ರೆಂಬ್ರಾಂಟ್ನ ಕಣ್ಣಿಗೆ ಬಿದ್ದ ಹಾನ್ಸ್ಕೆನ್ ಎಂಬಾನೆಯ ಕತೆ-ವ್ಯಥೆ
ಬಿಗ್ ಬೇಬಿ ಕೆಡಾಕೆಸ್ನಲ್ಲಿ ಬಂದಿಳಿದಾಗ ಅವನನ್ನು ಭಾರೀ ಸಂಭ್ರಮದಿಂದ ಸ್ವಾಗತಿಸಲಾಯಿತು. ಆ ಸಂಭ್ರಮಾಚರಣೆಯ ಅಂಗವಾಗಿ ಪಟ್ಟಣದ ಮೇಯರ್ ಶಾಲಾ ಕಾಲೇಜುಗಳಿಗೆ ಮೂರು ದಿನದ ರಜೆಯನ್ನೂ ಘೋಷಿಸಿದನಂತೆ. ಮುಂದಿನ ಕೆಲ ತಿಂಗಳ ಕಾಲ, ನಮ್ಮ ಬೆಂಗಳೂರಿನ ಬಿಗ್ ಬೇಬಿ, ತನ್ನೆಲ್ಲಾ ಕುಟುಂಬದವರಿಂದ ಬೇರಾಗಿ, ಸ್ಪೇನಿನ ಸಾಲ್ವಡಾರ್ ಡಾಲಿಯ ಖಾಸಗಿ ಉದ್ಯಾನದಲ್ಲಿ ಒಬ್ಬನೇ ಸುತ್ತಾಡಿದನಂತೆ. ಆದರೆ, ಅವನು ಬೆಳೆದಂತೆ, ನೋಡಿಕೊಳ್ಳುವುದು ಕಷ್ಟವಾಗಿ, ಬಾರ್ಸೆಲೋನಾ ನಗರದ ಮೃಗಾಲಯಕ್ಕೆ ಅವನನ್ನು ರವಾನಿಸಲಾಯಿತಂತೆ.
ಸಹಜತೆಯ ದುಕೂಲವುಟ್ಟ ಪರ್ವ ನಾಟಕದ ಸುತ್ತ
‘ಪರ್ವ’ ನಾಟಕ ನನಗೆ ಇಷ್ಟವಾದದ್ದು ‘ಯಮ’ನನ್ನು ಸಹಜ ಮನುಷ್ಯನನ್ನಾಗಿ ಬಿಂಬಿಸುವ ಬಗೆಯಲ್ಲೇ ಇಡೀ ಪ್ರಯೋಗವನ್ನು ಸಿದ್ಧಮಾಡಿದ್ದ ಬಗೆಯಿಂದ. ಯಾವ ಪಾತ್ರವನ್ನೂ ಪುರಾಣ ಚಿತ್ರಿಸಿರುವ ಭಯಂಕರ ಯಮನನ್ನಾಗಿಸಲು ಮುಂದಾಗಿಲ್ಲ. ಎಲ್ಲೋ ಒಂದೆರಡು ಕಡೆ ಸಂಜಯನನ್ನು ಇಂದಿನ ವಾಹಿನಿಗಳ ಸುದ್ದಿ ವಾಚಕನ ರೀತಿಯಲ್ಲಿ ಸಂಗೀತ ಸಮೇತ ಬಿಂಬಿಸಿದ್ದು ಕೊಂಚ ಮಸಾಲೆ ಬೆರೆಸಿದಂತೆ ಅನಿಸಿತು.- ಪರ್ವ ನಾಟಕದ ಕುರಿತು ಎನ್. ಸಿ. ಮಹೇಶ್ ಬರೆದಿದ್ದಾರೆ
ನಾವು ಬೆಳಕಾಗಿರಬೇಕು ಇಲ್ಲವೆ ಶಾಂತವಾಗಿರಬೇಕು
ಮಾನವ ಸಹಜವಾಗಿ ಸೆಕ್ಯೂಲರ್ ಆಗಿರುತ್ತಾನೆ. ಆದರೆ ಅವನನ್ನು ಪ್ರಜ್ಞಾಪೂರ್ವಕವಾಗಿ ಕಮ್ಯೂನಲ್ ಮಾಡಿದರೂ ಅದು ಬಹಳದಿನ ಬಾಳಿಕೆ ಬರುವುದಿಲ್ಲ. ಮತ್ತೆ ಮತ್ತೆ ಜನ ಸಹಜತೆಯನ್ನು ಬಯಸುತ್ತಲೇ ಇರುತ್ತಾರೆ. ಹೀಗಾಗಿ ಕೋಮುವಾದಿಗಳು ಮತ್ತು ಮೂಲಭೂತವಾದಿಗಳ ಆಟ ನಿರಂತರವಾಗಿ ನಡೆಯುವುದಿಲ್ಲ. ಜನರು ವಿವಿಧ ಜಾತಿ ಮತ್ತು ಧರ್ಮಗಳ ಚೌಕಟ್ಟಿನಲ್ಲಿ ಸಿಲುಕಿದ್ದರೂ ದೈನಂದಿನ ಬದುಕಲ್ಲಿ ಇವೆಲ್ಲವುಗಳನ್ನು ಮೀರಿದವರೇ ಆಗಿರುತ್ತಾರೆ. ರಂಜಾನ್ ದರ್ಗಾ ‘ನೆನಪಾದಾಗಲೆಲ್ಲ ‘ ಸರಣಿಯ 20ನೇ ಕಂತಿನಲ್ಲಿ ತಮ್ಮ ಬಾಲ್ಯದ ನೆನಪುಗಳನ್ನು ಅನಾವರಣಗೊಳಿಸಿದ್ದಾರೆ.
ಮಕ್ಕಳನ್ನು ಓದಿಸಿದ ಮಾವಿನಮರಗಳು
ಅಡ್ವಾನ್ಸ್ ಕೊಟ್ಟೋದ ಸಾಬರು ಕೆಲವೊಮ್ಮೆ ರೇಟ್ ಬಿದ್ದೋಗಿದೆ ಎಂದು ಮರದಿಂದ ಹಣ್ಣು ಉದುರಿ ಹೋಗುತ್ತಿದ್ದರೂ ಬರುತ್ತಿರಲಿಲ್ಲ. ಅಪ್ಪ ಇನ್ನೂರೊ ಮುನ್ನೂರೊ ಅಡ್ವಾನ್ಸ್ಗೆ ಕಟಿಬಿದ್ದು ಉದುರುವ ಹಣ್ಣುಗಳನ್ನು ನೋಡಿಕೊಂಡು ಇನ್ನೊಬ್ಬರಿಗೂ ಕೊಡದೆ ಲಾಸ್ ಮಾಡಿಕೊಂಡದ್ದೂ ಇದೆ. ಸಾಬರು ಮರಗಳಿಗೆ ಕೊಟ್ಟೋದ ಅಡ್ವಾನ್ಸ್ ಹಣದಲ್ಲಿ ಅಪ್ಪ ಪ್ರತಿ ವರ್ಷ ನಮಗೆ ಬರೆಯುವ ನೋಟ್ ಬುಕ್ಕು ಕೊಡಿಸುತ್ತಿತ್ತು, ಪೂರ್ತಿ ಹಣ ಕೊಟ್ಟ ಮೇಲೆ ಅಕ್ಕಂದಿರಿಗೆ ಮತ್ತು ನಮಗೆ ಯೂನಿಫಾರ್ಮ್ ಕೊಡಿಸುತ್ತಿತ್ತು.
ಈ ಮಾಣಿ ಎಂತಕ್ಕೂ ಪ್ರಯೋಜನವಿಲ್ಲ…
ಅಜ್ಜ ಬಲಿಪರು ಪದ್ಯ ಹೇಳಿಕೊಡುತ್ತಿದ್ದ ಶೈಲಿ ಅನನ್ಯವಾದದ್ದು, ಇನ್ನೊಬ್ಬರು ಅನುಸರಣೆ ಮಾಡಲಾಗದ್ದು. ಪದ್ಯವನ್ನು ಬಾಯಿಯಲ್ಲಿ ಹೇಳುತ್ತಾ ಎರಡೂ ಕೈಯ್ಯಲ್ಲಿ ಪದ್ಯದ ಛಂದೋಗತಿಯನ್ನು ತೋರಿಸುತ್ತಾ ಇರುವಂತೆಯೋ ಎನ್ನುವಂತೆ ಅಥವಾ ಪದ್ಯ ನಿಬದ್ಧವಾದ ತಾಳದ ಘಾತಗಳನ್ನು ಹಸ್ತದ ಬೀಸುವಿಕೆಯಿಂದ ತೋರಿಸುತ್ತಾ ಹೇಳಿಕೊಡುತ್ತಿದ್ದರು.
ಇದರಿಂದ ಸಹಜವಾಗಿ ಅವರ ಶರೀರದ ಭಾಷೆಯೂ ಶಾರೀರದ ಭಾಷೆಯೂ ಕಲಿಯುತ್ತಿರುವ ಮೊಮ್ಮಗ ಕಿರಿಯ ಬಲಿಪರಲ್ಲಿ ಹಾಡಿನ ಅಂತರ್ಯವಾದ
ಹೀಗೊಂದು ಕುಟುಂಬದ ಕೆಲವೊಂದು ಪುಟಗಳು
ಒಂದು ಕಾಲದಲ್ಲಿ ಬಹಳ ಜನಪ್ರಿಯವಾಗಿದ್ದ ತಾಯಿನಾಡು ಪತ್ರಿಕೆಯನ್ನು ಆರಂಭಿಸಿ ಮುನ್ನಡೆಸಿದ ಪಾಲಹಳ್ಳಿ ರಾಮಯ್ಯ ಅವರ ಮಗ ಪಾಲಹಳ್ಳಿ ವಿಶ್ವನಾಥ್ ಅವರು ಭೌತವಿಜ್ಞಾನದ ಪ್ರಾಧ್ಯಾಪಕರಾಗಿ ದೇಶವಿದೇಶಗಳಲ್ಲಿ ವಿಜ್ಞಾನವನ್ನು ಬೋಧಿಸಿದವರು. ತಮ್ಮ ತಂದೆಯವರು ಆ ಕಾಲಕ್ಕೇ ಪ್ರಭುತ್ವವನ್ನು ಎದುರು ಹಾಕಿಕೊಂಡು ಪತ್ರಿಕೋದ್ಯಮವನ್ನು ನಿಭಾಯಿಸಿದ ಬಗೆ ಹಾಗೂ…”
ಉನ್ಮಾದಕತೆಯನ್ನು ಬದಿಗಿರಿಸಿದ ಮೆಕ್ಸಿಕೋ ಸಿನಿಮಾ ʻರೋಮಾʼ
ಕ್ಲಿಯೋಳ ಪ್ರಿಯಕರ ಮಾರ್ಷಿಯಲ್ ಆರ್ಟ್ಸ್ ಪ್ರವೀಣ. ಕ್ಲಿಯೋಳ ಎದುರು, ಬಹುಶಃ ಅನಗತ್ಯವಾಗಿ, ನಗ್ನನಾಗಿ ಅದರ ವೈಖರಿಯನ್ನು ಪ್ರದರ್ಶಿಸುತ್ತಾನೆ. ಕ್ಲಿಯೋ ತನ್ನ ಪ್ರಿಯಕರನ ಜೊತೆ ಇದ್ದಾಗಲೂ ಹೆಚ್ಚು ಉನ್ಮಾದಕರ ಭಾವ ಪ್ರಕಟಿಸುವುದಿಲ್ಲ. ನಸುನಗೆಯಲ್ಲಿಯೇ ವರ್ತಿಸುತ್ತಾಳೆ. ಅವಳದು ಚೌಕು ಎನ್ನಬಹುದಾದ ಮುಖದ ಆಕಾರ. ಕಂದು ಬಣ್ಣದ ಅವಳ ಮುಖದಲ್ಲಿ ಎದ್ದು ಕಾಣುವುದು ಕಣ್ಣು ಮಾತ್ರ. ಅದರ ಸೂಕ್ಷ್ಮವಾದ ಚಲನೆಯೇ ಭಾವ ಪ್ರಕಟಣೆಗೆ ಬೆಂಬಲ.
ಬೋರ್ಡಿಂಗ್ ನಲ್ಲಿ ಸರ್ವಧರ್ಮದ ಸೌಹಾರ್ದ ಗೀತ
ನನ್ನ ಬಾಲ್ಯಕಾಲದಲ್ಲಿ ಎಲ್ಲ ಸಮುದಾಯಗಳಲ್ಲಿ ಇಂಥ ಸಂವೇದನಾಶೀಲ ಮತ್ತು ನ್ಯಾಯನೀತಿಯ ಹಿರಿಯರು ಇದ್ದರು. ತಪ್ಪುಗಳು ಘಟಿಸಬಾರದು ಎಂಬುದಕ್ಕೆ ‘ನಾಲ್ಕು ಜನ ಏನಂದಾರು?’ ಎಂದು ತಪ್ಪು ದಾರಿ ಹಿಡಿಯುವ ಲಕ್ಷಣವುಳ್ಳವರಿಗೆ ಅವರು ಪ್ರಶ್ನಿಸುತ್ತಿದ್ದರು. ಅಂದಿನ ಕಾಲದಲ್ಲಿ ಸಮಾಜವೇ ದೈವವಾಗಿತ್ತು. ಹಿರಿಯರೇ ನ್ಯಾಯಾಧೀಶರಾಗಿದ್ದರು. ಇತರ ಅನುಭವಿಗಳೇ ವಕೀಲರಾಗಿದ್ದರು.
ವ್ಯಂಗ್ಯ ದರ್ಶನದ ಕವಿ ಪಾ.ವೆಂ. ಆಚಾರ್ಯ
ಪಾವೆಂ ಅವರ ನೆಚ್ಚಿನ ಸಾಹಿತ್ಯ ಪ್ರಕಾರ ಕಾವ್ಯ. ಪಾ. ವೆಂ. ಅವರು ನವೋದಯ ಪಂಥದಿಂದ ನವ್ಯಕ್ಕೆ ಬಂದ ಒಬ್ಬ ಪ್ರಮುಖ ಕವಿ. ಅವರ ಮೊದಲನೆಯ ಸಂಕಲನ `ನವನೀರವ’ ದಲ್ಲಿ ನವೋದಯ ಸಂವೇದನೆಯ ಕವಿತೆಗಳು ಮತ್ತು ಸಮಾಜದ ವಾಸ್ತವಗಳನ್ನು ಹೊಸ ಬಗೆಯಲ್ಲಿ ಹಾಸ್ಯ ದೃಷ್ಟಿಕೋನದಿಂದ ನೋಡಲಾರಂಭಿಸಿದ ಕವಿತೆಗಳಿವೆ. ಸಂಖ್ಯೆಯ ದೃಷ್ಟಿಯಿಂದ ಅವರು ಬರೆದ ಕವನಗಳು ಹೆಚ್ಚಿಲ್ಲ. ನವೋದಯ ಮತ್ತು ನವ್ಯ ಎರಡೂ ಬಗೆಯ ಕಾವ್ಯ ಪ್ರಕಾರಗಳಲ್ಲೂ ಅವರು ಕವನಗಳನ್ನು ರಚಿಸಿದ್ದಾರೆ.










