Advertisement
ಗೀತಾ ಹೆಗಡೆ ಬರೆದ ಈ ದಿನದ ಕವಿತೆ

ಗೀತಾ ಹೆಗಡೆ ಬರೆದ ಈ ದಿನದ ಕವಿತೆ

ದ್ವೈತ

ಭ್ರಮೆಗಳು ಮನುಷ್ಯನನ್ನು ಪೊರೆಯುತ್ತವೆ
ಹಲವು
ಷರತ್ತುಗಳೊಂದಿಗೆ,
ಒಂದಿಷ್ಟು
ಗಡುವುಗಳೊಂದಿಗೆ,
ಇನ್ನು ಕೆಲವು-
ಬೇಷರತ್ತಾಗಿ, ನಿರವಧಿಯವರಗೆ..

ಮತ್ತದು ನಿರಸನಗೊಳ್ಳುವತನಕ
ಮನುಷ್ಯನಿಗೆ ಅವನ್ನು
ತಾನೇ ಪೊರೆಯುತ್ತಿರುವೆ-
ನೆಂಬ ನಿರಾತಂಕ

ಭ್ರಮೆ- ಎಂಬ ಪೊಳ್ಳು
ಕಳಚಿ ಹಾರಿ ಹೋದಾಗ
ಆಹಾ! ತಾನು ವಿವೇಕಿಯಾದೆ-
ಎಂದುಕೊಳ್ಳುತ್ತಾನೆ- ಇನ್ನೊಂದು ಭ್ರಮೆ-
ಯ ಪ್ರವೇಶವಾಗುವವರೆಗೆ!

ತೀರ ಯೋಚನೆ ಮಾಡಬೇಡಿ;
ಬದುಕೇ ಒಂದು ಭ್ರಮೆ-
ಎಂದು!
ಮುಕ್ತಿಯೂ ಒಂದು ಭ್ರಮೆ-
ಇರಬಹುದಲ್ಲವೇ?

ಮುಕ್ತನೆಂಬ ಅರಿವು
ತನ್ನೊಳಗ
ಬಯಲು
ಮಾಡುವವರೆಗೆ!

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

1 Comment

  1. ಲಕ್ಷ್ಮಣ ಶರೆಗಾರ

    ಇಷ್ಟವಾಯಿತು

    Reply

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ