ಕರೆವವೊಲಾಯ್ತು ಮತ್ತ ಕಳಹಂಸರವಂ ಪಡೆಮೆಚ್ಚೆಗಂಡನಂ: ಆರ್. ದಿಲೀಪ್ ಕುಮಾರ್ ಅಂಕಣ
“ಯಮುನಾನದಿಯ ಮೇಲೆ ಹಾದುಬರುತ್ತಿರುವ ಗಾಳಿಯ ವರ್ಣನೆಯಿಂದ ಹಿಡಿದು ಅಲ್ಲಿಗೆ ಎಲ್ಲರೂ ಬಂದು ಜಲಕ್ರೀಡೆ ಆಡುವಾಗಿನ ಸಂದರ್ಭದವರೆಗಿನ ಎಲ್ಲಾ ವರ್ಣನೆಯನ್ನೊಮ್ಮೆ ಗಮನಿಸಿ ಇದೆಲ್ಲವೂ ಅಮೂರ್ತದಿಂದ ಮೂರ್ತಕ್ಕೆ ತರುವ ಬಹುದೊಡ್ಡ ಪ್ರಯತ್ನ. ಕೊನೆಗೆ ಅವನಿಗೇ ವರ್ಣಿಸಲು ಸಾಲದೆ ದೇಸೀ ಮಾರ್ಗ ಅನ್ನುವ ಮಾತನ್ನು ತರುತ್ತಾನೆ…”
ದುರಂತಗಳ ಸುಳಿಗಾಳಿಯಲ್ಲಿ….: ಲಕ್ಷ್ಮಣ ವಿ.ಎ. ಅಂಕಣ
“ಬೆಂಗಳೂರಿನಲ್ಲಿ ಬಿಲ್ಡರುಗಳ ಲಾಬಿಗೆ ಮಣಿದು ತವರಿಗೆ ಮರಳುವ ಆಸೆ ಹೊತ್ತುಬಂದ ವಲಸೆ ಕಾರ್ಮಿಕರ ಕಣ್ಣುಗಳಲ್ಲಿ ಅದೆಂತಹ ಆಸೆಗಳಿದ್ದವು? ತಮ್ಮವರನ್ನು ನೋಡುವ ಕಾತರ ಎಷ್ಟು ಇದ್ದಿರಬೇಕು. ರೈಲು ರದ್ದಾದ ಸುದ್ದಿಯ ಕೇಳಿ ಇವರೇನು ಬೆಚ್ಚಿ ಬಿದ್ದವರಲ್ಲ. ಇದ್ದ ಲಗ್ಗೇಜನ್ನೇ ತುಸು ಕಡಿಮೆಮಾಡಿ ಬಿಹಾರ ಜಾರ್ಖಂಡ ಮಧ್ಯಪ್ರದೇಶ ಓರಿಸ್ಸಾದಿಂದ ಬಂದ ಕೂಲಿಗಳು ಕೆಂಡದ ಟಾರು ರೋಡು ತುಳಿಯುತ್ತ ನಡೆದುಕೊಂಡೇ ಹೋಗುತ್ತಾರೆಂದರೆ..”
ನಿಮ್ಮೊಡನಿದ್ದೂ ನಿಮ್ಮಂತಾಗದೆ…: ಆಶಾ ಜಗದೀಶ್ ಅಂಕಣ
“ಇಂತಹ ಅದ್ಭುತ ಕವನಗಳನ್ನು ನಮಗಾಗಿ, ನಮ್ಮ ಓದಿಗಾಗಿ, ನಮ್ಮ ಹಾದಿಗೆ ಕಂದೀಲಾಗಿ ಉಳಿಸಿಟ್ಟು ಹೋಗಿದ್ದಾರೆ ನಿಸಾರರು. ಯಾಕೆ ಒಬ್ಬ ಕವಿ ನಮಗೆ ಮುಖ್ಯವಾಗುತ್ತಾರೆ? ಮತ್ತೆ ಮುಖ್ಯವಾಗಬೇಕು? ಎನ್ನುವ ಪ್ರಶ್ನೆಗಳಿಗೆ ಇಂತಹ ಬರಹ ಮತ್ತು ಸಂದರ್ಭಗಳು ನಮಗೆ ಉತ್ತರ ಕೊಡುತ್ತವೆ. ಒಬ್ಬ ಕವಿ ನೇರ ಪರಿಚಯವೇ ಇಲ್ಲದ ಅದೆಷ್ಟೋ ಹೃದಯಗಳನ್ನು ತನ್ನ ಅಮೂರ್ತ ಕೈಗಳಿಂದ ಸೋಕಬಲ್ಲ. ತನ್ನ ಅಷ್ಟೂ ಭಾವ ಲೋಕವನ್ನು ಪರಿಚಯಿಸಿ ನಮ್ಮನ್ನು ಹನಿಗಣ್ಣಾಗಿಸಬಲ್ಲ…”
ಸೊಕ್ಕಿನವಳು ಕಲಿಸಿದ ಸಮಾಜವಾದ: ಶ್ರೀಹರ್ಷ ಸಾಲಿಮಠ ಅಂಕಣ
“ಲೋಹಿಯಾ, ತೇಜಸ್ವಿ, ಶಾಂತವೇರಿ, ಲಂಕೇಶ್ ಅವರಂಥ ವ್ಯಕ್ತಿಗಳು ಬರೆದಿಟ್ಟಿದ್ದ ಥಿಯರಿಗಳು ಈ ಸೊಕ್ಕಿನವಳು ಕಲಿಸಿದಷ್ಟು ಮನಕ್ಕೆ ಅಚ್ಚೊತ್ತುವಂತೆ ಕಲಿಸಲಿಲ್ಲ. ಮತ್ತೆ ನನಗೆ ಸಮಾಜವಾದದ ಪ್ರಾಯೋಗಿಕ ಬದುಕು ಅಂತ ಕಂಡುಬಂದದ್ದು ಬೇರೆ ದೇಶಗಳನ್ನು ಸುತ್ತಿದಾಗಲೇ! ಆದರೆ ಅದು ಸಂಪೂರ್ಣ ಸಮಾಜವಾದವಲ್ಲ. ಕ್ಯಾಪಿಟಲಿಸಂ ಜನರು ಉದ್ಯಮಿಗಳ ಮೇಲೆ ಹೆಚ್ಚು ಖರ್ಚು ಮಾಡುವಂತೆ ಮಾಡಲು ತೆರಿಗೆ ದುಡ್ಡನ್ನೇ ಸರಕಾರದ ಮೂಲಕ…”
ಗುಜರಿ ಕಥೆಗಳು: ವಿನತೆ ಶರ್ಮಾ ಅಂಕಣ
“ನಾನು ಪ್ರತಿವಾರವೂ ಹೋಗುವುದು ಮಾರುಕಟ್ಟೆಗೆ ತಂದು ಮಾರುವ ಪ್ರತಿಯೊಂದು ಗಿಡಮರ, ಬಳ್ಳಿ, ಕೊಂಬೆಗಳನ್ನು ನೋಡುವುದಕ್ಕೆ. ಅದರ ಮಧ್ಯದಲ್ಲಿ ಸಮಯವಿದ್ದರೆ, ಚೀಲದಲ್ಲಿ ಇನ್ನೂ ಕ್ಯಾಶ್ ಉಳಿದಿದ್ದರೆ ಈ ಗುಜರಿ ಮಳಿಗೆಯತ್ತ ಕಣ್ಣಾಡಿಸುತ್ತಿದ್ದೆ. ಆಗಾಗ ಬಹು ಚೆಂದದ ಕೆಲ ವಸ್ತುಗಳು ಕಣ್ಣಿಗೆ ಬೀಳುತ್ತಿದ್ದವು. ಅವು ಏನು, ಅವುಗಳ ಹುಟ್ಟಿನ ರಹಸ್ಯವೇನು, ನಿಮಗೆ ಹೇಗೆ ಸಿಕ್ಕಿತು, ಎಂದೆಲ್ಲ ಅವುಗಳನ್ನು ಚೆಂದನೆ ಜೋಡಿಸಿ ಮಾರಲು…”
ಇನ್ನುವೇಂ ಸೈಪೊಳವೆ: ಆರ್. ದಿಲೀಪ್ ಕುಮಾರ್ ಅಂಕಣ
“ಕವಿಯೊಬ್ಬನ ಮನಸ್ಸಿನ ಮೇಲೆ ಬೀರುವ ಹೊರಜಗತ್ತಿನ ಘಟನೆಗಳು ಪ್ರಭಾವವು ಬಹು ಪರಿಣಾಮವನ್ನು ಮನಸ್ಸಿನ ಮೇಲೆ ಬೀರಿಯೇ ಇರುತ್ತದೆ. ಈ ಪ್ರಭಾವದ ಪ್ರೇರಣೆಯಿಂದ ಆದ ಪರಿಣಾಮವು ಬಹು ದಟ್ಟವಾಗಿರುತ್ತದೆ. ಇವು ಪದರ ಪದರಗಳಾಗಿ ಬಿಡಿಸಿಕೊಳ್ಳಲು ಪ್ರಯತ್ನಿಸಿದಷ್ಟು ಅದು ನೆನಪಾಗುತ್ತಲೇ ಇರುತ್ತದೆ. ಇದರಿಂದ ಬಿಡುಗಡೆಗೆ ಮಹಾಮರೆವಿನ ಅಗತ್ಯ ಕವಿಗಿದೆ ಅನಿಸದೆ. “
ಸಾಂಕೇತಿಕ ಸ್ಮರಣೆಯೂ, ವಾಸ್ತವದ ಸವಾಲುಗಳೂ: ಯೋಗೀಂದ್ರ ಮರವಂತೆ ಅಂಕಣ
“ಅಸಂಖ್ಯಾತ ಸಂಪ್ರದಾಯ ಪರಂಪರೆಗಳ ಮಣತೂಕವನ್ನು ಈಗಾಗಲೇ ಹೊತ್ತಿರುವ ಈ ಬ್ರಿಟನ್ ಗೆ ಈಗ ಈ ಪದ್ಧತಿಯ ಭಾರ ಹೆಚ್ಚೆನಿಸಲಿಕ್ಕಿಲ್ಲ. ಇಂತಹ ನೆನೆಕೆಯ ದಿನಕ್ಕೆ ಅಥವಾ ಸ್ಮರಣೆಯ ಹೊತ್ತಿಗೆ ಪ್ರತಿಮನೆಯ ಪ್ರತಿಯೊಬ್ಬರೂ ಪ್ರತೀ ಗುರುವಾರವೂ ಹೊರಬಂದು ಚಪ್ಪಾಳೆ ಸದ್ದು ಮಾಡುವುದು ಖಾತ್ರಿ ಇಲ್ಲ. ಆದರೂ ಬೀದಿಯೊಂದು ತುಂಬುವಷ್ಟು ಕೈಗಳು ಸಪ್ಪಳಗಳು ಕಂಡುಕೇಳುತ್ತವೆ..”
ಲಾಕ್ ಡೌನ್ ನಿಂದ ತುಂಬಿಕೊಂಡ ಗಂಧ: ಪ್ರಸಾದ್ ಶೆಣೈ ಅಂಕಣ
“ಕೊರೋನಾ ಬಂದ ಈ ದುರಿತ ಕಾಲದಲ್ಲೇ ಆಳುವವರು ಬುದ್ದಿ ಕಲಿಯದೇ ನಮ್ಮ ಕಾಡು, ಬೆಟ್ಟ, ನದಿಗಳನ್ನು ನಮ್ಮಿಂದ ಕಸಿಯುವ ಅಂಕೋಲ-ಹುಬ್ಬಳಿ ರೈಲ್ವೇ ಯೋಜನೆಗೆ ಅನುಮತಿ ಕೊಟ್ಟಿದ್ದಾರೆ. ಭದ್ರಾ ನದಿಗೂ ಕಂಟಕ ತರುವ ಯೋಜನೆಯೂ ನಡೆಯುತ್ತಿದೆ. ನಮ್ಮ ಪರಿಸರವನ್ನು ಕಸಿದರೆ ಭವಿಷ್ಯದಲ್ಲಿ ಕೊರೋನಾಕ್ಕಿಂತಲೂ ಭೀಕರ ಸ್ಥಿತಿ ನಿರ್ಮಾಣವಾಗಬಹುದು. ಭೂಕುಸಿತ, ಪ್ರವಾಹಕ್ಕೆ ನಾವೇ ಕಂಬಳಿಹಾಸು ಹಾಸಿದಂತಾಗಬಹುದು…”
ಮುಳ್ಳಯ್ಯನ ಗಿರಿ ಎಂಬ ಆತ್ಮಪ್ರತ್ಯಯ ಕಳಚುವ ದಾರಿ: ಲಕ್ಷ್ಮಣ ವಿ.ಎ. ಅಂಕಣ
“ಇದರ ಹಿಂದಿನ ರಾತ್ರಿ ಕೆಮ್ಮಣಗುಂಡಿಯ ಐ ಬಿ ತಲುಪಿದಾಗ ರಾತ್ರಿ ಹನ್ನೊಂದು ಗಂಟೆ. ರಾತ್ರಿ ಎಂಟುಗಂಟೆಯ ನಂತರ ಇಲ್ಲಿ ಊಟ ಸಿಗುವುದಿಲ್ಲವೆಂದು ಖಾತ್ರಿಯಾದ ಮೇಲೆ ಬೀರೂರಿಲ್ಲೇ ಊಟ ಮಾಡಿದೆವು. ಅದೂ ನಾವು ರಾತ್ರಿಯ ಕೊನೆಯ ಗಿರಾಕಿಗಳಾಗಿದ್ದರಿಂದ ಅಲ್ಲಿಯ ಮೆನು ನೋಡುವ ಗೋಜಿಗೆ ಹೋಗದೆ ಅಲ್ಲಿ ಉಳಿದಿದ್ದ ಅನ್ನ ರಸಂ ನಮ್ಮ ಪಾಲಿನ…”










