Advertisement
ಡಾ. ದಿಲೀಪ್ ಎನ್ಕೆ ಹನಿಗವನಗಳು

ಡಾ. ದಿಲೀಪ್ ಎನ್ಕೆ ಹನಿಗವನಗಳು

ಏಕಾಂತವೆಂದರೆ

ಇಲ್ಲಿ
ಯಾರೂ
ಉಳುಕೊಳ್ಳುವುದಿಲ್ಲ
ಪ್ರೀತಿಸಿಬಿಡಿ ಎಲ್ಲರನೂ

***

ನನ್ನ ಮನೆಯೊಳಗೆ
ದೇವರಿಲ್ಲ
ನಿನ್ನ ನೆನಪುಗಳಷ್ಟೇ

***

ಟೀ ಹೀರುವುದರಲ್ಲಿ
ನಾ ಮುಂದು
ಮದವೇರಿಸುವ
ನನ್ನವಳ ತುಟಿಯ ಜೇನದು

***

ಪ್ರೀತಿಯ
ಗರ್ಭಗುಡಿಯಲ್ಲಿಟ್ಟು ಪೂಜಿಸುತ್ತಿರುವವರು ಯಾರು? ಗೆದ್ದವರೇ?
ಸೋತ ನನ್ನಂಥವರು

***

ನನ್ನ ಪುಸ್ತಕದೊಳಗೆ
ನೀ ಇಟ್ಟ
ನವಿಲುಗರಿ
ಮರಿ ಮಾಡಿರಬಹುದೆಂದು ತೆರೆದೆ
ಅದು
ನನ್ನ ಸಾವಿಗೆ
ನಾನೇ ಕಾರಣವೆಂದು ಬರೆದು ಸತ್ತು ಮಲಗಿತ್ತು

***

ಏಕಾಂತವೆಂದರೆ
ನನಗೆ ಬಲು ಪ್ರೀತಿ
ಎಲ್ಲಿದ್ದರೂ ಅವಳು ಪ್ರತ್ಯಕ್ಷವಾಗುತ್ತಾಳೆ
ಎದೆಗಾಕಿ ಕಷ್ಟ ಸುಖ ಕೇಳುತ್ತಾಳೆ
ಮಡಿಲಿಗಾಗಿ
ಹೀಗಲ್ಲ ಹೀಗೆಂದು
ತಲೆಗೂದಲ ನೇವರಿಸುತ್ತಾಳೆ

***

ನನ್ನ
ಗೆಲ್ಲಬೇಕೆಂಬ ಛಲಕ್ಕೆ
ಮುನ್ನುಡಿ ಬರೆದದ್ದು
ಅದು ನೀನೇ
ಓ ಪ್ರೀತಿಯೇ

About The Author

ಡಾ. ದಿಲೀಪ್ ಎನ್ಕೆ

ಡಾ. ದಿಲೀಪ್ ಎನ್ಕೆ ಚಾಮರಾಜನಗರದ ಕೊಳ್ಳೇಗಾಲದವರು. ಋತುಮಾನಕ್ಕಷ್ಟೇ ಪ್ರೀತಿ (ಕವನ ಸಂಕಲನ), ಬಲಿಷ್ಠ (ಕಥಾ ಸಂಕಲನ), ಚೆಗ್ಗಿ- ಮಾರಿಕುಣಿತದ ಸೊಲು (ಕವನ ಸಂಕಲನ) ಇವರ ಪ್ರಕಟಿತ ಕೃತಿಗಳು. “ಕನ್ನಡ ದಲಿತ ಕಥಾಸಾಹಿತ್ಯ : ಅಕ್ಷರಸ್ಥ ದಲಿತರ ತಲ್ಲಣಗಳು” ಇವರ ಪಿ.ಎಚ್.ಡಿ ಮಹಾಪ್ರಬಂಧ

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ