Advertisement
ಜ್ಯೋತಿ ಭಟ್‌ ಬರೆದ ಈ ದಿನದ ಕವಿತೆ

ಜ್ಯೋತಿ ಭಟ್‌ ಬರೆದ ಈ ದಿನದ ಕವಿತೆ

ಉಸಿರಿಗೆ ಉಸಿರ ನೀಡು ….
ಎನ್ನನು ನಿನ್ನಯ
ಕೊಳಲನು ಮಾಡು…
ಎಂದೆಲ್ಲ ಹಲುಬಲಾರೆ ….
ಉಸಿರ ಅಲ್ಲದಿದ್ದರೂ
ನಿಟ್ಟುಸಿರ ಬಿಡು
ಉನ್ಮಾದಕೆ ……
ಪರಿಮಳ ಇಲ್ಲ.
ಮೈ ತುಂಬಾ ಬರೀ
ಒಡಲ ತುಂಬಾ ಅಂತರ್ ಗಂಗೆ !

ಕಾಣುವ ಕುಸುಮವಲ್ಲ
ಬರೀ ಕಪ್ಪು-ಬಿಳುಪು …..

ಒಳಗಿನ ಶೃಂಗಾರ
ಪೊರೆ ಕಳಚಿ, ಹಂಗ ತೊರೆದು
ಸಾಗಬೇಕು “ಅಕ್ಕ” ನಂತೆ …

ಸಂಕೋಲೆಯ ಎಲ್ಲೆ ಮೀರಿ
ಚಿಗುರು ಒಡೆದಂತೆ …
ನಿನ್ನೊಲುಮೆಯೇ
ಬೆಳಕಾಗಿ ಹರಡುವಂತೆ…..

About The Author

ಜ್ಯೋತಿ ಭಟ್

ಜ್ಯೋತಿ ಭಟ್ ಮೂಲತಃ ಉತ್ತರಕನ್ನಡದ ಮಂಚೀಕೇರಿ ಸಮೀಪದ ಬೊಮ್ಮನಹಳ್ಳಿಯವರು. ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿ. ಸಂಯುಕ್ತ ಕರ್ನಾಟಕದಲ್ಲಿ ಪತ್ರಕರ್ತೆಯಾಗಿ ಕೆಲಕಾಲ ಕಾರ್ಯನಿರ್ವಹಿಸಿದ್ದಾರೆ. "ಸಖಿ ಗೀತೆ" ಅಂಕಣ ಬರಹಗಳ ಕೃತಿ. ಪ್ರಸ್ತುತ ಮಹಿಳಾ ಉದ್ಯಮಿ.

Leave a comment

Your email address will not be published. Required fields are marked *

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ