Advertisement
ಎನ್ ಎ ಎಂ ಇಸ್ಮಾಯಿಲ್ ಕವಿತೆ: ಸಂಭಾಷಣೆ

ಎನ್ ಎ ಎಂ ಇಸ್ಮಾಯಿಲ್ ಕವಿತೆ: ಸಂಭಾಷಣೆ

ಸಂಭಾಷಣೆ

ನಾನೊಮ್ಮೆ ಮುಟ್ಟಲೇ?
ಅವಳಂದಳು-ನನಗೆ ಭಯ
ಒಮ್ಮೆ ಮಾತ್ರ ಎಂಬುದು ಅವನ ಭರವಸೆ
ಹೊಸ ತಮಾಷೆ ಎಂಬ ಧೈರ್ಯ ಅವಳದ್ದು

ಅವನಂದ ನೇವರಿಸಿ ನೋಡಲೆ?
ಅವಳ ಕಣ್ಣಲ್ಲಿ ಎಷ್ಟೆಂಬ ಪ್ರಶ್ನೆ
ಅವನ ಉತ್ತರ ಅಪ್ರಸ್ತುತ
ಯಾಕೆ ಹಿಂಜರಿಕೆ ಎಂದಿತು ಅವಳ ಕಣ್ಣು

ಮುಂದೆ ಸಾಗುವ ಆಹ್ವಾನ ಅವನದ್ದು
ಅಷ್ಟು ಮುಂದಕ್ಕೇಕೆ ಎಂದವಳ ತಳಮಳ
ಅವನು ಕೇಳಿದ ಎಷ್ಟು
ನೀನೀಗ ಇರುವಷ್ಟು; ಅವಳ ಉತ್ತರ

ಅವನಂದ; ನಾನಿಲ್ಲೇ ಇರಲೇ
ಅದೆಲ್ಲಿರುವೆ ಎಂದವಳ ಕೇಳ್ವಿ
ಪಕ್ಕದಲ್ಲಿ ಎಂಬುದವನ ಹೇಳಿಕೆ
ನೀ ಚುಂಬಿಸಿದರೆ ಎಂದವಳ ಸಂಶಯ

ನಾ ಮುಂದೆ ಸಾಗಲೆ; ಅವನ ವಿನಂತಿ
ಇದು ಪ್ರೀತಿಯೇ? ಅವಳ ಅನುಮಾನ!
ನೀನೊಪ್ಪಿದರೆ ಎಂಬುದು ಅವನ ಓಲೈಕೆ
ನೀ ಕೊಲ್ಲುತಿರುವೆ; ಅವಳದು ಆರೋಪ

ಇದು ಬದುಕು ಎಂದನವ
ಪ್ರಣಯ? ಎಂಬುದವಳ ಪ್ರಶ್ನೆ
ಅವನ ಉತ್ತರ; ಈಗ
ಹೇಗೆ; ಅವಳ ಪ್ರಶ್ನೆ

ಶಿಖರದಿಂದ ಆರಂಭಿಸಿದ್ದು ಅವನು
ನಿಲ್ಲಿಸಬೇಡ ಎಂದದ್ದು ಅವಳು
ಅವನಂದ ಬಂದೇ ಬಿಟ್ಟೆ
ಅವಳು ಹೂಂಗುಟ್ಟಳಷ್ಟೆ

ಅವನಂದ ನೀ ದೇವತೆ
ಅವಳಂದಳು ನೀ ನನ್ನವನು

ಎನ್. ಎ.ಎಂ ಇಸ್ಮಾಯಿಲ್‌ ಮೂಲತಃ ಸಕಲೇಶಪುರದವರು.
ಕರಾವಳಿ ಅಲೆ, ಉದಯವಾಣಿ , ಪ್ರಜಾವಾಣಿ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಕೆಲಸ ಮಾಡಿದವರು.
ಪ್ರಸ್ತುತ ಕಲರ್ಸ್‌ ಕನ್ನಡವಾಹಿನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ