ಓಬಿರಾಯನ ಕಾಲದ ಕಥಾ ಸರಣಿಯಲ್ಲಿ ಪುಂಡೂರು ಲಕ್ಷ್ಮೀನಾರಾಯಣ ಪುಣಂಚತ್ತಾಯರು ಬರೆದ ಕತೆ
“ಮೇಲ್ಜಾತಿಯ ಹಿಂದುಗಳನ್ನೇ ದೇವರೆಂದು ನಂಬಿ, ಅವರ ಸೇವೆಯನ್ನು ಮಾಡಿಕೊಂಡಿರುವಷ್ಟು ಕಾಲ ಹೊಲೆಯರು! ಹೊಲತಿಯರು! ಧಿಕ್ಕಾರವಿರಲಿ – ಒಡಹುಟ್ಟಿದ ಹಿಂದೂ ಮಾತೆಯ ಮಕ್ಕಳನ್ನು ಈ ಪ್ರಕಾರ ದೂರ ನಿಲ್ಲಿಸುವ ಈ ಸಮಾಜ ಪದ್ಧತಿಗೆ ಧಿಕ್ಕಾರವಿರಲಿ. ಹಿಂದೂ ಮತವನ್ನು ತಿರಸ್ಕರಿಸಿ, ಕ್ರೈಸ್ತ ಅಥವಾ ಮಹಮ್ಮದೀಯ ಮತವನ್ನು…”
ರಾಜು ಸನದಿ ಪುಸ್ತಕದ ಕುರಿತು ಆಶಾ ಜಗದೀಶ್ ಲೇಖನ
“ಧಾರ್ಮಿಕ ಕಟ್ಟುಪಾಡುಗಳು ಹೇಗೆಲ್ಲ ಹೆಣ್ಣನ್ನು, ಬಲಹೀನರನ್ನು ತನ್ನ ಕಪಿಮುಷ್ಠಿಯಲ್ಲಿ ಬಂಧಿಸುತ್ತದೆ ಎನ್ನುವುದನ್ನು ರಾಜುರವರ ಕವಿತೆಗಳು ಸರಳ ಭಾಷೆಯಲ್ಲಿ ಮನಮುಟ್ಟುವಂತೆ ಹೇಳುತ್ತಾ ಹೋಗುತ್ತವೆ. ತನ್ನ ಸುತ್ತಮುತ್ತಲ ಸಂವೇದನೆಗಳಿಗೆ ಕವಿಯಾದವನು ಹೇಗೆ ಪ್ರತಿಸ್ಪಂದಿಸುತ್ತಾನೆ ಎಂಬುದು ಬಹಳ ಗಮನದಲ್ಲಿಟ್ಟುಕೊಳ್ಳಬೇಕಾದದ್ದು. ಕಾರಣ ಕವಿ ತನ್ನ ಒಳಗಿನ ಪ್ರಪಚಂದಲ್ಲಿ ಕಣ್ಣು ತೆರೆದುಕೊಂಡ ಸಮಯದಲ್ಲಿಯೇ ಹೊರಗಿನ ಪ್ರಪಂಚಕ್ಕೂ…”
ಹುಟ್ಟು ಕೆಟ್ಟೇ?: ಓಬೀರಾಯನ ಕಾಲದ ಕಥಾ ಸರಣಿಯಲ್ಲಿ ಭಾರತೀಬಾಯಿ ಪಣಿಯಾಡಿ ಬರೆದ ಕತೆ
“ಹೊಲೆಯ ತಿಮ್ಮು ಒಂದು ದಿನ ನಮ್ಮಲ್ಲಿಗೆ ಉಪ್ಪಿನಕಾಯಿ ಬೇಡುವುದಕ್ಕೆ ಬಂದಿದ್ದ. ನಮ್ಮ ತಾಯಿ ಹುಳುವಾದ ಸ್ವಲ್ಪ ಉಪ್ಪಿನಕಾಯಿಯನ್ನು ಕುದಿಸಿ ಒಂದು ಎಲೆಯಲ್ಲಿ ಹಾಕಿ ಅಂಗಳದ ಮೂಲೆಯಲ್ಲಿಟ್ಟು ತೆಗೆದುಕೊಂಡು ಹೋಗೆಂದಳು. ನಾನು ಅವನ ಎದುರಿನಲ್ಲಿಯೇ “ಹುಳುವಾದ ಉಪ್ಪಿನಕಾಯಿ ಏಕೆ ಕೊಟ್ಟೆ” ಎಂದು ಕೇಳಿಬಿಟ್ಟೆ. ತಾಯಿಯು ಸಿಟ್ಟುಗೊಂಡು ನನಗೆ ಹೊಡೆಯಬಂದರು. ನಾನು ನಗುತ್ತಾ ತೋಟಕ್ಕೆ ಓಡಿದೆ.”
ಶೋಭಾ ಹಿರೇಕೈ ಕಂಡ್ರಾಜಿ ಕವನ ಸಂಕಲನಕ್ಕೆ ವಿಷ್ಣು ನಾಯ್ಕರು ಬರೆದ ಮುನ್ನುಡಿ
“ಇಲ್ಲಿ. ನಾವು ಕೆಲವು ದುಡಿಮೆಯ ವರ್ಗವನ್ನು ಹಂಗುಹರಕೊಂಡವರಂತೆ ದುಡಿಸಿಕೊಳ್ಳುತ್ತೇವೆ. ಆ ಕಾರಣಕ್ಕಾಗಿ ಅವರಿಗೆ ಕೂಲಿ ಕೊಡುತ್ತೇವಲ್ಲ ಅಂದುಕೊಳ್ಳಬಹುದು. ನಿಜ, ಕೊಡುತ್ತೇವೆ. ಆದರೆ ಆ ಕಾರಣಕ್ಕಾಗಿ ಅವರ ದೇಹ ನುಗ್ಗಾಗುವುದೆಂಬ ಅಳತೆಯ ಅರಿವಿಲ್ಲ ನಮಗೆ. ಅವರ ಬೆವರಿಗೆ ನಾವು ಕಟ್ಟಿದ ಬೆಲೆ ಸಾಲದು. ಅವರು ಕಳಕೊಂಡ ದೇಹದ ತೂಕದ ಅರಿವಿಲ್ಲ ನಮಗೆ. ಅವರು ನಮಗಾಗಿ ನಿದ್ದೆಯನ್ನೂ ಮಾರುತ್ತಾರೆಂಬ ಅಂದಾಜಿಲ್ಲ ನಮಗೆ.”
ಗೀತೆಯ ಸಾರ: ಧನಪಾಲ ನಾಗರಾಜಪ್ಪ ಅನುವಾದಿಸಿದ ಸೈಯದ್ ಸಲೀಂ ಕತೆ
“ದಿಗಿಲುಗೆ ಪರ್ಯಾಯ ಪದದಂತೆ ನೀನು ಮುಖವನ್ನು ಹಾಗೆ ಯಾಕೆ ಮಾಡಿಕೊಂಡೆ? ಮೊದಲು ನೀನು ನನ್ನ ಬದುಕಿನ ವಿಷಮವಾದ ಸಂಗತಿಗಳಿಂದ ಹೊರಗೆ ಬಂದುಬಿಡು. ನಾವು ಹೀಗೆ ನೋವಿನಲ್ಲಿ ಕಳೆದುಕೊಂಡ ಯಾವ ನಿಮಿಷವೂ ಮತ್ತೆ ಮರಳಿ ಬರುವುದಿಲ್ಲ. ಜೀವನ ದೇವರ ಕೊಟ್ಟ ವರ. ಹಾಗೆಂದು ನನಗೆ ನೋವೇ ಇಲ್ಲ ಎಂದುಕೊಳ್ಳಬೇಡ. ಎದೆಯಾಳದಲ್ಲಿ ಮಡುಗಟ್ಟಿರುವ ನೋವು ಹರಿತವಾಗಿ ಸದಾ ಚುಚ್ಚುತ್ತಲೇ ಇರುತ್ತದೆ.”
ದಿಲೀಪ್ ಕುಮಾರ್ ಪುಸ್ತಕಕ್ಕೆ ಮೂಡ್ನಾಕೂಡು ಚಿನ್ನಸ್ವಾಮಿಯವರ ಮಾತುಗಳು
“ಅವನು ಚಳಿ ಕಾಯಿಸಿಕೊಳ್ಳಲು ಬೆಂಕಿಯ ಮುಂದೆ ಕೂತಿದ್ದಾನೆ. ಸುಮ್ಮನೆ ಕುಳಿತಿಲ್ಲ; ಎದೆಯೊಳಗೆ ಬೆಂಕಿ ಇಟ್ಟುಕೊಂಡು ಕಾಯುತ್ತಿದ್ದಾನೆ. ಆ ಕಾಯುವಿಕೆಯ ತೀಕ್ಷ್ಣತೆಯನ್ನು ‘ಬೆಂಕಿ ಹೊರಗಿಲ್ಲ’ ಎಂಬ ಮಾತು ಮಿಂಚಿನಂತೆ ಹೊಳೆಯಿಸುತ್ತದೆ. ಉತ್ತಮ ಕಾವ್ಯ ಮಾಡುವ ಕೆಲಸ ಇಷ್ಟೆ. ಶಬ್ದವಿದೆ, ಅದಕ್ಕೊಂದು ಅರ್ಥವಿದೆ. ಅದರಿಂದಾಚೆ ಆ ಶಬ್ದಾರ್ಥಗಳು ಇನ್ನೇನಿನ್ನೇನನ್ನೋ ಧ್ವನಿಸುತ್ತವೆ. ಅದು ಕಾವ್ಯ. ಪ್ಯಾಬ್ಲೊ ನೆರೂಡ ಹೇಳುತ್ತಾನೆ.”
ಓಬಿರಾಯನಕಾಲದ ಕಥಾ ಸರಣಿಯಲ್ಲಿ ನಿರಂಜನರು ಬರೆದ “ಚಿರಸ್ಮರಣೆ” ಕಾದಂಬರಿಯ ಅಧ್ಯಾಯ “ಕಯ್ಯೂರಿನ ಶಾಲೆ”
“ಈ ಸಲವೂ ಏನನ್ನೂ ಹೇಳುವುದು ಮಾಸ್ತರಿಂದಾಗಲಿಲ್ಲ. ಅವರು ಅವಾಕ್ಕಾದರು. ಉಳ್ಳವರ ವಿಷಯ ಅವರೆಷ್ಟೊ ತಿಳಿದಿದ್ದರೂ ಈ ವಿಚಾರಸರಣಿಯ ವಿಶಿಷ್ಟತೆಯನ್ನು ಕಂಡು ಬೆರಗಾದರು. ಅವರ ಎದೆಯೊಳಗೆ ಸಂಕಟವಾಯಿತು. ಆತ್ಮಾಭಿಮಾನಿಯಾದ ಮನುಷ್ಯ. ಇಂಥ ಮಾತುಗಳನ್ನು ಕೇಳಲು ಇಷ್ಟವಿಲ್ಲದಿದ್ದರೆ ಎದ್ದು ಹೋಗಬಹುದು. ‘ಬರ್ತೇನೆ, ಕೆಲಸವಿದೆ’ ಎಂದು ಹೇಳಿ ಎದ್ದು ಹೋಗಲೇಬೇಕು, ಎನ್ನಿಸಿತು.”
ನಟರಾಜ್ ಹುಳಿಯಾರರ ಪುಸ್ತಕದ ಕುರಿತು ಎಚ್.ಆರ್. ರಮೇಶ್ ಬರಹ
“ಯಾವಾಗಲೋ ಚಿಕ್ಕ ವಯಸ್ಸಿನಲ್ಲಿ ನೋಡಿದ ಒಂದು ಸಾವನ್ನು ಬಿಟ್ಟರೆ ಮತ್ತೆ, ಮತ್ತೊಂದು ಸಾವನ್ನು ನೋಡುವುದು 1998 ರ ಆಗಸ್ಟ್ ನಡುರಾತ್ರಿಯ ಡಿ.ಆರ್ ಅವರ ಸಾವು. ಇದರ ಬಗ್ಗೆ ಬರೆಯುವಾಗ ಹುಳಿಯಾರ್ ತಮ್ಮ ಕರುಳ ಬಳ್ಳಿಯ ಯಾವುದೋ ಒಂದು ಕುಡಿ ಕಡಿದು ಹೋದಾಗ ಆಗುವಷ್ಟೇ ನೋವು, ವಿಷಾದ, ಖಾಲಿತನ, ತೀವ್ರವಾಗಿ ಅವರಿಗೂ ಆಗುವುದನ್ನು ಕಾಣಬಹುದು. ಅದೇ ಥರ 2000 ರ ಇಸ್ವಿಯಲ್ಲಿ ಜರುಗಿದ ಲಂಕೇಶ್ ಸಾವು.”
“ನಟನೆ”: ಸಚೇತನ ಭಟ್ ಅನುವಾದಿಸಿದ ಹರುಕಿ ಮುರಕಮಿ ಬರೆದ ಜಪಾನೀ ಕತೆ
“ಒಂದು ಕಾಲದಲ್ಲಿ ತಾನು ಪ್ರೀತಿಸಿದ್ದ, ಜೊತೆಗೆ ತಬ್ಬಿ ಮಲಗಿದ್ದ ರಕ್ತ ಮಾಂಸಗಳಿಂದ ತುಂಬಿದ್ದ ಸುಂದರ ದೇಹ ಇವತ್ತು ಕೇವಲ ಬೂದಿ ಎನ್ನುವದನ್ನು ಜೀರ್ಣಿಸಿಕೊಳ್ಳುವದು ತಕತ್ಸುಕಿಯ ಶಕ್ತಿ ಮೀರಿದ ಕಾರ್ಯವಾಗಿತ್ತು. ಕಾಫುಕ ಈ ಶೂನ್ಯವನ್ನು ಚೆನ್ನಾಗಿ ಬಲ್ಲವನಾಗಿದ್ದ. ತಕಾತ್ಸುಕಿಯ ಕಣ್ಣುಗಳು ಅವಳ ನೆನಪಿನಿಂದ ಮಂಜಾದಾಗ ಕಾಫುಕನಿಗೆ ಅವನನ್ನು ತಬ್ಬಿಕೊಂಡು ಸಂತೈಸಬೇಕೆನಿಸಿತ್ತು. ಅವನು ತನ್ನ ಭಾವನೆಗಳನ್ನು ಮುಚ್ಚಿಡಲಾರದ ಮನುಷ್ಯನೆನಿಸಿತು. “










