ಕನಕ ಕನಸಿದ ‘ಕಲ್ಯಾಣ’: ಉದಾರಚರಿತದ ರೂಪಕ
ಕುರುಬ ಸಮುದಾಯದ’ಕನಕ’, ಕನಕದಾಸರಾಗಿದ್ದುದರ ಬಗ್ಗೆ ಅನೇಕ ಕಥನಗಳಿವೆ. ಆದರೆ ಈ ಹಾದಿಯಲ್ಲಿ ಕನಕರು ಕುಲದ ಕಾರಣಕ್ಕಾಗಿ ಎದುರಿಸಬೇಕಾಗಿ ಬಂದ ಸಂಕಟಗಳನ್ನು ನಾವು ಗಮನಿಸಬೇಕು. ಶ್ರೀನಿವಾಸ ಶೆಟ್ಟಿ, ಪುರಂದರ ದಾಸರಾಗಲು ಇರುವ ಅವಕಾಶ ಕನಕನಾಯಕ ಕನಕದಾಸರಾಗೋದಕ್ಕೆ ಇರಲಿಲ್ಲ. ಅವರು ತಮ್ಮ ಹುಟ್ಟಿನ ಸೂತಕದ ಕಾರಣಕ್ಕಾಗಿ ಮತ್ತೆ ಮತ್ತೆ ಸಾಮರ್ಥ್ಯವನ್ನು ಸಾಬೀತು ಪಡಿಸಿಕೊಳ್ಳಬೇಕಾಯ್ತು.
ಸಜ್ಜನಿಕೆಯ ಋಣವೊಂದು ಹೃದಯದಲ್ಲಿ ಉಳಿದಿದೆ
ಒಳ್ಳೆಯತನವನ್ನು ನಾವು ಎಷ್ಟೇ ಸದರದಿಂದ ನೋಡಿದರೂ, ಸ್ವಂತ ಮಕ್ಕಳ ವಿಷಯಕ್ಕೆ ಬಂದಾಗ ಅವರಿಗಾಗಿ ನಾವು ಒಳ್ಳೆಯತನದ ಮಾದರಿಗಳನ್ನು ಹುಡುಕಲು ಶುರು ಮಾಡುತ್ತೇವೆ. ದೊಡ್ಡವರಿಗೂ ಮಕ್ಕಳಿಗೂ ಸಮಾನವಾಗಿ ಇಷ್ಟವಾಗುವವರು ಬಹಳಿಲ್ಲ. ಕೆಲವರು ಗೊತ್ತಿಲ್ಲದಂತೆಯೇ ನಮಗೂ ಇಷ್ಟವಾಗುತ್ತಾರೆ, ಮಕ್ಕಳಿಗೂ ಮೆಚ್ಚುಗೆಯಾಗುತ್ತಾರೆ. ನಮಗರಿವಿಲ್ಲದಂತೆಯೇ ಅವರು ನಮ್ಮ ಜೀವನದಲ್ಲಿ ಮುಖ್ಯವಾಗಿರುತ್ತಾರೆ. ಅವರು ಅಗಲಿದಾಗ ಉಮ್ಮಳಿಸಿ ಬರುವ ದುಃಖವೂ, ಇದ್ದಕ್ಕಿದ್ದಂತೆಯೇ ಕಾಡಲು ಶುರುವಾಗುವ…
ಒಂದು ದಕ್ಷಾಧ್ವರ ಪ್ರದರ್ಶನದಲ್ಲಿ ಜಗನ್ಮಾತೆಯಾಗುವ ದಾಕ್ಷಾಯಿಣಿ
ಒಂದು ನಿರ್ದಿಷ್ಟ ಪಠ್ಯವು ಇವತ್ತಿನ ತನಕ ರಂಗದಲ್ಲಿ ವ್ಯಾಖ್ಯಾನಗೊಂಡ ಲೋಕದೃಷ್ಟಿಯೊಳಗೆ ಮತ್ತು ಒಂದು ಕಲಾರೂಪದ ಮಿತಿಯೊಳಗೇ ಹೇಗೆ ವಿಸ್ತಾರಗೊಳ್ಳುತ್ತದೆ ಎನ್ನುವುದನ್ನು ನೋಡದಿದ್ದರೆ ಪ್ರದರ್ಶನಕ್ಕೆ ನ್ಯಾಯ ಒದಗಿಸಿದಂತಾಗುವುದಿಲ್ಲ. ಒಂದು ಪಾತ್ರವನ್ನು ಹೇಗೆ ಆ ಮಿತಿಯೊಳಗೇ ಅನಾವರಣಗೊಳಿಸಿ, ಬೇರೆ ರೀತಿಯ ಅಸ್ಮಿತೆಯನ್ನು ಸ್ಥಾಪಿಸಬಹುದೆಂದು…
ನಮ್ಮ ಚಿತ್ರಗಳಿಗೆ ಅವರು ಬಣ್ಣ ತುಂಬುತ್ತಿದ್ದಾರೆ
ಕೋವಿಡ್ ಸೋಂಕಿನ ಭಯದಿಂದ ಕಳೆದೆರಡು ವರ್ಷಗಳಲ್ಲಿ ಶಾಲೆಗಳಲ್ಲಿ ಮಕ್ಕಳ ಕಲರವವೇ ಇರಲಿಲ್ಲ. ಇದೀಗ ಮತ್ತೆ ಪುಟಾಣಿ ಮಕ್ಕಳು ಶಾಲೆಯ ತರಗತಿಗಳನ್ನು ಪ್ರವೇಶಿಸಿದ್ದಾರೆ. ಹಾಗಾಗಿ ಮನೆಯೊಳಗೂ ಜೀವನೋತ್ಸಾಹ ತುಂಬಿದೆ. ಮಕ್ಕಳಿಗಾಗಿ ಶಾಪಿಂಗ್, ಸ್ಪರ್ಧೆಗಳಿಗಾಗಿ ತಯಾರಿ, ಪರೀಕ್ಷೆಗಳಿಗಾಗಿ ಓದು, ಆಟೋಟಗಳಿಗಾಗಿ ಸಿದ್ಧತೆಗಳನ್ನು ಮಾಡುವುದರಲ್ಲಿ ಮಕ್ಕಳೂ, ಅವರ ಜೊತೆಗೆ ಪೋಷಕರೂ ಬ್ಯುಸಿಯಾಗಿದ್ದಾರೆ.
ಬದುಕಿನಲ್ಲಿ ನಮ್ಮ ಬೀಳಿಸಿ, ಬುದ್ಧಿ ಕಲಿಸಿದಾತನೂ ಗುರುವೇ..
ಒಬ್ಬ ಗುರು ನಮ್ಮ ಜೀವನದಲ್ಲಿ ಖಂಡಿತ ಮಹಾವ್ಯಕ್ತಿಯೇ ಆಗಿರುತ್ತಾನೆ. ಒಂದಕ್ಕರ ಕಲಿಸಿದಾತನೂ ಗುರುವೇ ಅಂತಾರೆ, ಹೀಗಾಗಿ ಪಾಠ ಮಾಡಿದ ಗುರುಗಳ ನಂತರ ಬರುವವರೇ ನಿಜ ಜೀವನದ ಪಾಠ ಕಲಿಸುವ ಗುರುಗಳು! ಅಂತಹ ಕೆಲವು ಗುರುಗಳು ನನ್ನ ಜೀವನದಲ್ಲಿ ಬಂದು ಮಾರ್ಗದರ್ಶನ ನೀಡಿದವರು. ಅವರಲ್ಲಿ ಕೃಷಿ ಪಾಠವನ್ನುಚೆನ್ನಾಗಿಯೇ ಕಲಿಸಿದ ದೇವೇಂದ್ರ ಕೂಡ ಒಬ್ಬ.
ಪ್ರೇಯಸಿ ವಿಷವುಣಿಸುತ್ತಾಳೆ ಎಂದು ಅಳುವ ಆ ಪುಟ್ಟ ಪೋರ
ಯಕ್ಷಗಾನದಲ್ಲಿ ಅಬ್ಬರ, ವೈಭವ, ರಂಪಾಟಗಳು ಬೇಕೋ ಬೇಡವೋ ಎಂಬ ಚರ್ಚೆಗಳೆಲ್ಲ ಔಪಚಾರಿಕ ವೇದಿಕೆಗಳಲ್ಲಿ ನಡೆಯುತ್ತಲೇ ಇರುತ್ತವೆ. ಇತ್ತ ಯಕ್ಷಗಾನ ಪ್ರದರ್ಶನಗಳೋ, ಪ್ರೇಕ್ಷಕರ ಪ್ರತಿಕ್ರಿಯೆಗಳನ್ನು ಗಮನಿಸುತ್ತಾ ಸ್ವತಃ ಬದಲಾವಣೆಗಳನ್ನು ಕಾಣುತ್ತಾ ನಡೆಯುತ್ತಿರುತ್ತವೆ. ಕಳೆದ ಮೇ ತಿಂಗಳಲ್ಲಿ ಲಾಕ್ ಡೌನ್ ಎಂಬ ತೆರೆಯ ಮರೆಯಲ್ಲಿ ಪ್ರದರ್ಶನಗಳನ್ನು…
ಈ ವರ್ಷ ಗೆಜ್ಜೆಯ ಕಲರವ ನಿಲ್ಲದಿರಲಿ
ಕೊರೊನಾ ಜಾಗತಿಕ ಸೋಂಕನ್ನು ತಡೆಯುವ ನಿಟ್ಟಿನಲ್ಲಿ ಹೇರಿದ ಲಾಕ್ ಡೌನ್ ಸಾಂಸ್ಕೃತಿಕ ಕ್ಷೇತ್ರದ ಮೇಲೆ ಬಲವಾದ ಹೊಡೆತವನ್ನು ನೀಡಿತ್ತು. ಅದು ಅನೇಕ ಕಲಾವಿದರ ಬದುಕನ್ನೇ ಕಸಿದುಕೊಂಡಿತು. ಸಂಗೀತ ಮತ್ತು ಗೆಜ್ಜೆಗಳ ಧ್ವನಿಯು ಆನ್ ಲೈನ್ ನಲ್ಲಿ ಬಂಧಿಯಾಗಿಬಿಟ್ಟಿತು. ತಾಳಗಳಿಗೆ ಕಿವಿಯಾಗುವುದು ಸಾಧ್ಯವಾದರೂ ಪ್ರೋತ್ಸಾಹದ ಚಪ್ಪಾಳೆಗಳು ಶುಷ್ಕವಾಗಿ ಕೇಳಿಸಿದವು. ತಾಳ ಲಯ, ಹಾವ ಭಾವ, ಅಭಿನಯ…
ಆಂಗ್ರೀ ಯೆಂಗ್ ಮ್ಯಾನ್ ಜಿಕೆಜಿ
ಜಿ.ಕೆ. ಗೋವಿಂದ ರಾವ್ ಅವರು ಅಪ್ಪಟ ನಾಗರಿಕ ಬದುಕಿಗೆ ಶ್ರೇಷ್ಠ ಮಾದರಿಯಾಗಿದ್ದರು. ವೈಚಾರಿಕತೆ ಮತ್ತು ವೈಜ್ಞಾನಿಕ ಚಿಂತನೆಗಳ ಪ್ರಖರ ಪ್ರತಿಪಾದಕರಾಗಿದ್ದರು. ಆಡಂಬರದ ಸಾಮಾಜಿಕ ಸುಧಾರಣೆಗಳನ್ನು ಕೈಗೊಂಡು ಪ್ರಚಾರ ಗಳಿಸುವ ಮಠಮಾನ್ಯಗಳನ್ನು ನಿರ್ಭಿಡೆಯಿಂದ ಖಂಡಿಸುವಾಗ ಕೋಪಾವಿಷ್ಟ ವಿಶ್ವಾಮಿತ್ರನಂತಾಗುತ್ತಿದ್ದರು. ಅವರಿಗೆ ದೈವಗಳಲ್ಲಿ, ಅವತಾರಗಳಲ್ಲಿ ಯಾವ ನಂಬಿಕೆಯೂ ಇರಲಿಲ್ಲ; ಮತ್ಸ್ಯಾವತಾರ ಒಂದನ್ನು ಬಿಟ್ಟು! -ಜಿ.ಕೆ. ಗೋವಿಂದ ರಾವ್ ನೆನಪುಗಳನ್ನು ಹಂಚಿಕೊಂಡಿದ್ದಾರೆ ಅಗ್ರಹಾರ ಕೃಷ್ಣ ಮೂರ್ತಿ
ಪ್ರೇಕ್ಷಕರ ಜೊತೆಗಿನ ಸಂಬಂಧಗಳ ಮಹತ್ವ ಅರಿಯೋಣ
ಒಂದು ಬದಲಾವಣೆ ರಂಗಭೂಮಿಯಲ್ಲಿ ಬರಬೇಕು ಎಂದು ಆಗ್ರಹಿಸುವಾಗ ನಾವು ಆಯ್ಕೆ ಮಾಡಿಕೊಳ್ಳುವ ನಾಟಕಗಳ ಕಥಾವಸ್ತು ಯಾವುದು ಮತ್ತು ಅದು ಹೇಗಿರಬೇಕು ಅನ್ನೋದು ಮುಖ್ಯ ಆಗುತ್ತದೆ. ಸೈದ್ಧಾಂತಿಕವಾಗಿ ಮತ್ತು ಪ್ರಾಯೋಗಿಕವಾಗಿ ನಾವು ಏನನ್ನು ಹೇಳಲು ಪ್ರಯತ್ನಿಸುತ್ತಿದ್ದೇವೋ, ಅದು ಪ್ರೇಕ್ಷಕರಿಗೆ ಅರ್ಥ ಆಗಬೇಕಾಗಿದೆ. ಸಾಮಾನ್ಯವಾಗಿ ನಾವು ಮಾಡುವ ಎಲ್ಲಾ ನಾಟಕಗಳು ಪ್ರೇಕ್ಷಕರಿಗೆ ಅರ್ಥ ಆಗುವುದಿಲ್ಲ.
’ರಂಗಭೂಮಿಯಲ್ಲಿ ಮರುಚಿಂತನೆ’ ಕುರಿತು ಗೌರಿ ಅದಮ್ಯ ಬರೆದ ಅನಿಸಿಕೆ ಇಲ್ಲಿದೆ:










