Advertisement

ಅಂಕಣ

ಅಗ್ನಿಯಿಂದ ಎದ್ದು ಬಂದ ಬೆಳಕುಗಳು: ಡಾ.ಲಕ್ಷ್ಮಣ ವಿ.ಎ. ಅಂಕಣ

ಅಗ್ನಿಯಿಂದ ಎದ್ದು ಬಂದ ಬೆಳಕುಗಳು: ಡಾ.ಲಕ್ಷ್ಮಣ ವಿ.ಎ. ಅಂಕಣ

“ಈಗಿರುವ ಮೆಡಿಕಲ್ ಕಾಲೇಜಿಗೆ ಕೊಡುವ ಬಜೆಟ್ಟಿನಲ್ಲೇ ನಾವು ಲಕ್ಷಾಂತರ ತಜ್ಞ ಪರಿಣಿತ ವೈದ್ಯರನ್ನು ತಯಾರಿ ಮಾಡಬಹುದು. ಅದಕ್ಕೊಂದು ಸಿದ್ಧ ಸೂತ್ರವೂ ಅವರ ಬಳಿ ಇದೆ. ಹಳ್ಳಿಯಿಂದ ಬಂದ ಪ್ರತಿ ಮೆಡಿಕಲ್ ವಿಧ್ಯಾರ್ಥಿಯ ಎದೆಯಲ್ಲೊಂದು ಕಿಚ್ಚು ಇರುತ್ತದೆ. ಅವರ ಹೊಟ್ಟೆಯ ಹಸಿವು ದಿನದ ಇಪ್ಪತ್ನಾಲ್ಕು ಗಂಟೆ ದುಡಿಯುವ ಉತ್ಸಾಹ ಪ್ರಚೋದನೆ ನೀಡುತ್ತಿರುತ್ತದೆ.. ಅವಕಾಶ ವಂಚಿತ ಇಂತಹ ಗ್ರಾಮೀಣ ಬಡ ಭಾರತದ ಹುಡುಗ ಹುಡುಗಿಯರಿಗೆ ಬೇಕಿರುವುದು ಒಂದು ಸಣ್ಣ ಸಹಾಯ ಮಾತ್ರ.”

read more
ರವೀಂದ್ರನಾಥರೊಳಗಿನ “ಅವಳ” ನೆರಳು: ಆಶಾ ಜಗದೀಶ್ ಅಂಕಣ

ರವೀಂದ್ರನಾಥರೊಳಗಿನ “ಅವಳ” ನೆರಳು: ಆಶಾ ಜಗದೀಶ್ ಅಂಕಣ

“ತಂದೆಯಂತಹವನೊಬ್ಬ ವ್ಯಾಪಾರಿ ತನ್ನ ಮಗಳ ವಯಸ್ಸಿನ ಮಗುವಿನಲ್ಲಿ ತನ್ನ ಮಗಳನ್ನು ಕಾಣುವುದನ್ನು ಮನೋಜ್ಞವಾಗಿ ಕಟ್ಟಿಕೊಡುತ್ತಾರೆ ರವೀಂದ್ರರು. ಕಾಬೂಲ್ ಕಡೆಯವನಾದ್ದರಿಂದ ಅವನು ಕಾಬುಲೀವಾಲಾ. ಸಮಯದ ಸಮಯಸಾಧಕತನ ಎನ್ನುವಂತೆ ಕಾಬೂಲೀವಾಲಾ ಜೈಲಿಗೆ ಹೋಗುವ ಪ್ರಸಂಗ ಎದುರಾಗುತ್ತದೆ. ಏಳೆಂಟು ವರ್ಷಗಳ ಸೆರೆವಾಸದ ತರುವಾಯ ಅದೇ ಕಾಬುಲೀವಾಲ….”

read more
ಸಾಫ್ಟವೇರ್ ಪ್ರಪಂಚದಲ್ಲೊಂದು ಕಮ್ಯೂನಿಸ್ಟ್ ಕ್ರಾಂತಿ: ಮಧುಸೂದನ್ ಅಂಕಣ

ಸಾಫ್ಟವೇರ್ ಪ್ರಪಂಚದಲ್ಲೊಂದು ಕಮ್ಯೂನಿಸ್ಟ್ ಕ್ರಾಂತಿ: ಮಧುಸೂದನ್ ಅಂಕಣ

“ನಿಮಗೆ ಗೊತ್ತೇ, ಇವತ್ತಿನ ಇಡೀ “ಕ್ಲೌಡ್”, ಲಿನಕ್ಸ್ ಮೇಲೆ ಕೂತಿದೆ. ಹಾಗೆ ನೋಡಿದರೆ ಜಗತ್ತಿನ ಮುಕ್ಕಾಲು ಭಾಗ ಸಾಫ್ಟವೇರ್ ಲಿನಕ್ಸ್ ಮೇಲೆ ಓಡುತ್ತಿದೆ. ಅದೆಲ್ಲ ಬಿಡಿ, ನಮ್ಮ ನಿಮ್ಮ ಕೈಯಲ್ಲಿರುವ ಮಾಣಿಕ್ಯ, ಜಗತ್ತನ್ನು ಚದುರಂಗದಂತೆ ಆಡಿಸುತ್ತಿರುವ ಆಂಡ್ರಾಯ್ಡ್ ಫೋನ್, ಲಿನಕ್ಸ್ ನ ರೂಪಾಂತರ. ಅಂದರೆ ಲಿನಕ್ಸ್ ಎಂಬ ಉಚಿತ ಮನೆಗೆ ಗೂಗಲ್ ಇನ್ನೊಂದಷ್ಟು…..”

read more
ಮೊಬೈಲ್ ಸ್ಕೂಟರ್ ನ ‘ವಿಶೇಷ’ ಕತೆಗಳು: ವಿನತೆ ಶರ್ಮಾ ಅಂಕಣ

ಮೊಬೈಲ್ ಸ್ಕೂಟರ್ ನ ‘ವಿಶೇಷ’ ಕತೆಗಳು: ವಿನತೆ ಶರ್ಮಾ ಅಂಕಣ

“ವಿಶೇಷ ಸಾಮರ್ಥ್ಯರಿಗೆ ಕಷ್ಟಗಳಿಗಿಂತ ಸವಾಲುಗಳೇ ಹೆಚ್ಚು. ಹೆಚ್ಚಿನಪಾಲು ಸಮಾಜ ಅವರನ್ನು, ಅವರ ಮನಃಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಸೋತಿದೆ ಅನಿಸುತ್ತದೆ. ನನ್ನ ಪಕ್ಕ ಸ್ಕೂಟರಿನಲ್ಲಿ ಸಾಗಿದ್ದ ಅವರಿಬ್ಬರೂ ರಸ್ತೆಯ ಏರುತಗ್ಗುಗಳ ಪ್ರಕಾರ ವೇಗವನ್ನು ನಿಯಂತ್ರಿಸುತ್ತಿದ್ದರು. ಅವನ, ಅವಳ ಅಂದಿನ ದಿನದಲ್ಲಿ ಅದೇನೆಲ್ಲಾ ಏರುತಗ್ಗುಗಳಿದ್ದವೋ ಯಾರು ಬಲ್ಲರು? ಇಬ್ಬರಿಗೂ ಆ ದಿನ ಎರಡು ಹೊತ್ತಿನ ಪೂರ್ತಿ ಊಟ ಸಿಕ್ಕಿತ್ತೇ?”

read more
ಹುಣಸೇ ಮರದಡಿಯಲ್ಲಿ ಕಂಡ ಪ್ರೇತ: ಮುನವ್ವರ್ ಜೋಗಿಬೆಟ್ಟು ಕಥನ

ಹುಣಸೇ ಮರದಡಿಯಲ್ಲಿ ಕಂಡ ಪ್ರೇತ: ಮುನವ್ವರ್ ಜೋಗಿಬೆಟ್ಟು ಕಥನ

“ನನ್ನ ಸಂಶಯಕ್ಕೂ ಕಾರಣವುಂಟು. ನಾನು ಕಾಡಿನಲ್ಲಿ ಅದೆಷ್ಟೋ ಹಕ್ಕಿಗಳನ್ನು ನೋಡಿದ್ದರೂ ಅಂತಹ ಅಗಲ ರೆಕ್ಕೆಯ ಬೀಸುತ್ತಾ ಹಾರುವ ಹಕ್ಕಿಯನ್ನು ನೋಡಿರಲೇ ಇಲ್ಲ. ಇದಾಗಿ ಸುಮಾರು ದಿನ ಕಳೆದಿರಬಹುದು. ಅವರಿವರಲ್ಲಿ ನಾನೂ ಸ್ವಲ್ಪ ಉಪ್ಪು ಖಾರ ಬೆರೆಸಿ ನನಗೆ ಕಂಡ ಪ್ರೇತದ ಬಗ್ಗೆ ಮಜಬೂತಾಗಿ ಹೇಳುತ್ತಿದ್ದೆ. ಅವರೆಲ್ಲರಿಗೂ ನಾನು ಪ್ರೇತ ನೋಡಿದವನೆಂಬ ನಂಬಿಕೆಯೂ ಹುಟ್ಟಿಸಿಬಿಟ್ಟಿದ್ದೆ.”

read more
ಶಿಕ್ಷಕರ ದಿನಕ್ಕೆ ನೆನಪೇ ನಮನ: ಯೋಗೀಂದ್ರ ಮರವಂತೆ ಅಂಕಣ

ಶಿಕ್ಷಕರ ದಿನಕ್ಕೆ ನೆನಪೇ ನಮನ: ಯೋಗೀಂದ್ರ ಮರವಂತೆ ಅಂಕಣ

“ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದ ಕಾಲದಲ್ಲಿ ಮನೆಯಿಂದ ನಡಿಗೆಯಲ್ಲಿ ಇಡೀ ಊರಿನ ಮಕ್ಕಳು ಶಾಲೆ ತಲುಪುತ್ತಿದ್ದೆವು. ರಸ್ತೆಯಲ್ಲಿ ಗುರುಗಳು ಎದುರಾದರೆ ತಲೆ ತಗ್ಗಿಸಿ ‘ನಮಸ್ತೆ’ ಹೇಳದೆ ಅವರನ್ನು ಯಾವ ಮಕ್ಕಳೂ ಹಾದುಹೋಗುತ್ತಲೇ ಇರಲಿಲ್ಲ. ಗುರುಗಳ ಬಗ್ಗೆ ಗೌರವ ಭಯಗಳ ಜೊತೆಗೆ ನಮ್ಮ ಗುರುಗಳು ನಮ್ಮೊಡನೆಯೇ ಬದುಕುತ್ತಿದ್ದರೆನೋ ಅನಿಸುವ ಅನುಭವಗಳೂ ಶಾಲೆಯಲ್ಲಿ ಆಗುತ್ತಿದ್ದವು.”

read more
ಜನಪ್ರಿಯತೆಯ ಕೂಪದಲ್ಲಿ ಹಾಡುಹಕ್ಕಿ: ಡಾ. ಲಕ್ಷ್ಮಣ ವಿ.ಎ.ಅಂಕಣ

ಜನಪ್ರಿಯತೆಯ ಕೂಪದಲ್ಲಿ ಹಾಡುಹಕ್ಕಿ: ಡಾ. ಲಕ್ಷ್ಮಣ ವಿ.ಎ.ಅಂಕಣ

“ಭಾರತೀಯ ಮನಸು ಯಾವಾಗಲೂ ಪವಾಡಗಳನ್ನು ಅಪಾರವಾಗಿ ನಂಬುತ್ತದೆ. ಅಷ್ಟೇ ಪ್ರತಿಭೆಯನ್ನೂ ಕೂಡ ಪೋಷಿಸುತ್ತದೆ. ಹೀಗಾಗಿ ಇಲ್ಲಿಯ ಅತಿರಂಜಿತ ಸಿನೇಮಾಗಳು ಹಿಟ್ ಆಗುತ್ತವೆ. ಈ ಸಿನೇಮಾ ಸೃಷ್ಟಿಸುವ ಮಿಥ್ ಗಳು ಬದುಕಿನಲ್ಲಿಯೂ ಒಂದಿಲ್ಲೊಂದು ದಿನ ನಿಜವಾಗುತ್ತದೆ ಎಂದು ಬದುಕುವವರು ಇಲ್ಲಿ ಅಂತಲ್ಲ ಎಲ್ಲೆಲ್ಲಿಯೂ ಇದ್ದಾರೆ. ಹೀಗಾಗಿ ಸಿನೇಮಾದಿಂದ ಪ್ರಭಾವಿತವಾಗಿಯೇ ಎಷ್ಟೊಂದು ಪ್ರೇಮಿಗಳು ಹುಟ್ಟಿಕೊಂಡಿರುತ್ತಾರೆ.”

read more
ಬಿಡದೆ ಸುರಿವ ಮಳೆ ಮತ್ತು ಐಸ್ ಕ್ಯಾಂಡಿ ತಿಮ್ಮಪ್ಪಣ್ಣ: ಫಾತಿಮಾ ರಲಿಯಾ

ಬಿಡದೆ ಸುರಿವ ಮಳೆ ಮತ್ತು ಐಸ್ ಕ್ಯಾಂಡಿ ತಿಮ್ಮಪ್ಪಣ್ಣ: ಫಾತಿಮಾ ರಲಿಯಾ

“ಬೀದಿ ಬದಿಯ ಕನಸುಗಳನ್ನೂ ಹೆಕ್ಕಲು ಕಲಿಯುತ್ತಿದ್ದ ನಾವು ನಿಜಕ್ಕೂ ಮುಗಿ ಬೀಳುತ್ತಿದ್ದುದು ಅವನು ಮಾರುತ್ತಿದ್ದ ಕ್ಯಾಂಡಿಗೋ ಅಥವಾ ಅವನ ಕಥೆಗಳಿಗೋ ಅನ್ನುವುದೂ ಇವತ್ತಿಗೂ ಅರ್ಥವಾಗುವುದಿಲ್ಲ. ಮಂಗಳೂರಿನ ‘ಐಡಿಯಲ್’ನಲ್ಲಿ ಬೆಲ್ಲ ಕ್ಯಾಂಡಿ ಸಿಗುತ್ತೆ ಅಂತ ಸುದ್ದಿ ಆದಾಗ ತುಂಬ ಆಸೆ ಪಟ್ಟುಕೊಂಡಿದ್ದೆವು. ಎಳೆಯ ಮಗುವೊಂದು ಇದ್ದುದರಲ್ಲಿ ದೊಡ್ಡದನ್ನು ಆರಿಸಿ ತಿನ್ನುವಂತೆ ಅಲ್ಲಿದ್ದ ಅಷ್ಟೂ ಕ್ಯಾಂಡಿಗಳನ್ನು ಪರಿಶೀಲಿಸಿ, ಕೊಂಡು ಬಾಯಿಗಿಡುತ್ತಿದ್ದಂತೆ ಮುಖ ಹುಳ್ಳಹುಳ್ಳಗೆ.”

read more
ಪದಗಳಾಗದ ಅವರ್ಣನೀಯ ಆನಂದ..: ಆಶಾ ಜಗದೀಶ್ ಅಂಕಣ

ಪದಗಳಾಗದ ಅವರ್ಣನೀಯ ಆನಂದ..: ಆಶಾ ಜಗದೀಶ್ ಅಂಕಣ

“ಅಕ್ಬರ್ ಅರಮನೆಗೆ ಮರಳಿ ಹಲವಾರು ದಿನಗಳಾದರೂ ಹರಿದಾಸರು ಅವರ ಸ್ಮೃತಿಯಿಂದ ದೂರವಾಗುವುದೇ ಇಲ್ಲ… ಕೂತರೂ ನಿಂತರೂ ಹರಿದಾಸರೇ… ಒಂದು ದಿನ ಅಕ್ಬರ್ “ತಾನಸೇನ್ ಅಂತಹಾ ಗುರುಗಳಿಂದ ಪಾಠ ಕಲಿತ ನಿಮ್ಮ ಗಾಯನವೇಕೆ ಆ ಮಟ್ಟಕ್ಕಿಲ್ಲ” ಎಂದು ಕೇಳುತ್ತಾರೆ. ಆಗ ತಾನಸೇನ್ ಹೇಳುತ್ತಾರೆ “ಜಹಾಪನಾ ನಾನು ನಿಮ್ಮನ್ನು ಮೆಚ್ಚಿಸಲಿಕ್ಕಾಗಿ ಹಾಡುತ್ತೇನೆ, ಹಾಗಾಗಿ ನನ್ನ ಕಲೆಗಾರಿಕೆ ಆ ದೈವತ್ವಕ್ಕೆ ಏರಲಿಲ್ಲ.”

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ