ಮಲಯಾಳಂ ಸಿನೆಮಾ ಸಹವಾಸ: ರೂಪಶ್ರೀ ಕಲ್ಲಿಗನೂರ್ ಅಂಕಣ
“ಮೊದಮೊದಲು ಮಲಯಾಳಂ ಚಿತ್ರ ನೋಡುವಾಗ ಭಾಷೆಯ ಸಮಸ್ಯೆ ಕಾಡ್ತಿತ್ತು. ಸಬ್ ಟೈಟಲ್ ಗಳನ್ನು ಓದಿಕೊಳ್ಳುತ್ತಾ ಚಿತ್ರ ನೋಡುವುದು ಎಂಥಾ ಕಷ್ಟಕರವಾದ ಕೆಲಸ ಅನ್ನೋದು ಅದನ್ನ ಅನುಭವಿಸಿ ತೀರಿದವರಿಗೇ ಗೊತ್ತು. ಸಬ್ ಟೈಟಲ್ ಗಳ ಮೇಲೆ ಅವಲಂಬಿತರಾಗಿ ಸಿನಿಮಾ ನೋಡುವವರ ತಾಪತ್ರಯ ಎಂಥಾದ್ದೆಂದರೆ ಚಿತ್ರವನ್ನು ಆಸ್ವಾದಿಸುವ ಬದಲಿಗೆ..”
ಗೈಡ್ ಡಾಗ್ ಎಂಬ ಸಜ್ಜನ ಪ್ರಜೆ: ವಿನತೆ ಶರ್ಮಾ ಅಂಕಣ.
“ದೃಷ್ಟಿ ನಶಿಸಿದವರು ತಾವಿರುವ ಪರಿಸರದಲ್ಲಿ ಸ್ವತಂತ್ರವಾಗಿ ಬದುಕಲು ಈ ನಾಯಿ ಮಾಡುವ ಸಹಾಯ ಬೆಲೆಕಟ್ಟಲಾರದ್ದು. ಹಾಗಾಗಿಯೇ ಗೈಡ್ ಡಾಗ್ ಎಲ್ಲರಿಗೂ ಎಟುಕುವ ವರವಲ್ಲ. ಅದು ದುಬಾರಿ, ಅಪರೂಪ ಮತ್ತು ಅಪಾರ ಮೌಲ್ಯದ್ದು. ಅಲ್ಲಾವುದ್ದೀನ್ ದೀಪವನ್ನು ಉಜ್ಜಿದಾಗ…”
ಅಬ್ಬಾಸಾಕನ ಮನೆಗೆ ಬಂದ ಕರ್ಣುವಿನ ಆನೆ: ಮುನವ್ವರ್ ಪರಿಸರ ಕಥನ
“ಕತ್ತಲಾಗುತ್ತಿತ್ತು. ಬೀಡಿ ಬ್ರಾಂಚಿನವರು ಇನ್ನೇನು ಮುಚ್ಚುವುದರಲ್ಲೇ ನಾನೂ ಕೊನೆಯವನಾಗಿ ಬಂದು ತಲುಪಿದೆ. “ಇಷ್ಟೊತ್ತು ಎಲ್ಲಿ ಸತ್ತಿರ್ತೀರಿ, ಈಗ ಬರಲಾ ಸಮಯ ಸಿಗುವುದು” ಅಂತ ಬೈಸಿಕೊಂಡದ್ದೂ ಆಯಿತು. ಎಲ್ಲಾ ಮುಗಿದು “ಎಷ್ಟು ಎಲೆ- ತಂಬಾಕು?”
ಇಲ್ಲಿ ಈಗ ಬೇಸಿಗೆ ರಜೆಯ ಗುಂಗು:ಯೋಗೀಂದ್ರ ಮರವಂತೆ ಅಂಕಣ
“ಶಾಲೆಗಳು ಮುಚ್ಚುವುದು, ರಸ್ತೆಗಳು ಖಾಲಿಯಾಗುವುದು, ಮನೆಯ ಹಿಂದೋಟದಲ್ಲಿ ಬಯಲುಗಳಲ್ಲಿ ಮಕ್ಕಳ ಕೇಕೆ ಕೇಳುವುದು, ದೂರ ಪ್ರಯಾಣದ ಬಸ್ಸುಗಳಲ್ಲಿ ಜನಪ್ರಿಯ ಪ್ರವಾಸಿ ತಾಣಗಳಿಗೆ ಹಾರುವ ವಿಮಾನಗಳಲ್ಲಿ ಜನ ಕಿಕ್ಕಿರಿಯುವುದು ಕೂಡ ಸಮ್ಮರ್ ಹಾಲಿಡೇಯಲ್ಲಿಯೇ.”
ವಿವಶವಾಯಿತು ಪ್ರಾಣ…. ಹಾ! : ಆಶಾ ಜಗದೀಶ್ ಅಂಕಣ
ಸಾವಿನ ಕಪಿಮುಷ್ಟಿಗೆ ಸಿಕ್ಕೂ ಸಾವನ್ನು ಸೋಲಿಸಿ ದಿಗ್ವಿಜಯಿಗಳಾದವರ ಕತೆ ಲೋಕಕ್ಕೆ ಯಾವತ್ತಿಗೂ ಪ್ರಿಯವೇ… ಕೆಲವರು ಅಳಿದ ಮೇಲೂ ಉಳಿದು ಕಾಡುತ್ತಾರೆ… ಸುಮ್ಮನೇ ಶ್ರುತಿ ಹಿಡಿದು ಬಿಟ್ಟ ತಂಬೂರಿಯ ಅನಾಹತ ನಾದದಂತೆ ನಮ್ಮೊಳಗೆ ತುಂಬಿಕೊಳ್ಳುತ್ತಾರೆ.
ಮಾಳದ ಎರಡು ಕನಸುಗಳು,ಮಾಳದ ಎರಡು ಸಂಜೆಗಳು:ಪ್ರಸಾದ್ ಶೆಣೈ ಕಥಾನಕ
“ಮನೆಗೊಂದು ಹೆಣ್ಣಿದ್ದರೆ ಮನೆಗೆ ಮನೆಯೇ ಆ ಹೆಣ್ತನದ ವಿಶೇಷ ಮುಗ್ದತೆ ಆವರಿಸಿಕೊಳ್ಳುತ್ತದೆ. ಬೇಕಿದ್ದರೆ ನೋಡಿ ಒಂದೆರಡು ದಿನ ಮನೆಯಲ್ಲಿ ಅಮ್ಮನಿಲ್ಲದಿದ್ದರೆ ಮುಗೀತು. ಆ ಮನೆಯಲ್ಲಿ ಆವರಿಸಿಕೊಳ್ಳುವ ಮೌನ, ಸಪ್ಪೆ ಸಪ್ಪೆ ಎನ್ನಿಸುವಂತಹ ನೋಟ, ಅಂತದ್ದೇನೂ ಅಂದವಿಲ್ಲದೇ ಒಟ್ಟಾರೆ ಸಾಗುವ ದಿನಚರಿ, ಪ್ರೀತಿಯ ರುಚಿ ಇರದೇ ಹೊಟ್ಟೆಗೆ ಸುಮ್ಮನೇ ಹೋಗಿ ಕೂರುವ ನಾವೇ ಮಾಡಿದ ಅಡುಗೆ, ಇವೆಲ್ಲ ಅರ್ಥವಿಲ್ಲದ ಹಾಡಿನಂತೆ ತನ್ನ ಪಾಡಿಗೆ ಸಾಗುತ್ತದೆ.ಅದೇ ಅಮ್ಮನಿದ್ದರೆ ಅಲ್ಲಿ ಮೌನವಿರುವುದಿಲ್ಲ”
ನಿರಾಶ್ರಿತ ಲೋಕದ ಬೆಳಕು ಬುಟ್ಟಿಗಳು : ವಿನತೆ ಶರ್ಮಾ ಅಂಕಣ
“ತನಗೆ ಬೇಕಿಲ್ಲದ ದೇಶಗಳಿಂದ ಜನ ವಲಸೆ ಬರಬೇಕೆಂದರೆ ತಮಗಿರುವ ಕೌಶಲ್ಯಗಳು ದೇಶದ ಅಭಿವೃದ್ಧಿಗೆ ಬೇಕಿರುವ ಉದ್ಯೋಗಗಳಿಗೆ ಒಪ್ಪುವಂಥದ್ದೇ ಅನ್ನೋ ಪರೀಕ್ಷೆ ನಡೆದಾದ ಮೇಲೇ ವಲಸೆ ಬರುವಂತಾಯ್ತು. ಈಗ ಆಸ್ಟ್ರೇಲಿಯಾ ದೇಶಕ್ಕೆ ಬಂದು ನೆಲೆಯೂರುವುದು ಕಷ್ಟದ ಕ್ರಮ. ಹೆಚ್ಚಿನ ಓದು ನಂತರ ಇಲ್ಲೇ ಕೆಲಸ, ಕೌಶಲ್ಯ-ಆಧರಿತ ಉದ್ಯೋಗ ಲಭ್ಯತೆ, ರಕ್ತಸಂಬಂಧಿಗಳಿದ್ದರೆ, ಇಲ್ಲವೇ ಈ ದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬಂಡವಾಳ ಹೂಡಿದರೆ, ಇಲ್ಲಿನ ಖಾಯಂ ವಾಸಿ,…”
ಮಡಿಕೇರಿ ಉಮ್ಮ ಹೇಳಿದ ಹಾವು ಮೀನಿನ ಕಥೆ : ಮುನವ್ವರ್ ಪರಿಸರ ಕಥನ.
“ಈ ಕಥೆ ಮುಗಿದು ಅವರು ಚಿಕ್ಕಪ್ಪನ ಮನೆಗೆ ಹೊರಟಿದ್ದರು. ನಾನು ಅದೇ ಗುಂಗಿನಲ್ಲಿ ಏನೇನೆಲ್ಲಾ ಪ್ರಶ್ನಿಸುತ್ತಾ ಉಮ್ಮನ ದಂಬಾಲು ಬಿದ್ದೆ. ಅದು ಕಳೆದು ಸುಮಾರು ದಿನವಾಗಿರಬಹುದು. ಒಂದು ದಿನ ನಾನು ಒಬ್ಬನೇ ಮನೆಯ ಹತ್ತಿರದ ತೊರೆಯ ಬಳಿ ಮೊದಲ ಮಳೆಯ ಸಣ್ಣ ಮೀನುಗಳನ್ನು ಹಿಡಿಯಲು ಹೋಗಿದ್ದೆ. ಗುಂಡಿಯ ಮೀನುಗಳನ್ನು ಕೈಯಲ್ಲಿ ಹಿಡಿಯುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದಂತೆ ಹಿಂದಿನಿಂದ ತರಗೆಲೆ ಮೆಲ್ಲಗೆ ಅಲುಗಿದಂತಾಯಿತು.”
ಬ್ರಿಟಿಷ್ ಬೇಸಿಗೆ ಎಂಬ ಬಿಡಿಸಲಾಗದ ಒಗಟು:ಯೋಗೀಂದ್ರ ಮರವಂತೆ ಅಂಕಣ
ಕಳೆದ ವರ್ಷ ಬಿರುಬಿಸಿಲಿನ ಬೇಸಿಗೆಯಲ್ಲಿ ಮೈಮರೆತಿದ್ದ ಆಂಗ್ಲರು ಈ ಸಲ ಬೇಸಿಗೆಯಲ್ಲಿ ಮಳೆ ದಿನಗಳನ್ನು ಕೂಡಿ ಕಳೆದು, ಅಳೆದು ತೂಗಿ ಆಮೇಲೆ ಸರಿಯಾದ ಬಿಸಿಲು ಕಂಡ ದಿನಗಳನ್ನು ಬೆರಳಿನಲ್ಲಿ ಎಣಿಸುವ ಯತ್ನದಲ್ಲಿ ಮಗ್ನರಾಗಿದ್ದಾರೆ. ಎಷ್ಟು ದಿನ, ಮಾಸ, ವರುಷ ಕಳೆದವರಿಗೂ ಮೇಲುನೋಟಕ್ಕೆ ಎಷ್ಟು ಆಪ್ತ ಸ್ನೇಹಿಯಂತೇ ಕಂಡರೂ ಮತ್ತೆ ಮತ್ತೆ ಅನಾಮಿಕ ಚಾರಿತ್ಯ್ರದಿಂದ ಅನಾವರಣಗೊಳ್ಳುವ ಬ್ರಿಟಿಷರ ಬೇಸಿಗೆ ಇಲ್ಲೀಗ ಮೆತ್ತಗೆ ಕಳೆಯುತ್ತಿದೆ.










