Advertisement

ಸಂಪಿಗೆ ಸ್ಪೆಷಲ್

ಹಬ್ಬದ ಮುಖ ತೊಳೆದು ಬಿಂದಿ ಇಡುವ ‘ಅವಳು’: ಸದಾಶಿವ ಸೊರಟೂರು ಬರಹ

ಹಬ್ಬದ ಮುಖ ತೊಳೆದು ಬಿಂದಿ ಇಡುವ ‘ಅವಳು’: ಸದಾಶಿವ ಸೊರಟೂರು ಬರಹ

ನಾನಿನ್ನು ಎದ್ದು ಆಕಳಿಸುತ್ತಾ ಕೂತಿರುವಾಗ ಈ ಹೆಣ್ಣು ಮಕ್ಕಳಿಗೆ ಏನಾಗಿದೆ? ಈ ಬದುಕು ಎಂದೂ ಕೂಡ ನಮಗೆ ಸುಸ್ತನ್ನೇ ದಯಪಾಲಿಸಿಯೇ ಇಲ್ಲವೇನೊ ಎನ್ನುವಂತೆ ಯಾಕಿಷ್ಟು ಕಳೆಕಳೆಯಾಗಿದ್ದಾರೆ. ಒಬ್ಬೊಬ್ಬರು ಒಂದೊಂದು ಹಬ್ಬದಂತೆ ಓಡಾಡುತ್ತಿದ್ದಾರೆ. ಈ ಹಬ್ಬದ ದಿನ ಒಬ್ಬೊಬ್ಬ ಹೆಣ್ಣು ಮಗಳು ನಡೆದಾಡುವ ಒಂದೊಂದು ತೇರೇನೊ ಅನಿಸುತ್ತದೆ. ಈ ಹಬ್ಬವನ್ನು, ಹಬ್ಬದ ಸಂಭ್ರಮವನ್ನು ಹೆಣ್ಣು ಮಕ್ಕಳು ವಶಪಡಿಸಿಕೊಂಡರಾ?
ಏನೆಲ್ಲದರ ನಡುವೆ ಬದುಕನ್ನೂ, ಆಗಾಗ ಬರುವ ಹಬ್ಬಗಳನ್ನೂ ಸಮನಾಗಿ ತೂಗಿಸಿಕೊಂಡು ಹೋಗುವ ಹೆಣ್ಣುಮಕ್ಕಳ ಕುರಿತು ಸದಾಶಿವ ಸೊರಟೂರು ಬರಹ ನಿಮ್ಮ ಓದಿಗೆ

read more
ಕನ್ನಡಿಗರ ಕೈಯಲ್ಲಿರಲಿ ಒಂದು ಕನ್ನಡ ಪುಸ್ತಕ….

ಕನ್ನಡಿಗರ ಕೈಯಲ್ಲಿರಲಿ ಒಂದು ಕನ್ನಡ ಪುಸ್ತಕ….

ಕನ್ನಡ ಭಾಷೆಯನ್ನು ಬಳಸುವುದೂ ಹಾಗೂ ಕನ್ನಡ ಕೃತಿಗಳನ್ನು ಓದುವುದೂ ಕಡಿಮೆಯಾಗುತ್ತಿರುವ ಈ ದಿನಗಳಲ್ಲಿ, ಕನ್ನಡ ಭಾಷೆಗೆ ಹಾಗೂ ಅದರ ಓದಿಗೆ ಕನ್ನಡಿಗರನ್ನು ಸೆಳೆಯಲು “ವೀರಲೋಕ”‌ ಪ್ರಕಾಶನದ ಸಂಸ್ಥೆ ಹಲವು ವಿಶಿಷ್ಠ ಪ್ರಯತ್ನಗಳನ್ನು ಮಾಡುತ್ತಿದ್ದು, ಅದರ ಭಾಗವಾಗಿ ನವೆಂಬರ್ ೧೫,೧೬, ಮತ್ತು ೧೭ರಂದು ಬೆಂಗಳೂರಿನಲ್ಲಿ “ಪುಸ್ತಕ ಸಂತೆ”ಯನ್ನು ಆಯೋಜಿಸಿದೆ. ಇದರ ಕುರಿತು ವೀರಲೋಕದ ಪ್ರಕಾಶಕರಾದ ವೀರಕಪುತ್ರ ಶ್ರೀನಿವಾಸ್‌ ಅವರೊಂದಿಗೆ ರೂಪಶ್ರೀ ಕಲ್ಲಿಗನೂರ್‌ ನಡೆಸಿದ ಸಂದರ್ಶನ ನಿಮ್ಮ ಓದಿಗೆ…

read more
ಹಾಸ್ಯದ ಹೊಂಬಿಸಿಲು ಹಳಿಸುತ್ತಿದೆಯೇ?: ಡಾ. ರಾಜೇಂದ್ರಕುಮಾರ್‌ ಮುದ್ನಾಳ್ ಬರಹ

ಹಾಸ್ಯದ ಹೊಂಬಿಸಿಲು ಹಳಿಸುತ್ತಿದೆಯೇ?: ಡಾ. ರಾಜೇಂದ್ರಕುಮಾರ್‌ ಮುದ್ನಾಳ್ ಬರಹ

ಮಾತು ‘ಮನೆ’ ಕಟ್ಟಬೇಕು, ಮಾತು ಮೌನವಾಗಬೇಕು. ಮಾತು ‘ಮಮತೆ’ಯಾಗಬೇಕು ಮಾತು ‘ಹಾಸ್ಯದ ಮನ್ವಂತರ ‘ಸೃಷ್ಟಿಸಬೇಕು. ಡಿವಿಜಿ ಹೇಳುವಂತೆ ‘ನಗು ನಗುವ ಕಣ್ಣುಗಳಿಗೆ ಹೊಗೆಯ ನೂದಲು ಬೇಡ ‘ಎಂಬ ಮಾತು ನೆನಪಿಸಿಕೊಳ್ಳಬೇಕು. ಹಾಸ್ಯ ‘ವಿಕಾಸ’ ವಾಗಬೇಕೇ ವಿನಹ ಕಸದ ಬುಟ್ಟಿಯಾಗಬಾರದಲ್ಲವೇ? ನಗುವಿನ ಕನಸುಗಳ ಮನೆಯಲ್ಲಿ ಕಲ್ಲು ಬೀಳದೆ ಕಲ್ಲು ಕೂಡ ಕರಗುವಂತ ನಗುವನ್ನು ಸೃಷ್ಟಿಸುವಂತಹ ನಗೆ ಹಬ್ಬ ನಮ್ಮದಾಗಬೇಕು.
ಹಾಸ್ಯ ಕಾರ್ಯಕ್ರಮಗಳ ಗುಣಮಟ್ಟದ ಕುರಿತು ಡಾ. ರಾಜೇಂದ್ರಕುಮಾರ್‌ ಮುದ್ನಾಳ್ ಬರಹ

read more
ಹೆಂಡತಿಯ ಸ್ಕೂಟರ್‌ ಪುರಾಣ: ಮಹಮ್ಮದ್‌ ರಫೀಕ್‌ ಕೊಟ್ಟೂರು ಬರಹ

ಹೆಂಡತಿಯ ಸ್ಕೂಟರ್‌ ಪುರಾಣ: ಮಹಮ್ಮದ್‌ ರಫೀಕ್‌ ಕೊಟ್ಟೂರು ಬರಹ

ಸುಜಾತಾ ಚಿಂತಿಸುತ್ತಾ ‘ಅಲ್ಲಾ ನಾವು ನೋಡಿದ ಎಲ್ಲಾ ಸ್ಕೂಟರ್‌ಗಳೂ ಈಗಾಗಲೇ ಜನರ ಬಳಿ ಇವೆ. ಹೊಸ ಮಾಡೆಲ್ಗಳು ಯಾವುವೂ ಕಾಣುತ್ತಿಲ್ಲʼ ಎಂದಳು. ಈಗ ಸುಸ್ತಾಗುವ ಸರದಿ ರಮೇಶನದು. ಅವನು ಅವಳು ರೋಡಿನಲ್ಲಿ ಸ್ಕೂಟರ್‌ ಗುರುತಿಸಿ ಹೆಸರಿಸಿದಾಗೊಮ್ಮೆ ಅವನ ಅರ್ಥೈಸಿಕೊಂಡದ್ದೇ ಬೇರೆಯಾಗಿತ್ತು, ಆದರೆ ಹೆಂಡತಿಯ ತಲೆಯಲ್ಲಿದ್ದ ವಿಚಾರವೇ ಬೇರೆಯಾಗಿತ್ತು.
ಮಹಮ್ಮದ್‌ ರಫೀಕ್‌ ಕೊಟ್ಟೂರು ಬರೆದ‌ ಹಾಸ್ಯ ಲೇಖನ ನಿಮ್ಮ ಓದಿಗೆ

read more
ಸಾಂಸ್ಕೃತಿಕ ಸಂಘರ್ಷಗಳ ಕುಲುಮೆಯ ‘ರಕ್ತ ವಿಲಾಪ’: ಡಾ. ರಾಜೇಂದ್ರಕುಮಾರ್ ಕೆ ಮುದ್ನಾಳ್ ಬರಹ

ಸಾಂಸ್ಕೃತಿಕ ಸಂಘರ್ಷಗಳ ಕುಲುಮೆಯ ‘ರಕ್ತ ವಿಲಾಪ’: ಡಾ. ರಾಜೇಂದ್ರಕುಮಾರ್ ಕೆ ಮುದ್ನಾಳ್ ಬರಹ

ಸತ್ಯ ಎಲ್ಲರಿಗೂ ಕಹಿಯಾಗಿರುವುದು. ಆದರೆ ಅದರ ಸತ್ವ ಅರಿತವನು ಸಂಶೋಧನೆಗೆ ನಿಷ್ಠೆ ತೋರಿಸುತ್ತಾನೆ. ಅರಿಯದವನು ಶತ್ರುವಾಗುತ್ತಾನೆ. ಇದೇ ಪರಿಸ್ಥಿತಿ ಯುವಕನದ್ದು ಹಾಗೂ ಸಮಾಜದ್ದು ಎಂದು ಘಂಟಿಯವರು ಹಾಗೂ ವಿಸಾಜಿಯವರು ಘಂಟಾಘೋಷವಾಗಿ ಪಾತ್ರಗಳ ಮೂಲಕ ಮಾತಾಡಿಸುತ್ತಾರೆ.
ವಿಕ್ರಮ ವಿಸಾಜಿ ರಚಿತ, ಶಂಕ್ರಯ್ಯ ಆರ್ ಗಂಟಿ ನಿರ್ದೇಶನದ ‘ರಕ್ತ ವಿಲಾಪ’ ನಾಟಕದ ಕುರಿತು ಡಾ. ರಾಜೇಂದ್ರಕುಮಾರ್ ಕೆ ಮುದ್ನಾಳ್ ಬರಹ

read more
ಭಾವನೆಗಳಿಗೆ ಬೆಲೆ ಕಡಿಮೆಯಾಗುತ್ತಿರುವ ಹೊತ್ತು…: ಕಾರ್ತಿಕ್ ಕೃಷ್ಣ ಬರಹ

ಭಾವನೆಗಳಿಗೆ ಬೆಲೆ ಕಡಿಮೆಯಾಗುತ್ತಿರುವ ಹೊತ್ತು…: ಕಾರ್ತಿಕ್ ಕೃಷ್ಣ ಬರಹ

ಇಂತಹದೇ ಆಯ್ಕೆ ವಾಟ್ಸ್ಯಾಪ್‌ಗೆ ಬರಲು ಬಹಳ ಸಮಯವೇನೂ ಬೇಕಾಗಿಲ್ಲ ಎಂದು ಕಳೆದ ವಾರವಷ್ಟೇ ಮನೆಯಲ್ಲಿ ಚರ್ಚೆ ನಡೆದಿತ್ತು. ಅರೇ.. ಇಷ್ಟು ಬೇಗ ಆ ಆಯ್ಕೆ ಬಂದೇ ಬಿಟ್ಟಿತಲ್ಲ ಅಂದುಕೊಂಡು ರಿಪ್ಲೈ ಮಾಡುವ ಬದಲು ಲೈಕ್ ಒತ್ತಿ ‘ಆಲ್ರೈಟ್… ಮುಂದಕ್ಕೆ ಹೋಗೋಣ’ ಎಂದು ಮತ್ತೊಂದು ಸ್ಟೇಟಸ್ ನೋಡತೊಡಗಿದೆ. ನನ್ನದೊಂದು ರಿಪ್ಲೈನಿಂದ ಶುರುವಾಗಬಹುದಾಗಿದ್ದ ಸಂಭವನೀಯ ಸಂಭಾಷಣೆಯೊಂದು ಚಿಗುರೊಡೆಯುವ ಮುನ್ನವೇ ಕನಲಿ ನರಳಿದ್ದು ನನಗೆ ಆ ಕ್ಷಣ ಗೊತ್ತಾಗಲಿಲ್ಲ!
ಕಾರ್ತಿಕ್‌ ಕೃಷ್ಣ ಬರಹ ನಿಮ್ಮ ಓದಿಗೆ

read more
ಎದೆ ನಡುಗಿಸಿ ಮೈ ನವಿರೇಳಿಸುವ ಆ ಚಿತ್ರ….: ಗೊರೂರು ಶಿವೇಶ್‌ ಬರಹ

ಎದೆ ನಡುಗಿಸಿ ಮೈ ನವಿರೇಳಿಸುವ ಆ ಚಿತ್ರ….: ಗೊರೂರು ಶಿವೇಶ್‌ ಬರಹ

ಮಾರ್ಕ್ವೆಜ್‌ನ ಅದ್ಭುತರಮ್ಯ ಕಾದಂಬರಿ ಒಂದು ನೂರು ವರ್ಷಗಳ ಏಕಾಂತ ಕೃತಿಯನ್ನು ಓದಿದವರಿಗೆ ಆ ರೀತಿಯ ಅದ್ಭುತರಮ್ಯ ಪರಿಚಯವನ್ನು ಈ ಸಿನಿಮಾ ಮೂಡಿಸುತ್ತದೆ. ಸದಾ ಮಳೆ ಹಿಡಿದ ಊರು, ಪಾತಾಳಲೋಕದ ಅನುಭವ ನೀಡುವ ಬಾವಿಯಲ್ಲಿನ ಚಿತ್ರಣ ಚಿತ್ರಕ್ಕೆ ಒಂದು ನಿಗೂಢತೆಯನ್ನು ಒದಗಿಸಿ ಭಯ ಮತ್ತು ಕುತೂಹಲದಿಂದ ನಮ್ಮನ್ನು ಕೊನೆಯವರೆಗೂ ಹಿಡಿದಿಡುತ್ತದೆ.
ಹಿಂದಿಯ “ತುಂಬಾಡ್”‌ ಸಿನಿಮಾದ ಕುರಿತು ಗೊರೂರು ಶಿವೇಶ್‌ ಬರಹ ನಿಮ್ಮ ಓದಿಗೆ

read more
ಆರೋಗ್ಯಕ್ಕೆ ಒಂಬತ್ತೇ ಮೆಟ್ಟಿಲು… ಕಾರ್ತಿಕ್ ಕೃಷ್ಣ ಬರಹ

ಆರೋಗ್ಯಕ್ಕೆ ಒಂಬತ್ತೇ ಮೆಟ್ಟಿಲು… ಕಾರ್ತಿಕ್ ಕೃಷ್ಣ ಬರಹ

ಮುಂದಿನ ಬಾರಿ ನೀವು ಮೆಟ್ರೋ ನಿಲ್ದಾಣಕ್ಕೆ ಹೋದಾಗ, ಎಸ್ಕಲೇಟರ್ ಹಾಗೂ ಮೆಟ್ಟಿಲುಗಳ ಮೇಲೆ ಓಡಾಡುವ ತಲೆಗಳನ್ನು ಲೆಕ್ಕ ಹಾಕಲು ಟ್ರೈ ಮಾಡಿ. ಮೆಟ್ಟಿಲನ್ನು ಬಳಸುವ ಜನರ ಲೆಕ್ಕ ನಿಮಗೆ ಆರಾಮಾಗಿ ಸಿಕ್ಕಿಬಿಡುತ್ತದೆ. ಎಸ್ಕಲೇಟರ್ ಮೇಲಿನ ಮಾನವರ ತಲೆಗಳನ್ನು ಎಣಿಸುವುದು ಮಾತ್ರ ತಾರೆಗಳನ್ನು ಕಲೆಹಾಕಿದಷ್ಟೇ ಕಷ್ಟವಾಗಬಹುದು. ಇದಕ್ಕೆ ಕಲಶಪ್ರಾಯವಾಗಿ, ಮೊಬೈಲ್ ಫೋನು ನೋಡುತ್ತಾ, ಮೆಟ್ಟಿಲುಗಳ ಬಳಿ ಬಂದು, ಕೂಡಲೇ ಮುಖವನ್ನು ಸಿಂಡರಿಸಿಕೊಂಡು, ಪಕ್ಕದ ಎಸ್ಕಲೇಟರ್ ಏರಿದ ಹೋಮೋ ಸೇಪಿಯನನ್ನು ಕೆ ಆರ್ ಪುರ ಮೆಟ್ರೋ ನಿಲ್ದಾಣದಲ್ಲಿ ನೋಡಲು ಸಿಕ್ಕಿದ್ದು ನನ್ನ ಸುಕೃತವೋ…
ಮೆಟ್ಟಿಲುಗಳ ಬಳಕೆಯ ಕುರಿತು ಕಾರ್ತಿಕ್‌ ಕೃಷ್ಣ ಬರಹ ನಿಮ್ಮ ಓದಿಗೆ

read more
ಸ್ಮಾರ್ಟ್ ಬೋರ್ಡ್..!: ಮಹಮ್ಮದ್‌ ರಫೀಕ್‌ ಕೊಟ್ಟೂರು ಬರಹ

ಸ್ಮಾರ್ಟ್ ಬೋರ್ಡ್..!: ಮಹಮ್ಮದ್‌ ರಫೀಕ್‌ ಕೊಟ್ಟೂರು ಬರಹ

ಸ್ಮಾರ್ಟ್‌ ಬೋರ್ಡ್‌ ಬರುವುದಕ್ಕಿಂತ ಮುಂಚೆ ತರಗತಿ ಮುಗಿಸಿದಾಗ ರಮೇಶ ಅವರ ಅವತಾರ ಮೆಚ್ಚಿ ವಾಹ್‌ ಶಿಕ್ಷಕರೆಂದರೆ ಹೀಗಿರಬೇಕು ಎನ್ನುವಂತಿದ್ದರು, ಸುಣ್ಣದಿಂದ ಮುಳುಗಿದ ಅವರ ಕೈಗಳು, ಬಣ್ಣ ಬದಲಾಯಿಸಿಕೊಂಡು ಬಿಳಿ ಬಟ್ಟೆಯಂತಿದ್ದ ಅವರ ಪ್ಯಾಂಟ್‌, ಅಂಗಿ ಅಲ್ಲಲ್ಲಿ ಕೈ ತಗುಲಿ ಮುಖಕ್ಕೂ ಹತ್ತಿದ್ದ ಸೀಮೆ ಸುಣ್ಣದ ಬಿಳಿ ಯಾರೇ ನೋಡಿದರೂ ಇವರು ಗಣಿತ ಶಿಕ್ಷಕರೆಂದು ಗುರುತಿಸಬಹುದಾದ ಮಾದರಿ ರೂಪ.
ಮಹಮ್ಮದ್‌ ರಫೀಕ್‌ ಕೊಟ್ಟೂರು ಬರೆದ ಶೈಕ್ಷಣಿಕ ಬರಹ ನಿಮ್ಮ ಓದಿಗೆ

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ