ಎಲ್.ಜಿ. ಮೀರಾ ಬರೆದ ಈ ಭಾನುವಾರದ ಕತೆ
ಮನೆಯಲ್ಲಿನ ಹೆಂಡತಿಯ ಮೇಲೆ ಮುನಿದಿದ್ದ ಮಾಮ ತನಗೆ ಇನ್ನೊಂದು ಮದುವೆ ಮಾಡಬೇಕೆಂದು ತನ್ನ ಹೆಂಡತಿಯನ್ನೇ ಬಲವಂತಿಸಿದ, ನಿರ್ಮಲತ್ತೆಯ ವಿದ್ಯಾರ್ಥಿನಿಯೊಬ್ಬರನ್ನು ಮದುವೆಯಾದ ಕೂಡ. ಅದೂ ಸರಿ ಹೋಗದೆ ಮೂರನೇ ಮದುವೆಯನ್ನೂ ಆಗಿ ಅವಳಿಗೆ ಒಂದು ಮಗುವನ್ನು ಕರುಣಿಸಿದ.
ಡಾ. ಎಲ್.ಜಿ. ಮೀರಾ ಬರೆದ ಈ ಭಾನುವಾರದ ಕತೆ “ಪರದೇಸಿ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ರಮೇಶ್ ಆರ್ ಅಕ್ಕರಕಿ ಕತೆ
ಹಿಂದಿರುಗಿ ಬರುತ್ತಿದ್ದಾಗ ಮರದಿಂದ ಕೆಳಗೆ ದೂರದಲ್ಲಿ ನೆಲದ ಮೇಲೆ ಬಿದ್ದಿದ್ದ ಗೂಡಿನ ಸುತ್ತ ಕಾಗೆಯೊಂದು ಕಾ… ಕಾ… ಎನ್ನುತ್ತ ಸುತ್ತು ಹಾಕುತ್ತಿತ್ತು. ಹತ್ತಿರಕ್ಕೆ ಹೋಗಿ ನೋಡಿದರೆ ಗೂಡಿಂದ ಹೊರಗೆ ಬಿದ್ದು ಒಡೆದ ಮೊಟ್ಟೆಯಿಂದ ಮಾಂಸದ ಮುದ್ದೆಯಂತಿದ್ದ ಮರಿಯೊಂದು ಹೊರಬಿದ್ದಿತ್ತು.
ನಾನು ಮೆಚ್ಚಿದ ನನ್ನ ಕತೆಯ ಸರಣಿಯಲ್ಲಿ ರಮೇಶ್ ಆರ್ ಅಕ್ಕರಕಿ ಬರೆದ ಕತೆ
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ರೇಣುಕಾ ಹೆಳವರ ಕತೆ
ಅಷ್ಟೊಂದು ಪ್ರೀತಿಸಿ ನನಗೋಸ್ಕರ ಸಾಯಲೂ ಕೂಡ ಮುಂದಾಗಿದ್ದ ಮಹೇಶ್ ಇವನೇನಾ ಎಂದು ಗಂಗಾ ದಂಗುಬಡಿದು ಹೋದಳು. ಗಂಗಾ ಹಾಸ್ಟೆಲ್ನಲ್ಲಿ ಓದಿದ ಹುಡುಗಿ, ಈ ಜಗತ್ತಿನ ಎಲ್ಲ ಆಯಾಮಗಳ ಅರಿವು ಕೂಡ ಅವಳಿಗಿತ್ತು. ಆದರೂ ಅವನ ಮಾತಿನ ಬಾಣ ಅವಳ ಎದೆಯಲ್ಲಿ ಹೊಕ್ಕು ರಕ್ತಕಾರುವಂತೆ ಚುಚ್ಚುತ್ತಿತ್ತು. “ಮಹೇಶ ನಿಜಕ್ಕೂ ನನ್ನ ಪ್ರೀತಿಸಿದ್ನಾ..? ಅಥವಾ ನನ್ನ ರೂಪ ಪಡಿಯೋಕೆ ನಾಟ್ಕಾ ಆಡಿದ್ನಾ?
ನಾನು ಮೆಚ್ಚಿದ ನನ್ನ ಕತೆಯ ಸರಣಿಯಲ್ಲಿ ರೇಣುಕಾ ಹೆಳವರ ಕತೆ “ಗಿಳಿಯು ಪಂಜರದೊಳಿಲ್ಲ”
ಮಯೂರ ಬಿ ಮಸೂತಿ ಬರೆದ ಈ ಭಾನುವಾರದ ಕತೆ
ತಲೆಗೆ ಮಂಕು ಬಡಿದಂತಾಯಿತು, ಆದರೂ ಚೇತರಿಸಿಕೊಂಡು ಮನೆ ತಲುಪಿದೆ. ಶಶಿ, ಮಕ್ಳು ಕಾಯ್ತಾ ಇದಾರೆ, ಆಗ್ಲೇ ತುಂಬಾ ಹೊತ್ತಾಯ್ತು, ಟೈಮ್ ನೋಡಿ ೧೦:೩೦, ನಂಗು ಜೋರಾಗಿ ನಿದ್ದೆ ಬರ್ತಾ ಇದೆ. ಬೇಗ ಬನ್ನಿ ಊಟ ಮಾಡೋಣವೆಂದಳು ನಿಶಾ. ನಾನು ಏನು ಮಾತಾಡದೆ ಕೈಯಲ್ಲಿದ್ದ ಪೇಪರ್ ಬ್ಯಾಗ್ ಅನ್ನು ಅವಳ ಕೈಗೆ ನೀಡಿದೆ. ಬಿರಿಯಾನಿ ತಿನ್ನಲು ಶುರು ಮಾಡಿದೆವು. ಯಾಕೆ ಶಶಿ ಏನು ಮಾತಾಡುತ್ತಿಲ್ಲ?
ಮಯೂರ ಬಿ ಮಸೂತಿ ಬರೆದ ಈ ಭಾನುವಾರದ ಕತೆ “ಕಬಾಬ್ ಮೆ ಹಡ್ಡಿ”
ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ಭಾನುವಾರದ ಕತೆ
“ಹಾಗೆ ಹೇಳಿಬಿಟ್ಟರೆ ನಿನ್ನನ್ನೇ ನಂಬಿಕೊಂಡ ನನ್ನ ಗತಿ ಏನು? ನಿನಗೆ ಗೊತ್ತಿರಲಿ, ನಿನ್ನೆ ಹೋಟೆಲ್ನಲ್ಲಿ ನಡೆದದ್ದೆಲ್ಲ ವೀಡಿಯೋ ರೆಕಾರ್ಡ್ ಆಗಿದೆ. ಅದು ನನ್ನ ಮೊಬೈಲ್ನಲ್ಲೇ ಇದೆ. ನೀನೀಗ ನನ್ನ ಮಾತಿಗೆ ಒಪ್ಪದಿದ್ದರೆ ನಾನೇನು ಮಾಡಬಹುದು, ಅದು ನಿನಗೂ ಗೊತ್ತಿದೆ……”
ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಕತೆ “ವಾಟ್ಸಾಪ್ ಚಾಟ್” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ರಾಜೀವ ನಾರಾಯಣ ನಾಯಕ ಕತೆ
ಆಕಾಶದ ಒಂದು ಭಾಗದಲ್ಲಿ ಮೋಡ ದಟೈಸಿ ಒಂದೆರಡು ಹನಿ ಕೂಡ ಉದುರಿತು! ಉಸುಕಿನಲ್ಲಿ ನಡೆದಾಡಿದೆ. ಮಳೆ ಹನಿ ಬೀಸುವ ಗಾಳಿಯನ್ನು ತಂಪು ಮಾಡಿದ್ದರಿಂದ ತುಸು ಹಿತವೆನಿಸಿತು. ಆ ತುದಿ ಮುಟ್ಟುವಷ್ಟರಲ್ಲಿ ಇಡೀ ಮೈ ಹಸಿಯಾಗಿತ್ತು. ಈ ನಡುವೆ ಮೋಡಗಳು ಕರಗಿ ಆಕಾಶ ಶುಭ್ರಗೊಂಡು, ನಕ್ಷತ್ರಗಳು ಕಾಣಿಸಿಕೊಂಡವು.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ರಾಜೀವ ನಾರಾಯಣ ನಾಯಕ ಕತೆ “ಮಣ್ಣಿನ ದೋಣಿ” ನಿಮ್ಮ ಓದಿಗೆ
ವಸಂತಕುಮಾರ್ ಕಲ್ಯಾಣಿ ಬರೆದ ಈ ಭಾನುವಾರದ ಕತೆ
ಇದು ಪಂಚಾಯಿತಿ ಚುನಾವಣೆಯಂತಲ್ಲ ಹಾಗಾಗಿ ಜನರು ಬುದ್ಧಿವಂತರಾಗಿದ್ದರು(?) ಹೆಚ್ಚು ಕೇಳುತ್ತಿದ್ದರು. ಆದರೂ ಒಂದೆರಡು ಕೈ ಬದಲಾಗಿ ಹಣ ಸಿಗುವಾಗ ಬಹಳ ಹೆಚ್ಚಿಗೇನೂ ಸಿಗುತ್ತಿರಲಿಲ್ಲ. ಈ ವಿಷಯದಲ್ಲಿ ಉತ್ತಮ್ ಈಗ ಸಾಕಷ್ಟು ಪಳಗಿದ್ದ. ಹೆಚ್ಚಿನ ಜನರನ್ನು ಸೇರಿಸುತ್ತಿದ್ದ. ಅದಕ್ಕಿಂತ ಹೆಚ್ಚು ತೋರಿಸುತ್ತಿದ್ದ. ಬೇರೆ ಮೂಲಗಳಿಂದ ಹಣ ಪೀಕುತ್ತಿದ್ದ. ಬೇರೆ ಮನೆಯಲ್ಲಿದ್ದರೂ ರಾಮ್, ಲಕ್ಷ್ಮಣ್ ಭಾವನ ಜೊತೆಗೆ ಕೈಜೋಡಿಸಿ ಚುನಾವಣೆಗೆ ದುಡಿಯುತ್ತಿದ್ದರು..
ವಸಂತಕುಮಾರ್ ಕಲ್ಯಾಣಿ ಬರೆದ ಈ ಭಾನುವಾರದ ಕತೆ “ಚದುರಂಗ”
ಆನಂದ್ ಗೋಪಾಲ್ ಬರೆದ ಈ ಭಾನುವಾರದ ಕತೆ “ಆಟ”
ಸೀತಮ್ಮನ ಗೊಣಗಾಟ ನಿಲ್ಲುವ ಲಕ್ಷಣ ಕಾಣಲಿಲ್ಲ. ಒಂದೊಮ್ಮೆ ಈಕೆ ಸತ್ತು ಹೋಗಬಾರದಿತ್ತ ಎಂಬಷ್ಟು ರೂಪೇಶ್ ಜಿಗುಪ್ಸೆ ಪಟ್ಟುಕೊಂಡ. ನಂದಿನಿ ಒಂದು ನಾಟಕದ ವರ್ಕ್ಷಾಪಿಗೆ ರಿಸೋರ್ಸ್ ಪರ್ಸನ್ ಆಗಿ ಮುಂಬಯಿಗೆ ಹೋದವಳು ವಾಪಸ್ ಬರಲಿಲ್ಲ! ಕೇಳಿದರೆ ಅವಳು ಏನು ಹೇಳ್ತಾಳೆ ಅಂತ ರೂಪೇಶ್ಗೆ ಗೊತ್ತು. ಅಮ್ಮನಿಗೆ ಖುಷಿಯಾಗಿರಬೇಕು. ಈಕೆ ಒಮ್ಮೆ ಸಾಯಬಾರದಾ ಅಂತ ಅವನು ಮತ್ತೆ ಮತ್ತೆ ಸ್ವಗತದಂತೆ ಹೇಳಿಕೊಂಡ.
ಆನಂದ್ ಗೋಪಾಲ್ ಬರೆದ ಈ ಭಾನುವಾರದ ಕತೆ “ಆಟ” ನಿಮ್ಮ ಓದಿಗೆ
ಚಂದ್ರಶೇಖರ್ ಡಿ. ಆರ್. ಬರೆದ ಈ ಭಾನುವಾರದ ಕತೆ
ಅಮ್ಮ ಹೋಗಿ ಎರಡು ತಿಂಗಳಾಗಿದೆ. ಕ್ಯಾನ್ಸರ್ ಟ್ರೀಟ್ಮೆಂಟ್ ಅವಳನ್ನು ಆರೇಳು ತಿಂಗಳು ಬಹುವಾಗೆ ಕಾಡಿಸಿತ್ತು. ಅವಳು ಹೋದಮೇಲೆ ಅಪ್ಪ ಬಹು ಕೃಶವಾಗಿದ್ದಾನೆ. ಅವಳು ಹೋದಮೇಲೆ ಎಷ್ಟೋ ಮಾತುಗಳು ಅವಳಿಗೆ ನಾ ಹೇಳಿಲ್ಲ ಎನಿಸಿ ನೊಂದುಕೊಳ್ಳುತ್ತೇನೆ. ಅವಳಿಂದ ಕೇಳುವುದು ತುಂಬಾ ಇದೆ ಎನಿಸಿ ನಿದ್ದೆ ಬರದೇ ಬೆಳಕಾಕೋವರೆಗು ಒದ್ದಾಡಿದ್ದು ಇದೆ.
ಚಂದ್ರಶೇಖರ್ ಡಿ ಆರ್ ಬರೆದ ಈ ಭಾನುವಾರದ ಕತೆ “ಹಲೋ…” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ









