Advertisement

ಬಸವನಗೌಡ ಹೆಬ್ಬಳಗೆರೆ

ಮೂಡಿದ್ದವು ತರಾವರಿ ತಾರೆಗಳು

ಆ ರಾತ್ರಿ ನಾವು ದಲಿತ ಹುಡುಗರು ಪ್ರತಿಭಟನೆಯ ಭಾಗವಾಗಿ ಅಡುಗೆ ಮನೆಗೆ ಬೀಗ ಹಾಕಿದ್ದೆವು. ಹಾಗೇಯೇ ಅಂಬೇಡ್ಕರ್‌ಗೆ ಆದ ಅಪಮಾನದಿಂದ ನೊಂದು ಉಪವಾಸ ಆಚರಿಸುತ್ತೇವೆ ಎಂದು ಸ್ವಯಂ ದಂಡಿಸಿಕೊಂಡಿದ್ದೆವು. ಇಡೀ ಹಾಸ್ಟೆಲ್ ಬಿಕೊ ಎನ್ನುತ್ತಿತ್ತು. ನಾಲ್ವಡಿ ಅವರ ಕಾಲದ ತಳದ ಹಳೆಯ ಬಿಲ್ಡಿಂಗಿನಲ್ಲಿ ನಮಗೆ ರೂಮುಗಳು ಪ್ರತ್ಯೇಕವಾಗಿದ್ದವು. ಹೊಸ ಕಟ್ಟಡದಲ್ಲಿ ಅವರಿಗೇ ಮೊದಲು ಆದ್ಯತೆ ಇದ್ದದ್ದು. ಮೊಗಳ್ಳಿ ಗಣೇಶ್ ಬರೆಯುವ ಸರಣಿ.

Read More

ದಿಗಂತಕ್ಕೆ ಕಿಚ್ಚು ಹಚ್ಚಿದವರು ಯಾರೊ…

ಊರು ಬಾಬಾ ಎಂದು ಕರೆದರೂ ಭಾವನೆಗಳಿಗೆ ಬೀಗ ಹಾಕುತ್ತಿದ್ದೆ. ಕಲ್ಪಿಸಿಕೊಳ್ಳುವ ಊರೇ ಚೆಂದ. ಅಲ್ಲಿ ಆ ನರಕ ಇನ್ನೂ ಹಾಗೇ ಇತ್ತು. ದಿನದಿಂದ ದಿನಕ್ಕೆ ದ್ವಿಗುಣವಾಗುತ್ತಿತ್ತು. ಆ ನರಕದ ಇಂಚಿಂಚೂ ನನ್ನ ಕಣ್ಣಲ್ಲಿ ಆತ್ಮದಲ್ಲಿ ಯಾವತ್ತೂ ಫಲಿಸುತ್ತಲೇ ಇದ್ದವು. ಮರೆಯಲಾರೆ ಊರುಕೇರಿಯ; ಸತ್ತವರ ನೆರಳ…ಅಪ್ಪನ ಎರಡನೇ ಹೆಂಡತಿಯ ಹೆಸರದು ಮಾದೇವಿ. ಮಾದೇಶ್ವರ ಒಕ್ಕಲಿನ ಮನೆತನದವಳು.
ಮೊಗಳ್ಳಿ ಗಣೇಶ್‍ ಬರೆಯುವ ನನ್ನ ಅನಂತ ಅಸ್ಪೃಶ್ಯ ಆಕಾಶ ಸರಣಿಯ ಹದಿನೇಳನೆಯ ಕಂತು

Read More

ನೆತ್ತರ ಒಗಟುಗಳ ಬಿಡಿಸುವುದು ಕಷ್ಟ

ಆ ಹಂದಿಗಳಿಗೆ ತಿಂಗಳಿಗಾಗುವಷ್ಟು ಆಹಾರವನ್ನು ಅಪ್ಪ ಹಿತ್ತಿಲ ಸೌದೆ ಮನೆಯಲ್ಲಿ ತರಿಸಿಇಟ್ಟಿರುತ್ತಿದ್ದ. ಅಷ್ಟೇ ಅವನ ಕೆಲಸ. ಆಗಾಗ ನಾನೇ ಅವುಗಳ ಎಲ್ಲ ಕೆಲಸ ಮಾಡುತ್ತಿದ್ದುದು. ಅಪ್ಪ ಬಂದು ನೋಡಿದ ಕೂಡಲೆ ಗಕ್ಕನೆ ಎದ್ದು ಮೂಲೆ ಸೇರಿ ಭಯದಿಂದ ನೋಡುತ್ತಿದ್ದವು. ಯಾಕೆ ಇವು ನನ್ನಂತೆಯೇ ಬೆದರಿ ನನ್ನ ಬಳಿ ಬಂದು ಗಾಬರಿಯಾಗುತ್ತವಲ್ಲಾ… ಹೇಗೆ ಗೊತ್ತಾಯಿತು ಈ ಹಂದಿಗಳಿಗೆ ಅಪ್ಪನ ಅವತಾರಗಳು ಎಂದು ಅಚ್ಚರಿಯಾಗುತ್ತಿತ್ತು. ಮೊಗಳ್ಳಿ ಗಣೇಶ್‍ ಬರೆಯುವ  ನನ್ನ ಅನಂತ ಅಸ್ಪೃಶ್ಯ ಆಕಾಶ ಸರಣಿಯ ಹೊಸ ಕಂತು ನಿಮ್ಮ ಓದಿಗಾಗಿ. 

Read More

ನೀಲಿ ಬರೆಗಳ ಮುಟ್ಟಿ ಮುಟ್ಟಿ ನೋಡಿದ

ಅಂತೂ ಚಿಕ್ಕಪ್ಪ ಬಂದಿದ್ದ. ಯಾವತ್ತಿನಂತೆ ಎದ್ದು ನಿಂತು ಕೈ ಮುಗಿದೆ. ಬೀಗ ತೆಗೆದು; ‘ಐದು ನಿಮಿಷ ಇರಿ; ಪಲಾವ್ ತರ್ತೀನಿ’ ಎಂದು ಸೈಕಲೇರಿ ಹೋದ. ಪಲಾವ್ ಎನ್ನುವ ಹೆಸರನ್ನೆ ನಾನಾಗ ಕೇಳಿರಲಿಲ್ಲ. ಕೈಕಾಲು ಮುಖ ತೊಳೆದು ದೇವರಿಗೆ ಕಡ್ಡಿ ಹಚ್ಚು ಎಂದ ತಾತ. ಹಾಗೇ ಮಾಡಿದೆ. ಪಲಾವ್ ತಂದ ಚಿಕ್ಕಪ್ಪ. ಗಮ್ಮೆನ್ನುವ ಪೊಟ್ಟಣ. ತಾತನ ಮೆಲ್ಲಗೆ ‘ಇದೇನಪ್ಪಾ’ ಎಂದು ಕೇಳಿದ. ‘ಗಮುಲ್ದನ್ನ’ ಎಂದ. ಅಹಾ! ಅಂತಹ ಗಮಗಮಿಸುವ ಅನ್ನವ ನಾನೆಂದೂ ಉಂಡಿರಲಿಲ್ಲ. ಮೊಗಳ್ಳಿ ಗಣೇಶ್ ಬರೆಯುವ ಆತ್ಮಕತೆ ‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿಯ ಹದಿನೈದನೆಯ ಕಂತು

Read More

ನಾನು ಕೂಡ ಜಾಡಮಾಲಿಯಾಗಿದ್ದೆ

ಆ ಬಳೆಗಳ ಅಸಹಾಯಕತೆಗೂ ತಾಯ ಆಲಾಪಕ್ಕೂ ವ್ಯತ್ಯಾಸವೇ ಇರಲಿಲ್ಲ. ಅಪ್ಪನ ಜೊತೆ ಮೊದಲ ಬಾರಿಗೆ ಕೈ ಮಾಡಿದ್ದಳು. ಅವಳಿಗೆ ಗೊತಿತ್ತೇನೊ; ತಾನಿನ್ನು ಹೆಚ್ಚು ಕಾಲ ಉಳಿಯುವುದಿಲ್ಲವೆಂದು! ಅಬ್ಬರಿಸಿದಳು. ಬೀಸಿದ್ದ ಬೆತ್ತವ ತಟಕ್ಕನೆ ಹಿಡಿದಿದ್ದಳು. ಅಪ್ಪ ಉಷಾರಾದ. ದೊಣ್ಣೆಯ ಎರಡೂ ತುದಿಗಳ ಬಲವಾಗಿ ಹಿಡಿದುಕೊಂಡ, ತಾಯ ಅದರ ಮಧ‍್ಯ ಭಾಗವ ಹಿಡಿದು ಶಕ್ತಿ ಮೀರಿ ಅವನನ್ನು ಹಿಂದಕ್ಕೆ ನೂಕಿಕೊಂಡು ಹೋಗಿ ಗೋಡೆಗೆ ಒತ್ತರಿಸಿಕೊಂಡು ತನ್ನ ಕಾಲುಗಳ ಬಲವಾಗಿ ಹಿಂದಕ್ಕೆ ಊರಿ ಆ ಬೆತ್ತವನ್ನು ಅವನ ಗೋಣಿನತ್ತ ತಳ್ಳುತ್ತಿದ್ದಳು.
ಮೊಗಳ್ಳಿ ಗಣೇಶ್ ಬರೆಯುವ ‘ನನ್ನ ಅನಂತ ಅಸ್ಪೃಶ್ಯ ಆಕಾಶʼ ಸರಣಿಯ ಹತ್ತನೆಯ ಕಂತು.

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ