡಿದ್ದಾರೆ
ಓದು ಮತ್ತು ಕವಿತೆ ರಚನೆ ಇವರ ಹವ್ಯಾಸಗಳು

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ