ಮಾನ್ಸೂನ್ ಮಳೆ ಬಾಲ್ಯದ ನೆನಪುಗಳನ್ನು ಹೊತ್ತು ತರುವ ತೇರು: ಮಹಾಲಕ್ಷ್ಮೀ. ಕೆ. ಎನ್. ಬರಹ
ಬೆಚ್ಚಗಿನ ಸ್ವೆಟರ್, ರಾತ್ರಿ ಚಳಿಗೆ ಬೆಚ್ಚಗಿನ ಕಂಬಳಿ, ಮನೆಯ ಹೆಂಚಿನ ಮೇಲಿಂದ ಮಳೆ ನೀರು ಇಳಿಯುವ ಜೋಗುಳದಂತಹ ಶಬ್ದ, ಅಕ್ಕನ ಎಂಟು ತಿಂಗಳ ಮಗಳು ತೊಟ್ಟಿಲಿನಿಂದ ಹೊರಗೆ ತಿಳಿ – ಬಿಳಿ ಕಣ್ಣು ಬಿಟ್ಟು ಜಿಟಿಜಿಟಿ ಮಳೆಯ ರಭಸ ನೋಡುವ ಕುತೂಹಲದ ಕೂಸು. ಹಬೆಯಾಡುವ – ಹೊಗೆಯಾಡುವ ಸ್ನಾನದ ಮನೆ ಕಂಡರೆ ಸುಡುಸುಡು ನೀರನ್ನು ಒಂದೆರಡು ಕಡಾಯ ಮೈಮೇಲೆ ಸುರಿದುಕೊಳ್ಳುವ ಬಯಕೆ – ಹೊರಗಿನ ಕೆಲಸ ಮುಗಿಸಿ ಬಂದವರ ಮನಸ್ಸನ್ನು ಆಯಸ್ಕಾಂತದಂತೆ ಎಳೆಯುತ್ತಲೇ ಇರುತ್ತದೆ.
ಮಾನ್ಸೂನ್ ಕುರಿತು ಮಹಾಲಕ್ಷ್ಮೀ. ಕೆ. ಎನ್. ಬರಹ ನಿಮ್ಮ ಓದಿಗೆ
ತಮ್ಮ ಬೆಂಗಳೂರಿಗೆ ಬಂದ..: ವಿನಾಯಕ ಅರಳಸುರಳಿ ಲಲಿತ ಪ್ರಬಂಧ
ಕೊಂಚ ಸ್ಥಿತಿವಂತರಾಗಿದ್ದ ಪಕ್ಕದ ಮನೆಯ ಅಣ್ಣನ ಮಗನ ಬರ್ತಡೇ ಪಾರ್ಟಿಯಲ್ಲಿ ತಿನ್ನಲು ಸಿಕ್ಕ ಚಿಕ್ಕ ಕೇಕ್ನ ತುಣುಕನ್ನೇ ಸ್ವರ್ಗ ಲೋಕದ ತಿನಿಸೆಂಬಂತೆ ಅದೊಂದು ದಿನ ತಿಂದಿದ್ದೆವು. ಇನ್ನೊಂದು ಪೀಸ್ ಬೇಕು ಎಂಬ ಆಸೆಯನ್ನು ಬಾಯಲ್ಲೇ ಇಟ್ಟುಕೊಂಡು ಕೈ ತೊಳೆದಿದ್ದೆವು. ಯಾರೋ ತುಂಡೊಂದನ್ನು ಬೇಡವೆಂದು ತಟ್ಟೆಯಲ್ಲೇ ಬಿಟ್ಟಾಗ ಅದು ನಮಗೆ ಸಿಗುವುದೇನೋ ಎಂದು ಆಸೆಯಿಂದ ಕಾದಿದ್ದೆವು. ಇಂತಿಪ್ಪ ಅಪೂರ್ಣ ಬಯಕೆಗಳ ಬಾಲ್ಯವನ್ನೇ ಕಳೆದ ತಮ್ಮನಿಗೆ ಈಗಲೂ ಈ ಪಟ್ಟಣದ ವಿಶೇಷ ತಿಂಡಿಗಳ ಬಗ್ಗೆ ಆಸೆಯಿದ್ದರೆ ಅದರಲ್ಲಿ ಯಾವ ತಪ್ಪಾಗಲೀ, ಅತಿಯಾಸೆಯಾಗಲೀ ನನಗೆ ಕಾಣಲಿಲ್ಲ.
ವಿನಾಯಕ ಅರಳಸುರಳಿ ಬರೆದ ಲಲಿತ ಪ್ರಬಂಧ ನಿಮ್ಮ ಓದಿಗೆ
ಅಂತ್ಯವಿಲ್ಲದೊಂದು ಕತೆ: ನಿ”ಶಾಂತ” ಬರಹ
ಆಮೇಲೆ ಬರುಬರುತ್ತಾ ನಮ್ಮ ಭೇಟಿಯ ದಿನಗಳು ಕ್ಷೀಣಿಸಿದವು. ಆದರೂ ಯಾಕೋ ಆ ಕಾರಣಕ್ಕೆ ಇಬ್ಬರೂ ಜಗಳ ತೆಗೆಯುವುದನ್ನು ನಿಲ್ಲಿಸಿದ್ದೆವು. ಒಬ್ಬರು ಸಿಗ್ತಿಯಾ ಅಂದಾಗ, ಬೆಂಗಳೂರಿನ ಆ ತುದಿಯಲ್ಲಿದ್ದರೂ ಬಂದು ಭೇಟಿ ಮಾಡಿಹೋಗುತ್ತಿದ್ದೆವು. ಮತ್ತೆ ಮುಂದಿನ ಭೇಟಿ ಬಗ್ಗೆ ಮಾತೇ ಇಲ್ಲ… ಸುಮ್ಮನೇ ನಮ್ನಮ್ಮ ಕೆಲಸಗಳ ಕುರಿತು, ಮನೆಯ ಪರಿಸ್ಥಿತಿಗಳ ಕುರಿತ ಮಾತಷ್ಟೇ. ಅಲ್ಲಿ ಯಾವುದೇ ಕವಿತೆಗೂ, ಗಜಲ್ಗೂ ಅವಕಾಶವಿರುತ್ತಿರಲಿಲ್ಲ. ಅದು ಇಬ್ಬರಿಗೂ ಬೇಕಾಗೂ ಇರಲಿಲ್ಲವೆನ್ನಿಸುತ್ತೆ. ಹಾಗಾಗಿ ಮೂರು ವರ್ಷಗಳ ಒಡನಾಟದ ಸಲುವಾಗಿಯಾದರೂ ಒಂದು ಗುಡ್ಬೈ ಸಹ ಹೇಳದೇ ನಮ್ಮ ನಮ್ಮ ಬದುಕಿನ ಹಾದಿಯಲ್ಲಿ ಸಿಕ್ಕ ತಿರುವುಗಳಲ್ಲಿ ನಡೆದುಹೋಗಿಬಿಟ್ಟಿದ್ದೆವು.
“ದಡ ಸೇರದ ದೋಣಿ” ಹೊಸ ಸರಣಿಯಲ್ಲಿ ಅಂತ್ಯ ಸಿಕ್ಕದ ಪ್ರೇಮವೊಂದರ ಕುರಿತು ನಿ”ಶಾಂತ” ಬರಹ
ಎಲ್ಲ ಕಾಲದ ಮನುಷ್ಯರೂ ಒಂದೇ!: ರೂಪಶ್ರೀ ಕಲ್ಲಿಗನೂರ್ ಬರಹ
ಗಣಿತದಲ್ಲಿ ತಪ್ಪು ಲೆಕ್ಕ ಬರೆದ ಮಕ್ಕಳನ್ನು ಕರೆದು ಅಂಗೈ ಮುಂದೆ ಮಾಡಲು ಹೇಳಿ, ಗೆಣ್ಣಿಗೆ ಹೊಡೆಯುತ್ತಿದ್ದ ರೀತಿ ಇನ್ನೂ ಚೆನ್ನಾಗಿ ನೆನಪಿದೆ. ಒಮ್ಮೊಮ್ಮೆ ತೀರಾ ಸಿಟ್ಟಿನಲ್ಲಿ ರಪರಪ ಬಾರಿಸಿದ್ರೆ, ಇನ್ನೂ ಕೆಲವೊಮ್ಮೆ ಏನೋ ಮನಸ್ಸಿಲ್ಲದೇ, ತನ್ನ ಕರ್ತವ್ಯ ಪಾಲಿಸುವುದಕ್ಕಾಗಿ ಇಷ್ಟು ಜೋರಾಗಿ ಹೊಡಿತಿದ್ದೀನಿ ಅನ್ನುವಂತೆ ಮುಖ ಮಾಡಿಕೊಂಡು ಶಿಕ್ಷಿಸುತ್ತಿದ್ದರು. ಹಾಗವರು ಮೃಗೀಯವಾಗಿ ಹೊಡೆಯುವಾಗ, ಅವರ ಮಗು ಅಲ್ಲೇ ಪಕ್ಕದಲ್ಲಿ ತೊಟ್ಟಿಲಲ್ಲಿ ನೆಮ್ಮದಿಯಿಂದ ಮಲಗಿರುತ್ತಿತ್ತು. ಅಷ್ಟು ಚಿಕ್ಕ ಮಗುವಿನ ತಾಯಿಯೊಬ್ಬಳು, ಓದಿನಲ್ಲಿ ತಪ್ಪು ಮಾಡಿದ ಮಕ್ಕಳಿಗೆ ಹೇಗೆ ಅಷ್ಟು ಮನುಷ್ಯತ್ವವಿಲ್ಲದೇ ಶಿಕ್ಷಿಸಲು ಸಾಧ್ಯ?
ರೂಪಶ್ರೀ ಕಲ್ಲಿಗನೂರ್ ಬರಹ ನಿಮ್ಮ ಓದಿಗೆ
“ಹಳದಿ ಕೊಡೆ”: ಡಾ. ಖಂಡಿಗೆ ಮಹಾಲಿಂಗ ಭಟ್ ಅನುವಾದಿಸಿದ ರಸ್ಕಿನ್ ಬಾಂಡ್ ಬರಹ
ಅವನು ಸಾಮಾನ್ಯವಾಗಿ ನನ್ನನ್ನು ನನ್ನ ಆಫೀಸ್ನಲ್ಲಿ ಕಾಣುತ್ತಿದ್ದನು. ಇಲ್ಲವಾದರೆ ಕಿರಿದಾದ ಹೂವಿನ ತೋಟದಲ್ಲಿ ಸ್ನ್ಯಾಪ್ ಡ್ರ್ಯಾಗನ್ ಮತ್ತು ಪೆಟೋನಿಯಾಗಳನ್ನು ಬೆಳೆಸಲೆತ್ನಿಸುವಾಗ ಕಾಣುವನು. ಬಿಸಿಲಿನ ದಿನಗಳಲ್ಲಿ ಬಾಯಾರಿಕೆ ಆರಿಸಲು ನೀರನ್ನು ಕುಡಿದು ಬಾಯಾರಿಕೆ ನಿವಾರಿಸಿಕೊಂಡ ಮೇಲೆ ಅವನು ತಗ್ಗಿದ ತೋಟದ ಗೋಡೆಯ ಮೇಲೆ ಐದರಿಂದ ಹತ್ತುನಿಮಿಷ ಕುಳಿತು ಪೇಟೆಯಲ್ಲಿನ ಹೊಸಹೊಸ ಸುದ್ದಿಗಳನ್ನೆಲ್ಲ ನನಗೆ ತಿಳಿಸುತ್ತಿದ್ದನು.
ರಸ್ಕಿನ್ ಬಾಂಡ್ ಬರೆದ “ಯೆಲ್ಲೋ ಅಂಬ್ರೆಲ್ಲಾ” ಬರಹವನ್ನು ಡಾ. ಖಂಡಿಗೆ ಮಹಾಲಿಂಗ ಭಟ್ ಕನ್ನಡಕ್ಕೆ ಅನುವಾದಿಸಿದ್ದು, ನಿಮ್ಮ ಓದಿಗೆ ಇಲ್ಲಿದೆ
ಮನೆಯವರ ಮನಗಳಲ್ಲಿ ಸಾಯುವವರ ಕತೆ: ರೂಪಶ್ರೀ ಕಲ್ಲಿಗನೂರ್ ಬರಹ
ಜೊತೆಯಲ್ಲಿ ಯಾರೂ ಇಲ್ಲದ್ದರಿಂದ, ಅವರ ಜೋಬಿನಲ್ಲಿದ್ದ ಮೊಬೈಲ್ ತೆಗೆದುಕೊಂಡು ಅದಕ್ಕೆ ಬಂದ-ಹೋದ ಒಂದಷ್ಟು ನಂಬರ್ಗಳಿಗೆ ಕಾಲ್ ಮಾಡಿ ವಿಷಯ ತಿಳಿಸಿದ್ದರು. ನಂತರ ಮೃತದೇಹವನ್ನು ಊರಿಗೆ ತರಿಸಿಕೊಂಡು ಎಲ್ಲ ಕಾರ್ಯಗಳನ್ನು ಮಾಡಿ ಮನೆಗೆ ಹೋಗುವಾಗ ಯಾರ ಕಣ್ಣಲ್ಲೂ ಹನಿ ನೀರುಕಾಣಲಿಲ್ಲ… ಅವರರ್ಯಾರ ಮುಖದಲ್ಲಿ ಅಯ್ಯೋ ತಮ್ಮ ಮನೆಯ ಸದಸ್ಯನೊಬ್ಬನನ್ನು ಕಳೆದುಕೊಂಡೆವಲ್ಲ ಎನ್ನುವ ನೋವು ಕಾಣಿಸುತ್ತಿರಲಿಲ್ಲ.. ಬದಲಾಗಿ ಅಕ್ಕ-ತಂಗಿಯರಾಗಿ ಎಲ್ಲರೂ ತಮ್ಮ ಕಾರ್ಯಗಳನ್ನು ಸರಿಯಾಗಿ ಮಾಡಿ-ಮುಗಿಸಿದೆವಲ್ಲ… ದೇವರಿಗೆ ನಮ್ಮ ಮೇಲೆ ಸ್ವಲ್ಪವಾದರೂ ಕರುಣೆ ಇದೆಯಪ್ಪ.. ಎನ್ನಿಸಿತ್ತು. ಅಷ್ಟೇ.
ರೂಪಶ್ರೀ ಕಲ್ಲಿಗನೂರ್ ಬರಹ ನಿಮ್ಮ ಓದಿಗೆ
ಪೆಟ್ಟುಮಾಡಿಕೊಂಡ ಕಿಟ್ಟಪ್ಪನಿಗೆ ಸಂದ ಪೂಜೆ…: ಎಚ್. ಗೋಪಾಲಕೃಷ್ಣ ಸರಣಿ
ಇಲ್ಲಿ ನನ್ನ ಸಂಪೂರ್ಣ ತಲಾಶ್ ನಡೆಯಿತು. ಎಡಗೈ ಇನ್ನೂ ನೇತಾಡುತ್ತಾ ಇತ್ತಲ್ಲ. ಅದನ್ನ ಹೇಗೋ ಮಡಿಸಿ ಒಂದು ಪಂಚೆಯನ್ನ ಸ್ವಿಂಗ್ ತರಹ ಮಾಡಿ ಕೊರಳಿಗೆ ನೇತು ಹಾಕಿದ್ದಳು. ಇಷ್ಟು ಹೊತ್ತಿಗೆ ಮೈಮೇಲೆ ಬಂದಿದ್ದ ಚಾಮುಂಡಿ ದೇವತೆ ಕೊಂಚ ಶಾಂತವಾಗಿತ್ತು. ತಟ್ಟೆಯಲ್ಲಿ ಅನ್ನ, ದಂಟಿನ ಸೊಪ್ಪಿನ ಹುಳಿ ಕಲಸಿ ಕೊಟ್ಟಳು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಅರವತ್ತೆರಡನೆಯ ಕಂತು
ಬದುಕಿನ ಪಲಕುಗಳನ್ನು ಹಾಡಾಗಿಸಿದ ಕವಿ: ಶಿವ ಹಿತ್ತಲಮನಿ ಬರಹ
ಸಂಸಾರದ ಏರಳಿತದ ನೋವು ನಲಿವುಗಳ ಗಳಿಗೆಗಳನ್ನು ವಿವರವಾಗಿ ಹೇಳದೆಯೇ ಎಲ್ಲವನ್ನೂ ಅದೆಷ್ಟು ಸೂಕ್ಷ್ಮವಾಗಿ ತೆರೆದಿಟ್ಟರು ಹೆಚ್.ಎಸ್.ವಿ… ಸಮಯ ಹೋದಂತೆ ಸಂಸಾರ ಬೆಳೆದು, ಮಕ್ಕಳು ಪುಟ್ಟ ಪುಟ್ಟ ಹೆಜ್ಜೆಗಳಿಟ್ಟು ಮನೆ ತುಂಬಾ ಓಡಾಡಿ ತುಂಟಾಟ ಮಾಡುವಾಗ ಕವನ ಕಟ್ಟಿಕೊಟ್ಟಿದ್ದು ಮತ್ತೆ ಹೆಚ್.ಎಸ್.ವಿ.
ಎಚ್. ಎಸ್. ವೆಂಕಟೇಶಮೂರ್ತಿಯವರ ಕವಿತೆಗಳು ಹೇಗೆ ಬದುಕಿನ ಬೇರೆಬೇರೆ ಘಟ್ಟಗಳ ಕನ್ನಡಿಯಾಗಿದ್ದವು ಎಂಬುದರ ಕುರಿತು ಶಿವ ಹಿತ್ತಲಮನಿ ಬರಹ ನಿಮ್ಮ ಓದಿಗೆ
ನನ್ನಜ್ಜಿ ಬದುಕಿರುವುದು ಅವಳ ಹಾಡುಗಳಲ್ಲಿ: ಅನನ್ಯ ತುಷಿರಾ ಬರಹ
ಎಷ್ಟೋ ಬಾರಿ ಸಣ್ಣ ಪುಟ್ಟ ಸಂಗತಿಗಳಿಗೆ ಸೋತು ಹೋದಂತಾಗುತ್ತದೆ. ಏರಿ ನಿಂತ ಎತ್ತರ ಸುಲಭಕ್ಕೆ ದಕ್ಕಿಲ್ಲವಾದರೂ ನಿಭಾಯಿಸುವಲ್ಲಿ ಅಲುಗಾಡಿದಂತಾಗುತ್ತದೆ. ಅಂಥ ಸಂದರ್ಭದಲ್ಲಿ ಹುಟ್ಟುವ ಪ್ರಶ್ನೆಗಳಿಗೆ ಉತ್ತರವಾಗಿ ಒಂದು ಬೆಳಕು ಕಾಣುವುದು ನನ್ನಜ್ಜಿಯ ಬದುಕಿನಿಂದ. ಅವಳ ಹಾಡುಗಳಿಂದ. ಬದುಕು ಕಟ್ಟುವ ಹೊತ್ತಿಗೆ ಸಂಗಾತಿಯ ಸಾವು ಕಂಡೂ ಕೂಡ ಬದುಕ ಹಾಡು ಕಟ್ಟಿದವಳು ನನ್ನಜ್ಜಿ. ‘ನನ್ನಜ್ಜಿಯ ಜೀವನವನ್ನೂ, ಜನಪದ ಹಾಡುಗಳನ್ನೂ ಬಿಡಿಸಿ ಪ್ರತ್ಯೇಕವಾಗಿ ನೋಡಲು ಸಾಧ್ಯವಿಲ್ಲ ನನ್ನಿಂದ’ ಎನ್ನುವಷ್ಟು ಆ ಪದಗಳು ಅವಳ ಹಾದಿಯಲ್ಲಿ ಬೆರೆತು ಹೋಗಿವೆ.
ಅನನ್ಯ ತುಷಿರಾ ಬರಹ ನಿಮ್ಮ ಓದಿಗೆ









