ಬಹು ಆಯಾಮದ ಕವಿತೆಗಳು: ಎನ್.ಎಸ್. ಶ್ರೀಧರ ಮೂರ್ತಿ ಮುನ್ನುಡಿ
ಕವಿತೆಯ ಆರಂಭದಲ್ಲಿ ಕವಿ ಸತ್ತು ಹೋಗಲು ಬಯಸುವ ಚಿತ್ರಣ ಬರುತ್ತದೆ. ಅದೂ ಹಾಡ ಹಗಲು, ಸಾವಿನ ಕಾರಣ ಜೇಡದ ಉದರದ ಎಳೆ ಕಾಣಲು.. ದಾರಿಯ ತೋರಲು ಮೀಮಾಂಸಾ ಶಾಸ್ತ್ರದಲ್ಲಿ ಶಬ್ದ ಪ್ರಮಾಣಕ್ಕೆ ಮಹತ್ವದ ಸ್ಥಾನವಿದೆ, ಪ್ರತ್ಯಕ್ಷ, ಅನುಮಾನ, ಉಪಮಾನ, ಪ್ರಮಾಣಗಳಿಂದ ತಿಳಯಲಾಗದ್ದನ್ನು ‘ಶಬ್ದ ಪ್ರಮಾಣ’ದಿಂದ ತಿಳಿಯಬಹುದು. ಕಾರಣ ಧರ್ಮ ಭೌತವಸ್ತುವಲ್ಲ. ಧರ್ಮವನ್ನು ತಿಳಿಯಲು ವೇದ -ಅರ್ಥಾತ್ ಶಬ್ದವೊಂದೇ ಸಾಧನ ಅಥವಾ ಪ್ರಮಾಣ.
ಡಾ. ಅಜಿತ್ ಹರೀಶಿ ಕವನ ಸಂಕಲನ “ತೇಲಿಬಿಟ್ಟ ಆತ್ಮಬುಟ್ಟಿ”ಗೆ ಎನ್.ಎಸ್. ಶ್ರೀಧರ ಮೂರ್ತಿ ಮುನ್ನುಡಿ
ಕಾವ್ಯದಿಂದ ಏನನ್ನು ನಿರೀಕ್ಷಿಸುತ್ತೇವೆ?: ಕಮಲಾಕರ ಕಡವೆ ಕೃತಿಗೆ ಸಿರಾಜ್ ಅಹಮದ್ ಮುನ್ನುಡಿ
‘ಮುಗಿಯದ ಮಧ್ಯಾಹ್ನʼ ಸಂಕಲನದಲ್ಲಿ ಸೂಚಿಸುವ ಹಾಗೆ ನಿಧಾನ ನಿಧನದತ್ತ ಸಾಗಿರುವ ಸುತ್ತಲಿನ ಜಗತ್ತಿನ ಬಗೆಗೆ ಕವಿ ಬಹಳ ವ್ಯಾಕುಲನಾಗಿದ್ದಾನೆ. ಇನ್ನೊಂದು ಬಗೆಯಲ್ಲಿ ಇದರಿಂದ ಅವನ ಅಂತರಂಗವೂ ಕ್ರಮೇಣ ವಿಕೃತಗೊಂಡಿರುವ ಸೂಚನೆಗಳು ಇಲ್ಲಿ ಸಿಗುತ್ತವೆ. ಹಕ್ಕಿ ಕಂಡರೂ ಅದು ಏರುವ ವಿಸ್ತಾರವನ್ನು ಕಾಣದ ಅದರ ಹಾರಾಟವನ್ನು ಶಂಕಿಸುವ ಮನಸುಗಳಿಗೆ ಮೊದಲು ಅವರದೇ ಎದೆಯೊಳಗಿನ ಹಕ್ಕಿಯೊಂದು ಸೊರಗಿ ಹೋಗುವ ದುರಂತವನ್ನು ಕವಿ ಕಾಣಿಸುತ್ತಾನೆ.
ಕಮಲಾಕರ ಕಡವೆ “ವಲಸೆ ಹಕ್ಕಿಗಳ ಹುಯಿಲು” ಕವನ ಸಂಕಲನಕ್ಕೆ ಎಸ್ ಸಿರಾಜ್ ಅಹಮದ್ ಮುನ್ನುಡಿ
“ಚಾಂಡಾಳನೊಬ್ಬನ ಆತ್ಮ ವಿಮರ್ಶೆ”: ದೇವಿಕಾ ನಾಗೇಶ್ ಬರಹ
ಬಂಗಾಳದ ರಕ್ತ ಚರಿತ್ರೆಯನ್ನು ಲಕ್ಷಾಂತರ ಜನರ ನಿತ್ಯ ನರಕವನ್ನು ಪ್ರಭುತ್ವಗಳ ನಾಚಿಕೆಗೇಡಿನ ಹುಸಿತನವನ್ನು ಯಾವುದೇ ಮುಚ್ಚುಮರೆಯಿಲ್ಲದೆ ಈ ಕೃತಿ ತೆರೆದಿಡುತ್ತದೆ. ಹಳೆಯ ಕಳೆದ ಶತಮಾನದ ಕೊನೆಯಲ್ಲಿ ನಮ್ಮ ದೇಶದಲ್ಲಿ ಹಲವು ಹೆಸರಾಂತ ರಾಜಕಾರಣಿಗಳು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ನಡೆಸಿದ ತಂತ್ರಗಾರಿಕೆಯನ್ನು ಅವರ ಅಸಲಿ ಮುಖವನ್ನು ತೆರೆದಿಡುತ್ತದೆ. “ವಿರೋಧಿಗಳು ನನಗೆ ಪ್ರೀತಿ ತೋರಿಸಿದಾಗ ಸಾಧ್ಯವಾಗದ್ದು, ಕೋಪ ತೋರಿಸಿದಾಗ ಸಾಧ್ಯವಾಗಿದೆ. ನನ್ನ ಕೋಪವನ್ನು ಅವರು ಜೀವಂತವಾಗಿಟ್ಟಿದ್ದಾರೆ. ಅವರ ಕೋಪದ ಫಲ ಶ್ರುತಿಯೇ ನನ್ನ ಪುಸ್ತಕ.” ಬ್ಯಾಪಾರಿಯವರ ಮಾತಿದು.
ಮನೋರಂಜನ್ ಬ್ಯಾಪಾರಿಯವರ ಆತ್ಮಕತೆಯನ್ನು ಡಾ. ಎಚ್. ಎಸ್.ನಾಗಭೂಷಣ “ಚಾಂಡಾಳನೊಬ್ಬನ ಆತ್ಮ ವಿಮರ್ಶೆ” ಹೆಸರಿನಲ್ಲಿ ಕನ್ನಡಕ್ಕೆ ತಂದಿದ್ದು ಇದರ ಕುರಿತು ದೇವಿಕಾ ನಾಗೇಶ್ ಬರಹ ನಿಮ್ಮ ಓದಿಗೆ
ಭಾವ ಬಿಡುಗಡೆಯ ನಿರುಮ್ಮಳ ಕಥೆಗಳು: ಪೂರ್ಣಿಮಾ ಭಟ್ಟ ಸಣ್ಣಕೇರಿ ಕಥಾಸಂಕಲನಕ್ಕೆ ಅಬ್ದುಲ್ ರಶೀದ್ ಮುನ್ನುಡಿ
ಪೂರ್ಣಿಮಾ ಅವರದು ಅವರೇ ತಮ್ಮ ಮಾತಿನಲ್ಲಿ ಹೇಳುವ ಹಾಗೆ ‘ಕತೆಗಾತಿಯ ವೇಷ’. ಕಥೆಯ ನಿರುದ್ವಿಗ್ನತೆ ಮತ್ತು ನೆಮ್ಮದಿಯ ದೃಷ್ಟಿಯಿಂದ ಈ ವೇಷ ಅಗತ್ಯ ಎಂದು ನನಗೆ ಇಷ್ಟೆಲ್ಲ ಬರೆದಾದ ಮೇಲೆ ಈಗ ಅನ್ನಿಸುತ್ತದೆ. ಬರೆಯುವವರು ತಮ್ಮದೇ ಕಥೆಯಲ್ಲಿ ಕಳೆದುಹೋಗುವ ಅಪಾಯದಿಂದ ಬಿಡುಗಡೆಗೊಳ್ಳುವ ದಾರಿ ಇದು. ಇದು ಬಹು ದೊಡ್ಡ ಸವಾಲಿನ ದಾರಿಯೂ ಹೌದು. ಬರೆಯುವವರಿಗೆ ಈ ದಾರಿಯಲ್ಲಿ ಕ್ರಮಿಸಲು ಬಹಳ ಲೋಕಜ್ಞಾನ ಇರಬೇಕಾಗುತ್ತದೆ. ಸಕಲ ಜೀವ ವ್ಯಾಪಾರಗಳ ಕುರಿತು ಒಂದು ಸಮತೂಕದ ನಿರ್ಲಿಪ್ತತೆ ಬೇಕಾಗುತ್ತದೆ.
ಪೂರ್ಣಿಮಾ ಭಟ್ಟ ಸಣ್ಣಕೇರಿ ಕಥಾಸಂಕಲನ “ಕತೆ ಜಾರಿಯಲ್ಲಿರಲಿ” ಕೃತಿಗೆ ಅಬ್ದುಲ್ ರಶೀದ್ ಬರೆದ ಮುನ್ನುಡಿ
`ಅಂತರಿಕ್ಷದಲ್ಲಿ ವಿಹಾ’ ಮಕ್ಕಳ ವೈಜ್ಞಾನಿಕ ಫ್ಯಾಂಟಸಿಯ ಲೋಕ: ಮಂಡಲಗಿರಿ ಪ್ರಸನ್ನ ಬರಹ
ವಿಹಾ ಮತ್ತು ಆಕೆಯ ಗೆಳೆಯ ಚಿಂಟು ಅವರ ಕೆಲ ವೈಜ್ಞಾನಿಕ ಸಂಭಾಷಣೆಗಳು ಆಸಕ್ತಿದಾಯಕ. ನಿದ್ದೆಯಲ್ಲೂ ಅಂತರಿಕ್ಷ, ರಾಕೇಟ್, ಪ್ಯಾರಾಚೂಟ್….. ಎಂದೆಲ್ಲ ಬಡಬಡಿಸುವ ವಿಹಾ, ಸ್ವೀಟೋ ಏಲಿಯನ್ಸ್ ಜೊತೆ ನಡೆಸುವ ಸಂಭಾಷಣೆ ಮಕ್ಕಳ ಯೋಚನಾ ಲಹರಿಯ ವಿಸ್ತಾರಕ್ಕೆ ಇಂಬುಕೊಟ್ಟಂತಿದೆ. ವಿಹಾಳ ಕನಸು, ಸ್ವೀಟೋ ಬಂದ ದಿನ, ಫ್ಲೈಯಿಂಗ್ ಸಾಸರ್ನಲ್ಲಿ ಏಲಿಯನ್ಸ್, ಅಂತರಿಕ್ಷದಲ್ಲಿ ವಿಹಾ, ಮೊದಲಾದ ಅಧ್ಯಾಯಗಳಲ್ಲಿ ವಿಹಾಳ ಸಾಹಸ, ಆಕೆಯ ಕಲ್ಪನಾ ಶಕ್ತಿ, ಧೈರ್ಯ, ಹೊಸತನ್ನು ಕಲಿಯಬೇಕು, ಮಾಡಬೇಕೆನ್ನುವ ಹಂಬಲದ ತುಡಿತವಿದೆ.
ವಸು ವತ್ಸಲೆ ಬರೆದ `ಅಂತರಿಕ್ಷಾದಲ್ಲಿ ವಿಹಾʼ ಮಕ್ಕಳ ಕೃತಿಯ ಕುರಿತು ಮಂಡಲಗಿರಿ ಪ್ರಸನ್ನ ಬರಹ
ಸಂಬಂಧ ಸೂಕ್ಷ್ಮಗಳ ಗಾಢ ಸ್ಪಂದನೆಯ ‘ನೀಲಿ ನಕ್ಷೆ’: ಸುನಂದಾ ಕಡಮೆ ಬರಹ
ದಿಕ್ಕನ್ನು ನೆನಪಿನಲ್ಲಿಟ್ಟುಕೊಳ್ಳುವಂತಿದ್ದ ಬೋರ್ಗರೆವ ನೀಲಿ ಕಡಲಿನ ಬಾಲ್ಯದ ಸಂಗಾತಿ ಸರಯೂ ನಂತರ ಹೋಗಿ ಸೇರಿದ ಮುಂಬೈ ನಗರದ ಮೂರೂ ಕಡೆಗಳಲ್ಲಿ ಸಮುದ್ರ ಕಂಡು ದಿಕ್ಕು ಗುರುತಿಸಲು ಬಾರದೇ ಗಲಿಬಿಲಿಗೊಂಡವಳು. ಮೊದಲನೇ ತರಗತಿಯಲ್ಲೇ ಮೂರನೇ ರ್ಯಾಂಕ್ ಬಂದಾಗ ಊರಿಗೆಲ್ಲ ಪೇಡೆ ಹಂಚಿ ಅಪ್ಪನಿಂದ ಹೊಡೆಸಿಕೊಂಡ ಅಮ್ಮನನ್ನು ಕಾಣುತ್ತ ಬೆಳೆದ ಸರಯೂ ಸದಾ ತನ್ನಪ್ಪ ತನ್ನನ್ನು ಕಡೆಗಣಿಸುತ್ತಿದ್ದಾನೆಯೇ ಎಂದು ವಾರಗಣ್ಣಲ್ಲೇ ಗಮನಿಸುತ್ತ ಬಂದವಳು.
ಅಮಿತಾ ಭಾಗವತ್ ಕಾದಂಬರಿ ‘ನೀಲಿ ನಕ್ಷೆ’ಯ ಕುರಿತು ಸುನಂದಾ ಕಡಮೆ ಬರಹ ನಿಮ್ಮ ಓದಿಗೆ
‘ಅಮ್ಮನ್ ಮನೆ ಅಪೀ. ಹೆದರ್ಕ್ಯಳಡʼ…: ಜಯರಾಮ ಹೆಗಡೆ ಜೀವನ ಕಥನದ ಆಯ್ದ ಭಾಗ
ಜಯರಾಮ ಹೊರಗೆ ಬಂದು ಮಡಿ ಬಿಚ್ಚಿ ಅಂಗಿ ಚಡ್ಡಿ ಹಾಕಿಕೊಳ್ಳುವಾಗಲೂ ಕೈ ಕಾಲು ನಡುಕ ಹೋಗಿಲ್ಲ. ಹೊರಬಂದ ಮೇಲೆ ಹೊರಾಂಗಣದಿಂದಲೇ ಒಂದು ಸುತ್ತು ಪ್ರದಕ್ಷಿಣಿ ಹಾಕಿ ದೇವರಿಗೆ ಒಂದು ಸಲ ಕೈಮುಗಿದು ಹೋಗುವುದು ರೂಢಿ. ಹಾಗೇ ಇವನೂ ಆಚೀಚೆ ನೋಡದೆ ಸುತ್ತು ಪ್ರದಕ್ಷಿಣೆ ಬರುತ್ತಿದ್ದಾನೆ. ಏಕಾಏಕಿ ದೇವಾಲಯದ ಮೇಲ್ಛಾವಣಿಯ ಕಡೆ ದೃಷ್ಟಿ ಹೋದಾಗ ಏನನ್ನು ಕಾಣುತ್ತಾನೆ? ನಾನಾ ವಿಧದ ಹಾವುಗಳು ನೇತಾಡುತ್ತಿವೆ. ಅವವುಗಳೇ ಜೊತೆಯಾಟ ಆಡುತ್ತಿವೆ.
ಜಯರಾಮ ಹೆಗಡೆ ಜೀವನ ಕಥನ ‘ಬೀದಿಯ ಬದುಕು’ ಕೃತಿಯ ಆಯ್ದ ಭಾಗ ನಿಮ್ಮ ಓದಿಗೆ
ಖಂಡಕಾವ್ಯಕ್ಕೊಂದು ಪ್ರವೇಶ: ಯು.ಆರ್.ಅನಂತಮೂರ್ತಿ ಮುನ್ನುಡಿ
ಆತ್ಮ ಸಫಲತೆಗಾಗಿ ಆತ್ಮಾರ್ಪಣೆ ಮಾಡಿಕೊಳ್ಳುವ ಹೆಣ್ಣು ಪ್ರಣಯಿನಿಯಾಗಿಯೂ, ಹೆಂಡತಿಯಾಗಿಯೂ, ಮಗಳಾಗಿಯೂ, ತಾಯಿಯಾಗಿಯೂ, ‘ಬಜಾರಿ’ಯಾಗಿಯೂ ಅವನಿಗೆ ಒದಗುತ್ತಾಳೆ. ಇದನ್ನು ನಟಿಸಿ ತೋರಲು ತೇಜಶ್ರೀ ಕವನದಲ್ಲಿ ಒಂದು ಅಪರೂಪದ ಕಾವ್ಯ ಪ್ರಯೋಗವಿದೆ. ಇಲ್ಲಿ ಬರುವ ಅವನು ಪುರಾಣದ ಕೃಷ್ಣನೂ ಹೌದು, ನಿಜದ ಅವನೂ ಹೌದು. ಹಾಗೆಯೇ ರಾಧೆ ಪುರಾಣದ ರಾಧೆಯೂ ಹೌದು, ನಿಜದ ಅವಳೂ ಹೌದು. ಈ ಎರಡು ಸತ್ಯಗಳೂ ಒಟ್ಟಾಗಿ ನಮಗೆ ಭಾಸವಾಗುವುದರಿಂದ ಸಾಮಾಜಿಕ ಸಾಂಸಾರಿಕ ನೀತಿ ಅನೀತಿಗಳನ್ನು ಈ ಕವನ ಮೀರುತ್ತದೆ.
ಜ.ನಾ. ತೇಜಶ್ರೀ ಖಂಡಕಾವ್ಯ “ಅವನರಿವಲ್ಲಿ” ಕೃತಿಗೆ ಯು.ಆರ್. ಅನಂತಮೂರ್ತಿ ಮುನ್ನುಡಿ
ದುಃಖಾಂತ ಪಾತ್ರಗಳ ಬಿಕ್ಕುಗಳ ಸಂಕಲನ: ಶುಭಶ್ರೀ ಕಥಾಸಂಕಲನಕ್ಕೆ ವಿಕಾಸ ನೇಗಿಲೋಣಿ ಮುನ್ನುಡಿ
ಶುಭಶ್ರೀ ಬಳಸುವ ಭಾಷೆ ಬಹುತೇಕ ಉತ್ತರ ಕನ್ನಡದ ಕೆಳ ಸಮುದಾಯದ್ದು. ಜೊತೆಗೆ ಮಕ್ಕಳಾಗದವರ ಬಿಕ್ಕು, ಗಂಡನ ದೌರ್ಬಲ್ಯದ ನೆರಳಲ್ಲಿ ನರಳುವ ಹೆಣ್ಮಕ್ಕಳ ಬಿಕ್ಕು, ಮನೆ ತೊರೆದು ಹೋದವರ ನರಳುಗಳನ್ನೆಲ್ಲಾ ಗದ್ಗದಿತ ಕೊರಳಿನಿಂದ ಹೇಳುತ್ತಾ ಹೋಗುತ್ತಾರೆ. ಸಂಕಲನದ ಅತ್ಯಂತ ಗಾಢ ಕತೆಯೆಂದರೆ ‘ಹಗಲು ವೇಷ’. ಮನೆ ತೊರೆದು, ಅನ್ಯ ಕೋಮಿನ ಹುಡುಗನನ್ನು ಮದುವೆಯಾಗಿ, ನರಳುವ ಹೆಣ್ಮಗಳೊಬ್ಬಳ ಚಿತ್ರಣ ಇರುವ ಆ ಕತೆಯಲ್ಲಿ ಧರ್ಮ ಅಥವಾ ದ್ವೇಷದ ಸೋಂಕು ಇಲ್ಲದೇ, ಜಡ್ಜ್ ಮೆಂಟಲ್ ಕೂಡ ಆಗದಂತೆ ಹೆಣ್ಣೊಬ್ಬಳ ಅಂತಃಕರಣದಿಂದ ಆಯೇಷಾ ಅನ್ನುವ ಪಾತ್ರವನ್ನು ಕತೆಗಾರ್ತಿ ನಿರ್ವಹಿಸಿದ ಮೆಚ್ಚುವಂತಿದೆ.
ಶುಭಶ್ರೀ ಭಟ್ಟ ಹೊಸ ಕಥಾಸಂಕಲನ “ಬಿದಿಗೆ ಚಂದ್ರಮನ ಬಿಕ್ಕು” ಕೃತಿಗೆ ವಿಕಾಸ್ ನೇಗಿಲೋಣಿ ಬರೆದ ಮುನ್ನುಡಿ










