ಹಾಸ್ಯೋತ್ಸವದ ಚಾಲನೆ…: ಎಚ್. ಗೋಪಾಲಕೃಷ್ಣ ಸರಣಿ
ಮಿಡಲ್ ಬರಹಗಾರರ ಗುಂಪು ಒಂದು ಶುರು ಮಾಡುವ ಐಡಿಯಾ ನಮ್ಮಲ್ಲಿ ಬಿತ್ತಿದರು. ಇದು ನಂತರ ಮಿಡಲ್ ಬದಲಿಗೆ ಹಾಸ್ಯಬರಹಗಾರರ ಸಂಘಟನೆ ಆಗಲಿ ಅಂತ ನಿರ್ಧಾರ ಆಯಿತು. ಹಿಂದೆ ಕೈಗಾರಿಕಾ ರಂಗದ ಸಾಹಿತ್ಯ ವೇದಿಕೆ ಆರಂಭಿಸಿದಾಗ ಶ್ರೀ ಆನಂದರಾಮ ಶಾಸ್ತ್ರಿ ಅವರು ನೀತಿ ನಿಯಮ ರೂಪಿಸಿದ್ದರು ಅಂತ ಹೇಳಿದ್ದೆ. ಇದಕ್ಕೂ ಅವರೇ ಆರಂಭಿಕ ಪತ್ರಗಳು ಸಿದ್ಧ ಮಾಡಿದರು. ಇದಕ್ಕೆ ಬೇಕಾದ ನಮ್ಮ ಮೀಟಿಂಗ್ಗಳು ಬೆಂಗಳೂರಿನ ಸಂಗಮ್ ಟಾಕೀಸ್ ಮುಂದೆ ಸೇರಿತು!
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೮೫ನೇ ಬರಹ ನಿಮ್ಮ ಓದಿಗೆ
ಯಾಕಂದ್ರ ನಾ ‘ಹುಡುಗಿ’ ಅದಕಾ ನಾ ಓದ್ಬೇಕು: ಸುವರ್ಣ ಚೆಳ್ಳೂರು ಸರಣಿ
ಆಕಾಶದಾಗಿನ ಸಾಲು ಚುಕ್ಕಿ ನೋಡಿ ನಾನು ನಿದ್ದಿಗೆ ಜಾರಿದೆ. ಮುಂಜೆನೆದ್ದಾಗ ಹೊಲದಾಗ ಮಂಜುಮಂಜಾಗಿತ್ತು, ಬೆಳ್ಳಕ್ಕಿ ಅದಾಗಲೇ ಎದ್ದು ಹೊಲದಾಗ ಹಾರಾಡಿಕ್ಯಂತ ಹೊಲದಿಂದ ಹೊಲಕ್ಕ ಹೊಂಟಿದ್ವು. ನಾನು ಮತ್ತ ಲಕ್ಷ್ಮಮ್ಮತ್ತಿ ಎದ್ದು ಮನಿ ದಾರಿ ಹಿಡದ್ವಿ. ಬೆಳಗಾ ಮುಂಜೇಲೆ ಹೊಲದ ದಾರಿ ಅದೊಂಥರಾ ಯಾವುದೊ ಚಿತ್ರ ಕಂಡಂಗ ಕಾಣತಿತ್ತು, ಆಕಡೆ ಇಕಡೆ ಹಸರು, ಅಲ್ಲಲ್ಲಿ ಹೊಲದಾಗಿದ್ದ ಒಂಟಿಮರ ಅದಕ್ಕಿದ್ದ ಮುಳ್ಳುಗಳು, ಹೊಲದಗುಂಟ ಹರಿತಿದ್ದ ಸಣ್ಣ ಕಾಲುವೆ ಅದರ ದಂಡಿಗಿದ್ದ ಸಮುದ್ರ ಬಾಳೆ ಹೂವು, ಸರ್ಕಾರ್ ಕಳ್ಳಿ ಇವೆಲ್ಲಾ ಆ ಹೊಲದ ಹಾದಿಗೆ ಬಿಡಿಸಿರೊ ಚಿತ್ರಗಳಿದ್ದಂಗ ಇದ್ವು.
ಸುವರ್ಣ ಚೆಳ್ಳೂರು ಬರೆಯುವ “ಆಕಿ” ಸರಣಿ
ಕಾಡುಕೋಳಿ: ಡಾ. ಎಸ್.ವಿ. ನರಸಿಂಹನ್ ಸರಣಿ
ಇನ್ನು ಈ ಕಾಡುಕೋಳಿಗಳನ್ನು ಸಾಕಿ ಬೆಳೆಸುವುದು ಅಸಾಧ್ಯ ಎನ್ನುವುದು ನಿಮಗೆ ತಿಳಿದೇ ಇದೆ. ಹಾಗಿರುವಾಗ ಕೋಳಿಗಳನ್ನು ಸಾಕಿ ಬೆಳೆಸುತ್ತಾರಲ್ಲ ಅದು ಹೇಗೆ ಎಂದು ನೀವು ಕೇಳಬಹುದು. ಗೂಡಿನಲ್ಲಿ ಸಾಕಿ ಬೆಳೆಸುವ ಕೋಳಿಗಳು, ಕೆಂಪು ಕಾಡುಕೋಳಿ ಎಂಬ ಮತ್ತೊಂದು ಪ್ರಭೇದದ ಪಕ್ಷಿ. ಕೆಂಪು ಕಾಡುಕೋಳಿಗಳು ಭಾರತದ ಉತ್ತರ ಮತ್ತು ಪೂರ್ವ ಭಾಗದಲ್ಲಿರುವ ರಾಜ್ಯಗಳ ಹಾಗೂ ಪೂರ್ವ ಏಶಿಯಾ ದೇಶಗಳ ಕಾಡುಗಳಲ್ಲಿ ಮಾತ್ರ ಕಂಡುಬರುವ ಹಕ್ಕಿಗಳು. ಸುಮಾರು 8-10 ಸಾವಿರ ವರ್ಷಗಳಿಂದಲೂ, ಪ್ರಪಂಚದ ನೂರಾರು ದೇಶಗಳಲ್ಲಿ, ಮೊಟ್ಟೆ ಹಾಗೂ ಮಾಂಸಕ್ಕಾಗಿ ಸಾಕುತ್ತಿರುವುದು ಇದೇ ಕೆಂಪು ಕಾಡುಕೋಳಿಗಳನ್ನು ಎಂದರೆ ನಿಮಗೆ ಆಶ್ಚರ್ಯವಾಗಬಹುದು!
ಡಾ. ಎಸ್.ವಿ. ನರಸಿಂಹನ್ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿ
ಗಣೇಶ ಮೂರ್ತಿಯ ಗಿಫ್ಟ್ ಮಹಿಮೆ…: ಬಸವನಗೌಡ ಹೆಬ್ಬಳಗೆರೆ ಸರಣಿ
ಒಮ್ಮೆ ವೈದ್ಯರ ಬಳಿ ನಮ್ಮ ಕಂಪೆನಿಯ ಬಗ್ಗೆ ಹೆಚ್ಚಿಗೆ ಹೇಳಲು ಹೋಗಿ ಅವರಿಂದ ಉಗಿಸಿಕೊಂಡಿದ್ದೆ. ಚಿಕ್ಕವನಿದ್ದಾಗಿಂದಲೂ ನಾನು ಮತ್ತೊಬ್ಬರಿಂದ ಹೇಳಿಸಿಕೊಳ್ಳುವುದಾಗಲಿ, ಬಯ್ಯಿಸಿಕೊಳ್ಳುವ ಕೆಲಸ ಮಾಡಿರಲಿಲ್ಲ. ಒಂದೊಮ್ಮೆ ಈ ಕೆಲಸದಲ್ಲಿ ಯಾರಾದ್ರೂ ಏನಾದ್ರೂ ಅಂದರೆ ಕೆಲಸವನ್ನು ಬಿಟ್ಟು ಹೋಗುವಷ್ಟು ಸಿಟ್ಟು ಬರುತ್ತಿತ್ತು. ಆದರೆ ನನಗೆ ಜೀವನದಲ್ಲಿ ಸೆಟ್ಲ್ ಆಗಬೇಕೆಂಬ ಮನೋಭಿಲಾಶೆ ಇದ್ದುದರಿಂದ ಎಷ್ಟೇ ಒತ್ತಡ ಬಂದರೂ ನಾನು ಸಹಿಸಿಕೊಳ್ಳುತ್ತಿದ್ದೆ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಅರವತ್ತನೆಯ ಕಂತು ನಿಮ್ಮ ಓದಿಗೆ
ಬ್ಯಾಟಿ ಬಸಮ್ಮನ ಕತೀ ಕೇಳ್ರಿ…: ಸುವರ್ಣ ಚೆಳ್ಳೂರು ಸರಣಿ
ನಾನು ಹಿಂಗ ನನ್ನ ಬದುಕನ್ನ ನಾನಾ ಕಟ್ಟಿಗ್ಯಂಡು ದುಡ್ಯಾಕತೀನಿ, ಹೆಣಮಕ್ಕಳಂದ್ರ ಬರೀ ಅಂದ ಚಂದ ಮೈ ಬಣ್ಣ ಅನ್ಕೊಂಡಿರೋರ್ನ ಮಿರ್ಚಿನ ಬಿಸಿ ಎಣ್ಯಾಗ ಎದ್ದಿದಂಗ ಎದ್ದಿ ಕಳಸ್ತಿನಿ, ದಾರಿಯೊಳಾಗ ದಿಕ್ಕಿರಲಾರದ ಸಿಕ್ಕ ಈ ರಾಮಪ್ಪಗೂ ನನಗೂ ಕತಿ ಕಟ್ಟತಾರ ಆದ್ರ, ತಲಿ ಸರಿ ಇಲ್ಲದಿರೊ ಆತಗ ಬೇಕಾಗಿರಾದು ಎರಡೊತ್ತಿನ ಊಟ ಅಷ್ಟ! ಎರಡಕ್ಷರ ಗೊತ್ತಿರೊ ನನಗ, ಯಾವ ಜಾತಿ ಜಿಡ್ಡಿನ ಮ್ಯಾಗೂ ನಂಬಿಕಿ ಇಲ್ಲ. ಊರಿನ್ಯಾರು ಅದೆಷ್ಟSS ಕತಿ ಕಟ್ಟಿದರೂನು ನಾನು ನನ್ನ ಕತಿನ ನಾನೇ ಬರಿಯಾಕಿ’ ಅಂತ ಮತ್ತೊಮ್ಮೆ ಜೋರಾಗಿ ನಗತೊಡಗಿದ್ಲು. ಆಕಿ ಮಾತ್ ಕೇಳಿ ಮೈ ಜುಮ್ಮಂದಂಗಾತು.
ಸುವರ್ಣ ಚೆಳ್ಳೂರು ಬರೆಯುವ “ಆಕಿ” ಸರಣಿಯ ಒಂಭತ್ತನೆಯ ಬರಹ
ಮೆಕ್ಸಿಕೋ ದೇಶದ ಕವಿ ವಿಕ್ಟರ್ ಡಿ ಲಾ ಕ್ರೂಜ಼್ ಕಾವ್ಯ ಪರಿಚಯ: ಎಸ್. ಜಯಶ್ರೀನಿವಾಸ ರಾವ್ ಸರಣಿ
ಜ಼ಪೊಟೆಕ್-ನಲ್ಲಿ ಅವರ ಭಾಷೆಯನ್ನು ‘ಡೈಡ್ಕ್ಸಾಜಾ’ (Diidxazá) ಎಂದು ಕರೆಯಲಾಗುತ್ತದೆ, ಇದು “ನಾಲಿಗೆ” ಮತ್ತು “ಮೋಡ” ಪದಗಳನ್ನು ಸಂಯೋಜಿಸಿ “ಮೋಡಗಳ ಭಾಷೆ” ಎಂಬ ಅರ್ಥ ಬರುವ ಪದವಾಗಿದೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಮೆಕ್ಸಿಕೋ (Mexico) ದೇಶದ ಜ಼ಪೊಟೆಕ್ ಮೂಲಜನಾಂಗಕ್ಕೆ ಸೇರಿದ ಜ಼ಪೊಟೆಕೋ (Zapoteco) ಭಾಷಾ ಕವಿ ವಿಕ್ಟರ್ ಡಿ ಲಾ ಕ್ರೂಜ಼್-ರವರ (Victor De La Cruz, 1948-2015) ಕಾವ್ಯದ ಕುರಿತ ಬರಹ
ಕಂಚುಕುಟಿಗ: ಡಾ. ಎಸ್.ವಿ. ನರಸಿಂಹನ್ ಸರಣಿ
ಕಂಚುಕುಟ್ಟಿಗಗಳಿಗೆ ಹಣ್ಣುಗಳೆಂದರೆ ಬಹಳ ಇಷ್ಟ, ಅದರಲ್ಲೂ ನಗರವೇ ಆಗಿರಲಿ, ಗ್ರಾಮಾಂತರ ಪ್ರದೇಶವೇ ಆಗಿರಲಿ, ಯಾವುದೇ ಮರವಿರಬಹುದು, ಅದರಲ್ಲೂ ಅತ್ತಿ, ಆಲ, ಅರಳಿ, ಬಸರಿ ಹಣ್ಣುಗಳೆಂದರೆ, ಗುಂಪಾಗಿ ಬಂದು ಔತಣ ಕೂಟದಲ್ಲಿ ಭಾಗವಹಿಸುತ್ತವೆ; ಅಲ್ಲದೆ ಕೀಟಗಳು, ಸಣ್ಣ ಜೀವಿಗಳು ಮತ್ತು ಹೂ ಮಕರಂದವೂ ಇವುಗಳ ಆಹಾರದ ಪಟ್ಟಿಯಲ್ಲಿ ಸೇರಿವೆ. ಮಹಾ ಬಕಾಸುರ ಕೂಡ! ಇವು ಮಕರಂದವನ್ನು ಹೀರುವಾಗ, ಕೊಕ್ಕಿನ ಬುಡದಲ್ಲಿರುವ ಕೂದಲಿನಲ್ಲಿ ಪರಾಗಗಳು ಅಂಟಿಕೊಳ್ಳುತ್ತವೆ.
ಡಾ. ಎಸ್.ವಿ. ನರಸಿಂಹನ್ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿಯಲ್ಲಿ ಕಂಚುಕುಟಿಗ ಹಕ್ಕಿಗಳ ಕುರಿತ ಬರಹ ಇಲ್ಲಿದೆ
ಸಾಹಿತಿಗಳ ಶೋಷಣೆ…: ಎಚ್. ಗೋಪಾಲಕೃಷ್ಣ ಸರಣಿ
ಈಗಲೂ ಅಂದಿನ ನಮ್ಮ ಭಂಡಾಟ ನೆನೆಸಿಕೊಂಡರೆ ಈಗಲೂ ನಾಲ್ಕು ತೆಪರಾಕಿ ನಮಗೆ ನಾವೇ ಕೊಟ್ಕೋಬೇಕು ಅನಿಸುತ್ತೆ ಸರ. ಪಾಪ ಕನ್ನಡದ ಸಾಹಿತಿಗಳು ಬಡವರು, ಕಾಸು ಕಾಸಿಗೆ ಪರದಾಡುವಷ್ಟು ಬಡವರು ಅಂತ ಗೊತ್ತಿದ್ದೂ ಅವರಿಗೆ ಸಂಭಾವನೆ ಕೊಡದೆ ಬರೀ ಅರ್ಧ ಕಪ್ ಕಾಫಿ ಎರಡು ಬಿಸ್ಕತ್ನಲ್ಲಿ ಅವರ ನಾಲ್ಕೈದು ಗಂಟೆ ವೇಸ್ಟ್ ಮಾಡ್ತಾ ಇದ್ದೆವು ಅನ್ನುವ ಸಂಕಟ! ಮೊದಮೊದಲು ಹೀಗೆ ಸಭೆ ನಡೆಸುವಾಗ ಮುಜುಗರ ಅಂತ ಅನಿಸುತ್ತಾ ಇರಲಿಲ್ಲ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ
ಸುಂದರ ಕಾಡಿನ ರೋಚಕ ಕಥೆಗಳು-೧೨: ರೂಪಾ ರವೀಂದ್ರ ಜೋಶಿ ಸರಣಿ
ಬೆಳಗಾಗುವುದೊರಳಗೆ, ಸುದ್ದಿ ಕಾಳ್ಗಿಚ್ಚಿನಂತೇ ಎಲ್ಲೆಡೆ ಹರಡಿತ್ತು. ಈಗ ತನಿಖೆ ಶುರುವಾಯಿತು. ತನಿಖೆಯಲ್ಲಿ ಹೊರಬಿದ್ದ ವರದಿ ನಿಜಕ್ಕೂ ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು. ಈ ಕೆಲಸ ಮಾಡಿದವನೊಬ್ಬ ದೊಡ್ಡ ರಾಜಕೀಯ ವಶೀಲಿ ಇರುವ ಮನುಷ್ಯ. ಅಲ್ಲಿಯ ತನಕವೂ ಸುತ್ತೂರಿನವರ ಕಣ್ಣಲ್ಲಿ ಆತ ಪ್ರತ್ಯಕ್ಷ ದೇವರಾಗಿದ್ದ. ಬಡವರ ಪಾಲಿನ ಕಾಮಧೇನು ಎಂದೆಲ್ಲ ಹೆಸರು ಗಳಿಸಿದ್ದ ಆತ, ಮಾಡುತ್ತಿದ್ದ ಈ ಕಳ್ಳತನದ ಕೆಲಸ ಜಗಜ್ಜಾಹೀರಾದ ದಿನ ಎಲ್ಲರೂ ಆತನನ್ನು ಮನಸಾರೆ ಶಪಿಸಿದ್ದರು.
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿ









