Advertisement
ಅಭಿಷೇಕ ಬಳೆ ಮಸರಕಲ್ ಬರೆದ ಗಜಲ್

ಅಭಿಷೇಕ ಬಳೆ ಮಸರಕಲ್ ಬರೆದ ಗಜಲ್

ಗಜಲ್

ನಿನ್ನ ಕಣ್ಣ ಬಟ್ಟಲ ಬೆಳಕಿರಲು ಹಗಲಿಗೆ ಸೂರ್ಯನೇತಕೆ
ಹಿತವಾದ ಮುಗುಳುನಗೆ ಇರಲು ರಾತ್ರಿಗೆ ಚಂದಿರನೇತಕೆ

ತುಟಿಯ ಹನಿಯಲ್ಲಿ ಮಧುವಿರಲು ಮಧು ಶಾಲೆಯೇತಕೆ
ಅಂದದ ನಡುವು ಚೆಂದಾಗಿ ಕಾಡುತಿರಲು ಕಾಮನಬಿಲ್ಲೇತಕೆ

ಮಾತಲ್ಲೇ ಸವಿಜೇನು ತುಂಬಿರಲು ಆ ಮಧುವೇತಕೆ
ಏನೊಂದು ಲೋಪವಿಲ್ಲದ ಪುತ್ಥಳಿ ನೀನು ಕುಂಚವೇತಕೆ

ಮನದಿ ಒಲವ ಹಣತೆ ಬೆಳಗುತಿರಲು ನಕ್ಷತ್ರಗಳೇಕೆ
ನೀನಿಲ್ಲದ ಊರಲ್ಲಿ ಹಾಳಾದ ಈ ಕಾವಲೇತಕೆ

ನೀನಿಲ್ಲದ ಬರೀ ಖಾಲಿ ಜಿಂದಗಿ ಅಭಿಗೇತಕೆ
ಒಲಿದ ಜೀವಗಳು ಒಂದಾಗುವ ಖುಷಿಗೆ ಭಯವೇತಕೆ

ಅಭಿಷೇಕ್ ಬಳೆ ರಾಯಚೂರು ಜಿಲ್ಲೆಯ ಮಸರಕಲ್ ಊರಿನವರು.
ಬಿ.ಎಸ್ಸಿ, ಬಿ.ಎಡ್ ವ್ಯಾಸಂಗ ಮಾಡಿದ್ದಾರೆ
ಓದು ಮತ್ತು ಕವಿತೆ ರಚನೆ ಇವರ ಹವ್ಯಾಸಗಳು

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ