Advertisement
ಡಾ. ಪ್ರೇಮಲತ ಬಿ ಬರೆದ ಈ ದಿನದ ಕವಿತೆ

ಡಾ. ಪ್ರೇಮಲತ ಬಿ ಬರೆದ ಈ ದಿನದ ಕವಿತೆ

ಒಂಟಿಯಲ್ಲ ಬಿಡು….

ಯಾರದೋ ಮರೆತ ನೆನಪಾಗಿ
ನನ್ನದೇ ನೆರಳಿಗೆ ಜೊತೆಯಾಗಿ
ಮರೆತ ಹುಡುಗನ ಹಾಡಾಗಿ
ನಾನು ನಾನೇ, ನನ್ನದೇ ಪಾಡಿಗೆ

ಎಗ್ಗಿಲ್ಲ ಬಿಡು ಭರವಸೆಯ ಬೀಡು
ಮೈ ಕಾವಿನಲಿ ಮೊಟ್ಟೆಯೊಡೆದು ಹುಟ್ಟಿ
ಕಟ್ಟೀತು ಭಾವಗಳ ಎಳೆ ಎಳೆಗಳ ಹೆಕ್ಕಿ
ಕಲ್ಪನೆಗಳ ಹೊಸದೊಂದು ಗೂಡು

ಹುಲ್ಲೋ, ಎಲೆಯೋ ಮತ್ತೊಂದು ಹಕ್ಕಿಯ ಪುಕ್ಕವೋ
ಎಲ್ಲವೂ ತಳಕೆ ಮೆತ್ತನೆಯ ಹಾಸು
ಕೂಗು, ತಕರಾರು, ಕ್ರೌರ್ಯಗಳಿಲ್ಲದ
ಹಸಿರ ಮರೆಯಲ್ಲಿ ಹೊಮ್ಮಿಸಿ ಹೊಸದೊಂದು ಹಾಡು

ದೂರದ ಸಾಲು ಬೆಟ್ಟ, ತೇಲುವ ಬಿಳಿ ಮೋಡ,
ಆಗಸದ ಖಾಲಿ ನೀಲಿ ಕಪ್ಪಾದ ರಾತ್ರಿ
ಅಸೂಯೆ ಪಟ್ಟಾವು ನೋಡಿ
ಹೊಳೆವ ಒಂಟಿ ಶುಭ್ರ ನಕ್ಷತ್ರ

ಸತ್ವವಿತ್ತೋ ಇಲ್ಲವೋ ಪ್ರೀತಿಗದು
ವಿಧಿಯೊಡನೆ ಆಯ್ಕೆಯಂತೂ ಇತ್ತು
ಕಟೆದ ಬದುಕ ಹಳತು ಕೂಡ
ಹೊತ್ತೇ ಹುಟ್ಟಿತ್ತು ಒಂದು ಹೊಸ ಅವಕಾಶ

ಜೀವನದ ದಾರಿ ಬೆಳೆದೀತು
ಜೊತೆಯಾದಾವು ಇಕ್ಕೆಲಗಳು
ಒಂಟಿಯಲ್ಲ ಬಿಡು
ಕವಲೊಡೆದ ನಮ್ಮ ಹಾದಿಗಳು
ಕೂಡದಿರಲಿ ಮತ್ತೆ….

About The Author

ಡಾ.ಪ್ರೇಮಲತ

ಡಾ. ಪ್ರೇಮಲತಾ ಲೇಖಕಿ ಮೂಲತಃ ತುಮಕೂರಿನವರು, ಕಳೆದ ೨೧ ವರ್ಷಗಳಿಂದ ಇಂಗ್ಲೆಂಡಿನಲ್ಲಿ ನೆಲೆಸಿದ್ದಾರೆ. ವೃತ್ತಿಯಲ್ಲಿ ದಂತವೈದ್ಯೆ. ಹವ್ಯಾಸಿ ಬರಹಗಾರ್ತಿ. ‘ಐದು ಬೆರಳುಗಳುʼ, ‘ತಿರುವುಗಳುʼ, ‘ನಂಬಿಕೆಯೆಂಬ ಗಾಳಿಕೊಡೆʼ ಇವರ ಪ್ರಕಟಿತ ಕಥಾಸಂಕಲನಗಳು. ‘ಕೋವಿಡ್‌ ಡೈರಿʼ ಎಂಬ ಅಂಕಣ ಬರಹಗಳ ಪುಸ್ತಕ ಮತ್ತು ‘ಬಾಯೆಂಬ ಬ್ರಮ್ಹಾಂಡʼ ಇವರ ಇತರೆ ಪುಸ್ತಕಗಳು. ‘ಐದು ಬೆರಳುಗಳುʼ ಕಥಾ ಸಂಕಲನಕ್ಕೆ ಡಾ.ಹೆಚ್. ಗಿರಿಜಮ್ಮ ಪ್ರಶಸ್ತಿ ದೊರಕಿದೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ