ಮಾಳದ ಎರಡು ಕನಸುಗಳು,ಮಾಳದ ಎರಡು ಸಂಜೆಗಳು:ಪ್ರಸಾದ್ ಶೆಣೈ ಕಥಾನಕ
“ಮನೆಗೊಂದು ಹೆಣ್ಣಿದ್ದರೆ ಮನೆಗೆ ಮನೆಯೇ ಆ ಹೆಣ್ತನದ ವಿಶೇಷ ಮುಗ್ದತೆ ಆವರಿಸಿಕೊಳ್ಳುತ್ತದೆ. ಬೇಕಿದ್ದರೆ ನೋಡಿ ಒಂದೆರಡು ದಿನ ಮನೆಯಲ್ಲಿ ಅಮ್ಮನಿಲ್ಲದಿದ್ದರೆ ಮುಗೀತು. ಆ ಮನೆಯಲ್ಲಿ ಆವರಿಸಿಕೊಳ್ಳುವ ಮೌನ, ಸಪ್ಪೆ ಸಪ್ಪೆ ಎನ್ನಿಸುವಂತಹ ನೋಟ, ಅಂತದ್ದೇನೂ ಅಂದವಿಲ್ಲದೇ ಒಟ್ಟಾರೆ ಸಾಗುವ ದಿನಚರಿ, ಪ್ರೀತಿಯ ರುಚಿ ಇರದೇ ಹೊಟ್ಟೆಗೆ ಸುಮ್ಮನೇ ಹೋಗಿ ಕೂರುವ ನಾವೇ ಮಾಡಿದ ಅಡುಗೆ, ಇವೆಲ್ಲ ಅರ್ಥವಿಲ್ಲದ ಹಾಡಿನಂತೆ ತನ್ನ ಪಾಡಿಗೆ ಸಾಗುತ್ತದೆ.ಅದೇ ಅಮ್ಮನಿದ್ದರೆ ಅಲ್ಲಿ ಮೌನವಿರುವುದಿಲ್ಲ”
ನಿರಾಶ್ರಿತ ಲೋಕದ ಬೆಳಕು ಬುಟ್ಟಿಗಳು : ವಿನತೆ ಶರ್ಮಾ ಅಂಕಣ
“ತನಗೆ ಬೇಕಿಲ್ಲದ ದೇಶಗಳಿಂದ ಜನ ವಲಸೆ ಬರಬೇಕೆಂದರೆ ತಮಗಿರುವ ಕೌಶಲ್ಯಗಳು ದೇಶದ ಅಭಿವೃದ್ಧಿಗೆ ಬೇಕಿರುವ ಉದ್ಯೋಗಗಳಿಗೆ ಒಪ್ಪುವಂಥದ್ದೇ ಅನ್ನೋ ಪರೀಕ್ಷೆ ನಡೆದಾದ ಮೇಲೇ ವಲಸೆ ಬರುವಂತಾಯ್ತು. ಈಗ ಆಸ್ಟ್ರೇಲಿಯಾ ದೇಶಕ್ಕೆ ಬಂದು ನೆಲೆಯೂರುವುದು ಕಷ್ಟದ ಕ್ರಮ. ಹೆಚ್ಚಿನ ಓದು ನಂತರ ಇಲ್ಲೇ ಕೆಲಸ, ಕೌಶಲ್ಯ-ಆಧರಿತ ಉದ್ಯೋಗ ಲಭ್ಯತೆ, ರಕ್ತಸಂಬಂಧಿಗಳಿದ್ದರೆ, ಇಲ್ಲವೇ ಈ ದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬಂಡವಾಳ ಹೂಡಿದರೆ, ಇಲ್ಲಿನ ಖಾಯಂ ವಾಸಿ,…”
ಮಡಿಕೇರಿ ಉಮ್ಮ ಹೇಳಿದ ಹಾವು ಮೀನಿನ ಕಥೆ : ಮುನವ್ವರ್ ಪರಿಸರ ಕಥನ.
“ಈ ಕಥೆ ಮುಗಿದು ಅವರು ಚಿಕ್ಕಪ್ಪನ ಮನೆಗೆ ಹೊರಟಿದ್ದರು. ನಾನು ಅದೇ ಗುಂಗಿನಲ್ಲಿ ಏನೇನೆಲ್ಲಾ ಪ್ರಶ್ನಿಸುತ್ತಾ ಉಮ್ಮನ ದಂಬಾಲು ಬಿದ್ದೆ. ಅದು ಕಳೆದು ಸುಮಾರು ದಿನವಾಗಿರಬಹುದು. ಒಂದು ದಿನ ನಾನು ಒಬ್ಬನೇ ಮನೆಯ ಹತ್ತಿರದ ತೊರೆಯ ಬಳಿ ಮೊದಲ ಮಳೆಯ ಸಣ್ಣ ಮೀನುಗಳನ್ನು ಹಿಡಿಯಲು ಹೋಗಿದ್ದೆ. ಗುಂಡಿಯ ಮೀನುಗಳನ್ನು ಕೈಯಲ್ಲಿ ಹಿಡಿಯುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದಂತೆ ಹಿಂದಿನಿಂದ ತರಗೆಲೆ ಮೆಲ್ಲಗೆ ಅಲುಗಿದಂತಾಯಿತು.”
ಬ್ರಿಟಿಷ್ ಬೇಸಿಗೆ ಎಂಬ ಬಿಡಿಸಲಾಗದ ಒಗಟು:ಯೋಗೀಂದ್ರ ಮರವಂತೆ ಅಂಕಣ
ಕಳೆದ ವರ್ಷ ಬಿರುಬಿಸಿಲಿನ ಬೇಸಿಗೆಯಲ್ಲಿ ಮೈಮರೆತಿದ್ದ ಆಂಗ್ಲರು ಈ ಸಲ ಬೇಸಿಗೆಯಲ್ಲಿ ಮಳೆ ದಿನಗಳನ್ನು ಕೂಡಿ ಕಳೆದು, ಅಳೆದು ತೂಗಿ ಆಮೇಲೆ ಸರಿಯಾದ ಬಿಸಿಲು ಕಂಡ ದಿನಗಳನ್ನು ಬೆರಳಿನಲ್ಲಿ ಎಣಿಸುವ ಯತ್ನದಲ್ಲಿ ಮಗ್ನರಾಗಿದ್ದಾರೆ. ಎಷ್ಟು ದಿನ, ಮಾಸ, ವರುಷ ಕಳೆದವರಿಗೂ ಮೇಲುನೋಟಕ್ಕೆ ಎಷ್ಟು ಆಪ್ತ ಸ್ನೇಹಿಯಂತೇ ಕಂಡರೂ ಮತ್ತೆ ಮತ್ತೆ ಅನಾಮಿಕ ಚಾರಿತ್ಯ್ರದಿಂದ ಅನಾವರಣಗೊಳ್ಳುವ ಬ್ರಿಟಿಷರ ಬೇಸಿಗೆ ಇಲ್ಲೀಗ ಮೆತ್ತಗೆ ಕಳೆಯುತ್ತಿದೆ.
ಓದಿದ ಕವಿತೆಗಳು ಜೀವನದ ಕದ ತಟ್ಟುವುದರ ಕುರಿತು: ಆಶಾ ಜಗದೀಶ್ ಅಂಕಣ
ಈ ಪದ್ಯ ಓದಿದ ಎಷ್ಟೋ ವರ್ಷಗಳ ನಂತರ ಇದು ನನ್ನ ಜೀವನದಲ್ಲಿ ನನ್ನ ಅನುಭವಕ್ಕೆ ಬರುತ್ತದೆ ಎಂದು ನಾನು ತಿಳಿದಿರಲಿಲ್ಲ. ಕವಿಯೊಬ್ಬನ ಭಾವ ಓದುಗನ ಭಾವ ಆಗುವುದೇ ಒಂದು ಸಾಕ್ಷಾತ್ಕಾರ. ಇಷ್ಟಪಟ್ಟ ಹಲವಾರು ಕವಿತೆಗಳೊಂದಿಗೆ ನಾವು ಕನೆಕ್ಟ್ ಆಗುವುದೇ ಹಾಗೆ. ಯಾವುದನ್ನು ನಾವು ತೀವ್ರವಾಗಿ ಅನುಭವಿಸಿರುತ್ತೇವೆಯೋ ಅದೇ ಭಾವ ಪದಗಳಾಗಿ ನಮ್ಮ ಮುಂದೆ ನಿಂತಾಗ ನಮಗೆ ಸೋಲದೆ ವಿಧಿ ಇರುವುದಿಲ್ಲ.
ಆಶಾ ಜಗದೀಶ್ ಬರೆವ ಪಾಕ್ಷಿಕ ಅಂಕಣ.
ಪರಿಪೂರ್ಣವಲ್ಲದ ಪೂರ್ಣ ವೃತ್ತ: ಕೃಷ್ಣ ದೇವಾಂಗಮಠ ಅಂಕಣ
“ಹಾಡಿದರೆ ಹಾಡಾಗುವ, ಓದಿದರೆ ಗದ್ಯವಾಗುವ, ಅತ್ತ ಗದ್ಯವೂ ಅಲ್ಲದ ಪದ್ಯವೂ ಅಲ್ಲದ ಇವುಗಳ ಮಿಶ್ರಧಾತುವಿನಲ್ಲಿ ರಚನೆಗೊಂಡ ವಚನ ಸಾಹಿತ್ಯ ಅನುಭಾವ ಸಾಹಿತ್ಯಕ್ಕೆ ನೀಡಿದ ಕಾಣ್ಕೆ ಅಪಾರ. ಅನುಭಾವ ಸಾಹಿತ್ಯವು ಕನ್ನಡ ಸಾಹಿತ್ಯದ ವಿಶೇಷ ಕಾವ್ಯ ಪ್ರಕಾರವಾಗಿಯೂ ಗುರುತಿಸಿಕೊಂಡಿದೆ. ಅದು ಮುಂದುವರೆದು ದಾಸ ಸಾಹಿತ್ಯ, ತತ್ವಪದಕಾರರವರೆಗೂ ಹರಿದಿದೆ.”
ಆಸ್ಟ್ರೇಲಿಯಾದ ಅಬರಿಜಿನಲ್ ಹಾಡುಗಾರ ಆರ್ಚಿ ರೋಚ್ : ಡಾ.ವಿನತೆ ಶರ್ಮ ಅಂಕಣ
“ತನ್ನ ಅಸ್ತಿತ್ವದ ಆ ಹುಡುಕಾಟದ ದಿನಗಳಲ್ಲಿ ಅದೃಷ್ಟವೋ ಎಂಬಂತೆ ತನ್ನಂತೆ ಗಿಟಾರ್ ಹಿಡಿದು ಎಲ್ಲಿಂದ ಬಂದೆ ನಾನು ಅನ್ನೋ ಎಳೆಯನ್ನು ಹಿಡಿದು ಹುಡುಕಾಟದಲ್ಲಿದ್ದ ಅಬರಿಜಿನಲ್ ಯುವ ಹಾಡುಗಾರ್ತಿ ರೂಬಿ ಹಂಟರ್ ಅವರಿಗೆ ಸಿಕ್ಕಿಬಿಟ್ಟಳು. ಆರ್ಚಿ ಪುಟವಿಟ್ಟ ಲೋಹದಂತೆ ಪುಟಿದೆದ್ದರು. ರೂಬಿ ತಮ್ಮ ಜೀವನಕ್ಕೆ ಕೊಟ್ಟ ಭದ್ರತೆಯನ್ನು, ನಿರ್ದಿಷ್ಟ ಗುರಿಯನ್ನು…”
ಚಿಂಚುವಿನ ಪ್ರಾಣ ಹಿಂಡಿದ ಪೆರ್ಮಾರಿ: ಮುನವ್ವರ್ ಪರಿಸರ ಕಥನ
“ಮಲೆಗಳಲ್ಲಿ ಮದುಮಗಳು ಕಾದಂಬರಿಯ ಗುತ್ತಿಯ ಹುಲಿಯನಂತೆಯೇ ತಂಗಿಗೆ ಚಿಂಚುವೆಂದರೆ ಪ್ರಾಣ. ಅದರ ಜೊತೆ ತಿನ್ನುವುದೇನು, ಮಲಗುವುದೇನು. ಅದೂ ಹಾಗೆಯೇ ಹೊಂದಿಕೊಂಡು ಒಳ್ಳೆಯ ಸ್ವಭಾವವನ್ನೇ ಮೈಗೂಡಿಸಿಕೊಂಡಿತ್ತು. ಶೌಚಕ್ಕೆ ಹೊರಗಡೆಗೆ ಹೋಗುತ್ತಿತ್ತು.”
ಕಳೆದುಹೋಗುವ ಬೆಕ್ಕುಗಳ ಕುರಿತು:ಯೋಗೀಂದ್ರ ಮರವಂತೆ ಅಂಕಣ
”ಈ ದೇಶದಲ್ಲಿ ಕನಿಷ್ಠ ಬೆಕ್ಕುಗಳಿಗಂತೂ ಮನೆ ಬಿಟ್ಟು ಓಡಿಹೋಗಬೇಕಾದ ಪರಿಸ್ಥಿತಿ ಇರಲಿಕ್ಕಿಲ್ಲ ಬಿಡಿ. ಪ್ರಕರಣದ ಯಾರದೋ ಮನೆಯದಾಗಿದ್ದರೆ ರಸ್ತೆಯಲ್ಲಿ ನಿಂತು ಕುಳಿತು ಮಾತಾಡುವ ಇತರ ಬೆಕ್ಕುಗಳ ನಡುವೆ ಹೀಗೆಲ್ಲ ಊಹಾಪೋಹಗಳು ಹಬ್ಬುವುದು ಸಹಜವೇ. ಹೀಗೆ ಬೀದಿ ಬದಿಯಲ್ಲಿ ಗುಸುಗುಸು ಪಿಸಿಪಿಸಿ ಆದ ಮೇಲೆ ಯಾರ ಮನೆಯ ಒಳಕತೆಗಳ ಉಸಾಬರಿ ನಮಗೇಕೆ ಎನ್ನುತ್ತಾ ಬೆಕ್ಕುಗಳು ತಮ್ಮ ತಮ್ಮ ಮನೆಗೆ ತೆರಳುವುದೂ ಇದೆ.
”









