ಚಿಗರಿ ಬಸ್ಸಿನ ಗಂಧರ್ವ: ಲಿಂಗರಾಜ ಸೊಟ್ಟಪನವರ್ ಪ್ರಬಂಧ
ನಾನು ಸರ್ಗೆ ಐದುನೂರು ಕೊಟ್ಟೆ.. ಅವರು ಮಡಚಿ ಇಟ್ಟುಕೊಂಡರು. ಆಯ್ತು ಎಂದರು.. ನಾನು ನಿಂತೇ ಇದ್ದೆ. ಯಾಕೋ ಅಂದರು.. ನಾನು ಮತ್ತೆ ಐದು ನೋಟು ಕೊಟ್ಟೆ. ಅವರು ಹೈರಾಣ. ಪ್ರಯೋಗ ಮಾಡಿದ್ದು ಅರ್ಥವಾಯಿತು. ಅವರು ಏನೊಂದು ಹೇಳದೆ ಮೌನವಾದರು. ಹೋಗಿ ಕುತ್ಕೋ ಅಂದರು ಡೆಸ್ಕ್ನಲಿ ಕೂತೆ. ಸ್ವಲ್ಪ ಹೊತ್ತು ಹಾಗೇ ನೋಡಿದರು. ಹೀಗೆಲ್ಲ ಮಾಡಬಾರದು.. ಎಂದರು ಅಷ್ಟೇ. ನಾನು ಹಾಗೆಲ್ಲ ಮಾಡಿಯೂ ಐದು ನೋಟುಗಳನ್ನು ಅವರಿಗೆ ಕೊಟ್ಟಿದ್ದೆ. ಅವರು ತಪ್ಪನ್ನು ಮಾತ್ರ ತಿದ್ದುವ ಪ್ರಯತ್ನ ಮಾಡಿದ್ದರು.
ಲಿಂಗರಾಜ ಸೊಟ್ಟಪ್ಪನವರ್ ಬರೆದ ಪ್ರಬಂಧ ನಿಮ್ಮ ಓದಿಗೆ
ಸರ್ಕಸ್ಸು ಮತ್ತು ತಪ್ಪಿದ ಎಂಟು ಲೆಕ್ಕಗಳು: ಕಾಸಿಂ ನದಾಫ್ ಬರಹ
ಆ ನಾಯಿಯ ಬೊಗಳುವಿಕೆಯ ಹಿನ್ನೆಲೆಯಲ್ಲಿಯೇ ನಮ್ಮ ಮನೆಯ ಇದುರಿಗಿದ್ದ, ಅಕ್ಕಪಕ್ಕದ ಎಂಟು ಮನೆಗಳ ದಾಟಿಕೊಂಡು ಮಲಗಿದ್ದ ಇಕ್ಕಟ್ಟಾದ ಬೀದಿಯ ಆ ಕಡೆ ತುದಿಯಲ್ಲಿ ಪ್ರತ್ಯಕ್ಷವಾದ ಎರಡು ಪ್ಯಾಂಟ್ ತೊಟ್ಟ ಆನೆಕಾಲುಗಳಂತವು ಮತ್ತು ಅವುಗಳ ಹಿಂದೆ ಬಾಡಿಗಾರ್ಡುಗಳಂತೆ ನಾಲ್ಕು ಚಡ್ಡಿ ತೊಟ್ಟುಕೊಂಡ ಎರಡೆರಡೆಂಬಂತೆ ಎಂಟು ಕುದುರೆ ಕಾಲುಗಳಂತವುಗಳು ಇತ್ತ ಬರುತ್ತಿದ್ದವು. ಆ ಕಾಲುಗಳ ವೇಗದಲ್ಲಿಯೇ ನೆಲಕ್ಕೆ ಕುಟ್ಟುತ್ತಾ ಬೆತ್ತವು ಒಂದು ಬರುತ್ತಿದ್ದುದನ್ನು ಕೆಳಗಿನಿಂದ ಮೇಲಕ್ಕೆ ಕಣ್ಣಾಡಿಸಿದಾಗ ನಾನು ಅಡಿಯಿಂದ ಮುಡಿಯವರೆಗೂ ನಡುಗುತ್ತಾ ಕ್ಷಣದಲ್ಲಿಯೇ ಬೆವೆತುಬಿಟ್ಟೆ.
ಕಾಸಿಂ ನದಾಫ್ ಭೈರಾಪುರ ಬರೆದ ಶಾಲಾ ದಿನಗಳ ಒಂದು ನೆನಪು ನಿಮ್ಮ ಓದಿಗೆ
ನೀರಿನ ನೆರಳು: ಪ್ರಕಾಶ್ ಪೊನ್ನಾಚಿ ಬರಹ
ಅಗಲಿಕೆ ಆರಂಭದಷ್ಟೇ ನೋವನ್ನು ಅಂತ್ಯಕ್ಕೂ ಉಳಿಸಿಕೊಳ್ಳುತ್ತದೆನ್ನುವ ಸೂತ್ರ ಅವಳಿಂದ ನನಗೀಗ ನಿಧಾನಕ್ಕೆ ಅರ್ಥವಾಗತೊಡಗಿತ್ತು. ಮತ್ತೆ ಮರುಜನ್ಮವಿದ್ದರೆ ನನ್ನಾಣೆ ನೀನೆ ನನಗೆ ಸಿಗಬೇಕು. ಈ ಮಡಿಲು ಸದಾ ನನ್ನ ತಲೆಗೆ ಜೋಪಡಿಯಾಗಬೇಕು. ನಿನ್ನ ಕುರುಚಲು ಗಡ್ಡದ ಕೂದಲು ಸದಾ ನನ್ನ ಕೆನ್ನೆಗೆ ಕಚಗುಳಿ ಇಡುತ್ತಿರಬೇಕು. ನನ್ನ ಎಲ್ಲಾ ಖುಷಿಗಳಿಗೂ ನೀನೇ ಕಾರಣಬೇಕು… ಏನೆಲ್ಲಾ ಹೇಳಿದ್ದಳು ಅವಳು. ಪ್ರೀತಿಸುವುದರಲ್ಲಿ ನಾನೇ ಹುಚ್ಚ ಎಂದುಕೊಂಡ ನನ್ನನ್ನೇ ಸೋಲಿಸಿ ಹುಚ್ಚಿಯಷ್ಟೇ ಪ್ರೀತಿಸುತ್ತಿದ್ದಳು.
ಪ್ರಕಾಶ್ ಪೊನ್ನಾಚಿ ಬರಹ ನಿಮ್ಮ ಓದಿಗೆ
ಬಚ್ಚಲಿನ ಬಗೆಗೊಂದು ಭಾವಸ್ಫುರಣ: ವಿಶ್ವನಾಥ ಎನ್ ನೇರಳಕಟ್ಟೆ ಬರಹ
ಹಾಗೆ ನೋಡಿದರೆ ಮನೆಯ ಉಳಿದ ಎಲ್ಲಾ ಅಂಗಗಳಿಗಿಂತ ಮಿಗಿಲಾಗಿ ಬಚ್ಚಲುಮನೆ ರಾಜಮರ್ಯಾದೆಯನ್ನು ಪಡೆದುಕೊಳ್ಳುತ್ತದೆ. ಅಡುಗೆ ಕೋಣೆ ಎನ್ನುತ್ತೇವೆ. ಮಲಗುವ ಕೋಣೆ ಎನ್ನುತ್ತೇವೆ. ದೇವರ ಕೋಣೆ ಎನ್ನುತ್ತೇವೆ. ಆದರೆ ಬಚ್ಚಲನ್ನು ಬಚ್ಚಲು ಮನೆ ಎನ್ನುತ್ತೇವೆ. ಮನೆಯ ಒಂದು ಭಾಗವಾಗಿರುವ ಬಚ್ಚಲನ್ನು ಇನ್ನೊಂದು ಮನೆಯೇ ಎಂಬಂತೆ ಪರಿಗಣಿಸುತ್ತೇವೆ. ಮನೆಯ ಬೇರಾವ ಕೋಣೆಗಳಿಗೂ ಸಿಗದ ಪ್ರಾಶಸ್ತ್ಯ ಬಚ್ಚಲುಮನೆಗಿದೆ. ಉಳಿದ ಕೋಣೆಗಳು ಈ ತಾರತಮ್ಯವನ್ನು ಒಪ್ಪಿಕೊಳ್ಳದೆ ಪ್ರತಿಭಟಿಸದಿರುವುದೇ ಆಶ್ಚರ್ಯ!
ಬಚ್ಚಲಿನ ಕುರಿತ ಹಲವು ವಿಚಾರಗಳನ್ನು ಬರೆದಿದ್ದಾರೆ ವಿಶ್ವನಾಥ ಎನ್ ನೇರಳಕಟ್ಟೆ
ಪಿಕ್ ನಿಕ್ ಎಂದು ಯಾಮಾರಿಸಿದ್ದು!!!: ಬಸವನಗೌಡ ಹೆಬ್ಬಳಗೆರೆ ಬರಹ
ಊರಿಂದ ಇನ್ನೇನು ಸ್ವಲ್ಪ ದೂರ ಹೋಗಿರಲಿಲ್ಲ, ಅವನ ವಿರೋಧಿಗಳು ಕೈಯಲ್ಲಿ ಕಣಿಗೆ (ಮರದ ಬಡಿಗೆ) ಹಿಡಿದು ನಮ್ಮ ರಸ್ತೆಗೆ ಅಡ್ಡವಾಗಿ ನಿಂತಿದ್ದರು. ವ್ಯಾನು ನಿಲ್ಲಿಸಿ ‘ಯಾಕೆ?’ಎಂದು ಕೇಳಿದಾಗ ಅವರು ವ್ಯಾನಿನ ಸುತ್ತಲೂ ನಿಂತು ‘ನೋಡಲು ನರಪೇತಲ ನಾರಾಯಣರಂತೆ ಇದೀರ ಬೋ… ಮಕ್ಕಳಾ.. ರೌಡಿಗಳೇನ್ರೂ ನೀವು, ತಲೆ ಸೀಳಿ ಬಿಡ್ತೀವಿ’ ಎಂದು ಸಿಟ್ಟಾಗಿ ಕಣಿಗೆ ಎತ್ತುತ್ತಾ ಬೈಗುಳ ಶುರು ಮಾಡಿದರು. ಆಗ ನಾವು ನಡುಗುತ್ತಾ ಕಣ್ಣೀರಿಡುತ್ತಾ ನಮ್ಮ ಹಿನ್ನೆಲೆ ತಿಳಿಸಿದೆವು. ತಾಳ್ಮೆಯಿಂದ ನಮ್ಮ ಮಾತನ್ನು ಅವರು ಕೇಳಿದ್ದರಿಂದಲೋ ಏನೋ ಅವರು ನಮಗೇನೂ ಮಾಡದೇ, ಹೋಗಲು ಸುಮ್ಮನೆ ಬಿಟ್ಟರು!
ಬಸವನಗೌಡ ಹೆಬ್ಬಳಗೆರೆ ಬರಹ ನಿಮ್ಮ ಓದಿಗೆ
ಚಂದವಳ್ಳಿ ತೋಟದ ನೆನಪುಗಳು: ಡಾ. ಸದಾಶಿವ ದೊಡಮನಿ ಬರಹ
ಭೀಮವ್ವ ಆಯಿ ಮಲ್ಲಪ್ಪ ಮುತ್ಯಾನ ಮಾತು, ಮೀರುವಂಗ ಇರಲಿಲ್ಲ. ನನ್ನ ಕೈಯೊಳಗಿನ ಗಂಗಾಳ ತೊಗೊಂಡು, ಬಾ ಅಂತ ಒಳಗ ಕರ್ದು, ವಣಗಿ ಹಾಕಿ ನನ್ನ ಕೈಯಾಗ ಗಂಗಾಳ ಕೊಡುವುದರೊಳಗ ಮಲ್ಲಪ್ಪ ಮುತ್ಯಾ ತಾನ ಎದ್ದು ಬಂದು, ನನ್ನ ಕೈಯೊಳಗಿನ ಗಂಗಾಳ ಇಸಗೊಂಡು, ಒಳಗೆ ಹೋಗಿ, ಇಡೀ ಗಡಗೀನ ಗಂಗಾಳಕ್ಕ ಸುರುವಿ, ‘ತೊಗೊಂಡು ಹೋಗ’ ಅಂತ ಕೊಟ್ಟು ಕಳಿಸಿ ಬಿಡುತ್ತಿದ್ದ.
ತಮ್ಮ ಬಾಲ್ಯಕಾಲದ ನೆನಪನ್ನು ಹಂಚಿಕೊಂಡಿದ್ದಾರೆ ಡಾ. ಸದಾಶಿವ ದೊಡಮನಿ
ಮನಸ್ಸೆಂಬೊ ಮಾಯಾವಿ..: ವಿಶ್ವನಾಥ ನೇರಳೆಕಟ್ಟೆ ಬರಹ
ಮನಸ್ಸು ಎನ್ನುವುದೇ ಹಾಗೆ, ಅನೂಹ್ಯವಾದದ್ದು, ಅಸದೃಶವಾದದ್ದು. ಮನುಷ್ಯನಲ್ಲಿರುವ ಅತ್ಯಂತ ಶಕ್ತಿಶಾಲಿ ಹಾಗೂ ಅತೀ ದುರ್ಬಲ ಅಸ್ತ್ರವೆಂದರೆ ಅದು ಮನಸ್ಸು. ನಮ್ಮ ಬದುಕಿನಲ್ಲಿ ಯಾವತ್ತೋ ನಡೆದ ಘಟನೆಗಳು, ನೋಡಿದ ಸನ್ನಿವೇಶಗಳು ಬದುಕಿನ ಇನ್ಯಾವುದೋ ಕಾಲಘಟ್ಟದಲ್ಲಿ ನಮ್ಮ ಮನಸ್ಸನ್ನು ನಿಯಂತ್ರಿಸುವ ಬಗೆಯಂತೂ ಅತ್ಯದ್ಭುತ. ಮನಸ್ಸನ್ನು ನಿಭಾಯಿಸುವ ಕಲೆಯನ್ನು ಕಲಿತುಕೊಂಡರೆ ಮನುಷ್ಯ ಯಶಸ್ಸನ್ನು ಗಳಿಸಿಕೊಳ್ಳುವುದು ಸುಲಭವಾಗುತ್ತದೆ. ಹಾಗೆಂದು ಈ ಪ್ರಯತ್ನದಲ್ಲಿ ಎಡವಿದರೆ ಬದುಕು ಸಮಸ್ಯೆಗಳ ಗೂಡಾಗುತ್ತದೆ.
ನೇರಳೆಕಟ್ಟೆ ಅವರು ಮನಸ್ಸಿನ ಅಗಾಧತೆಯ ಕುರಿತು ಬರೆದ ಲೇಖನ ಇಂದಿನ ಓದಿಗಾಗಿ.
ನನ್ನಜ್ಜನೂ… ಮತ್ತು ಅವನ ಸೈಕಲ್ಲೂ….: ಬಸವನಗೌಡ ಹೆಬ್ಬಳಗೆರೆ ಪ್ರಬಂಧ
ಮನೆಯಲ್ಲಿ ಸೈಕಲ್ ಇಲ್ಲದ ಹುಡುಗರು ಆ ಊರಲ್ಲಿದ್ದ ಸಬ್ಬೀರಣ್ಣನ ಪಂಕ್ಚರ್ ಶಾಪ್ನಲ್ಲಿ ಬಾಡಿಗೆ ಇರಿಸಿದ್ದ ಸಣ್ಣ ಸೈಕಲ್ಲುಗಳನ್ನು ಹೊಡೆಯುತ್ತಿದ್ದರು. ಇಪ್ಪತ್ತೈದು ಪೈಸೆಗೆ ಅರ್ಧ ಘಂಟೆ ಕಾಲ ಬಾಡಿಗೆ ಕೊಡುತ್ತಿದ್ದನವನು! ಅದ್ಯಾವ ನಂಬಿಕೆ ಮೇಲೆ ಕೊಡುತ್ತಿದ್ದನೋ ಗೊತ್ತಿಲ್ಲ. ಹೊಲಕ್ಕೆ ಬುತ್ತಿ ಒಯ್ಯಬೇಕಾದಾಗ ಮಾತ್ರ ಖುಷಿಯಿಂದ ಸೈಕಲ್ ಕೊಡುತ್ತಿದ್ದ ಅಜ್ಜ ಬೇರೆ ಸಮಯದಲ್ಲಿ ಅದನ್ನು ಮುಟ್ಟೋಕು ಬಿಡ್ತಾ ಇರಲಿಲ್ಲ. ಪೆಟ್ರೋಲ್ ಡೀಸೆಲ್ ಅಂತಾ ಏನೂ ಖರ್ಚು ಆಗೋಲ್ಲ. ಅದ್ಯಾಕಂಗೆ ಆಡ್ತಿದ್ರು ನಮ್ಮಜ್ಜ ಅನ್ನೋದೆ ಇಂದಿಗೂ ನನಗೆ ಉತ್ತರ ಹೊಳೆಯದ ಪ್ರಶ್ನೆಯಾಗಿದೆ!
ಬಸವನಗೌಡ ಹೆಬ್ಬಳಗೆರೆ ಬರೆದ ಪ್ರಬಂಧ ನಿಮ್ಮ ಓದಿಗೆ
ಒರಗಿಕೊಳ್ಳುವ ಮುನ್ನ….
ರಜಾದಿನಗಳ ಮಧ್ಯಾಹ್ನಗಳಲ್ಲಿ ನಾನು ಆಕೆ ಮನೆಯ ಆ ನೀಲಿ ಬಾಗಿಲನ್ನ ಧಡ ಧಡ ಬಡಿಯುತ್ತ ನಿಂತು ಬಿಡುತ್ತಿದ್ದೆ, ಮೊದಮೊದಲು, ಬಾಗಿಲು ತೆಗೆದು ಆಮೇಲ್ ಬಾ ಮಾಮ ಮಕ್ಕೊಂಡಾರು ಅನ್ನುತ್ತಿದ್ದ ಅಕ್ಕ, ಆಮೇಲೆ ಒಳಗಿನಿಂದಲೇ ಕೂಗಲು ಶುರು ಮಾಡಿದಳು. ಆನಂತರ ಉತ್ತರಿಸುವ ಗೋಜಿಗೂ ಹೋಗಲಿಲ್ಲ. ಆಗೆಲ್ಲ ಸಿಕ್ಕಾಪಟ್ಟೆ ಅವಮಾನವಾಗಿ ಕಣ್ಣು ತುಂಬಿಕೊಂಡು ಮನೆಗೆ ಹೋಗುತ್ತಿದ್ದೆ. ನನ್ನ ಅಳುವಿಗೆ ಕಾರಣ ಕೇಳುವಷ್ಟು ವ್ಯವಧಾನ ಯಾರಿಗೂ ಇರಲಿಲ್ಲ. ನನ್ನ ದೋಸ್ತರಾಗಿದ್ದ ಮರಗಳು ಕೂಡ ನನ್ನ ಹತ್ತಿರ ಮಾತು ಬಿಟ್ಟಂತೆ ನನಗೆ ಭಾಸವಾಗುತ್ತಿತ್ತು, ಯಾಕೆಂದರೆ ಅಕ್ಕ ಸಿಕ್ಕಿದ್ದೇ ಸಿಕ್ಕಿದ್ದು… ಮೌನವಾಗಿ ಮಾತನಾಡುವ ಸ್ನೇಹಿತರಿಗಿಂತ ಮಾತನಾಡುವ ಜೀವಕ್ಕೆ ನಾನು ಆದ್ಯತೆ ಕೊಟ್ಟಿದ್ದು ಅವಕ್ಕೂ ಸಿಟ್ಟು ಬಂದಿತ್ತೇನೋ.
ಅಮಿತಾ ರವಿಕಿರಣ್ ಬರಹ ನಿಮ್ಮ ಓದಿಗೆ








