ಕುಸುಮಾ ಆಯರಹಳ್ಳಿ ಬರೆದ ಈ ಭಾನುವಾರದ ಕತೆ
ಮಹೇಶ ಅಷ್ಟು ಸಲ ವಿಧಾನಸೌಧಕ್ಕೆ ಹೋಗಿಬಂದು ಕೆಲಸ ಆಗಲಿಲ್ಲ ಅಂತ ಬೇಸರ ಮಾಡಿಕೊಂಡು, ಅಲ್ಲಿನ ವ್ಯವಸ್ಥೆ ಬಗ್ಗೆ ಹೇಳುವಾಗೆಲ್ಲ ನನಗೆ ಕೋಪ ಬರ್ತಿತ್ತು ಮೇಷ್ಟ್ರೇ. ಪ್ರಜೆಗಳನ್ನ ಬಾಗ್ಲಲ್ಲಿ ನಿಲ್ಸಿ ಜಾತಿ ಯಾವುದಯ್ಯಾ ಒಳಗೋಗಕೆ? ಅಂತ ಕೇಳಕಾ ಆ ಪುಣ್ಯಾತ್ಮರು ದೇಶಾ ಕಟ್ಟಿದ್ದು? ಅಂತ ಕೋಪ ಉಕ್ಕುಕ್ಕಿ ಬರದು. ರಾತ್ರಿ ನಿದ್ದೆ ಬರ್ತಿರಲಿಲ್ಲ. ಆಚೆ ಭಾಷಣದಲ್ಲಿ ಹೇಳೋದು ಒಂದು. ಒಳಗ್ ಮಾಡದೊಂದು. ಇದಕ್ಕೇ ಏನಯ್ಯಾ ನಿಮಗೆ ಸಂವಿಧಾನ ಬರ್ಕೊಟ್ಟಿದ್ದು? ನೊಂದವರೇ ನೋಯಿಸಿದರೆ ಅದಕ್ಕಿಂತಾ ಕೇಡುಂಟಾ ಲೋಕದಲ್ಲಿ?
ಕುಸುಮಾ ಆಯರಹಳ್ಳಿ ಬರೆದ “ಕಪಿಲೆ ಕಂಡ ಕತೆಗಳು” ಕಥಾಸಂಕಲನ ಇಂದು ಬಿಡುಗಡೆಯಾಗಲಿದ್ದು ಈ ಕೃತಿಯ “ದೈತ್ಯ” ಕತೆ ನಿಮ್ಮ ಓದಿಗೆ
ಮಾತು ಹೆಪ್ಪುಗಟ್ಟಿ ಕಾವ್ಯವಾದ ಬಗೆ: ಡಾ.ಎ.ರಘುರಾಂ ಬರಹ
ಮಂಜುನಾಥ್ ಪಾಳ್ಯ ಅವರ ಎಲ್ಲ ಕವಿತೆಗಳನ್ನು ಓದಿದಾಗ ಅಲ್ಲಿನ ಭಾಷೆ, ವಸ್ತು, ನಿರ್ವಹಣೆಯ ಬಗ್ಗೆ ನೋಡಬೇಕು. ವಸ್ತು ಸಾಮಾಜಿಕವೇ ಆದರೂ ಕೂಡ ನಿರ್ವಹಣೆಯ ಸಂದರ್ಭದಲ್ಲಿ ಅದು ಭಿನ್ನ ಪಾತಳಿಗಳನ್ನು ಕಾಣುತ್ತದೆ. ಕವಿ ಪ್ರತಿಭಟಿಸುವಲ್ಲಿ ಕಾವ್ಯ ಬಂಡಾಯದ ಚಾಟಿ ಬೀಸುತ್ತದೆ. ಮೌನವಾಗಿ ಪ್ರೇಮಕ್ಕೆ ಮರುಳಾದಾಗ ಅಲ್ಲಿನ ಭಾಷೆ ತೀರ ಕೋಮಲವಾಗಿಬಿಡುತ್ತದೆ. ಭ್ರಷ್ಠತೆ, ಅತ್ಯಾಚಾರ, ಶೋಷಣೆ ವಿಚಾರಗಳು ಬಂದರೆ ಭಾಷೆ ಸ್ವಲ್ಪ ಒರಟಾಗಿಬಿಡುತ್ತದೆ. ಕಾವ್ಯ ಹೀಗೆ ಭಿನ್ನ ಪಾತಳಿಗೆ ಒಳಗಾಗುವುದು ಕವಿಯ ಸಂವೇದನಾಶೀಲ ಗುಣವನ್ನು ತೋರುತ್ತದೆ.
ಡಾ. ಮಂಜುನಾಥ ಪಾಳ್ಯ ಬರೆದ ‘ಹೆಪ್ಪುಗಟ್ಟಿದ ಮಾತುಗಳು’ ಕವನ ಸಂಕಲನದ ಕುರಿತು ಡಾ. ಎ. ರಘುರಾಂ ಬರಹ
ಕಲಾತ್ಮಕ ಕಟ್ಟಣೆಯ ‘ಅಸೀಮರೂಪಿ’ ಕತೆಗಳು: ರೇವಣಸಿದ್ಧಪ್ಪ ಜಿ.ಆರ್. ಬರಹ
ಯುವತಿಯೊಬ್ಬಳ ಮೆದುಳು ಅಪಘಾತದಿಂದಾಗಿ ಜರ್ಝರಿತವಾಗಿ ಬ್ರೈನ್ ಡೆಡ್ ಆಗಿ ಅವಳ ಉಸಿರು ನಿಲ್ಲುವುದು ಖಾತ್ರಿಯಾದಾಗ, ಮುದಿಯಾಗಿದ್ದ ತನ್ನ ದೇಹದಿಂದ ಆಕೆಯ ದೇಹಕ್ಕೆ ಬ್ರೈನ್ ಟ್ರಾನ್ಸ್ ಪ್ಲಾಂಟೇಷನ್ ಮಾಡುವ ಪ್ರಯೋಗಕ್ಕೆ ಒಳಗಾಗುತ್ತಾನೆ. ಮಾನಸಿಕವಾಗಿ ಗಂಡಾಗಿ, ದೈಹಿಕವಾಗಿ ಹೆಣ್ಣಾಗಿರುವ ಈತ ಒಂದು ವಿಷಮ ಗಳಿಗೆಯಲ್ಲಿ ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯೂ ಆಗಿಬಿಡುತ್ತಾನೆ. ಕೊನೆಗೆ ತನ್ನ ಮನೆಯವರಿಂದಲೇ ಅವಜ್ಞೆಗೆ ಈಡಾಗುತ್ತಾನೆ….
ಕಂನಾಡಿಗಾ ನಾರಾಯಣ ಬರೆದ “ಅಸೀಮರೂಪಿ” ಕಥಾ ಸಂಕಲನದ ಕುರಿತು ರೇವಣಸಿದ್ಧಪ್ಪ ಜಿ.ಆರ್. ಬರಹ
ಕಾಳುಮೆಣಸಿನ ರಾಣಿ ಚೆನ್ನಭೈರಾದೇವಿಯ ಅಕಳಂಕ ಚರಿತ್ರೆ: ಸುಭದ್ರಾ ಹೆಗಡೆ ಬರಹ
ಕಾದಂಬರಿಯನ್ನು ಓದುತ್ತಾ ಹೋದಂತೆ ಶೌರ್ಯ, ಸಾಹಸಕ್ಕೆ ಹೆಸರಾಗಿ ನಿಂತ ವೀರವನಿತೆ ಜೀವ ತಳೆದು ನಮ್ಮೆದುರು ನಿಲ್ಲುವಂತೆ ರಾಣಿಯ ಪಾತ್ರವನ್ನು ಅಷ್ಟು ಸೂಕ್ಷ್ಮವಾಗಿ ಹೆಣೆಯಲಾಗಿದೆ. ಜೈನ ಧರ್ಮದವಳಾದ ರಾಣಿ ಸಾಳುವ ವಂಶದ ಕೊನೆಯ ಕುಡಿ, ಸರ್ವಧರ್ಮ ಸಮನ್ವಯವನ್ನು ಸಾರಿದವಳು. ಇಲ್ಲಿ ಬರುವ ಪ್ರತಿಯೊಂದು ಪಾತ್ರವೂ, ಗುರುಗಳಾದ ಭಟ್ಟಾಕಳಂಕರು, ಪ್ರಧಾನಿಯಾದ ಸಭಾಹಿತರು, ಶಬಲೆ, ಜಿನದತ್ತ, ಸತ್ಯಾಶ್ರಯ ಇವರೆಲ್ಲರೂ ಕಳೆದುಹೋದ ಸಮೃದ್ಧವಾದ ಸಾಮ್ರಾಜ್ಯವೊಂದರ ಸಾಕ್ಷಿಯಾಗಿ ನಿಲ್ಲುತ್ತಾರೆ. ರಾಣಿಗೆ ಬೆಂಗಾವಲಾಗಿ ನಿಂತು ನಾಡ ಪ್ರೇಮವನ್ನು ತೋರಿಸುತ್ತಾರೆ.
ಗಜಾನನ ಶರ್ಮಾ ಬರೆದಿರುವ ಐತಿಹಾಸಿಕ ಕಾದಂಬರಿ ‘ಚೆನ್ನಭೈರಾದೇವಿʼ ಕುರಿತು ಸುಭದ್ರಾ ಹೆಗಡೆ ಬರಹ
ಅವ್ವಕ್ಕನೆಂಬ ಅಚ್ಚರಿ…: ಜ.ನಾ. ತೇಜಶ್ರೀ ಹೊಸ ಕಾದಂಬರಿಯ ಪುಟಗಳು
ಈಗ ಅವಳ ದೇಹ ಮೊದಲಿಗಿಂತ ಗಟ್ಟಿಯಾಗಿತ್ತು, ಸಲಾಕೆಯಂತೆ. ಮೇಲಿನ ಕೆಲಸಕ್ಕೆ ಕೆಲಸದವರಿದ್ದರೂ ಅವಳು ಮಾಮೂಲಿನಂತೆ ಎಲ್ಲ ಕೆಲಸ ಮಾಡುತ್ತಿದ್ದಳು. ಕೆಲಸ ಮಾಡಿದಷ್ಟೂ ಅವಳಲ್ಲಿ ಕಸುವು, ತಾಳಿಕೊಂಡಷ್ಟೂ ಸುಂದರವಾಗಿ ಕಾಣುವುದನ್ನು ದೊಡ್ಡಯ್ಯ ವಿಸ್ಮಯದಲ್ಲಿ ನೋಡುತ್ತಿದ್ದ. ಮಂಜುನಾಥ ಮೂರು ತಿಂಗಳಿಗೆ ಮಗುಚಿದ, ಆಮೇಲೆ ಅಂಬೆಗಾಲಿಟ್ಟ. ಷಣ್ಮುಖ ಬೆಳೆದಿದ್ದನ್ನು ಹತ್ತಿರದಿಂದ ಗಮನಿಸದ ದೊಡ್ಡಯ್ಯನಿಗೆ ಮಂಜುನಾಥನನ್ನು ನೋಡುವಾಗ ಎಲ್ಲ ಹೊಸದೆನಿಸುತ್ತಿತ್ತು. ತಾನೂ ಮಗುವಾಗಿದ್ದಾಗ ಹೀಗೇ ಮಾಡಿದೆನ ಅಂತ ಯೋಚಿಸುತ್ತಿದ್ದ.
ಜ.ನಾ. ತೇಜಶ್ರೀ ಹೊಸ ಕಾದಂಬರಿ “ಜೀವರತಿ” ಕೃತಿಯ ಪುಟಗಳು ನಿಮ್ಮ ಓದಿಗೆ
ವೈಜ್ಞಾನಿಕ ಕೌತುಕದ ಬೆರಗನ್ನು ಎಚ್ಚರಿಸುವ “ವಿಲಕ್ಷಣ ಜಲಜಾಲ”: ನಾರಾಯಣ ಯಾಜಿ
ನೀರೆನ್ನುವ ಅಪೂರ್ವ ವಸ್ತು ಈ ಪ್ರಕೃತಿಯಲ್ಲಿ ಸೃಷ್ಟಿಯ ಕಾಲದಿಂದಲೂ ಇದೆ. ಮುಂದೆಯೂ ಇರಲಿದೆ. ಆದರೆ ಅದರಗುಣಮಟ್ಟವನ್ನು ಕಾಪಾಡಿ ಬದುಕುವುದು ಮತ್ತು ಭುವಿಯ ಮೇಲಿನ ಜೀವ ಸಂಕುಲನವನ್ನು ಡೈನೋಸಾರಸ್ಗಳಂತೆ ನಾಶವಾಗಿ ಹೋಗದಂತೆ ಮಾಡುವಲ್ಲಿ ಮಾನವರ ಪಾತ್ರದ ಕುರಿತು ಅವರು ಈ ಕೃತಿಯ ಮೂಲಕ ಗಮನ ಸೆಳೆಯುತ್ತಾರೆ. ಕೃತಿಯೊಂದು ಜನರನ್ನು ತಲುಪಲು ಭಾಷೆ ಮತ್ತು ಶೈಲಿ ಬಲು ಮುಖ್ಯ. ಈ ಎರಡರಲ್ಲಿಯೂ ಸಾಗರ್ ಅವರದು ಎತ್ತಿದ ಕೈ.
ಡಾ. ಡಿ. ಎಂ. ಸಾಗರ್ ಬರೆದ “ವಿಲಕ್ಷಣ ಜಲಜಾಲ” ಕೃತಿಯ ಕುರಿತು ನಾರಾಯಣ ಯಾಜಿ ಬರಹ ನಿಮ್ಮ ಓದಿಗೆ
ಅನುಭವಗಳನ್ನು ಮರಳಿ ಬಾಳಿಸುವ ಕಥೆಗಳು: ಎಡೆಯೂರು ಪಲ್ಲವಿ ಕಥೆಗಳಿಗೆ ವಿನಯಾ ಒಕ್ಕುಂದ ಮುನ್ನುಡಿ
ನಾಗರಿಕ ಸೌಜನ್ಯಕ್ಕಾಗಿ ಬಲು ಬೆಲೆ ತೆರಬೇಕಾದ ಆಧುನಿಕ ಬದುಕಿನ ಪಂಚಾಂಗ ಇಲ್ಲಿದೆ. ಹಾಗಿದ್ದರೆ, ಆಧುನಿಕತೆಯು ಹಳೆಯ ವರ್ಗೀಕೃತ ತಪ್ಪುಗಳನ್ನು ಮೀರಿಸಿಕೊಂಡಿದೆಯೇ? ಸಾಮಾಜಿಕ ಸಾಂಕ್ರಾಮಿಕಗಳಾಗಿದ್ದ ಜಾತಿ, ಧರ್ಮ, ವರ್ಗ, ಲಿಂಗಗಳೀಗ ಇಲ್ಲವಾಗಿವೆಯೇ? ಖಂಡಿತ ಇಲ್ಲ. ಈಗಲೂ ಈ ಎಲ್ಲ ತರತಮಗಳು ಹಾಗೆಯೇ ಮುನ್ನಡೆಯುತ್ತಿವೆ. ರೂಪಾಂತರಗೊಂಡು ವಿವರಣೆಗೆ ನಿಲುಕದಷ್ಟು ಸಂಕೀರ್ಣ ಸ್ಥಿತಿಯನ್ನು ಪಡೆದಿವೆ. ಪ್ರೀತಿಯ ರಾಜಕಾರಣದಿಂದ ಮತ್ತೆ ಬಲವರ್ಧನೆಗೊಳ್ಳುತ್ತಿವೆ. ಯಾಜಮಾನ್ಯವು ಯಾಜಮಾನ್ಯವೇ ಆಗಿ ಮುನ್ನಡೆಯುತ್ತಿದೆ.
ಎಡೆಯೂರು ಪಲ್ಲವಿ ಕಥಾ ಸಂಕಲನ “ಕುಂಡದ ಬೇರು” ಕೃತಿಗೆ ವಿನಯಾ ಒಕ್ಕುಂದ ಮುನ್ನುಡಿ
ದೇಸೀಧ್ವನಿಯ ಕಥೆಗಳು: ಪ್ರಕಾಶ್ ಪುಟ್ಟಪ್ಪ ಕಥಾಸಂಕಲನಕ್ಕೆ ಡಾ. ಮಹೇಶ್ವರಿ ಯು. ಮುನ್ನುಡಿ
ಕತೆಗಾರಿಕೆಯ ಕೌಶಲವನ್ನು, ಕತೆಗಾರನ ಆಳವಾದ ಸಂವೇದನಾಶೀಲತೆಯನ್ನು, ಸಮಾಜಮುಖಿಯಾದ ನೈಜ ಕಾಳಜಿಯನ್ನು ಹೊಂದಿರುವ ಗಟ್ಟಿಯಾದ ಕಥಾವಸ್ತುವುಳ್ಳ ಇನ್ನಷ್ಟು ಕತೆಗಳು ಸಂಕಲನದ ಮಹತ್ವವನ್ನು ಹೆಚ್ಚಿಸಿವೆ. ಪ್ರಕಾಶ ಅವರು ನೆಲಮೂಲದ ಸಂಸ್ಕೃತಿಯ ಸತ್ವದಿಂದ ವಿಶೇಷವಾಗಿ ಪುಷ್ಟಿಗೊಂಡವರು. ಆ ಘಮಲನ್ನೂ ಕ್ರೂರ ವಾಸ್ತವವನ್ನೂ ಜೊತೆಜೊತೆಯಾಗಿ ಕಟ್ಟಿಕೊಡುವ ‘ಕಂಡಾಯದೊಡೆಯ ಉಘೇಉಘೇ, ಐರನ್ ಆನೆಗಳು, ನಿಗಿನಿಗಿಕೆಂಡ ಮುಂತಾದ ಕತೆಗಳಲ್ಲದೆ ಭಿನ್ನಮಾದರಿಯ ಕತೆಗಳೂ ಈ ಸಂಗ್ರಹದಲ್ಲಿವೆ.. ಸಂಕಲನದ ಅತ್ಯುತ್ತಮ ಕತೆಗಳಲ್ಲಿ ಆ ಸತ್ವವೇ ಮೈದುಂಬಿದೆ.
ಪ್ರಕಾಶ್ ಪುಟ್ಟಪ್ಪ ಕಥಾಸಂಕಲನ ‘ಗಾಂಧಿಜೋಡಿನ ಮಳಿಗೆ’ಗೆ ಡಾ. ಮಹೇಶ್ವರಿ ಯು. ಮುನ್ನುಡಿ
ಲೋಕಾಂತ ಕವಿಯ ಏಕಾಂತ ಬದುಕಿನ ಅನಾವರಣ: ಡಾ. ಎ. ರಘುರಾಂ ಬರಹ
ಲೆಕ್ಕದಲ್ಲಿ ತಾನು ಅಷ್ಟೊಂದು ಪಂಡಿತನಲ್ಲ ಎನ್ನುವ ಕಾರಣಕ್ಕೆ ತಿಂಗಳಿಗೆ ಮೂವತ್ತೈದು ರೂಪಾಯಿ ಸಂಬಳದ ಪವರ್ಹೌಸ್ನ ನೌಕರಿಯನ್ನು ಬಿಟ್ಟು ಇಪ್ಪತ್ತೊಂದು ರೂಪಾಯಿಯ ಶಿಕ್ಷಕ ವೃತ್ತಿಯನ್ನು ಆಯ್ಕೆಮಾಡಿಕೊಳ್ಳುತ್ತಾರೆ. ಲೆಕ್ಕ ಬರದೇ ಇರುವ ಕಾರಣದಿಂದ ಈ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆಯೇ ಹೊರತು ಶಿಕ್ಷಕ ವೃತ್ತಿಯ ಕಾರಣದಿಂದಲ್ಲ. ಒಮ್ಮೆ ಮಗಳು ‘ಗಣಿತ ಕಲಿಸುವುದನ್ನು ಹೇಗೆ ನಿಭಾಯಿಸಿದೆ? ಗಣಿತ ನಿನಗೆ ಬರುವುದೇ ಇಲ್ಲವಲ್ಲ’ ಎಂದು ಕೇಳಿದ್ದಕ್ಕೆ ‘ವಿದ್ಯಾರ್ಥಿಗಳಿಗೆ ನಾನು, ನೀವು ಇಬ್ಬರೂ ಕೂಡಿಯೇ ಗಣಿತವನ್ನು ಬಗೆಹರಿಸಿಕೊಳ್ಳೋಣ..’ ಎಂದು ಹೇಳಿದೆ ಎಂದು ಗಹಗಹಿಸಿ ನಕ್ಕನು.
ತಮ್ಮ ತಂದೆ ಶಾಂತರಸರೊಂದಿಗಿನ ಒಡನಾಟದ ಕುರಿತು ಎಚ್.ಎಸ್. ಮುಕ್ತಾಯಕ್ಕ ಬರೆದ “ಅಪ್ಪ ನಾನು ಕಂಡಂತೆ” ಕೃತಿಯ ಕುರಿತು ಡಾ. ಎ. ರಘುರಾಂ ಬರಹ ನಿಮ್ಮ ಓದಿಗೆ









