Advertisement

ಸಂಪಿಗೆ ಸ್ಪೆಷಲ್

ಹೊಸ ವರುಷಕೆ… ಹೊಸ ಹರುಷಕೆ..: ಪ್ರಕಾಶ್ ಪೊನ್ನಾಚಿ ಬರಹ

ಹೊಸ ವರುಷಕೆ… ಹೊಸ ಹರುಷಕೆ..: ಪ್ರಕಾಶ್ ಪೊನ್ನಾಚಿ ಬರಹ

ಬದುಕು ನಿಂತ ನೀರಲ್ಲ, ಬದಲಾವಣೆ ಜಗದ ನಿಯಮ ಎಂದುಕೊಂಡೇ ಮನುಷ್ಯ ಬದಲಾವಣೆಗೊಳಪಟ್ಟುಕೊಂಡು ಹೊಸ ರೂಪಾಂತರಗಳನ್ನು ಆವಿಸ್ಕರಿಸಿ ಹೊಸ ಜಗದ ಸೃಷ್ಟಿಗೆ ನಾಂದಿ ಹಾಡುತ್ತಾ ಬಂದ. ಪ್ರತಿ ವರ್ಷವೂ ಹೊಸದೊಂದು ಜನ್ಮವೆಂದುಕೊಂಡೆ ಹೊಸ ಸೃಷ್ಟಿಗಳಿಗೆ ಬುನಾದಿ ಹಾಕಲಾರಂಭಿಸಿದ. ಎಲ್ಲಾ ಎಲ್ಲೆಗಳನ್ನು ಮೀರಿ ಲೋಕದೊಳಿತಿಗೆ ಸ್ಪೃಷ್ಯ ಯಾವುದೋ ಅವುಗಳ ಸೃಷ್ಟಿಯಲ್ಲಿ ತಲ್ಲೀನನಾದ.
ಹಳ್ಳಿಗಳಲ್ಲಿನ ಹೊಸ ವರ್ಷದಾಚರಣೆಯ ಕುರಿತು ಪ್ರಕಾಶ್‌ ಪೊನ್ನಾಚಿ ಬರಹ ನಿಮ್ಮ ಓದಿಗೆ

read more
ಬದುಕಿಗಿಷ್ಟು ಸಾಕೆಂದರೆ ಆಗುವುದಿಲ್ಲವೆ?: ರೂಪಶ್ರೀ ಕಲ್ಲಿಗನೂರ್‌ ಬರಹ

ಬದುಕಿಗಿಷ್ಟು ಸಾಕೆಂದರೆ ಆಗುವುದಿಲ್ಲವೆ?: ರೂಪಶ್ರೀ ಕಲ್ಲಿಗನೂರ್‌ ಬರಹ

ನಾನು ನಾನೆಂದು ಬದುಕಿದ ನನ್ನ ಬದುಕು ಎಲ್ಲಿ ಹೋಗುತ್ತದೆ… ಸಿಟ್ಟಿಗೆ, ಸಂತೋಷಕ್ಕೆ, ತ್ಯಾಗಕ್ಕೆ, ಭೋಗಕ್ಕೆ… ಏನಾದರೂ ಅರ್ಥ ಉಳಿಯಬಹುದ? ಕೆಟ್ಟವನಾಗಿದ್ದರೆ ನಾಲ್ಕು ಜನರೊಂದಿಗೆ ಸಿಟ್ಟು, ಒಳ್ಳೆಯವನಾಗಿದ್ದರೆ ಅದೇ ನಾಲ್ಕು ಜನರೊಂದಿಗೆ ಪ್ರೀತಿ… ಅಷ್ಟೇ… ಇಷ್ಟು ಬದುಕಿನಲ್ಲಿ ನಮಗಾಗಿ ನಾವು ಏನು ಮಾಡಿಕೊಂಡರೂ, ಅದೂ ನಮ್ಮ ಜೀವಿತಾವಧಿಯ ನೆಮ್ಮದಿಗಾಗಿ ಅಷ್ಟೇ ಅಲ್ಲದೇ ಬೇರೇನೂ ಅಲ್ಲ.
ಬದುಕಿನ ಕುರಿತು ರೂಪಶ್ರೀ ಕಲ್ಲಿಗನೂರ್‌ ಬರಹ ನಿಮ್ಮ ಓದಿಗೆ

read more
ಡಾ. ಅಂಬೇಡ್ಕರ್‌ ಬರೆದ ಪ್ರೇಮಪತ್ರ…: ಸದಾನಂದ ಆರ್. ಅನುವಾದ

ಡಾ. ಅಂಬೇಡ್ಕರ್‌ ಬರೆದ ಪ್ರೇಮಪತ್ರ…: ಸದಾನಂದ ಆರ್. ಅನುವಾದ

ಮೊದಲಿಗೆ, ಉಕ್ಕಿ ಹರಿಯುವ ಪ್ರೀತಿಯನ್ನು ನಿಯಂತ್ರಿಸಲು ನಾವು ಕಲಿಯಬೇಕು. ನೀನೀಗ ಪ್ರೀತಿಯ ಬಲಿಪಶುವಾಗಿರುವೆ ಎನ್ನುವ ಆತಂಕ ನನ್ನದು. ನನ್ನಿಂದ ದೂರವಿರಲು ನಿನ್ನಿಂದ ಸಾಧ್ಯವಿಲ್ಲ ಅನ್ನುವುದನ್ನು ನಾನು ಬಲ್ಲೆನು. ನನಗೂ ನೀನು ನನ್ನ ಹತ್ತಿರ ಇರಬೇಕೆಂಬ ಆಸೆಯಿದೆ. ಆದರೆ ನೀನು ನನಗೆ ಒಂದಿಷ್ಟು ಸಮಯಾವಕಾಶ ನೀಡಬೇಕೆಂದು ಕೋರುವೆ. ನಿನ್ನ ತಾಳ್ಮೆಯನ್ನು ನಾನು ಖಂಡಿತ ಪರೀಕ್ಷಿಸುವುದಿಲ್ಲ ಎನ್ನುವುದಂತೂ ಖಾತ್ರಿ.
ಡಾ. ಬಿ.ಆರ್. ಅಂಬೇಡ್ಕರ್‌ ತಮ್ಮ ಮದುವೆಗೂ ಮುನ್ನ ತಮ್ಮ ಪತ್ನಿಗೆ ಬರೆದಿದ್ದ ಪತ್ರವನ್ನು ಸದಾನಂದ ಆರ್. ಕನ್ನಡಕ್ಕೆ ಅನುವಾದಿಸಿದ್ದಾರೆ

read more
ನಾವೂನೂ ಹಕ್ಕಿಗಳಾಗೋಣ ಬಾರಾ: ಮಹಾಲಕ್ಷ್ಮೀ ಕೆ. ಎನ್. ಬರಹ

ನಾವೂನೂ ಹಕ್ಕಿಗಳಾಗೋಣ ಬಾರಾ: ಮಹಾಲಕ್ಷ್ಮೀ ಕೆ. ಎನ್. ಬರಹ

ರೇಷ್ಮೆ ಲಂಗದ ಅಕ್ಕ ಮತ್ತು ಅವಳ ಪುಟ್ಟ ತಮ್ಮ ಹಿಡಿಯಲು ಹೋದಾಗ ಕೈಗೆ ಸಿಗದವು, ಮನುಷ್ಯ ಮುಟ್ಟಿದರೆ ತನ್ನ ಮೈಯನ್ನ ಸ್ವಚ್ಛ ಮಾಡಿಕೊಳ್ಳುವಂತವು, ಈ ನೆಲದಲ್ಲಿ ನಿಧಿಯಿದೆ; ಏಳು ಎಡೆಯ ಸರ್ಪ ಅದನ್ನ ಕಾಯ್ತಿದೆ ಎಂಬ ಅವರ ಈರಪ್ಪನ ಮಾತಿನ ಮೇಲಿನ ಅವರ ಎಳೆಯ ನಂಬಿಕೆ, ಅಂತ್ಯದಲ್ಲಿ ಸಮಯ ಕಳೆದಂತೆ ಬಳ್ಳಾರಿಯಲ್ಲಿನ ಗಣಿಗಾರಿಕೆಗೆ ಹಸಿರುಟ್ಟ ನೆಲವೆಲ್ಲ ಬರಡಾಗಿ ದಾರಿತುಂಬಾ ಧೂಳು ತುಂಬಿ, ಗಿಳಿಯಬಣ್ಣವೂ ಕೆಂಪಾಗಿಯೇ ಬಿಡುವ ಧಾರುಣ ವಾಸ್ತವದ ಕತೆ ನೆನಪಾಗುತ್ತೆ.
ಮಹಾಲಕ್ಷ್ಮೀ. ಕೆ. ಎನ್ ಬರಹ ನಿಮ್ಮ ಓದಿಗೆ

read more
ವಸ್ತುಗಳ ನಡುವೊಂದು ವಾಸ್ತವ: ಸೌರಭಾ ಕಾರಿಂಜೆ ಬರಹ

ವಸ್ತುಗಳ ನಡುವೊಂದು ವಾಸ್ತವ: ಸೌರಭಾ ಕಾರಿಂಜೆ ಬರಹ

ಡಿಕ್ಲಟರಿಂಗ್ ನಮ್ಮ ದೇಹದ ಆರೋಗ್ಯಕ್ಕೂ ಒಳ್ಳೆಯದು. ಮನೆಯಲ್ಲಿ ಸೇರಿಕೊಂಡ ಅನೇಕ ವಸ್ತುಗಳು ಹಲವು ರೀತಿಯ ರೋಗಗಳಿಗೆ ಕಾರಣವಾಗುವ ಧೂಳಿಗೆ, ಅಸ್ತಮಾದಂತಹ ಖಾಯಿಲೆಗಳಿಗೆ ಕಾರಣವಾಗಬಹುದು. ಆಗಾಗ ಡಿಕ್ಲಟರಿಂಗ್ ಮಾಡುವುದರಿಂದ ಅದನ್ನು ತಡೆಯಬಹುದು. ಅಂತೂ ಈ ಡಿಕ್ಲಟರಿಂಗ್‌ನ ಹಿಂದೆ ಎಲ್ಲದಕ್ಕಿಂತ ಮುಖ್ಯವಾಗಿ ಯಾವುದು ಸಂತೋಷವನ್ನು ನೀಡುತ್ತದೆಯೋ ಅದನ್ನು ಮಾಡಿ ಮತ್ತು ಸಂತೋಷವನ್ನು ತರುವಂತಹ ವಸ್ತುಗಳನ್ನು ಮಾತ್ರ ಇಟ್ಟುಕೊಳ್ಳಿ ಎನ್ನುವ ಸಂದೇಶವಿದೆ.
“ಡಿಕ್ಲಟರಿಂಗ್‌” ಕುರಿತು ಸೌರಭಾ ಕಾರಿಂಜೆ ಬರಹ ನಿಮ್ಮ ಓದಿಗೆ

read more
ಕೊಕ್….ಕೊಕ್ಕ್… ಕುಕ್ಕುಟಾಯಣ: ವಸಂತಕುಮಾರ್ ಕಲ್ಯಾಣಿ ಪ್ರಬಂಧ

ಕೊಕ್….ಕೊಕ್ಕ್… ಕುಕ್ಕುಟಾಯಣ: ವಸಂತಕುಮಾರ್ ಕಲ್ಯಾಣಿ ಪ್ರಬಂಧ

ಸುಮಾರು ನಾಲ್ಕು ಮೂವತ್ತಕ್ಕೆ ಯಾವುದೋ ಕನಸಿನ ಲೋಕದಲ್ಲಿದ್ದವನಿಗೆ, ಎಂಪಿ ಶಂಕರ್ ವಜ್ರಮುನಿ, ತೂಗುದೀಪ ಶ್ರೀನಿವಾಸ್, ಪ್ರಭಾಕರ್, ಶಕ್ತಿಪ್ರಸಾದ್ ಮುಂತಾದವರೆಲ್ಲ ಒಟ್ಟಿಗೆ ಗಹಗಹಿಸಿ ನಕ್ಕ ಹಾಗೆ ದನಿ ಕೇಳಿ ಎಚ್ಚರವಾಯಿತು. ಕೆಲಕ್ಷಣದ ನಂತರ ಅದು ಚೇಚಿ ಮನೆಯ ಕೋಳಿಯ ಕೂಗು ಎಂಬ ಕಟು ವಾಸ್ತವ ಅರಿವಿಗೆ ಬಂತು. ಸರಿ ‘ಸುಸು’ ಮಾಡಿ ನೀರು ಕುಡಿದು ಮಲಗಿದರಾಯಿತು ಎಂದು, ಎಲ್ಲ ಮುಗಿಸಿ ಮಲಗಿದರೆ, ಅದರ ಆರ್ಭಟ ಇನ್ನಷ್ಟು ಹೆಚ್ಚಾಯಿತು.
ವಸಂತಕುಮಾರ್ ಕಲ್ಯಾಣಿ ಪ್ರಬಂಧ ನಿಮ್ಮ ಓದಿಗೆ

read more
ನಮ್ಮ ಓದನ್ನು ರೂಪಿಸಿದ ಮಾಯಾದರ್ಪಣದ ಮಾಯಾವಿ: ಎಂ. ಎಸ್. ಶ್ರೀರಾಮ್ ಬರಹ

ನಮ್ಮ ಓದನ್ನು ರೂಪಿಸಿದ ಮಾಯಾದರ್ಪಣದ ಮಾಯಾವಿ: ಎಂ. ಎಸ್. ಶ್ರೀರಾಮ್ ಬರಹ

ದಿವಾಕರ್‌ಗೆ ಸಾಹಿತ್ಯದ ಬಗ್ಗೆ ಇರುವ ಆಳವಾದ ಒಳನೋಟಗಳು, ಸಂಗೀತ ಮತ್ತು ಸಿನಿಮಾಗಳ ಬಗ್ಗೆಯೂ ಇದೆ. ಬೇಂದ್ರೆಯವರ ಅನೇಕ ಕವಿತೆಗಳಿಗೆ ದಿವಾಕರ್ ರಾಗಸಂಯೋಜನೆ ಮಾಡಿದ್ದಾರೆ. ‘ಮಲ್ಲಿಗೆ’ಯಲ್ಲಿದ್ದಾಗ ಅನೇಕ ಪುಸ್ತಕಗಳ ಮುಖಪುಟಗಳನ್ನೂ ವಿನ್ಯಾಸ ಮಾಡಿದ್ದರು.
ಎಂಭತ್ತರ ಹೊಸ್ತಿನಲ್ಲಿರುವ ಹಿರಿಯ ಕಥೆಗಾರ ಎಸ್. ದಿವಾಕರ್ ಅವರ ಸಾಹಿತ್ಯ ಸಂಭ್ರಮದ ಕೃತಿ “ಪರಿಮಳದ ಪಡಸಾಲೆ”ಗೆ ಎಂ.ಎಸ್.‌ ಶ್ರೀರಾಮ್‌ ಬರೆದ ಬರಹ ನಿಮ್ಮ ಓದಿಗೆ

read more
“ನಾವುಗಳಿಲ್ಲಿ ಪರಸ್ಪರರು”: ಮಹಾಲಕ್ಷ್ಮೀ ಕೆ. ಎನ್. ಬರಹ

“ನಾವುಗಳಿಲ್ಲಿ ಪರಸ್ಪರರು”: ಮಹಾಲಕ್ಷ್ಮೀ ಕೆ. ಎನ್. ಬರಹ

ಇಳೆಗೆ ತಂಪು ಬೇಕು ವರುಣನಿಗೆ ಕಾಯ್ತಾಳೆ. ಅವನಿಗೆ ನೆಲೆಬೇಕು ಇವಳನ್ನೇ ಅರಸುತ್ತಾನೆ. “ಇವರಿಬ್ಬರದ್ದೂ ಇಲ್ಲಿ ಪರಸ್ಪರತೆ”. ಇದ್ದಕ್ಕಿದ್ದಂತೆ ಮೋಡ ಹೆಪ್ಪುಗಟ್ಟುತ್ತೆ, ಕಪ್ಪುಗಾಗುತ್ತೆ, ಕತ್ತಲಿನಂತಾಗುತ್ತೆ, ಎಲ್ಲವೂ ನಿಶ್ಶಬ್ಧವಾಗುತ್ತೆ, ಹಕ್ಕಿ ಹಿಂಡು ಗೂಡನ್ನರಸಿ ಚಿಲಿಪಿಲಿಗುಟ್ಟುತ್ತಾ ಬರುತ್ವೆ, ಜೋರುಗಾಳಿ ನಿಲ್ಲುತ್ತೆ, ಎಲ್ಲರೂ- ಎಲ್ಲವೂ ಬಾನಿಗೆ ಮುಖಮಾಡಿ ನೋಡುವಷ್ಟರಲ್ಲಿ ಧೋ…. ಅಂತ ಜಡಿ ಮಳೆ ಬಂದೇಬಿಡುತ್ತೆ.
ಮಹಾಲಕ್ಷ್ಮೀ ಕೆ. ಎನ್. ಬರಹ ನಿಮ್ಮ ಓದಿಗೆ

read more
ಭಾವಗಳ ‘ತೇರ’ ಯಾತ್ರೆ….: ರಾಮ್ ಪ್ರಕಾಶ್ ರೈ ಕೆ ಬರಹ

ಭಾವಗಳ ‘ತೇರ’ ಯಾತ್ರೆ….: ರಾಮ್ ಪ್ರಕಾಶ್ ರೈ ಕೆ ಬರಹ

ಜೈಲಿನ ಕೈದಿಯೊಬ್ಬರು “ನಾವು ಮನುಷ್ಯರಾಗಿ ಹುಟ್ಟಿಲ್ಲ, ಮನುಷ್ಯರಾಗಲು ಹುಟ್ಟಿದ್ದೇವೆ” ಎಂದರೆ, ಇನ್ನೊಮ್ಮೆ “ಜೈಲು ಹೆರಿಗೆ ಮನೆಯಂತೆ, ಇಲ್ಲಿಗೆ ಬಂದವರು ಹೊಸ ಹುಟ್ಟು ಪಡೆದೇ ಹೊರಹೋಗುವುದು” ಎನ್ನುತ್ತಾರೆ. ಸುಖದ ಬದುಕು ಸಾಗುತ್ತಿರಬೇಕಾದರೆ ಹಿರಿಯ ಮಹಿಳೆಗೆ ಬಸ್ಸಿನ ಸೀಟು ಬಿಟ್ಟುಕೊಡುವ ಪ್ರಿಯ, ಕಷ್ಟ ಕಾಲಿಟ್ಟಾಗ ಆ ಮಹಿಳೆಯ ಕಡೆಗೆ ನಿರ್ಭಾವುಕ ನೋಟವನ್ನು ಬೀರುವ ಪರಿ, ಆ ಬದಲಾವಣೆಯಂತೂ ಮಾನವ ಬದುಕಿನ ವಾಸ್ತವ ನಡುವಳಿಕೆಗೆ ಹಿಡಿದ ದರ್ಪಣದಂತೆ ಕಾಣುತ್ತದೆ.
ಹೇಮಂತ್‌ ರಾವ್‌ ನಿರ್ದೇಶನದ “ಸಪ್ತ ಸಾಗರದಾಚೆ ಎಲ್ಲೋ” ಸಿನಿಮಾದ ಕುರಿತು ರಾಮ್ ಪ್ರಕಾಶ್ ರೈ ಕೆ ಬರಹ

read more

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ