Advertisement

ಸಾಹಿತ್ಯ

ಓಬಿರಾಯನ ಕಾಲದ ಕಥಾಸರಣಿಯಲ್ಲಿ ಕೆ.ಕೆ. ಶೆಟ್ಟಿ ಬರೆದ ಕತೆ

ಓಬಿರಾಯನ ಕಾಲದ ಕಥಾಸರಣಿಯಲ್ಲಿ ಕೆ.ಕೆ. ಶೆಟ್ಟಿ ಬರೆದ ಕತೆ

“ಸ್ತ್ರೀಯರೆಂದರೆ ಆಚಾರ್ಯರಿಗೆ ವಿಶೇಷ ಪಕ್ಷಪಾತ. ಕೀರ್ತನೆ ಮುಗಿದ ಕೂಡಲೆ ಸ್ವರಾಜ್ಯಫಂಡಿಗೆ ಹಣ ಆಭರಣ ಕೂಡಿಸಲು ಆಚಾರ್ಯರೇ ತೊಡಗುತ್ತಿದ್ದರು. ಸ್ತ್ರೀಯರು ತಮ್ಮ ಆಭರಣಗಳನ್ನು ಕೊಡಬೇಕೆಂದು ಪ್ರತ್ಯೇಕವಾಗಿ ಉತ್ತೇಜಿಸುತ್ತಿದ್ದರು. ಆಚಾರ್ಯರ ಉತ್ತೇಜಕ ವಾಕ್ಸರಣಿಯ ಬಲೆಯಲ್ಲಿ ಸಿಕ್ಕಿದ ಎಂತಹ ಲೋಭಿಯ ಮನಸ್ಸೂ ಒಮ್ಮೆಗೆ ತಲ್ಲಣವಾಗುತ್ತಿತ್ತು. ಹಣ ಮಾತ್ರವಲ್ಲದೆ ಉಂಗುರ, ಬಳೆ, ಸರ, ಒಂಟಿ ಮೊದಲಾದ ಆಭರಣಗಳೂ…”

read more
ವಿ.ಆರ್. ಕಾರ್ಪೆಂಟರ್ ಕಥಾ ಸಂಕಲನ ಕುರಿತು ಶ್ರೀದೇವಿ ಕೆರೆಮನೆ ಬರಹ

ವಿ.ಆರ್. ಕಾರ್ಪೆಂಟರ್ ಕಥಾ ಸಂಕಲನ ಕುರಿತು ಶ್ರೀದೇವಿ ಕೆರೆಮನೆ ಬರಹ

“ಬ್ರಾಹ್ಮಿನ್ ಕೆಫೆ ಎನ್ನುವ ಪಿಡಿಎಫ್ ಒಂದು ಝಗ್ಗನೆ ಮೊಬೈಲ್ ಗೆ ಬಂದು ಕುಳಿತಾಗ ಆ ಹೆಸರು ಆಶ್ಚರ್ಯ ಹುಟ್ಟಿಸಿರಲಿಲ್ಲ. ಯಾಕೆಂದರೆ ಎಷ್ಟೋ ದಿನಗಳಿಂದ ಗೆಳೆಯ ವಿ ಆರ್ ಕಾರ್ಪೆಂಟರ್ ಈ ಹೆಸರನ್ನು ಹೇಳುತ್ತಲೇ ಇದ್ದ. ಕೆಲವೊಮ್ಮೆ ಅಲ್ಲಿನ ಕತೆಗಳ ಒಂದಿಷ್ಟು ಎಳೆಗಳನ್ನೂ ಕೂಡ. ಆದರೆ ಕತೆಗಳು ಪೂರ್ಣಗೊಂಡ ನಂತರ ಅದು ಪಡೆದುಕೊಂಡ ತಿರುವುಗಳನ್ನು ಕಂಡಾಗ ಮೈ ಜುಂ ಎನಿಸುವಂತಾಗುತ್ತದೆ.”

read more
ಬೆಂಗಳೂರಲ್ಲಿ ಕಳೆದುಹೋದ ಸಿಂಹ: ಶಂಕರಪ್ಪ ಕೆ.ಪಿ. ಬರೆದ ಕತೆ

ಬೆಂಗಳೂರಲ್ಲಿ ಕಳೆದುಹೋದ ಸಿಂಹ: ಶಂಕರಪ್ಪ ಕೆ.ಪಿ. ಬರೆದ ಕತೆ

“ದೂರದಲ್ಲಿ ನಾಯಿಗಳು ಬೊಗಳುತ್ತಿದ್ದವು. ಕಾಡು ಸೇರಿಕೊಂಡ ಮೇಲೆ ಬೇಟೆ ಸಿಗದೆ ಹಸಿದಿದ್ದ ಗಡ್ದುಲಿಯು ಕೆಂಪಾಲಗನ ಆಡು ಕುರಿಗಳ ಜಾಡಿಡಿದು ಜೋಪಡಿಯ ಕೊಟ್ಟಿಗೆಯ ಬಳಿ ಬಂದು ನಿಂತಿತ್ತು. ಆ ಕಳ್ಳ ಹೆಜ್ಜೆಗಳನಿಕ್ಕುತ್ತಾ ಒಂದು ಕೊಟ್ಟಿಗೆಯ ಮುಂದೆ ಕಟ್ಟಿದ್ದ ಕರುವಿನ ಮೇಲೆ ಬಿದ್ದು ಗ್ವಾಕೆಗೆ ಬಾಯಾಕಿ ಅಲುಮಾಕಿಬಿಡ್ತು. ಆಡು ಕುರಿಗಳು ಒಂದೇ ಸಮನೆ ಬ್ಯಾಗುಡುತ್ತಿದ್ದವು.”

read more
ಫಕೀರ ಕಾವ್ಯ ಸಂಕಲನಕ್ಕೆ ಡಾ. ಮಲರ್ ವಿಳಿ  ಬರೆದ ಮುನ್ನುಡಿ

ಫಕೀರ ಕಾವ್ಯ ಸಂಕಲನಕ್ಕೆ ಡಾ. ಮಲರ್ ವಿಳಿ ಬರೆದ ಮುನ್ನುಡಿ

“‘ಸಾವೆಂಬುದು ನಿರಾಳ ಮೌನ’ ಕವಿತೆಯಲ್ಲಿ ಒಬ್ಬ ವ್ಯಕ್ತಿಯ ಸಾವಿನ ನಂತರದ ನೆನಪುಗಳು ಹೇಗೆಲ್ಲ ನಮ್ಮನ್ನು ಕಾಡುತ್ತವೆ, ಇಲ್ಲಿಯ ತದ್ರೂಪ ಚಿತ್ರಣಗಳು ನಮ್ಮ ಮನಸ್ಸನ್ನು ತಟ್ಟುತ್ತವೆ, ಎಚ್ಚರಿಸುತ್ತವೆ. ತಾತ್ತ್ವಿಕತೆಯನ್ನು ಬೋಧಿಸುತ್ತವೆ, ನಶ್ವರತೆಯ ಸಂದೇಶವನ್ನು ಸಾರುತ್ತಾ ನೆನಪೊಂದೇ ಉಳಿಯುವುದು ಎಂಬ ಚಿತ್ರಣವನ್ನು ಕಣ್ಣಿಗೆ ಕಟ್ಟಿದಂತೆ ಶ್ರೀಧರರು ರಚಿಸಿದ್ದಾರೆ. `ನಗುವಿನ ಬೀಜಗಳು ಮಾರಾಟಕ್ಕಿವೆ’-ಇತ್ತೀಚೆಗೆ ನಗು…”

read more
ಪದಕುಸಿಯೆ …: ಶ್ರೀಹರ್ಷ ಸಾಲೀಮಠ ಬರೆದ ಈ ವಾರದ ಕತೆ

ಪದಕುಸಿಯೆ …: ಶ್ರೀಹರ್ಷ ಸಾಲೀಮಠ ಬರೆದ ಈ ವಾರದ ಕತೆ

“ಹೀಗೆ ಕಾಯುತ್ತಿದ್ದ ಮೂರನೆ ದಿನ ನಮ್ಮ ದೋಣಿ ತಳ ಮುರಿದು ಮುಳುಗತೊಡಗಿತು. ನಾವು ಅಷ್ಟರೊಳಗೆ ಅಪಾಯದ ಗಂಟೆ ಮೊಳಗಿಸಿ ಸಮುದ್ರಕ್ಕೆ ಹಾರಿಕೊಂಡೆವು. ನಮ್ಮ ಕರೆಯನ್ನು ಕೇಳಿದ ಮಿಲಿಟರಿ ದೋಣಿಯೊಂದು ಬಂದು ನಮ್ಮಲ್ಲಿ ಸಾಧ್ಯವಾದವರನ್ನೆಲ್ಲ ರಕ್ಷಿಸಿತು. ಹೊರಬಂದು ಎಣಿಸಿಕೊಂಡು ನೋಡಿದಾಗ ಹನ್ನೆರಡು ಜನ ಮುಳುಗಿಹೋಗಿದ್ದಾರೆ ಅಂತ ತಿಳಿಯಿತು. ನಮ್ಮ ಹಾಗೆ ಸಾವಿರ ಸಾವಿರ ಸಂಖ್ಯೆಯಲ್ಲಿ ಬರುವ ಜನರಲ್ಲಿ ಒಂದು ಪಾಲನ್ನು ತನ್ನ ಬಲಿಯಾಗಿ ಪಡೆದುಕೊಳ್ಳುವ ಕ್ರಿಶ್ಚಿಯನ್…”

read more
ಗಿರೀಶ್ ಜಕಾಪುರೆ ಪುಸ್ತಕದ ಕುರಿತು ಶ್ರೀದೇವಿ ಕೆರೆಮನೆ ಬರಹ

ಗಿರೀಶ್ ಜಕಾಪುರೆ ಪುಸ್ತಕದ ಕುರಿತು ಶ್ರೀದೇವಿ ಕೆರೆಮನೆ ಬರಹ

“ಒಂದು ಮುಕ್ತ ಛಂದದ ಕಾವ್ಯವನ್ನು ಬರೆಯುವಾಗಲೇ ಪ್ರತಿ ಸಾಲಿನ ನವಿರಾದ ಹೊಂದಾಣಿಕೆಗೆ ಅದೆಷ್ಟು ಕಷ್ಟಪಡಬೇಕಾಗುತ್ತದೆ ಎಂಬುದು ಕವಿತೆಯನ್ನು ತೀವ್ರವಾಗಿ ಅನುಭವಿಸುತ್ತ ಬರೆಯುವ ಎಲ್ಲರಿಗೂ ಗೊತ್ತು. ಗಜಲ್ ಎಂದರೆ ಅದರ ಪ್ರತಿ ಸಾಲನ್ನೂ ಒಂದೇ ಮಾತ್ರೆಗೆ ಅಳವಡಿಸಬೇಕು. ಕನ್ನಡದಲ್ಲಿ ಮೊಟ್ಟಮೊದಲ ಸಲ ಗಜಲ್ ಅನ್ನು ಅದರ ಮೂಲ ಛಂದಸ್ಸಿನಲ್ಲಿ ಹಿಡಿದಿಡುವ ಕೆಲಸವನ್ನು ಗಿರೀಶ್ ಜಕಾಪುರೆ ಮಾಡಿದ್ದಾರೆ.”

read more
ಓಬಿರಾಯನಕಾಲದ ಕಥಾ ಸರಣಿಯಲ್ಲಿ ಎಸ್. ಯು. ಪಣಿಯಾಡಿ ಬರೆದ ಕತೆ

ಓಬಿರಾಯನಕಾಲದ ಕಥಾ ಸರಣಿಯಲ್ಲಿ ಎಸ್. ಯು. ಪಣಿಯಾಡಿ ಬರೆದ ಕತೆ

“ನನ್ನ ಜೀವ ಈಗಲೋ ಮತ್ತೋ ಎಂಬಂತೆ ಇದೆ. ಒಂದು ವೇಳೆ ನಾನು ಬದುಕಿದ್ದರೆ ಎಂದಾದರೂ ಈ ಜನ್ಮದಲ್ಲಿ ನಿನಗೆ ದರ್ಶನ ಕೊಡದೆ ಹೋಗಲಾರೆ. ಆದರೆ ನಿನ್ನ ಮುಂದಿನ ಸ್ಥಿತಿ ಏನೆಂದು ನಿಶ್ಚಯ ಮಾಡಿಕೋ. ನೀನು ಚಿಕ್ಕವಳಾದುದರಿಂದ ಪುಸ್ತಕದಲ್ಲೋದಿದ ಅಂಶಗಳನ್ನು ಗಿಳಿ ಹೇಳಿದಂತೆ ಹೇಳುತ್ತೀ. ದೊಡ್ಡದೊಡ್ಡ ಯೋಚನೆಗಳು ಯೋಚನೆಗಳೇ. ಅವನ್ನು ಅನುಸರಿಸಲು ಬಹಳ ಕಷ್ಟವಿದೆ.”

read more
ಭಾರತಿ ಹೆಗಡೆ ಪುಸ್ತಕಕ್ಕೆ ಎಂ.ಎಸ್. ಶ್ರೀರಾಮ್ ಬರೆದ ಮುನ್ನುಡಿ

ಭಾರತಿ ಹೆಗಡೆ ಪುಸ್ತಕಕ್ಕೆ ಎಂ.ಎಸ್. ಶ್ರೀರಾಮ್ ಬರೆದ ಮುನ್ನುಡಿ

“ಈ ಪಾತ್ರಗಳು ನಾರ್ಮಲ್ ಅಲ್ಲವಾದ್ದರಿಂದ ಅವರು ಮಾಡುವ ಕ್ರಿಯೆ, ಹೇಳುವ ಮಾತು–ಸೂಚಿಸುವ ವಿಚಾರ ಎಲ್ಲವೂ ಅಸಾಧಾರಣವಾಗಿರುತ್ತವೆ. ಒಂದು ಚೌಕಟ್ಟಿನೊಳಗೆ ಪ್ರತಿಭಟಿಸಲು ಭಾರತಿ, ಸಂಸಾರ, ಅದರ ಸಂಪ್ರದಾಯ ಮತ್ತು ಕಟ್ಟುಪಾಡುಗಳನ್ನು ನಿಭಾಯಿಸುತ್ತಲೇ ಈ ರೀತಿಯ ಪಾತ್ರಗಳಿಂದ ಚೌಕಟ್ಟಿನ ಸೀಮೋಲ್ಲಂಘನ ಮಾಡುತ್ತಾರೆ. ಒಂದು ಮಟ್ಟದಲ್ಲಿ ಈ ಪಾತ್ರಗಳು ಅತಿರೇಕದ ಪಾತ್ರಗಳು…”

read more
ಶ್ರೀಮತಿ ಬ್ರಿಡ್ಜ್ ಳ ಸುಂದರ ಜಗತ್ತು: ಆರ್ ವಿಜಯರಾಘವನ್  ಅನುವಾದಿಸಿದ ಎವನ್ ಎಸ್ ಕಾನಲ್ ಬರೆದ ಕತೆ

ಶ್ರೀಮತಿ ಬ್ರಿಡ್ಜ್ ಳ ಸುಂದರ ಜಗತ್ತು: ಆರ್ ವಿಜಯರಾಘವನ್ ಅನುವಾದಿಸಿದ ಎವನ್ ಎಸ್ ಕಾನಲ್ ಬರೆದ ಕತೆ

“ಬೀದಿಯಲ್ಲಿ ವಾಹನ ನಿಲುಗಡೆ ಮಾಡುವಾಗ ಜನರು ನೋಡುವ ಬಗೆ ಅವಳನ್ನು ಮುಜುಗರಕ್ಕೀಡುಮಾಡುತ್ತಿತ್ತು. ಆದರೂ ಯಾವಾಗಲೂ ಬಸ್ ನಿಲ್ದಾಣದಲ್ಲಿ ಯಾರೋ ಒಬ್ಬರು ಅವಳನ್ನೇ ಗಮನಿಸುತ್ತಾ ಇದ್ದಾರೆ ಎಂಬಂತೆ ಅಥವಾ ಏನೂ ಮಾಡದೆ ಲೌಂಜಿನ ಪ್ರವೇಶ ದ್ವಾರದಲ್ಲಿ ಇದಲ್ಲದೆ ಬೇರೆ ಏನೂ ಇಲ್ಲವೆಂಬಂತೆ ಅವಳು ಸ್ಟಿಯರಿಂಗ್ ಚಕ್ರದೊಂದಿಗೆ ಹೆಣಗಾಡುತ್ತಿರುವುದನ್ನು ನೋಡುತ್ತಾ ಒರಗಿದ್ದಾರೆ..”

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ