ಅಪರಾಧ ಮತ್ತು ಶಿಕ್ಷೆ : ‘ಪಾಪಿಗಳಿಬ್ಬರು ನಾವು.. ಜೊತೆಯಲಿ ಸಾಗೋಣ..!’
“ಸೋನ್ಯಾ ಆಸೆಗಳೆಲ್ಲ ಸತ್ತವಳ ಹಾಗೆ, ಚಿಂತೆ ಮಾಡುತ್ತ, ನೋವು ತಿನ್ನುತ್ತ, ಕೈ ಹಿಸುಕಿಕೊಳ್ಳುತ್ತ ಮಾತಾಡಿದಳು. ಬಿಳಿಚಿದ್ದ ಅವಳ ಕೆನ್ನೆ ಮತ್ತೆ ಕೆಂಪಾದವು. ಹಿಂಸೆಗೆ ಗುರಿಯಾದವಳ ನೋಟವಿತ್ತು ಅವಳ ಕಣ್ಣಿನಲ್ಲಿ.”
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮುಂದುವರಿದ ಪುಟಗಳು.
ಸಿಂಗರನ ಬಾಲ್ಯಕಾಲದ ಕಥನ: ಹಣ್ಣುಹಣ್ಣಾದ ಅಗಸಗಿತ್ತಿಯ ಕಾರ್ಯನಿಷ್ಠೆ
“ಹೊರೆ ಎಂದಿಗಿಂತಲೂ ತುಂಬಾ ದೊಡ್ಡದಾಗಿತ್ತು. ಆ ಹೆಂಗಸು ತನ್ನ ಭುಜಗಳ ಮೇಲೆ ಅದನ್ನು ಇರಿಸಿಕೊಂಡಾಗ ಅದು ಅವಳನ್ನು ಪೂರ್ಣ ಆವರಿಸಿತು. ಮೊದಲು ಆ ಗಂಟಿನ ಅಡಿಯಲ್ಲಿ ಬಿದ್ದು ಬಿಡುವಳೇನೋ ಎಂಬಂತೆ ತೂಗಾಡಿದಳು. ಆದರೆ ಒಳಗಿನ ಹಠ ಇಲ್ಲ, ನೀನು ಬೀಳುವುದಿಲ್ಲ ಎಂದು ಕರೆದಂತಾಗಿತ್ತು. ಒಂದು ಕತ್ತೆ ತನ್ನ ಹೊರೆಯಿಂದ ಕೆಳಗೆ ಬೀಳಲು ತಾನೇ ಬೇಕಾದರೆ ಪರವಾನಗಿ ಕೊಟ್ಟುಕೊಂಡು..”
ಜನಾರ್ಧನನ ತಲೆಗೆ ಮೆಟ್ಟು ಕಟ್ಟಿದ ಹುಲುಮಾನವ
“ಜನಾರ್ಧನ ರಾಯರ ಮೇಲಿನ ಈ ಹಳೆ ದ್ವೇಷವು ನನ್ನನ್ನು ಶ್ರೀಧರ ಮಾವನ ಜೊತೆ ನಿಲ್ಲುವಂತೆ ಮಾಡಿತ್ತು. ಯಾವಾಗ ಶ್ರೀಧರ ಮಾವನು ಕ್ಲಿನಿಕ್ಕಿಗೆ ಹೋಗುವನೋ ಡಾಕ್ಟರನ್ನು ಹಿಡಿದು ಹೊಡೆಯುವನೋ ಎಂದು ಮನಸ್ಸಿನಲ್ಲೇ ಮಂಡಿಗೆ ತಿನ್ನುತ್ತಿದ್ದೆ. ಇಂಜೆಕ್ಷನ್ನಿನ ವೈಷಮ್ಯ ಒಂದನ್ನು ಬಿಟ್ಟರೆ ನಮಗೆ ಜನಾರ್ಧನ ರಾಯರ ಮೇಲೆ ಮತ್ತಿನ್ಯಾವ ಕೋಪವೂ ಇರಲಿಲ್ಲ. ಬಾಕಿಯಂತೆ ಅವರನ್ನು ಜನಾರ್ಧನ ಮಾವನೆಂದು ಪ್ರೀತಿಯಿಂದಲೇ ಮಾತನಾಡಿಸುತ್ತಿದ್ದೆವು.”
ʻಲೋಕ ಸಿನಿಮಾ ಟಾಕೀಸ್ʼ ನಲ್ಲಿ ಜಪಾನ್ ನ ʻಸ್ಟಿಲ್ ವಾಕಿಂಗ್ʼ ಸಿನಿಮಾ
“ಕಾದಂಬರಿಕಾರನಾಗಬೇಕೆಂದು ಬಯಸಿದ್ದ ಹಿರೊಕುಜು಼ ಕೊರೀಡ ಚಿತ್ರರಂಗಕ್ಕೆ ಪ್ರವೇಶಿಸಿದ್ದು ದೃಶ್ಯ ಮಾಧ್ಯಮದ ಪರಿಕರಗಳನ್ನು ಕುರಿತು ಅವನಿಗಿದ್ದ ಭರವಸೆಯ ಬಲದಿಂದ. ಅವನು ಚಿತ್ರದ ನಿರೂಪಣೆಯಲ್ಲಿ ಓಜು಼ನಿಂದ ಪ್ರಭಾವಿತನಾಗಿದ್ದಾನೆ ಎಂದು ಅವನು ಚಿತ್ರಗಳಿಗೆ ಆರಿಸಿಕೊಂಡಿರುವ ವಸ್ತುಗಳು ಮತ್ತು ಅವನ ನಿರೂಪಣಾ ವಿಧಾನದಿಂದ ತಿಳಿಯಬಹುದು. ಅವನ ಚಿತ್ರಗಳು ಸಾಮಾನ್ಯವಾಗಿ ಮಧ್ಯಮ ವರ್ಗದ ಸಾಂಸಾರಿಕ ವಸ್ತುವನ್ನು ಹೊಂದಿರುತ್ತದೆ.”
ತುರ್ತುಪರಿಸ್ಥಿತಿ, ಜೀತ ಪದ್ಧತಿ, ಹೈದರಾಬಾದಿನ ವಿಚಾರಗಳು…
“ಕಾಂಗ್ರೆಸ್ ಇಬ್ಭಾಗವಾದಮೇಲೆ ವಿಧೇಯತೆಯೇ ಬಡ್ತಿಗೆ ರಾಜಮಾರ್ಗವಾಯಿತು. ಪ್ರತಿಭಟನೆ ತೋರಿದವರು ವೃತ್ತಿಯಲ್ಲಿ ಹಿನ್ನಡೆ ಅನುಭವಿಸುತ್ತಾರೆನ್ನುವ ನಂಬಿಕೆ ಗಟ್ಟಿಯಾಯಿತು. ತುರ್ತು ಪರಿಸ್ಥಿತಿಯಲ್ಲಿ ಈ ಎಲ್ಲವೂ ಮತ್ತೊಂದು ಸ್ತರಕ್ಕೆ ಹೋಯಿತು. ಯಾವುದೇ ಅಧಿಕೃತ ಅಥವಾ ಅನಧಿಕೃತ ಆದೇಶಗಳನ್ನು ಟೀಕಿಸಿವುದು, ಧಿಕ್ಕರಿಸುವುದು – ಉದ್ಯೋಗಕ್ಕೂ ದೇಹಕ್ಕೂ…”
ಅಪರಾಧ ಮತ್ತು ಶಿಕ್ಷೆ : `ನಾನಿನ್ನು ಹೋಗಿ ಬರಲೇ…?’
“ಪುಲ್ಚೇರಿಯ ತನಗೂ ಇಷ್ಟು ಸಂತೋಷವಾದೀತೆಂದು ಅಂದುಕೊಂಡೇ ಇರಲಿಲ್ಲ. ಅಂದು ಬೆಳಗ್ಗೆ ಕೂಡ ಪೀಟರ್ ಪೆಟ್ರೊವಿಚ್ ನ ಜೊತೆ ಸಂಬಂಧ ಕಳೆದುಕೊಳ್ಳುವುದು ಬಲು ದೊಡ್ಡ ಅನಾಹುತವೆಂದೇ ಅವಳಿಗೆ ಅನಿಸಿತ್ತು.”
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮುಂದುವರಿದ ಪುಟಗಳು.
ಕೃಷ್ಣರಂಧ್ರದ ಸುಬ್ರಹ್ಮಣ್ಯನ್ ಚಂದ್ರಶೇಖರರ ಕುರಿತು
ಚಂದ್ರಶೇಖರ್ ಇಂಗ್ಲೆಂಡ್ ಬಿಟ್ಟು ಅಮೆರಿಕ ತಲುಪಿದ ನಂತರವೂ, ಕೆಲವೊಂದು ವೈಜ್ಞಾನಿಕ ಕಾನ್ಫರೆನ್ಸ್ಗಳಲ್ಲಿ, ಎಡ್ಡಿಂಗ್ಟನ್ ಜೊತೆಗೆ ಮುಖಾಮುಖಿಯಾಗುವ ಸಂದರ್ಭಗಳು ಎದುರಾದವು. ಒಮ್ಮೆ ಹೀಗೆ ಎದುರಾದಾಗ, ಎಡ್ಡಿಂಗ್ಟನ್ ತಮ್ಮ ಹಿಂದಿನ ನಡೆವಳಿಕೆಯ ಬಗೆಗೆ, ಚಂದ್ರಶೇಖರ್ ಅವರಲ್ಲಿ ಕ್ಷಮೆ ಬೇಡಿದರಂತೆ. ಆಗ ಚಂದ್ರಶೇಖರ್, “ಹಾಗಿದ್ದರೆ… ನನ್ನ ಅಧ್ಯಯನದ ತೀರ್ಮಾನಗಳನ್ನು ನೀವು ಈಗ ಒಪ್ಪುತ್ತೀರೇ?” ಎಂದು ಕೇಳಿದರಂತೆ.”
ಭಿನ್ನ ಕೃತಿಗಳಿಂದ ಮರುನಿರೂಪಣೆಗೊಂಡ ಸ್ವತಂತ್ರ ಪುಸ್ತಕ
ಭಾರತೀಯ ರಿಸರ್ವ್ ಬ್ಯಾಂಕ್ ನ 21ನೇ ಗವರ್ನರ್ ಆಗಿ ಕಾರ್ಯನಿರ್ವಹಿಸಿರುವ ವೈ. ವಿ. ರೆಡ್ಡಿ ಅವರು ಆರ್ಥ ಶಾಸ್ತ್ರಜ್ಞ ಮತ್ತು ಶಿಕ್ಷಣ ತಜ್ಞರು. ಆಡಳಿತ ವ್ಯವಸ್ಥೆಯ ವಿವಿಧ ಹಂತಗಳಲ್ಲಿ ಸಕ್ರಿಯರಾಗಿದ್ದುದಷ್ಟೇ ಅಲ್ಲದೆ, ದೂರದೃಷ್ಟಿಯೊಂದಿಗೆ ವ್ಯವಸ್ಥೆಯನ್ನು ರೂಪಿಸಬಲ್ಲವರೂ ಹೌದು. ತಮ್ಮ ಆತ್ಮಚರಿತ್ರೆಯನ್ನು ತೆಲುಗಿನಲ್ಲಿಯೂ, ಇಂಗ್ಲಿಷ್ ನಲ್ಲಿಯೂ ಬರೆದರು. ಎರಡು ಪುಸ್ತಕಗಳನ್ನು ಗ್ರಹಿಸಿ, ಕಥೆಗಾರ ಎಂ.ಎಸ್ . ಶ್ರೀರಾಮ್ ಅವರು ಅನುವಾದಿಸಿದ್ದಾರೆ.
ಅಪರಾಧ ಮತ್ತು ಶಿಕ್ಷೆ : `ನನಗಿಂತ ಅಣ್ಣನೇ ಹೆಚ್ಚಾದನೇ?’
“ಪೀಟರ್ ಪೆಟ್ರೊವಿಚ್ ಸಜ್ಜನನ ಹಾಗೆ ಮಹಿಳೆಯರಿಗೆ ವಂದಿಸಿದ. ಅವನ ಮುಖ ಮಾತ್ರ ಮೊದಲಿಗಿಂತ ಎರಡರಷ್ಟು ಗಂಭೀರವಾಗಿತ್ತು. ಅವನಿಗೆ ಸಮಾಧಾನವಿರಲಿಲ್ಲ, ಗೊಂದಲದಲ್ಲಿದ್ದಾನೆ ಅನಿಸುತ್ತಿತ್ತು. ಪುಲ್ಚೇರಿಯ ಅಲೆಕ್ಸಾಂಡ್ರೋವ್ನ ಕೂಡಾ ಮುಜುಗರಪಡುತ್ತಿದ್ದಳು.”
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮುಂದುವರಿದ ಪುಟಗಳು.









