Advertisement
ಮಮತಾ ಅರಸೀಕೆರೆ ಬರೆದ ಈ ದಿನದ ಕವಿತೆ

ಮಮತಾ ಅರಸೀಕೆರೆ ಬರೆದ ಈ ದಿನದ ಕವಿತೆ

ತಣಿಸಿ ಮಣಿಸಬೇಕಾಗಿದೆ ಒಲವು

ಕಳೆದು ಹೋಗುತ್ತಿದ್ದೇನೆ
ನಿನ್ನದೇ ಧ್ಯಾನದಲ್ಲಿ
ಸುರಿವ ಪ್ರತೀ ಮಳೆಯ
ಹನಿಯಲ್ಲು ಪುಟಿಯುವ
ನಿನ್ನದೇ ಬಿಂಬ
ಕಷ್ಟವಾಗಿದೆ ಸಂತೈಸುವುದು
ಚಳಿಯ ಅಲೆಗಳನ್ನು ಎಷ್ಟೆಂದು
ಸಹಿಸೀತು ತನು ಪದರ
ಬಯಸುವ ಮಗು ಮನಸಿಗೆ
ನಿನ್ನದೇ ನೆನಪಿನಾಧಾರ
ದೇಹದ ಇಕ್ಕೆಲಗಳ ಬಿಸಿಗೆ
ಪದೇಪದೇ ಅದೇ ಕನವರಿಕೆ
ಬಳಸಿದ ನಿನ್ನದೇ ಬಾಹುಗಳೆ
ಬೇಕೇಬೇಕೆಂಬ ಆಪ್ತ ಕಾತರಿಕೆ
ಕಾಣಬೇಕೆಂಬ ಬಯಕೆಗೆ ಅದೆಷ್ಟು
ಸಾರಿ ಕೂಗಿ ಹೇಳುವ ತೀವ್ರ ಭಾವ
ನದಿಗುಂಟ ಸಾಗಿದ ಸಣ್ಣತೊರೆ
ಬೆರೆತಂತೆ ಮರೆತಂತೆ ತನ್ನ ಅಸ್ಥಿತ್ವ
ಕಣಿವೆ, ಕೊರೆತಗಳಲ್ಲಿ ತಮ್ಮನೇ
ಮರೆವ ನುಣ್ಣನೆ ಮರಳಿನ ಹಾಗೆ
ತಣಿಸು ಮಣಿಸಬೇಕಾಗಿದೆ ಒಲವು
ಸುಮ್ಮನೆ ಬಂದುಬಿಡು ಹೀಗೆ

ಮಮತಾ ಹಾಸನ ಜಿಲ್ಲೆಯ ಅರಸೀಕೆರೆಯವರು. ‘ಸಂತೆ ಸರಕು’ ಅವರ ಕವನ ಸಂಕಲನ.
‘ಕಾಲಡಿಯ ಮಣ್ಣು’ ಎಂಬ ಅನುವಾದಿತ ಕೃತಿ ಪ್ರಕಟಿಸಿದ್ದಾರೆ.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

2 Comments

  1. ಕೊಟ್ರೇಶ್ ಅರಸೀಕೆರೆ ಮಾಡಿ

    ಚೆನ್ನಾಗಿದೆ

    Reply
  2. Uday Itagi

    ಸುಂದರ ಪ್ರೇಮಕವ

    Reply

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ