ಶ್ರೀಧರ ಬಳಗಾರ ಕಾದಂಬರಿಗೆ ಓ. ಎಲ್. ನಾಗಭೂಷಣ ಸ್ವಾಮಿ ಮುನ್ನುಡಿ
“ಚರಿತ್ರೆಗೆ ಸಲ್ಲದ ನಿರೂಪಕರ ಧ್ವನಿಗಳಲ್ಲಿ ನಿರೂಪಣೆ ಸಾಗುವುದೂ ಇಂಥ ಅನಿಸಿಕೆಗೆ ಒಂದಿಷ್ಟು ಬಲ ಕೊಡುತ್ತದೆ. ಆದರೆ ಸುಬ್ರಾಯಪ್ಪ ಉಗ್ರಾಣಿ ಶಂಕ್ರ, ಅಂತೆ, ಲಕ್ಷ್ಮಿ, ಬಂಟ್ ಮಾಸ್ತರ್, ತಂಗ, ನರಸಿಂಹ, ಗಪ್ಪತಿ ಈ ಎಲ್ಲ ನಿರೂಪಕರು ಹೇಳಿದ್ದನ್ನು ಬರೆಯುವ ಲೇಖಕ ನಿರೂಪಕ, ಅವನು ಬರೆದದ್ದರ ಮೊದಲ ಓದುಗಳಾಗುವ ಲೇಖಕನ ಪತ್ನಿ ಇವರೆಲ್ಲ ಸುಬ್ರಾಯಪ್ಪನ ಬದುಕಿನ ಒಂದೊಂದು ಪ್ರಮುಖ ಘಟ್ಟಗಳನ್ನು…”
ಓಬಿರಾಯನ ಕಾಲದ ಕಥಾಸರಣಿಯಲ್ಲಿ ಎಸ್. ವೆಂಕಟರಾಜ ಬರೆದ ಕತೆ
“ಜಮೀನ್ದಾರರ ಮಗನಿಗೆ ಆರು ತಿಂಗಳ ಗಾಂಧಿ ಶಿಕ್ಷೆಯಾಯಿತೆಂದು ಒಂದು ಕ್ಷಣದೊಳಗೆ ಊರಿಗೆ ಊರೇ ಮಾತಾಡತೊಡಗಿತು. ಬೆಂಗಳೂರಿನಿಂದ ರಾಯರಿಗೆ ಬೇಕಾದವರು ಕೊಟ್ಟ ತಂತಿ ಆಗತಾನೇ ಬಂದಿತೆಂದು ಜನರು ಆಡಿಕೊಂಡರು. ಅದನ್ನು ಕೇಳಿ ಕೇಶವಯ್ಯನವರು ತಲೆದೂಗಿ ತನ್ನಷ್ಟಕ್ಕೆ ನುಡಿದರು : ಪ್ರವಾಹದಲ್ಲಿ ಯಾವುದು ತಾನೇ ಕೊಚ್ಚಿಹೋಗುವುದಿಲ್ಲ? ಅದಕ್ಕಾಗಿ ಅಳಬೇಕಾಗಿಲ್ಲ. ಹೆಮ್ಮೆ ಪಡಬೇಕು.”
ಆನಂದ ಬೋವಿ ಕಥಾಸಂಕಲನದ ಕುರಿತು ಶ್ರೀದೇವಿ ಕೆರೆಮನೆ ಬರಹ
“ಜನ ಲಾಭದ ಆಸೆಗೆ ಬಿದ್ದ ನಂತರ ಸುಣ್ಣದ ಬೆಟ್ಟವನ್ನೇ ಬೇಕಾಬಿಟ್ಟಿ ಅಗೆದು ಲೋಡುಗಟ್ಟಲೆ ತುಂಬಿಸಿ ಪೇಂಟ್ ಕಾರಖಾನೆಗೆ ಸಾಗಿಸಿ ನಂತರ ಕೈಸುಟ್ಟುಕೊಂಡಿದ್ದೂ ಅಲ್ಲದೇ, ಸರಕಾರಿ ಬೆಟ್ಟವನ್ನು ಅಗೆದದ್ದಕ್ಕಾಗಿ ಕೇಸನ್ನೂ ಎದುರಿಸಬೇಕಾಗುತ್ತದೆ. ಕೊನೆಗೆ ಎಲೆ ಅಡಿಕೆಗೆ ಹಾಕಿಕೊಳ್ಳುವ ಸುಣ್ಣಕ್ಕೂ ಪರದಾಡುವ ಸ್ಥಿತಿ ಬಂದು ಬಿಡುವುದು ಕಣ್ಣಲ್ಲಿ ನೀರು ತರಿಸುತ್ತದೆ.”
ಶಾಲೂ: ಅಂಜನಾ ಗಾಂವ್ಕರ್ ಬರೆದ ಕತೆ
“ಗಂಗಜ್ಜಿಯ ಮಗಳು ಹಳ್ಳಿಯ ಕೆಲಸಕ್ಕೆ ಬೀಳಬಾರದೆಂದು ನಗರದ ವರನ ಹುಡುಕಿ ಕೊಟ್ಟಿದ್ದಳು. ಇನ್ನು ಮಗನಿಗೆ ತಂದ ಹೆಣ್ಣು ಶಾಲು. ಅತ್ತೆಗೆ ಒಂದು ಮಾತೂ ಆಡದವಳು. ಅವಳಾಯಿತು, ಅವಳ ಕೆಲಸವಾಗಿತ್ತು. ಮಗಳಿಗೆ ಹೋಲಿಸಿ ನೋಡುತ್ತಿದ್ದರು. ‘ಸುಜಲಾಗೆ ಎಷ್ಟು ಕಷ್ಟ, ಅತ್ತೆ ಮಾತು ಎದುರಿಸಬೇಕು. ಕೆಲಸಕ್ಕೆ ಹೋಗುತ್ತಾಳೆ. ಜಾಣೆ ಅವಳು.”
ಅನುಪಮಾ ಪ್ರಸಾದ್ ಕಾದಂಬರಿಗೆ ನರೇಂದ್ರ ಪೈ ಬರೆದ ಮುನ್ನುಡಿ
“ಮೂರು ಭಾಗಗಳಲ್ಲಿರುವ ಕಾದಂಬರಿಯ ಅತ್ಯಂತ ಸುಂದರ ಮತ್ತು ಪ್ರಧಾನ ಎನ್ನಿಸುವ ಘಟ್ಟ ಮುಕ್ತಾತಾಯಿಯ ಪ್ರವೇಶದೊಂದಿಗೆ ತೊಡಗುತ್ತದೆ, ಈಕೆ ಒಂದು ಬಗೆಯಲ್ಲಿ ಮಹಾತಾಯಿ. ಧಾರವಾಡದ ಕುಲಕರ್ಣಿ ಮಾಸ್ತರರ ಮಗಳಾಗಿ ಸಂಗೀತಕ್ಕೆ ತನ್ನನ್ನೇ ತೆತ್ತುಕೊಂಡ ಹುಡುಗಿ ಮುಂದೆ ಜಯವಂತನಿಗಾಗಿ ತೆರೆಮರೆಗೆ ಸರಿದು ನಿಲ್ಲುತ್ತಾಳೆ. ಆದರೂ ಅವಳ ಬದುಕು ಸಂಪನ್ನಗೊಳ್ಳುವುದು ಸಂಗೀತದ ಸಾನ್ನಿಧ್ಯದಲ್ಲೇ..”
ಪ್ರೋಗ್ರೆಸ್: ಎಂ.ಜಿ. ಶುಭಮಂಗಳ ಅನುವಾದಿಸಿದ ಪೆದ್ದಿಂಟಿ ಅಶೋಕ್ ಕುಮಾರ್ ಬರೆದ ಕತೆ
“‘ಪ್ರಾಮಿಸ್ ಅಪ್ಪಾ.. ತಪ್ಪದೆ ಒಳ್ಳೆ ಮಾರ್ಕ್ಸ್ ತೆಗೆದುಕೊಳ್ಳುತ್ತೇನೆ. ಪ್ರತಿದಿನ ಹನ್ನೆರಡು ಗಂಟೆವರೆಗೂ ಓದುತ್ತೇನೆ. ಬೆಳಿಗ್ಗೆ ಎಬ್ಬಿಸಿದ ತಕ್ಷಣ ಏಳುತ್ತೇನೆ. ತಾತನ ಮನೆಗೆ ಹೋಗುವುದಿಲ್ಲ. ತಮ್ಮನೊಂದಿಗೆ ಆಟವಾಡುವುದಿಲ್ಲ..ʼ ಇನ್ನೂ ಏನೋ ಹೇಳುತ್ತಿದ್ದಾಳೆ.”
ನದೀಮ ಸನದಿ ಪುಸ್ತಕದ ಕುರಿತು ಆರ್ ವಿಜಯರಾಘವನ್ ಬರಹ
“ಇಂದಿನ ಎಲ್ಲ ಮೌಲ್ಯಗಳು ಪಲ್ಲಟವಾಗುತ್ತಿರುವ ಸಮಾಜೋ-ರಾಜಕೀಯ ಸನ್ನಿವೇಶಗಳಲ್ಲಿ ಗಾಂಧಿಯ ಆದರ್ಶಗಳಲ್ಲಿ ರೂಪುಗೊಳ್ಳಬೇಕಾದ ನಮ್ಮ ವ್ಯಕ್ತಿತ್ವಗಳು ಅದಕ್ಕೆ ವಿರುದ್ಧವಾದ ಎಲ್ಲವನ್ನೂ ಒಳಗೊಂಡ ಕೆಟ್ಟ ಚಿತ್ರಗಳಾಗಿ ಎದುರು ಬಂದು ನಿಲ್ಲುತ್ತವೆ. ಗಾಂಧಿ ಸಿಕ್ಕಿದ್ದ ಕವಿತೆಯ ಶೀರ್ಷಿಕೆ ಗಾಂಧಿಯನ್ನು ಕುರಿತ ಅಗೌರವದಿಂದ ಮೂಡಿದ್ದಲ್ಲ. ಇಲ್ಲಿ ಕವಿಗೆ ಎದುರಾದ ಗಾಂಧಿ ಧೋತಿ ಪಂಚೆಯ ನಗುಮೊಗದ ಗಾಂಧಿಯಲ್ಲ.”
ಓಬಿರಾಯನ ಕಾಲದ ಕಥಾ ಸರಣಿಯಲ್ಲಿ ಶಿವರಾಮ ಕಾರಂತರು ಬರೆದ ಕತೆ…
“ರಾಧಾಕೃಷ್ಣನು ಬಂದ ಹದಿನೈದು ದಿವಸಗಳಲ್ಲಿ, ತನ್ನ ಗುಡಿಸಲಿನ ಸಲುವಾಗಿ ಸಾಮಗ್ರಿಗಳನ್ನು ದೊರಕಿಸಿಕೊಳ್ಳಲು ಊರಲ್ಲಿ ಅಲೆದಾಡಿದನು. ಒಬ್ಬಿಬ್ಬರ ಪರಿಚಯವೂ ಆಯಿತು. ಆಗ ಅವರಲ್ಲಿ ಹೋಗುವ ಎಂದು ಹೊರಟನು. ಆ ದಿನದ ಗ್ರಾಸಕ್ಕೆ ಬೇರೆ ದಾರಿ ಇದ್ದಿರಲಿಲ್ಲ. ಅದಕ್ಕಾಗಿ ಹೊರಟಿದ್ದ ಅವನು ಹಿಂದೀ ರಣಾಗ್ರದಲ್ಲಿ ಸಿಲುಕಿಕೊಂಡನು. ಕೊನೆಗೆ ಶ್ಯಾಮ, ನೀಲ ಎಂದು ಇಬ್ಬರು ಹಿರಿಯ ಹುಡುಗರನ್ನು ಕರೆದುಕೊಂಡು…”
ಅಮೃತಾ ಪ್ರೀತಮ್ ಕವಿತೆಗಳ ಕುರಿತು ರೇಣುಕಾ ನಿಡಗುಂದಿ ಮಾತುಗಳು…
“ಬಹಳಷ್ಟು ಸಮಕಾಲೀನರು ಅಮೃತಾರನ್ನು ಕೇವಲ ಛಾಯಾವಾದದ ಪ್ರೇಮ ಕವಿ, ಬರೆಯುವುದೆಲ್ಲ ಜೊಳ್ಳು, ಹೆಚ್ಚು ಸಾಹಿತ್ಯವನ್ನು ಓದಿದ್ದಿಲ್ಲ ಇತ್ಯಾದಿಯಾಗಿ ಅವರ ವೈಯಕ್ತಿಕ ಬದುಕನ್ನು ಆಡಿಕೊಂಡು ಅವರನ್ನು ಅವಮಾನಿಸಿ ನೋಯಿಸುತ್ತಾರೆ. ಅಳುಕದ ಅಮೃತಾ ತಮ್ಮತನದ ತಳಪಾಯವನ್ನು ಬಿಟ್ಟುಕೊಡುವುದಿಲ್ಲ. ಕಟ್ಟರ್ ವಾದಿ ಅಲೆಗಳ ವಿರುದ್ಧ ಈಜಿದರೇ ಹೊರತು ಸೋತು ಕೈ ಚೆಲ್ಲಲಿಲ್ಲ….”










