Advertisement
ನಾಗರಾಜ್ ವೈ. ಕಾಂಬಳೆ  ಬರೆದ ಈ ದಿನದ ಕವಿತೆ

ನಾಗರಾಜ್ ವೈ. ಕಾಂಬಳೆ ಬರೆದ ಈ ದಿನದ ಕವಿತೆ

ಮೌನ ಕಣಿವೆ…

ಯಾವುದಕ್ಕೆ ಅರ್ಥವಿದೆ?
ಅವಳ ನಗುವಿಗೆ? ಅವಳ ಮೌನಕ್ಕೆ?
ಅವಳ ಮಾತಿಗೆ? ಅವಳ ರೀತಿಗೆ?

ಯಾವ ಬುದ್ಧಿಮತ್ತೆಯ ಬೆನ್ನು ಹತ್ತಿದರೂ
ಯಾವ ಭಾಷಾಂತರದ ಕೋಶದೊಳಗಿಳಿದರೂ
ಹೊಳೆಯುವುದಿಲ್ಲ ಅರ್ಥ!
ಹೊಳೆದರೂ,
ಸತ್ಯವೋ? ಮಿಥ್ಯವೋ?
ಹೌದೋ? ಅಲ್ಲವೋ?
ಬರೀ ಸಂಶಯ, ಅನುಮಾನಗಳೇ

ಏಕಮುಖವಾಗಿ ಓಡುವ ಚಿಂತೆಗಳಿಗೆ
ಯಾವುದೇ ನಿಲ್ದಾಣವಿಲ್ಲ
ಗಾಳಿಗೆ ಗುದ್ದುವ ಚಟದ ಹಿಂದೆ
ಭ್ರಮಾಲೋಕದ ಆಯುಧಗಳೇ!

ಹೋಗಲಿ ಬಿಡು
ಒಂದು ನಿಟ್ಟುಸಿರು, ನಿರಾಳ!
ಎಲ್ಲ ಮರೆಸುವ ಕಾಲಕ್ಕೂ
ಗೊಂದಲವಿದೆ

ಅದೊಂದು ಮೌನ ಕಣಿವೆಯ
ಡೆಡ್ ಎಂಡ್!

ನಗುತ್ತೇನೆ, ಅಳುತ್ತೇನೆ
ಮಾತನಾಡುತ್ತೇನೆ, ಜೊತೆ ಇರುತ್ತೇನೆ ಕೂಡಾ!

ಆದರೆ,

ಎದೆಕೊರೆವ ಹುಳ ಮಾತ್ರ
ಸಾಯುತ್ತಿಲ್ಲ!

ನಾಗರಾಜ ಕಾಂಬಳೆ ಬೆಳಗಾವಿ ಜಿಲ್ಲೆಯವರು
ವೃತ್ತಿಯಲ್ಲಿ ಪ್ರಾಥಮಿಕ ಶಾಲಾ ಸಹಶಿಕ್ಷಕರು
ಓದುವುದು, ಕತೆ0ಕವಿತೆ ಬರೆಯುವುದು ಇವರ ಹವ್ಯಾಸಗಳು

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ