Advertisement

ಅಂಕಣ

ಪ್ರಕೃತಿಯ ರಮ್ಯವಾದ ಮಾಯಾತಾಣ ಮಾರೀಷಿಯಸ್

ಪ್ರಕೃತಿಯ ರಮ್ಯವಾದ ಮಾಯಾತಾಣ ಮಾರೀಷಿಯಸ್

ಅಲ್ಲಿನ ಶಾಲಾ ಕಾಲೇಜಿನ ಮಕ್ಕಳೆದುರು ಪ್ರಧಾನಮಂತ್ರಿಯೂ ರಸ್ತೆ ಕಾಯುವವನೇ. ಮಾತು ಮಾತಿಗೂ ಪರದೇಶದ ಸಂಸ್ಕೃತಿಯನ್ನು ಹಳಿದೇ ನನ್ನ ಸಂಸ್ಕೃತಿಯ ಹಿರಿಮೆಯನ್ನು ಮೆರೆಯುವ ಮನಸ್ಸಿನೊಳಗೊಂದು ಗಂಟಾನಾದ. ಅಂದಹಾಗೆ ಮಾರೀಷಿಯಸ್ಸಿನ ಅಳತೆ ನೋಡಿ ದಾರಿ ಕ್ರಮಿಸಲು ಕಡಿಮೆ ಸಮಯ ಸಾಕೆಂದು ಅಂದಾಜು ಹಾಕಿದರೆ ತಪ್ಪಾದೀತು. ಕಿರಿದಾದ ದಾರಿಗಳಲ್ಲಿ 45 ಕಿಲೋಮೀಟರ್ ಕ್ರಮಿಸಲು ಬೇಕಾದ ಸಮಯ 90 ನಿಮಿಷಗಳು!  ಅಲ್ಲಿಗೆ ಹೋಗುವ ಪ್ರವಾಸ ಖಚಿತವಾಗುವವರೆಗೂ ಮಾರಿಷಿಯಸ್ ಆಫ಼್ರಿಕಾ ಖಂಡಕ್ಕೆ ಸೇರಿದ ದ್ವೀಪ ಎನ್ನುವ ಸಾಮಾನ್ಯಜ್ಞಾನ ನನಗಿರಲಿಲ್ಲ. ʼಕಂಡಷ್ಟೂ ಪ್ರಪಂಚʼ ಅಂಕಣದಲ್ಲಿ ಅಂಜಲಿ ರಾಮಣ್ಣ ಲೇಖನ.

read more
ಕಮಿಷನ್ ಕನಕನ ನಿಧಿ ಶೋಧದ ಕಥೆ

ಕಮಿಷನ್ ಕನಕನ ನಿಧಿ ಶೋಧದ ಕಥೆ

ಅಣೋ, ನನ್ ಪ್ರೀತಿಸ್ತಾ ಇರೋ ಹುಡುಗಿ ತೋರಿಸ್ತೀನಿ.’ ಎಂದು ಫೋನಿನಲ್ಲಿ ವಿ ಪ್ಯಾಟರ್ನ್ ಹಾಕಿ ಲಾಕ್ ತೆರೆದು ‘ಇವಳೇ ನೋಡಣೋ’ ಎಂದು ತೋರಿಸಿದ. ನಾನೆ ಪೂರ್ವಗ್ರಹದಿಂದ  ‘ನಿಜಕ್ಕೂ ಪ್ರೀತಿಸ್ತಾ ಇದ್ಯೇನೋ? ಅಥವಾ ಫ್ರೆಂಡ್ಸ್ ವಿಥ್ ಬೆನಿಫಿಟ್ಸ?’ ಅಂತ ಕೇಳಿದೆ. ಅದಕ್ಕವನು ತುಂಬಾ ಕ್ಲಾರಿಟಿಯಿಂದ ‘ನನಗೆ ಅವಳಿಷ್ಟ. ಅವಳಿಗೆ ನಾನಿಷ್ಟ. ಮದ್ವೆ ಯಾಕಗಬಾರದು?’ ಎಂದು ತುಂಬಾ ನಿಖರವಾಗಿ ಹೇಳಿದ. ನಾನು ನನ್ನ ಮನಸ್ಸಿನಲ್ಲಿ ‘ಎಲಾ ಚಾಲಾಕಿ!’ ಎಂದುಕೊಂಡೆ. ದಾದಾಪೀರ್‌ ಜೈಮನ್‌ ಬರೆಯುವ ಜಂಕ್ಷನ್‌ ಪಾಯಿಂಟ್‌ ಅಂಕಣ

read more
ಕದ್ದವರು, ಕಳಕೊಂಡವರು, ಕ್ಷಮಿಸಿ ಎಂದವರು

ಕದ್ದವರು, ಕಳಕೊಂಡವರು, ಕ್ಷಮಿಸಿ ಎಂದವರು

ವಸಾಹತುಶಾಹಿ-ಸಂಬಂಧಿತ ಅನ್ಯಾಯಗಳು ಮತ್ತು ತಾರತಮ್ಯಗಳು ಆಸ್ಟ್ರೇಲಿಯದಲ್ಲಿ ನಡೆಯುತ್ತಲೇ ಬಂದಿದೆ. ಆಸ್ಟ್ರೇಲಿಯಾದ ಅಬೊರಿಜಿನಲ್ ಜನರ ಕುಟುಂಬಗಳಿಂದ ಬಲವಂತವಾಗಿ ಅವರ ಮಕ್ಕಳನ್ನು ಬೇರ್ಪಡಿಸಿ ಬಿಳಿಯರ ಕುಟುಂಬಗಳಿಗೆ ಕೊಟ್ಟು ಬಿಳಿಯರ ಸಂಸ್ಕೃತಿ, ಶಿಕ್ಷಣ, ಕ್ರೈಸ್ತಧರ್ಮಗಳಿಗೆ ಅನುಗುಣವಾಗಿ ಮಕ್ಕಳು ಬೆಳೆಯುವಂತಾಗಿದ್ದು ಎರಡು ನೂರು ವರ್ಷಗಳಿಂದ ನಡೆದ ವಿಷಯ ಕಣ್ಣಿಗೆ ರಾಚುವಂತಿದೆ. ಅಂತಹ ‘ಸ್ಟೋಲನ್ ಜನರೇಶನ್’ ನ ದನಿಯಾಗಿದ್ದ ಅಂಕಲ್ ಆರ್ಚಿ ರೋಚ್ ಕಳೆದ ವಾರಾಂತ್ಯದಲ್ಲಿ ತೀರಿಕೊಂಡರು.  ಡಾ. ವಿನತೆ ಶರ್ಮಾ ಬರೆಯುವ ಆಸ್ಟ್ರೇಲಿಯಾ ಪತ್ರ

read more
ಹಾವು ಬಾವಲಿಗಳ ಸ್ನೇಹಕ್ಕೆ ಕಾಯುತ್ತ

ಹಾವು ಬಾವಲಿಗಳ ಸ್ನೇಹಕ್ಕೆ ಕಾಯುತ್ತ

ತೋಟದ ಮನೆಯಲ್ಲಿ ಎಲ್ಲವೂ ಆಹ್ಲಾದಕರವಾಗಿರಲಿಲ್ಲ! ಹಲವಾರು ಹೆದರಿಕೆ ಬರುವ ಸಂಗತಿಗಳೂ ಇದ್ದವು. ಬಯಲುಸೀಮೆಯಲ್ಲಿ ಹುಟ್ಟಿ ಬೆಳೆದಿದ್ದ ನನಗೆ ತುಂಬಾ ಪರಿಚಿತ ಪ್ರಾಣಿಗಳೆಂದರೆ ಮಂಗಗಳು. ನಮ್ಮ ಮೂಲವಾದ ಕುರ್ತಕೋಟಿ, ಕೆಂಪು ಮಂಗಗಳಿಗೆ ಎಷ್ಟು ಪ್ರಸಿದ್ಧ ಅಂದ್ರೆ ಅವಕ್ಕೆ “ಕುರ್ತಕೋಟಿ ಮಂಗ್ಯ” ಅಂತಲೇ ಬ್ರಾಂಡು. ಅದರ ಜೊತೆಗೆ ಹಾವುಗಳನ್ನು ಬಾಲ್ಯದಲ್ಲಿ ಲಕ್ಷ್ಮೇಶ್ವರದಲ್ಲಿದ್ದಾಗ ಆಗೀಗ ನೋಡಿದ್ದೆನಾದರೂ ಅವುಗಳ ಬಗ್ಗೆ ಭಯವಂತೂ ಇದ್ದೆ ಇತ್ತು. ಗುರುಪ್ರಸಾದ ಕುರ್ತಕೋಟಿ ಅಂಕಣ

read more
ಮಲ್ಲಿಕಾ ಮತ್ತು ಸೌಭಾಗ್ಯಮ್ಮ … ಎರಡು ಪ್ರಸಂಗಗಳು

ಮಲ್ಲಿಕಾ ಮತ್ತು ಸೌಭಾಗ್ಯಮ್ಮ … ಎರಡು ಪ್ರಸಂಗಗಳು

ಪ್ರತಿ ಅರ್ಧ ಗಂಟೆಗೊಮ್ಮೆ ಸಾವನ್ನು ಮಡಿಲಲ್ಲಿಟ್ಟುಕೊಂಡು ಸರಿದಾಡುವ ಆಂಬುಲೆನ್ಸ್ ಸದ್ದಿಗೆ ಸಂಕಟವಾಗುತ್ತಿದ್ದ ಹೊತ್ತದು. ಕೆಳಗಡೆ ಶುರುವಾದ ಗಿಜಿ ಗಿಜಿ ಕೇಳಿ ಕಿಟಕಿಯಿಂದ ನೋಡಿದಾಗ ಪೀಜಿ ಓನರ್ ಮತ್ತು ಅವನ ಹೆಂಡತಿ ಸುನೀತಕ್ಕ ಆಂಬುಲೆನ್ಸ್ ಹತ್ತುತ್ತಿದ್ದರು. ಕೂಡಲೇ ಕೆಳಗಡೆ ಓಡಿಹೋದೆ. ನಾನು ಹೋಗುವುದಕ್ಕೂ ಅಂಬುಲೆನ್ಸಿನ ಬಾಗಿಲು ಮುಚ್ಚುವುದಕ್ಕೂ ಸರಿ ಹೋಯಿತು. ಆ ಕ್ಷಣಭಂಗುರತೆಯ ಸಮಯದಲ್ಲೇ ನನಗೆ ಕಂಡಿದ್ದು ಕಣ್ಣೀರು ತುಂಬಿಕೊಂಡಿದ್ದ ಸುನೀತಕ್ಕನ ಕಣ್ಣುಗಳು…
ದಾದಾಪೀರ್‌ ಜೈಮನ್‌ ಅಂಕಣ

read more
ಬಿಸಿಲ ಧಗೆ, ಚಳಿಯ ಹೊರೆಗಳ ನಡುವೆ ಅರಳುವ ಡಾಫೋಡಿಲ್ ಎಲ್ಲಿದೆ..

ಬಿಸಿಲ ಧಗೆ, ಚಳಿಯ ಹೊರೆಗಳ ನಡುವೆ ಅರಳುವ ಡಾಫೋಡಿಲ್ ಎಲ್ಲಿದೆ..

ಆಸ್ಟ್ರೇಲಿಯದ  ಹೊಸ ಪ್ರಧಾನಿಗಳು ಚುನಾಯಿತರಾದ ಬಳಿಕ ಅಧಿಕಾರದ ಚುಕ್ಕಾಣಿ ಹಿಡಿದ ಮೊದಲ ನಾಲ್ಕು ವಾರಗಳಲ್ಲಿ ಊರೂರು, ಅಂದರೆ ವಿದೇಶಗಳನ್ನು, ಸುತ್ತಿದ್ದಕ್ಕೆ ದೇಶದ ಜನರ ಮತ್ತು ವಿರೋಧಪಕ್ಷದ ಟೀಕೆಗೆ ಗುರಿಯಾದರು. ಆದರೂ ಕೂಡ ತಮ್ಮ ಪರದೇಶ ಸುತ್ತಾಟವನ್ನು ಸಮರ್ಥಿಸಿಕೊಂಡು ‘ನೆರೆಹೊರೆಯವರೊಂದಿಗೆ ಆಸ್ಟ್ರೇಲಿಯದ ರಾಜಕೀಯ ಸಂಬಂಧ ಕುಂಟುತ್ತಿತ್ತು, ನಾವು ಆ ದೇಶದ ನಾಯಕರ ವಿಶ್ವಾಸವನ್ನು ಕಳೆದುಕೊಂಡಿದ್ದೆವು. ಹಾಗಾಗಿ ಅವರೊಂದಿಗಿನ ಸಂಬಂಧವನ್ನು ಕುದುರಿಸಿಕೊಳ್ಳುವುದೂ ಮುಖ್ಯವಾಗಿತ್ತು.
ಡಾ. ವಿನತೆ ಶರ್ಮಾ ಅಂಕಣ

read more
ಇಂಗ್ಲೆಂಡ್ ನ ವಿಶ್ವವಿದ್ಯಾಲಯಗಳ ಪಡಸಾಲೆಯಲ್ಲಿ

ಇಂಗ್ಲೆಂಡ್ ನ ವಿಶ್ವವಿದ್ಯಾಲಯಗಳ ಪಡಸಾಲೆಯಲ್ಲಿ

ಚಾರ್ಲ್ಸ್ ಡಾರ್ವಿನ್ ಓದಿದ್ದಾನೆ ಎನ್ನಲಾದ ಕ್ರೈಸ್ಟ್ ಕಾಲೇಜಿಗನೊಳಗೆ ಪ್ರವೇಶಿಸಿದೆ. ಅಲ್ಲಿ ಆತನ ಹತ್ತಾರು ಅಡಿಯಷ್ಟು ದೊಡ್ಡ ಅಮೃತಶಿಲೆಯ ಮೂರ್ತಿ ಇದೆ. ಕಾಲೀಜಿನಲ್ಲಿ ಇದ್ದ ಮಗನನ್ನು ನೋಡಲು ಬಂದಿದ್ದ ಆತನ ತಾಯಿಯ ಎದೆಮಟ್ಟದ ಮೂರ್ತಿಯೊಂದನ್ನೂ ಅಲ್ಲಿ ಇರಿಸಿದ್ದಾರೆ. ಅಲ್ಲಿಗೆ ನಾನು ಹೋಗಿದ್ದಾಗ ಯಾರೂ ಅಂದರೆ ಯಾರೂ ಇರಲಿಲ್ಲ, ಆದರೂ ಯಾವ ಕೋಣೆಯ, ಕಾಲೇಜಿನ ಬಾಗಿಲು ಹಾಕಿರಲಿಲ್ಲ. ಮುಖ್ಯದ್ವಾರದ ಬಳಿ ಒಬ್ಬಾತ ಒಳಹೋಗಲು ಬಯಸುವವರಿಗೆ ಒಂದು ಸಣ್ಣ ಬ್ರೋಷರ್ ಕೊಟ್ಟು ಕಳುಹಿಸುತ್ತಿದ್. ಕಂಡಷ್ಟೂ ಪ್ರಪಂಚ ಅಂಕಣದಲ್ಲಿ ಅಂಜಲಿ ರಾಮಣ್ಣ ಬರಹ.

read more
ಇದು ನಿಮ್ಮ ಮನೆ…

ಇದು ನಿಮ್ಮ ಮನೆ…

ಜೀವನದಲ್ಲಿ ಆಗಾಗ ಬದಲಾವಣೆಗಳನ್ನು ತಂದಾಗ ಅದು ಖಂಡಿತ ಒಂದು ಹೊಸ ಚೈತನ್ಯವನ್ನು ಹುಟ್ಟುಹಾಕುತ್ತದೆ. ನನಗೆ ಜೀವನ ಒಂದೇ ಗತಿಯಲ್ಲಿ ಅಥವಾ ಲಯದಲ್ಲಿ ಹೋಗುತ್ತಿದ್ದರೆ ಏನೋ ಇರಿಸುಮುರುಸು! ಮತ್ತೊಂದು ಹೊಸ ಯೋಜನೆ ಶುರು ಮಾಡಿರುತ್ತೇನೆ. ಹಾಗಂತ ಏನೇನೋ ಮಾಡೋದು ಅಂತಲ್ಲ. ನನ್ನ ಗುರಿ ಮಾತ್ರ ಅದೇ ಇತ್ತು. ಆ ದಾರಿಯಲ್ಲೇ ಇದು ನನ್ನ ಮತ್ತೊಂದು ಹೆಜ್ಜೆಯಾಗಿತ್ತು. ಈ ಗ್ರಾಮ ವಾಸ್ತವ್ಯ ಎಂಬ ಬದಲಾವಣೆ ನನ್ನಲ್ಲಿ ಹೊಸ ಉತ್ಸಾಹ ತಂದಿತ್ತು. ನನ್ನ ಕಂಫರ್ಟ್ ಜೋನ್ ನಿಂದ ಎದ್ದು ಹೊರ ಬಂದಿದ್ದೆ.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಗ್ರಾಮ ಡ್ರಾಮಾಯಣ” ಅಂಕಣ

read more
ಅಳಿವಿನಂಚಿನಲ್ಲಿರುವ ಪದ್ಧತಿಗಳ ನೇಯ್ಗೆ

ಅಳಿವಿನಂಚಿನಲ್ಲಿರುವ ಪದ್ಧತಿಗಳ ನೇಯ್ಗೆ

ಇದು ಅನಿರೀಕ್ಷಿತ ತಿರುವುಗಳಿಲ್ಲದ, ಊಹಿಸಲಾಧ್ಯವಾದ ಸಂಗತಿಗಳಿರುವ ಕಾದಂಬರಿಯೂ ಅಲ್ಲ. ಪ್ರಧಾನ ಕತೆ ಒಂದು ಕಾದಂಬರಿಯಾಗಿ ಸಾಗಲು ಒಂದು ನೆಪವಷ್ಟೇ. ಮುಖ್ಯವಾಗಿ ಮಧ್ಯಘಟ್ಟ ಆ ಭಾಗದ ಮಲೆನಾಡಿನ ೭೦-೮೦ ವರ್ಷಗಳ‌ ಹಿಂದಿನ ಜೀವನ ಪದ್ಧತಿ, ನಿಸರ್ಗದ ಜೊತೆಗಿನ ಸಂಬಂಧ, ಆಹಾರ ಪದ್ಧತಿ, ಕಷ್ಟ ಸುಖಗಳು, ವಿವಿಧ ಸಮುದಾಯಗಳು‌ ಮತ್ತು ಆ ಸಮುದಾಯಗಳ‌ ನಡುವಣ ಅನುಬಂಧ, ವಿಶಿಷ್ಟವಾದ ನಾಟೀ ಔಷಧಿಗಳು ಇತ್ಯಾದಿಗಳ ಕುರಿತು ಬಹಳ ಆಪ್ತವಾಗಿ ಹೇಳುತ್ತಾ ಹೋಗುತ್ತದೆ‌.
ಓದುವ ಸುಖ ಅಂಕಣದಲ್ಲಿ ಗಿರಿಧರ್ ಗುಂಜಗೋಡು ಬರಹ

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ