ಓದಿದ ಕವಿತೆಗಳು ಜೀವನದ ಕದ ತಟ್ಟುವುದರ ಕುರಿತು: ಆಶಾ ಜಗದೀಶ್ ಅಂಕಣ
ಈ ಪದ್ಯ ಓದಿದ ಎಷ್ಟೋ ವರ್ಷಗಳ ನಂತರ ಇದು ನನ್ನ ಜೀವನದಲ್ಲಿ ನನ್ನ ಅನುಭವಕ್ಕೆ ಬರುತ್ತದೆ ಎಂದು ನಾನು ತಿಳಿದಿರಲಿಲ್ಲ. ಕವಿಯೊಬ್ಬನ ಭಾವ ಓದುಗನ ಭಾವ ಆಗುವುದೇ ಒಂದು ಸಾಕ್ಷಾತ್ಕಾರ. ಇಷ್ಟಪಟ್ಟ ಹಲವಾರು ಕವಿತೆಗಳೊಂದಿಗೆ ನಾವು ಕನೆಕ್ಟ್ ಆಗುವುದೇ ಹಾಗೆ. ಯಾವುದನ್ನು ನಾವು ತೀವ್ರವಾಗಿ ಅನುಭವಿಸಿರುತ್ತೇವೆಯೋ ಅದೇ ಭಾವ ಪದಗಳಾಗಿ ನಮ್ಮ ಮುಂದೆ ನಿಂತಾಗ ನಮಗೆ ಸೋಲದೆ ವಿಧಿ ಇರುವುದಿಲ್ಲ.
ಆಶಾ ಜಗದೀಶ್ ಬರೆವ ಪಾಕ್ಷಿಕ ಅಂಕಣ.
ಪರಿಪೂರ್ಣವಲ್ಲದ ಪೂರ್ಣ ವೃತ್ತ: ಕೃಷ್ಣ ದೇವಾಂಗಮಠ ಅಂಕಣ
“ಹಾಡಿದರೆ ಹಾಡಾಗುವ, ಓದಿದರೆ ಗದ್ಯವಾಗುವ, ಅತ್ತ ಗದ್ಯವೂ ಅಲ್ಲದ ಪದ್ಯವೂ ಅಲ್ಲದ ಇವುಗಳ ಮಿಶ್ರಧಾತುವಿನಲ್ಲಿ ರಚನೆಗೊಂಡ ವಚನ ಸಾಹಿತ್ಯ ಅನುಭಾವ ಸಾಹಿತ್ಯಕ್ಕೆ ನೀಡಿದ ಕಾಣ್ಕೆ ಅಪಾರ. ಅನುಭಾವ ಸಾಹಿತ್ಯವು ಕನ್ನಡ ಸಾಹಿತ್ಯದ ವಿಶೇಷ ಕಾವ್ಯ ಪ್ರಕಾರವಾಗಿಯೂ ಗುರುತಿಸಿಕೊಂಡಿದೆ. ಅದು ಮುಂದುವರೆದು ದಾಸ ಸಾಹಿತ್ಯ, ತತ್ವಪದಕಾರರವರೆಗೂ ಹರಿದಿದೆ.”
ಆಸ್ಟ್ರೇಲಿಯಾದ ಅಬರಿಜಿನಲ್ ಹಾಡುಗಾರ ಆರ್ಚಿ ರೋಚ್ : ಡಾ.ವಿನತೆ ಶರ್ಮ ಅಂಕಣ
“ತನ್ನ ಅಸ್ತಿತ್ವದ ಆ ಹುಡುಕಾಟದ ದಿನಗಳಲ್ಲಿ ಅದೃಷ್ಟವೋ ಎಂಬಂತೆ ತನ್ನಂತೆ ಗಿಟಾರ್ ಹಿಡಿದು ಎಲ್ಲಿಂದ ಬಂದೆ ನಾನು ಅನ್ನೋ ಎಳೆಯನ್ನು ಹಿಡಿದು ಹುಡುಕಾಟದಲ್ಲಿದ್ದ ಅಬರಿಜಿನಲ್ ಯುವ ಹಾಡುಗಾರ್ತಿ ರೂಬಿ ಹಂಟರ್ ಅವರಿಗೆ ಸಿಕ್ಕಿಬಿಟ್ಟಳು. ಆರ್ಚಿ ಪುಟವಿಟ್ಟ ಲೋಹದಂತೆ ಪುಟಿದೆದ್ದರು. ರೂಬಿ ತಮ್ಮ ಜೀವನಕ್ಕೆ ಕೊಟ್ಟ ಭದ್ರತೆಯನ್ನು, ನಿರ್ದಿಷ್ಟ ಗುರಿಯನ್ನು…”
ಚಿಂಚುವಿನ ಪ್ರಾಣ ಹಿಂಡಿದ ಪೆರ್ಮಾರಿ: ಮುನವ್ವರ್ ಪರಿಸರ ಕಥನ
“ಮಲೆಗಳಲ್ಲಿ ಮದುಮಗಳು ಕಾದಂಬರಿಯ ಗುತ್ತಿಯ ಹುಲಿಯನಂತೆಯೇ ತಂಗಿಗೆ ಚಿಂಚುವೆಂದರೆ ಪ್ರಾಣ. ಅದರ ಜೊತೆ ತಿನ್ನುವುದೇನು, ಮಲಗುವುದೇನು. ಅದೂ ಹಾಗೆಯೇ ಹೊಂದಿಕೊಂಡು ಒಳ್ಳೆಯ ಸ್ವಭಾವವನ್ನೇ ಮೈಗೂಡಿಸಿಕೊಂಡಿತ್ತು. ಶೌಚಕ್ಕೆ ಹೊರಗಡೆಗೆ ಹೋಗುತ್ತಿತ್ತು.”
ಕಳೆದುಹೋಗುವ ಬೆಕ್ಕುಗಳ ಕುರಿತು:ಯೋಗೀಂದ್ರ ಮರವಂತೆ ಅಂಕಣ
”ಈ ದೇಶದಲ್ಲಿ ಕನಿಷ್ಠ ಬೆಕ್ಕುಗಳಿಗಂತೂ ಮನೆ ಬಿಟ್ಟು ಓಡಿಹೋಗಬೇಕಾದ ಪರಿಸ್ಥಿತಿ ಇರಲಿಕ್ಕಿಲ್ಲ ಬಿಡಿ. ಪ್ರಕರಣದ ಯಾರದೋ ಮನೆಯದಾಗಿದ್ದರೆ ರಸ್ತೆಯಲ್ಲಿ ನಿಂತು ಕುಳಿತು ಮಾತಾಡುವ ಇತರ ಬೆಕ್ಕುಗಳ ನಡುವೆ ಹೀಗೆಲ್ಲ ಊಹಾಪೋಹಗಳು ಹಬ್ಬುವುದು ಸಹಜವೇ. ಹೀಗೆ ಬೀದಿ ಬದಿಯಲ್ಲಿ ಗುಸುಗುಸು ಪಿಸಿಪಿಸಿ ಆದ ಮೇಲೆ ಯಾರ ಮನೆಯ ಒಳಕತೆಗಳ ಉಸಾಬರಿ ನಮಗೇಕೆ ಎನ್ನುತ್ತಾ ಬೆಕ್ಕುಗಳು ತಮ್ಮ ತಮ್ಮ ಮನೆಗೆ ತೆರಳುವುದೂ ಇದೆ.
”
ಎಂದೂ ಮುಗಿಯದ ಯುದ್ಧ “ಮೀಟೂ”: ವೈಶಾಲಿ ಹೆಗಡೆ ಅಂಕಣ
“ಶತಮಾನಗಳಿಂದ ನಾವು ಹುಡುಗಿಯರಿಗೆ ಹೇಗೆ ಶೋಷಣೆಯನ್ನು “ನಿಭಾಯಿಸಬೇಕು” ಎಂಬ ಶಿಕ್ಷಣ ಕೊಡುತ್ತೇವೆಯೇ ಹೊರತು ಹೇಗೆ ತಿರುಗಿ ಬೀಳಬೇಕೆಂದು ಕಲಿಸುವುದೇ ಇಲ್ಲ. ಹಾಲಿವುಡ್ ನಲ್ಲಿ ಹುಟ್ಟಿಕೊಂಡ ಈ ಹ್ಯಾಶ್ ಟ್ಯಾಗ್ ಇಂದು ಹಲವು ಬಗೆಯ ಶೋಷಣೆಯ ವಿರುದ್ಧದ ಹ್ಯಾಶ್ ಟ್ಯಾಗ್ ಆಗಿ ರೂಪಾಂತರಗೊಳ್ಳುತ್ತಿದೆ.”
ಇಳೆಯ ಹಾಗೆ ಮಳೆಗೆ ಕಾಯುತ್ತಾ: ರೂಪಶ್ರೀ ಕಲ್ಲಿಗನೂರ್ ಅಂಕಣ
“ನಾವಿಷ್ಟಪಟ್ಟ ಸ್ಥಳಕ್ಕೆ ಆದಾಗಲೊಮ್ಮೆ ಭೇಟಿಕೊಡುತ್ತೇವೆ ಅನ್ನೋದು ನಿಜ. ಆದ್ರೆ ಆ ಸ್ಥಳ ಮೊದಲ ಸಲ ಹೋದಾಗ ಇದ್ದಷ್ಟೇ ಚಂದವಾಗಿ ಇದ್ಯ? ಕಳೆದ ಸಲ ಹೋದಾಗ ಅದರ ಪರಿಸ್ಥಿತಿ ಏನಾಗಿತ್ತು? ಒಮ್ಮೆ ಎರಡೂ ಪ್ರವಾಸವನ್ನು ನೆನಪಿಗೆ ತಂದುಕೊಳ್ಳಿ. ಮೊದಲಿಗೆ ಹೋದಾಗ ಆಗಿದ್ದ ಸಂತೋಷ ಮತ್ತೆಮತ್ತೆ ಹೋದಾಗಲೂ ಘಟಿಸುತ್ತಿದೆಯೆಂದರೆ ಆ ಸ್ಥಳವಿನ್ನೂ ಮನುಷ್ಯನ ಅಟ್ಟಹಾಸಕ್ಕೆ ಸಿಕ್ಕಿಹಾಕಿಕೊಂಡಿಲ್ಲ ಎಂದರ್ಥ. ಆದ್ರೆ ಹಾಗೆ ಯಾವುದಾದ್ರೂ ಸ್ಥಳ ಕೇವಲ ಹತ್ತು ವರ್ಷ ಹಿಂದಿದ್ದಷ್ಟೇ ಪ್ರಶಾಂತವಾಗಿ, ಸ್ವಚ್ಛವಾಗಿ, ಚಂದದಿಂದ ಉಳಿದುಕೊಂಡಿರೋದು ಸಾಧ್ಯವೇ ಇಲ್ಲ ಅನ್ನಬಹುದು.”
ಹೆಪ್ಪುಗಟ್ಟಿದ ಎದೆಯೊಳಗಿನ ಉರಿ:ಆಶಾಜಗದೀಶ್ ಅಂಕಣ
“ಕವಿತೆಯ ಧ್ಯಾನಕ್ಕೆ ಕೂತಿರುವ ಅವರ ಧ್ಯಾನ ಇನ್ನಷ್ಟು ಸ್ಫುಟಗೊಂಡರೆ ಅವರಿಂದ ಇನ್ನೂ ಅದ್ಭುತವಾದ ಕವಿತೆಗಳನ್ನು ನಾವು ನಿರೀಕ್ಷಿಸಬಹುದು. ಇಲ್ಲಿನ ಬಹುಪಾಲು ಕವಿತೆಗಳು ಈ ಮಾತನ್ನು ಒಪ್ಪುತ್ತವೆ. ಗಪದ್ಯಗಳು ಇತ್ತೀಚೆಗೆ ಹೆಚ್ಚಾಗಿ ಬರುತ್ತಿವೆಯಾದರೂ ಪದ್ಯವೇ ಆಗದಿರುವ ಗದ್ಯದ ತುಣುಕುಗಳು ಕಾವ್ಯದ ಭಾಗವಾಗಲಾರವು. ಅಥವಾ ಕಾವ್ಯವೆನ್ನುವ ಸಣ್ಣ ಭ್ರಮೆಯನ್ನು ಹುಟ್ಟಿಸುವಲ್ಲಿಯೂ ಸೋಲುತ್ತವೆ. ಈ ಒಂದು ಎಚ್ಚರಿಕೆ ಕವಿಗಿರಬೇಕಾಗುತ್ತದೆ.”
ಜಾನ್ ಮ್ಯೂರ್ ಮತ್ತು ಆತನ ಸಾಹಸ ಗಾಥೆಗಳು: ಡಾ.ವಿನತೆ ಶರ್ಮ ಅಂಕಣ
“ಜಾನ್ ಕೈಗೊಂಡ ಅತಿಸಾಹಸಗಳಲ್ಲಿ ಹಲವನ್ನು ಹೆಸರಿಸಬೇಕು ಎಂದು ಆಯ್ದುಕೊಂಡರೆ ಅವರು ಎರಡೂ ಧ್ರುವಗಳಿಗೆ ಕಾಲ್ನಡಿಗೆಯಲ್ಲಿ ಹೋಗಿ ತಲುಪಿದ್ದು, ಆಸ್ಟ್ರೇಲಿಯಾದ ಉಪ್ಪಿನ ಸರೋವರಗಳ ಮೇಲ್ಮೈ ಮೇಲೆ ನೂರಾರು, ಮರುಭೂಮಿ ಉದ್ದ ಮತ್ತು ಅಗಲಕ್ಕೂ ಹಲವಾರು ಬಾರಿ ಸಾವಿರಾರು ಕಿಲೋಮೀಟರ್ ನಡಿಗೆಯ ಪಯಣಗಳು, ಸಮುದ್ರ ದೋಣಿಯಲ್ಲಿ ತಿಂಗಳಾನುಗಟ್ಟಲೆ ಪಯಣಗಳು, ಜೊತೆಗೆ ಪರ್ವತಾರೋಹಣ. ಅವುಗಳಲ್ಲಿ ಅನೇಕವು ಬಹು ಅಪಾಯಕಾರಿಯಾದವು.”










