Advertisement

ಅಂಕಣ

ಚಿತ್ತಾಲರ ಕಾದಂಬರಿ ಪ್ರಪಂಚದಲ್ಲಿ ಒಂದೆರಡು ಹೆಜ್ಜೆ

ಚಿತ್ತಾಲರ ಕಾದಂಬರಿ ಪ್ರಪಂಚದಲ್ಲಿ ಒಂದೆರಡು ಹೆಜ್ಜೆ

ಕಥಾನಾಯಕ ಪುರುಷೋತ್ತಮ, ಆತನ ತಾಯಿ ಮತ್ತು ಬಳಗದ ನಡುವೆ ನಡೆಯುವ ಕಥಾನಕಗಳೇ ಈ ಕಾದಂಬರಿಯ ವಸ್ತು. ಜೊತೆಗೆ ಒಂದು ಮಹಾನಗರ ಮತ್ತೂ ದೊಡ್ಡದಾಗಿ ವಿಸ್ತರಣೆಯಾಗಬೇಕಾದರೆ ನಡೆಯುವ ತಲ್ಲಣಗಳು, ಹಣ ಅಧಿಕಾರದ ಮುಂದೆ ಮಾನವೀಯತೆ ಗೌಣವಾಗಿ ತನ್ನ ಸ್ವಾರ್ಥಕ್ಕಾಗಿ ಯಾವ ಕೆಲಸಕ್ಕೂ ಇಳಿಯಬಹುದಾದ ಮನುಜನ ಕ್ರೂರತನ, ತನ್ನ ಪ್ರೀತಿಯ ನೆಲವನ್ನು ಉಳಿಸಿಕೊಳ್ಳಲು ಎಲ್ಲಾ ಸ್ವಾರ್ಥಗಳ ಬಿಟ್ಟು ಮಾಡುವ ಹೋರಾಟ ಎಲ್ಲವೂ ಬಹಳ ಸುಂದರವಾಗಿ‌ ನಿರೂಪಿತಗೊಂಡಿದೆ
ಓದುವ ಸುಖ ಅಂಕಣದಲ್ಲಿ ಯಶವಂತ ಚಿತ್ತಾಲರ ಮೂರು ಕೃತಿಗಳ ಕುರಿತು ಬರೆದಿದ್ದಾರೆ ಗಿರಿಧರ್ ಗುಂಜಗೋಡು

read more
ವಿಯೆಟ್ನಾಮ್ ನಲ್ಲಿರುವ ಚಂಪಾ ಸಾಮ್ರಾಜ್ಯದ ನೋಟಗಳು

ವಿಯೆಟ್ನಾಮ್ ನಲ್ಲಿರುವ ಚಂಪಾ ಸಾಮ್ರಾಜ್ಯದ ನೋಟಗಳು

ನಾಲ್ಕನೇ ಶತಮಾನದಿಂದ ೧೩ ನೇ ಶತಮಾನದ ವರೆಗೂ ಆಳಿದ ಚಂಪಾ ಸಾಮ್ರಾಜ್ಯವು ಆಮೇಲೆ ಚೈನಿಸ್ , ಡ ವಿಯೆಟ್ ಹಾಗೂ ಪ್ರಬಲರಾದ ಕಾಂಬೋಡಿಯಾದ ಖ್ಮೇರ್ ರಾಜರುಗಳಿಗೆ ಮಣಿದು ಕೊನೆಗೆ ಅಳಿದೇಹೊಯಿತು. ಅವರ ಭೌಗೋಳಿಕ ಪ್ರದೇಶಗಳನ್ನು ಇಂದ್ರಪುರ, ಅಮರಾವತಿ, ವಿಜಯಾ ಕೌತುರಾ ಮತ್ತು ಪಾಂಡುರಂಗ ಎಂದು ಕರೆಯುತ್ತಿದ್ದರು. ಮಿಸಾನ್ ಕಣಿವೆಯು ಅಮರಾವತಿಯ ಭಾಗವಾಗಿತ್ತು. ಅಲ್ಲಿಂದ ಅವರು ಶತ್ರುಗಳಿಂದ ಹಿಮ್ಮೆಟ್ಟಿ ಹೋದಂತೆ ಕಣಿವೆಯೂ ಅನಾಥವಾಗುತ್ತಾ ಹೋಯಿತು. ‘ದೇವ ಸನ್ನಿಧಿ’ ಅಂಕಣದಲ್ಲಿ ಗಿರಿಜಾ ರೈಕ್ವ ವಿಯೆಟ್ನಾಂ ಕುರಿತು ಬರೆದಿದ್ದಾರೆ. 

read more
ಪಿಜ್ಜಾ ಡೆಲಿವರಿ ಹುಡುಗನೂ ಹಾಗೂ ಓಲ್ಡ್ ಮಾಂಕ್ ಪರಮಾತ್ಮನೂ

ಪಿಜ್ಜಾ ಡೆಲಿವರಿ ಹುಡುಗನೂ ಹಾಗೂ ಓಲ್ಡ್ ಮಾಂಕ್ ಪರಮಾತ್ಮನೂ

ಹೊರಗಡೆಯಿಂದ ನಿಂತು ನಾವು ಸಾವಿರ ಹೇಳಬಹುದು. ಆದರೆ ಒಳಗಿದ್ದು ಕೆಂಡ ಹಾಯುತ್ತಿರುವವರ ಪರಿಸ್ಥಿತಿಗಳು ಭಿನ್ನವಾಗಿರುತ್ತವೆ. ಪ್ರೀತಿ ಮತ್ತು ಯುದ್ಧದಲ್ಲಿ ಎಲ್ಲವೂ ಹಿತ ಎನ್ನುವ ಹಾಗೆ; ಏಕ್ತಾ ಕಪೂರ್ ಸೀರಿಯಲ್ಲುಗಳಲ್ಲಿರುವಂತೆ ಅದೆಷ್ಟೋ ಬಾರಿ ಬೇರೆಯಾಗಿ ಮತ್ತೆ ಮತ್ತೆ ಕೂಡಿಕೊಳ್ಳಲೂಬಹುದು. ಮಾತಿನ ಕೊನೆಯಲ್ಲಿ ‘ಹೋಗ್ಲಿ ಬಿಡೋ ಯಣ. ಬಿಟ್ಟೆ ಬಿಡ್ತೀನಿ ಅತಾಗ. ಹೊಯ್ಕೋತ ಹೋಗ್ಲಿ!’ ಎಂದೇನೋ ಅಂದ. ದಾದಾಪೀರ್‌ ಜೈಮನ್ ಬರೆಯುವ ಜಂಕ್ಷನ್‌ ಪಾಯಿಂಟ್‌ ಅಂಕಣ

read more
ದೂರದೂರಿನ ನೆಂಟತನವೂ, ನೆರೆಹೊರೆಯವರ ಸ್ನೇಹಹಸ್ತವೂ

ದೂರದೂರಿನ ನೆಂಟತನವೂ, ನೆರೆಹೊರೆಯವರ ಸ್ನೇಹಹಸ್ತವೂ

ಆಸ್ಟ್ರೇಲಿಯ ವಸಾಹತುಶಾಹಿ ಆಡಳಿತದಿಂದ ಕ್ರಮೇಣ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬದಲಾದರೂ ದೇಶವನ್ನು ಆಳುವುದು ಬಿಳಿಯ ರಾಜಕಾರಣಿಗಳೆ ಎನ್ನುವುದು ಸರ್ವೇಸಾಮಾನ್ಯ ಸತ್ಯ. ಇಂಗ್ಲಿಷ್ ಭಾಷೆಯ ಜೊತೆ ಆಮದಾಗಿ ಬಂದಿದ್ದು ವ್ಯವಸ್ಥೆ. ಹೀಗಾಗಿ ಆಸ್ಟ್ರೇಲಿಯಾವು ಇಂಗ್ಲಿಷ್ ಭಾಷೆಯ ಪಾಶ್ಚಾತ್ಯ ದೇಶ. ಈ ಪಟ್ಟದೊಡನೆ ಬಳುವಳಿಯಾಗಿ ಬಂದಿರುವುದು, ನಂಬಿರುವುದು ದೂರದೂರಿನ ನೆಂಟತನ. ಮಾತೃದೇಶ ಬ್ರಿಟನ್, ಅಣ್ಣನಾಗಿ ಅಮೆರಿಕ, ಕಿರಿತಂಗಿಯಾಗಿ ನ್ಯೂ ಝಿಲಂಡ್, ಬಂಧುಬಾಂಧವರು ಯುರೋಪಿಯನ್ ದೇಶದವರು.
ಡಾ. ವಿನತೆ ಶರ್ಮಾ ಬರೆಯುವ “ಆಸ್ಟ್ರೇಲಿಯಾ ಪತ್ರ”

read more
ಜೋಕು ಮಾಡಲು ಬಳಸುತ್ತಿದ್ದ ಪದದ ನಿಜ ಅರ್ಥ ತಿಳಿಯಿತು

ಜೋಕು ಮಾಡಲು ಬಳಸುತ್ತಿದ್ದ ಪದದ ನಿಜ ಅರ್ಥ ತಿಳಿಯಿತು

ಮೋಹನ ಸ್ವಾಮಿ ಒಂದು ಕಥಾ ಸಂಕಲನವಾದರೂ ನಿಧಾನವಾಗಿ LGBT ಸಮುದಾಯದೆಡೆಗಿನ ನನ್ನ ಮನೋಭಾವನೆಯನ್ನು ಬದಲಾಯಿಸಿಕೊಳ್ಳಲು ಸಹಾಯಮಾಡಿತು. ನನ್ನೆದುರು ಆ ಸಮುದಾಯದ ವ್ಯಕ್ತಿಗಳು ಸಿಕ್ಕಾಗ ಮಾಮೂಲಿ ಗಂಡು ಹೆಣ್ಣುಗಳ ಹಾಗೇ ಮಾತನಾಡಲು, ಹರಟೆ ಹೊಡೆಯಲು ಸಾಧ್ಯವಾಯಿತು. ಹಾಗಾದರೆ ನಾನು ಈ ವಿಚಾರಲ್ಲಿ ನನ್ನ ಯೋಚನೆಯನ್ನು ನೂರಕ್ಕೆ ನೂರು ಬದಲಿಸಿಕೊಂಡೆನೇ? ಎಂದು ಕೇಳಿದರೆ ಉತ್ತರ ಗೊತ್ತಿಲ್ಲ, ಅಥವಾ ಇಲ್ಲವೆನ್ನಿಸುತ್ತದೆ.
ಓದುವ ಸುಖ ಅಂಕಣದಲ್ಲಿ ವಸುಧೇಂದ್ರರ “ಮೋಹನಸ್ವಾಮಿ” ಕೃತಿಯ ಕುರಿತು ಬರೆದಿದ್ದಾರೆ ಗಿರಿಧರ್ ಗುಂಜಗೋಡು

read more
ನಂಬಿ ಬದುಕಿದವರ ಕಥೆ

ನಂಬಿ ಬದುಕಿದವರ ಕಥೆ

ಝುಹೆಬಾನ್ ಎಂಬ ಮಧ್ಯವಯಸ್ಕನೊಬ್ಬರನ್ನು ಮಾತಿಗೆಳೆದಾಗ ಅವರು ದರ್ಗಾಹದ ಇತಿಹಾಸವನ್ನು ಬಿಚ್ಚಿಡುತ್ತಾ ಹೋದರು. ಸುಮಾರು ಎರಡುನೂರ ಎಪ್ಪತ್ತೈದು ವರ್ಷಗಳ ಹಿಂದೆ ಟಿಪ್ಪು ಮಸ್ತಾನ್, ಮಾಣಿಕ್ ಮಸ್ತಾನ್ ಮತ್ತು ತವಕ್ಕಲ್ ಮಸ್ತಾನ್ ಎಂಬ ಮೂವರು, ನವಾಬ್ ಹೈದರ್ ಆಲಿ ಕಟ್ಟಿಸುತ್ತಿದ್ದ ಕಲ್ಲಿನರಮನೆಯ ಕೆಲಸಕ್ಕೆಂದು ಬಂದರು. ಧರ್ಮನಿಷ್ಠರಿದ್ದ ಆ ಮೂವರೂ ಕೆಲಸವೇ ದೇವರೆಂದು ದುಡಿಯುತ್ತಿದ್ದರೂ ಪಗಾರದ ದಿನ ಮಾತ್ರ ಕಾಣೆಯಾಗಿಬಿಡುತ್ತಿದ್ದರಂತೆ!
ದಾದಾಪೀರ್‌ ಜೈಮನ್‌ ಬರೆಯುವ ‘ಜಂಕ್ಷನ್‌ ಪಾಯಿಂಟ್‌’ ಅಂಕಣ

read more
‘ಊಲುರು ಮಾತು’ ಎಂಬ ಹೊಸ ಭಾಷ್ಯ

‘ಊಲುರು ಮಾತು’ ಎಂಬ ಹೊಸ ಭಾಷ್ಯ

ದೇಶೀಯ ಮಟ್ಟದಲ್ಲಿ ಆಡಳಿತ ನಡೆಸುವ ಪಾರ್ಲಿಮೆಂಟಿಗೆ ಅಬೊರಿಜಿನಲ್ ಜನರ ಸಮಿತಿಯನ್ನು ನೇಮಿಸಿ ಅವರ ದನಿಗೆ ಪುನಃಶ್ಚೇತನ ಕೊಡುವ ಭರವಸೆಯನ್ನು ಆಸ್ಟ್ರೇಲಿಯಾದ ಹೊಸ ಸರ್ಕಾರ ನೀಡಿದೆ.  ಅಷ್ಟೇ ಅಲ್ಲ, ದೇಶದ ಸಂವಿಧಾನದಲ್ಲಿ ಅವರ ದನಿಯನ್ನು ಸೇರ್ಪಡಿಸುವ ಮಾತನ್ನು ಕೊಟ್ಟಾಗಿದೆ. ಹೊಸ ಪ್ರಧಾನಮಂತ್ರಿಗಳ ಮಾತಿನಿಂದ ಅಬೊರಿಜಿನಲ್ ಜನಸಮುದಾಯಗಳ ನಾಯಕರಲ್ಲಿ, ಹಿರಿಯರಲ್ಲಿ ಸಂಚಲನೆ ಮೂಡಿದೆ. ಆಸ್ಟ್ರೇಲಿಯಾ ಪತ್ರದಲ್ಲಿ ಡಾ. ವಿನತೆ ಶರ್ಮಾ ಅವರು ಆಸ್ಟ್ರೇಲಿಯಾದ ವರ್ತಮಾನಗಳನ್ನು ಬರೆದಿದ್ದಾರೆ. 

read more
ರಾಜಕೀಯ ಹಾದಿಯಲ್ಲಿ ಕಂಡ ಪ್ರಾಮಾಣಿಕ ನುಡಿಗಳು

ರಾಜಕೀಯ ಹಾದಿಯಲ್ಲಿ ಕಂಡ ಪ್ರಾಮಾಣಿಕ ನುಡಿಗಳು

ಬಿ.ಎ. ಮೊಹಿದೀನ್ ಅವರು ಜೀವನದಲ್ಲಿ ಇಟ್ಟುಕೊಂಡ ಮೌಲ್ಯಗಳು ಅನುಕರಣೀಯವಾದುದು. ತಾನು ಚುನಾವಣೆಗೆ ನಿಂತಾಗ ಮಸೀದಿ ದೇವಾಲಯ ಚರ್ಚುಗಳಿಗೆ ಮತಕೇಳಲು ಹೋಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿ ಅದನ್ನು ಹಟಬಿಡದೇ ಪಾಲಿಸಿದವರು ಅವರು. ತಾವು ಹುಟ್ಟಿಬಂದ ಸಮುದಾಯದ ಏಳಿಗೆಗಾಗಿ ಮೊಹಿದೀನ್ ಅವರಿಗಿದ್ದ ಕಾಳಜಿ ಪ್ರಶ್ನಾತೀತವಾದುದು.
ಓದುವ ಸುಖ ಅಂಕಣದಲ್ಲಿ ಗಿರಿಧರ್ ಗುಂಜಗೋಡು ಬರಹ

read more
ವಿದಾಯದಲ್ಲೂ ಬೆಳೆವ ಪ್ರೀತಿ

ವಿದಾಯದಲ್ಲೂ ಬೆಳೆವ ಪ್ರೀತಿ

‘ಎಲ್ಲಾ ಕ್ಯಾಲ್ಕುಲೆಟ್ ಮಾಡಿ ಪ್ರೀತ್ಸಕೆ ಇದು ಅರೆಂಜ್ ಮ್ಯಾರೇಜ್ ಅಲ್ಲ. ಅವನನ್ನು ನೋಡಿದ್ರೆ ನನ್ನ ಎದೆಬಡಿತ ಹೆಚ್ಚಾಗತ್ತೆ. ಅವನ ಸಮುದ್ರದಂತಹ ಕಣ್ಣುಗಳ ಸೆಳೆತದಿಂದ ಪಾರಾಗೋದಿಕ್ಕೆ ಆಗದೆ ಇಲ್ಲ…’ ಎಂದು ಹೇಳುತ್ತಿದ್ದವನನ್ನು ತಡೆದು ‘ಇವೆಲ್ಲಾ ಮೊದಲ ನೋಟದಲ್ಲೇ ಆಯ್ತೆನೋ ಸಾಹೇಬ್ರಿಗೆ?!’ ಎಂದು ಕೇಳಿದಾಗ ಅವನು ಕೊಟ್ಟ ಉತ್ತರ ಅದೆಷ್ಟು ಸಮಂಜಸ ಅನಿಸುತ್ತದೆ… ಅವನು ಹೇಳಿದ; ‘ನೀ ಏನೇ ಅನ್ನು, ಮೊದಲ ನೋಟ, ಮೊದಲ ಗುರುತುಗಳೇ ನಮ್ಮನ್ನು ಸಾಹಸಿಗಳನ್ನಾಗಿ ಮಾಡದು.
ದಾದಾಪೀರ್‌ ಜೈಮನ್‌ ಬರೆಯುವ ‘ಜಂಕ್ಷನ್‌ ಪಾಯಿಂಟ್‌’ ಅಂಕಣ

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ