ಮುಕ್ತಛಂದದ ಶಾಂತಿನಾಥ ದೇಸಾಯಿ
ನವ್ಯ ಸಾಹಿತ್ಯದ ಪ್ರಬಲ ಪ್ರತಿಪಾದಕರಾಗಿದ್ದ ಶಾಂತಿನಾಥ ದೇಸಾಯಿ ಮತ್ತು ರಾಮಚಂದ್ರ ಶರ್ಮ ಕೊನೆಯವರೆಗೂ ನವ್ಯ ಲೇಖಕರಾಗಿದ್ದರು ಎಂಬುದು ಕೆಲವು ವಿಮರ್ಶಕರ ಅಭಿಪ್ರಾಯ. ರಾಮಚಂದ್ರ ಶರ್ಮರ ವಿಷಯದಲ್ಲಿ ಇದನ್ನು ಒಪ್ಪಬಹುದಾದರೂ ಶಾಂತಿನಾಥ ದೇಸಾಯಿಯವರ ವಿಷಯದಲ್ಲಿ ಇದನ್ನು ಒಪ್ಪಲು ಸಾಧ್ಯವಿಲ್ಲ. ಶಾಂತಿನಾಥ ದೇಸಾಯಿಯವರು ಮೊದಮೊದಲು ಬರೆದ ಕಥೆ-ಕಾದಂಬರಿಗಳಲ್ಲಿ ಸಾಮಾಜಿಕ ಪ್ರಜ್ಞೆ ಕಂಡು ಬರುವುದಿಲ್ಲವೆಂಬುದು ನಿಜವಾದರೂ ನಂತರದ ವರ್ಷಗಳಲ್ಲಿ ಅವರು ನವ್ಯತೆಯನ್ನು ಮೀರಿ ಸ್ಪಷ್ಟ ಸಾಮಾಜಿಕ ಪ್ರಜ್ಞೆಯಿಂದ ಬರೆದರು. ಶಾಂತಿನಾಥ ದೇಸಾಯಿ ಅವರ ಜನ್ಮದಿನದ ಸಂದರ್ಭದಲ್ಲಿ ವಿಕಾಸ ಹೊಸಮನಿ ಬರೆದ ಲೇಖನ ಇಲ್ಲಿದೆ.
ವ್ಯಕ್ತಿವಿಶಿಷ್ಟತೆಯೆಡೆಗಿನ ಅಸ್ಪಷ್ಟ ಹೆಜ್ಜೆಗಳು
ಚಿಂತನಶೀಲರಾದ ಹೊಸ ತಲೆಮಾರಿನ ಯುವಜನರನ್ನು ರೂಪಿಸುವ ನಿಟ್ಟಿನಲ್ಲಿ ಸದಾ ಚಟುವಟಿಕೆಯಿಂದ ಇದ್ದ ಜಿ. ರಾಜಶೇಖರ್ ಅವರು ತೀರಿಕೊಂಡಿದ್ದಾರೆ. ಉಡುಪಿ ಎಂದರೆ ಜಿ.ರಾಜಶೇಖರ್ ಎಂದು ಹೇಳುವಷ್ಟು ಪ್ರಖರವಾಗಿ ತಮ್ಮ ವಿಚಾರಗಳನ್ನು ಮಂಡಿಸುತ್ತಿದ್ದ ಅವರು ಹೊಸವಿಚಾರಗಳಿಗೆ ಸಂಬಂಧಿಸಿದ ಚರ್ಚೆಗಳಿಗೆ ಸದಾ ಮುಕ್ತರಾಗಿದ್ದರು. ಸಿದ್ಧಾಂತಗಳು ಮತ್ತು ಆದರ್ಶ, ಅವುಗಳನ್ನು ವಾಸ್ತವವಾಗಿ ಕಾಣುವಲ್ಲಿ ಎದುರಾಗುವ ಸವಾಲುಗಳ ಕುರಿತು ತಮ್ಮದೇ ಆದ ನಿಲುವುಗಳನ್ನು ಪ್ರಾಮಾಣಿಕವಾಗಿ ಮಂಡಿಸುತ್ತಿದ್ದರು. ಅವರೊಂದಿಗಿನ ಸಹಮತ – ಭಿನ್ನಮತಗಳ ನಡುವೆ ಸ್ನೇಹದ ದಾರಿ ಸವೆಸಿದವರು ಡಿ.ಎಸ್. ನಾಗಭೂಷಣ್. ರಾಜಶೇಖರ್ ಅವರ ಅಭಿನಂದನಾ ಗ್ರಂಥಕ್ಕೆ ಅವರು ಬರೆದಿದ್ದ ಲೇಖನವೊಂದು ನಿಮ್ಮ ಓದಿಗಾಗಿ ಇಲ್ಲಿದೆ.
ಎ.ಎನ್. ಮುಕುಂದ ಅವರ ಎರಡು ಭೇಟಿಗಳ ನೆನಪು
ಪ್ರೀತಿಯನ್ನು ಪರಿಮಳದಂತೆ ತಮ್ಮ ಸುತ್ತಲಿರುವವರಿಗೆ ಷರತ್ತೇ ಇಲ್ಲದೆ ಹಂಚಿದ ಎ.ಎನ್. ಮುಕುಂದ ಅವರು ಇಂದು ಅಗಲಿದ್ದಾರೆ. ತಾವು ಪ್ರೀತಿಸಿದ ಕಸುಬನ್ನು ಇನ್ನಷ್ಟು ಚಂದಗೊಳಿಸುತ್ತ , ತನ್ನ ಒಡನಾಡಿಗಳ ಜೊತೆ ಅದಮ್ಯ ಜೀವನ ಪ್ರೀತಿ ಹಂಚುತ್ತಾ ಬಾಳಿದವರು ಅವರು. ಲೇಖಕರಿಗೆ ಕವಿಭಾವ ಕವಿಸಮಯ ಎಂಬುದೊಂದಿರುತ್ತದೆ, ಅದನ್ನು ಕವಿಗಳು ಅಕ್ಷರಬೀಜಗಳಾಗಿಸಿ ನೆಡುತ್ತಾರೆ. ಅಂತೆಯೇ ಈ ಫೋಟೋಗ್ರಾಫರ್ ಕವಿಗಳದೇ ಆದ ಒಂದು ಭಾವ ಕ್ಷಣವನ್ನು ನೆರಳು ಬೆಳಕು ಮತ್ತು ಬಣ್ಣಗಳ ಅಪೂರ್ವ ಸಂಗಮದಲ್ಲಿ ಸೆರೆಯಾಗಿಸುತ್ತಾರೇನೋ ಅನಿಸುತ್ತದೆ ಎನ್ನುವ ಜಯಶಂಕರ ಹಲಗೂರು ಅವರು ಮುಕುಂದ ಅವರೊಡನೆ ಒಡನಾಡಿದ ಕ್ಷಣಗಳನ್ನು ಹೆಕ್ಕಿ ಲೇಖನವೊಂದನ್ನು ಬರೆದಿದ್ದಾರೆ
ಮತನಿರಪೇಕ್ಷ ಪ್ರಾಜ್ಞ ಸಾಧು ಕರೀಮುದ್ದೀನ್
ತೊಂಬತ್ತು ವರುಷದ ಪ್ರೊ. ಕರಿಮುದ್ದೀನ್ ಅವರು ಅಪಾರ ಜ್ಞಾನ ಭಂಡಾರದ ಮೇರುವಿನಂತೆ ನೆಟ್ಟಗೆ ಕುತೂಹಲದಿಂದ ಕುಳಿತಿದ್ದರು.ಅವರ ಕಣ್ಣುಗಳಲ್ಲಿ ಸಾತ್ವಿಕತೆಯ ಪ್ರಖರತೆಯಿದೆ. ಮಕ್ಕಳಿಗೆ ಮಾನವೀಯತೆಯ ಶಿಕ್ಷಣ ಕೊಡಬೇಕು ಎಂದು ಆಗ್ರಹಿಸುತ್ತಾರೆ ಅವರು. ಮೂಲಭೂತವಾದವನ್ನು ಖಂಡತುಂಡವಾಗಿ ನಿರಾಕರಿಸುವವರು. ಶ್ರೀರಂಗಪಟ್ಟಣದ ಪ್ರಸಿದ್ಧ “ಗಂಜಾಂ” ಬಡಾವಣೆಯಲ್ಲಿ ತಲೆತಲಾಂತರದ ಒಂದು ಹಳ್ಳಿ ಮನೆಯ ಪುಟ್ಟ ಕೋಣೆಯಲ್ಲಿ, ಅಣ್ಣನ ಮಕ್ಕಳ ನಿಗಾದಲ್ಲಿ ವಾಸ ಮಾಡುತ್ತಿರುವ ಅವರನ್ನು ಕಂಡುಬಂದು ಬರೆದಿದ್ದಾರೆ ಗಿರಿಜಾ ಶಾಸ್ತ್ರಿ
ಗಾಂಧಿ ಕಥನ ಕುರಿತು ನಾಗಭೂಷಣ ಕಥನ
ನಿನ್ನೆ ಇರುಳು ತೀರಿಹೋದ ನಿಷ್ಠುರ ಮನಸಿನ ಕನ್ನಡದ ವಿಮರ್ಶಕ ಡಿ.ಎಸ್.ನಾಗಭೂಷಣ ಕೈಗೆತ್ತಿಕೊಂಡ ಕೆಲಸವನ್ನು ತಪಸ್ಸಿನಂತೆ ಕುಳಿತು ಮುಗಿಸುತ್ತಿದ್ದ ಶ್ರಮಜೀವಿ ಬರಹಗಾರರಾಗಿದ್ದರು. ತುರ್ತು ಪರಿಸ್ಥಿತಿಯ ಕಾಲದಲ್ಲಿ ಆಕಾಶವಾಣಿ ದೆಹಲಿಯಿಂದ ಬರುತ್ತಿದ್ದ ಕನ್ನಡ ವಾರ್ತೆಗಳ ಪರಿಚಿತ ಮತ್ತು ಜನಪ್ರಿಯ ರೇಡಿಯೋ ಧ್ವನಿಯಾಗಿದ್ದರು.. ಮಹಾ ಜಗಳಗಂಟರೂ ಮತ್ತು ಅಷ್ಟೇ ಮುಗ್ಧರೂ ಆಗಿದ್ದ ನಾಗಭೂಷಣರು ತಮ್ಮ ರೇಡಿಯೋ ಕಾರ್ಯಕ್ರಮ, ಪತ್ರಿಕಾ ಸಂಪಾದಕೀಯ ಬರಹಗಳು ಮತ್ತು ಸಾರ್ವಜನಿಕ ಭಾಷಣಗಳಿಂದ ಬಹಳ ಕಾಲ ನೆನಪಿನಲ್ಲಿ ಉಳಿಯಬಲ್ಲವರು. ಈ ಸಲದ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ವಿಜೇತ ಪುಸ್ತಕದ ಕುರಿತು ಈ ಹಿಂದೆ ಅವರು ಬರೆದಿದ್ದ ಲೇಖನವೊಂದು ಅವರ ನೆನಪಿಗಾಗಿ ಇಲ್ಲಿದೆ.
ಪ್ರೀತಿ, ಕೃತಜ್ಞತೆ, ವಿಷಾದ, ಮತ್ತೇನಿಲ್ಲ…
ಪರಿಸರ ಪರ ಬರಹಗಾರ ಎಂಬ ಪರಿಚಯದೊಂದಿಗೆ ನಾಗೇಶ್ ಹೆಗಡೆ ಅವರೊಂದಿಗೆ ಸ್ನೇಹ ಬೆಳೆದರೆ, ನಂತರ ಅರಿವಿಗೆ ಬರುವುದು ಅವರ ಜೀವನಪ್ರೀತಿ. ವಿಜ್ಞಾನ ಬರಹಗಾರ ಎಂದು ಗುರುತಿಸಿಕೊಂಡರೂ ಅವರಿಗೆ ಸಂಗೀತ, ಸಾಹಿತ್ಯ, ಭಾಷಾ ವಿಲಾಸ ಸಹಜವಾಗಿ ಒಲಿದು ಬಂದ ಕ್ಷೇತ್ರಗಳು. ಅವರ ಕುರಿತು 62 ಮಂದಿ ಲೇಖಕರು ಬರೆದ
ಬರಹಗಳನ್ನೊಳಗೊಂಡ ‘ನೆಲಗುಣ’ ಅಭಿನಂದನಾ ಗ್ರಂಥವೊಂದನ್ನು ಎಸ್. ದಾವಣಗೆರೆ ಅವರು ಸಂಪಾದಿಸಿದ್ದಾರೆ. ಆ ಪುಸ್ತಕದಲ್ಲಿ ಹಿರಿಯ ಕತೆಗಾರ, ಪತ್ರಕರ್ತ ರಘುನಾಥ ಚ.ಹ. ಅವರು ಬರೆದ ಲೇಖನವೊಂದನ್ನು ಕೆಂಡಸಂಪಿಗೆ ಓದುಗರಿಗಾಗಿ ಇಲ್ಲಿ ನೀಡಲಾಗಿದೆ.
ನನ್ನ ಹಾಡು ನನ್ನದು ಎಂದ ಸಾಹಿರ್
ಪರಸ್ಪರ ಆಕರ್ಷಣೆ ಅವಕಾಶಗಳಿದ್ದ ಯಾವ ಪ್ರಣಯಾಸಕ್ತಿಗಳನ್ನೂ ಸಹ ಸಾಹಿರ್ ಒಂದು ಹಂತದ ನಂತರ ಮುಂದುವರೆಸುವ ಇಚ್ಛೆ ತೋರಿಸುತ್ತಿರಲಿಲ್ಲ. ಸಾಹಿರನ ಕಥೆ ವ್ಯಥೆಗಳನ್ನು ಆಪ್ತವಾಗಿ ಬಲ್ಲ ಒಡನಾಡಿಗಳು ಹಾಗು ವಿಮರ್ಶಕರು ಈ ವಿಷಯವಾಗಿ ಅನೇಕ ರೀತಿಯ ಟೀಕೆ ಟಿಪ್ಪಣಿಗಳನ್ನು ಕೊಡುತ್ತಾರೆ. ಹೆತ್ತರವರ ನಡುವಿನ ವಿರಸ ಘರ್ಷಣೆಗಳ ಮಧ್ಯೆ ಸಿಲುಕಿ ನಲುಗಿ ಹೀಗೆ ಜವಾಬ್ದಾರಿಗಳಿಂದ ದೂರ ಸರಿಯುತ್ತಾನೆ ಎಂದು ಅನೇಕರು ಹೇಳುತ್ತಾರೆ. ಮಾರ್ಚ್ 8 ಅಂದರೆ ಆತನ 101ನೆಯ…
ತಾಳ್ಮೆಯೆಂಬ ಕಾವ್ಯಶಕ್ತಿಯ ಧ್ಯಾನದಲ್ಲಿ
ಇತ್ತೀಚೆಗೆ ಟೊಟೊ ಪ್ರಶಸ್ತಿ ಪಡೆದ ಶ್ರೀಕೃಷ್ಣ ದೇವಾಂಗಮಠ, ಬರವಣಿಗೆಯನ್ನೂ ಪೋಟೋಗ್ರಫಿಯನ್ನೂ ಬಹುವಾಗಿ ಇಷ್ಟಪಡುವವರು. ಗದ್ಯ ಓದಲು ಭಾರೀ ತಾಳ್ಮೆ ಬೇಕಾಗುತ್ತದೆ ಎಂದು ಹೇಳುತ್ತಾ, ಬಯಲಿನಲ್ಲಿ ಕೀಟವೊಂದರ ಚಲನೆಯನ್ನು ಸೆರೆ ಹಿಡಿಯಲು ಗಂಟೆಗಟ್ಟಲೆ ‘ಕಮಕ್ ಕಿಮಕ್’ ಎನ್ನದೇ ಕಾಯುವವರು. ವೃತ್ತಿ, ತಿಂಗಳ ಸಂಬಳ, ಬದುಕು ಎಂಬ ಸಾಮಾನ್ಯ ಚೌಕಟ್ಟನ್ನು ದಾಟಿ ಕವಿತೆಗಳನ್ನೂ ಕೀಟಗಳನ್ನೂ ಹುಡುಕುತ್ತ ಅಲೆಯುವುದನ್ನು ಇಷ್ಟಪಡುವವರು.
ಹೊಂಗಿರಣದ ಕವಿಯ ಒಡನಾಟದ ನೆನಪುಗಳು
ನವ್ಯ ಮತ್ತು ನವೋದಯವನ್ನು ಹದವಾಗಿ ಬೆರೆಸಿದ ಪಾಕದಂತಹ ಸಾಹಿತ್ಯ ಸೃಷ್ಟಿಸಿದ ಚೆನ್ನವೀರ ಕಣವಿಯವರದು ಕರುಳಿನ ಪ್ರೀತಿಗೆ ಓಗೊಡುವ ಸ್ವಭಾವ. ಮೃದುಮನಸ್ಸಿನವರು ಎಂದು ಹೇಳಿದರೂ, ಅಗತ್ಯವೆನಿಸಿದಾಗ ಹೋರಾಟದ ಹಾದಿಯನ್ನು ಹಿಡಿದವರು. ಸಂಪ್ರದಾಯವನ್ನು ಮುರಿದವರು. ಆರೋಗ್ಯಪೂರ್ಣ ಸಂಘಟನೆಗೆ ಒತ್ತಾಸೆಯಾಗಿ ನಿಂತವರು. ಸಂಬಂಧಗಳನ್ನು ಪೋಷಿಸುತ್ತ, ಮಾನವಪ್ರೀತಿಗೆ ಮಾನ್ಯತೆ ನೀಡಿ ಜೀವನ ನಡೆಸಿದವರು. ಕಾವ್ಯವು ಅವರಿಗೆ ಒಲಿದು ಬಂದ ಪ್ರಕಾರ.ಇತರ ಪ್ರಕಾರಗಳಲ್ಲಿ ಅವರು ಬರೆದರೂ, ಕಾವ್ಯವೇ ಅವರ ಸಾಹಿತ್ಯದ ಸ್ಥಾಯೀ ಭಾವ..