Advertisement

ಸರಣಿ

ಬದುಕಿನ ಹಡಗು ಮತ್ತೊಂದು ತೀರದೆಡೆಗೆ..

ಬದುಕಿನ ಹಡಗು ಮತ್ತೊಂದು ತೀರದೆಡೆಗೆ..

ಇನ್ನೇನು ಸುರಂಗ ಕೊರೆಯುವ ಕೆಲಸ ಮುಕ್ತಾಯವಾಗುತ್ತ ಬಂದಿತ್ತು. ಕೆಲವೇ ಅಡಿಗಳಷ್ಟೇ ಕೊರೆಯುವ ಕೆಲಸ ಬಾಕಿ ಉಳಿದಿತ್ತು. ಸುರಂಗ ಮುಂದೆ ಸಾಗಿದಂತೆ ಮರದ ದೊಡ್ಡ ದಿಮ್ಮಿಗಳನ್ನಿಟ್ಟು ಆಧಾರದಂತೆ ಕೊಡುವುದು ಇದಿನಬ್ಬನಿಗೆ ಮರೆತು ಹೋಗಿತ್ತು. ಆ ವಿಷಯ ನೆನಪಾಗುತ್ತಲೇ, ಓಡಿ ಓಡಿ ಎಂದು ಕಿರುಚಿದ. ಎಲ್ಲರೂ ದಿಕ್ಕಾಪಾಲಾಗಿ ಓಡಿದರು. ಇದಿನಬ್ಬನಿಗೆ ಓಡಲಾಗಲಿಲ್ಲ‌. ಇದ್ದಕ್ಕಿದ್ದಂತೆ ಭಾರೀ ಸದ್ದಿನೊಂದಿಗೆ ಗುಡ್ಡದ ಒಂದು ಭಾಗ ಜರ್ರನೆ ಕುಳಿತೇ ಬಿಟ್ಟಿತು. ಇದಿನಬ್ಬನೂ ಸೇರಿ ನಾಲ್ಕೈದು ಜ‌ನರು ಆ ಮಣ್ಣಿನೊಳಗೆ ಸಿಕ್ಕಿಹಾಕಿಕೊಂಡರು.
ಮುನವ್ವರ್ ಜೋಗಿಬೆಟ್ಟು ಬರೆಯುವ ಡರ್ಬನ್ ಇದಿನಬ್ಬ ಕಿರುಕಾದಂಬರಿಯ ಎಂಟನೆಯ  ಕಂತು.

read more
ಅಪರಾಧ ಮತ್ತು ಶಿಕ್ಷೆ: ಇದು ಯಾವ ಪಾಪಕ್ಕೆ…?

ಅಪರಾಧ ಮತ್ತು ಶಿಕ್ಷೆ: ಇದು ಯಾವ ಪಾಪಕ್ಕೆ…?

ಸಿಡಿಲು ಬಡಿದವಳ ಹಾಗೆ ಕ್ಯಾತರೀನ ಸುಮ್ಮನೆ ನಿಂತಳು. ಪೀಟರ್ ಪೆಟ್ರೊವಿಚ್ ಅದು ಹೇಗೆ ಉಪ್ಪಿನ ಋಣ ಮರೆಯಬಲ್ಲ ಅನ್ನುವುದು ಅರ್ಥವೇ ಆಗಲಿಲ್ಲ ಅವಳಿಗೆ. ನಮ್ಮಪ್ಪನ ಉಪ್ಪಿನ ಋಣ ಅವನಮೇಲಿದೆ ಎಂದು ಒಮ್ಮೆ ಕಲ್ಪನೆ ಮಾಡಿಕೊಂಡ ನಂತರ ಆ ಕಲ್ಪನೆಯನ್ನೇ ಅವಳು ನಿಷ್ಠೆಯಿಂದ ನಂಬಿಕೊಂಡಿದ್ದಳು. ಪೀಟರ್ ಪೆಟ್ರೊವಿಚ್‌ನ ಮಾತಿನ ದನಿಯೂ ಆಘಾತ ತಂದಿತ್ತು. ತೀರ ವ್ಯಾವಹಾರಿಕವಾದ, ನಿರ್ಭಾವವಾದ, ಭಯಹುಟ್ಟಿಸುವಂಥ ತಿರಸ್ಕಾರ ಅವನ ದನಿಯಲ್ಲಿತ್ತು.
. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮುಂದುವರಿದ ಪುಟಗಳು.

read more
ಒಂದು ಬೊಗಸೆ ನೀರಿಗೆ ಹರಸಾಹಸ

ಒಂದು ಬೊಗಸೆ ನೀರಿಗೆ ಹರಸಾಹಸ

ಮುಗಿಲೆತ್ತರಕ್ಕೆ ಬೆಳೆದು ನಿಂತಿದ್ದ ತೆಂಗಿನಮರಗಳು ರಾತ್ರಿ ಉಚ್ಚೆ ಉಯ್ಯಲು ಹೊರ ಬಂದು ನೋಡಿದಾಗ ದೆವ್ವದಂತೆ ಕಾಣುತ್ತಿದ್ದವು. ಹಾಸ್ಟೆಲ್ ಹುಡುಗರು ಸಂಜೆ ಸ್ಕೂಲಿಂದ ಬಂದರೆಂದರೆ ಗುರಿ ಇಟ್ಟು ಕಲ್ಲು ಬೀಸಿ ತೆಂಗಿನ ಕಾಯಿ ಉದುರಿಸುತ್ತಿದ್ದರು. ಪ್ರತಿನಿತ್ಯ ಒಂದೆರಡು ತೆಂಗಿನ ಕಾಯಿ ಕಿತ್ತು ಚೂಪಾದ ಕಲ್ಲಿನಿಂದ ಮತ್ತು ಹಲ್ಲಿನಿಂದ ಸಿಪ್ಪೆ ಸಿಗಿದು ಕಾಯಿ ಕೆಚ್ಚಿ ಪಚಿಡಿ ಮಾಡಿ ತಿನ್ನುತ್ತಿದ್ದೆವು. ತೋಟದ ಮಾಲೀಕರಿಗೆ ಗೊತ್ತಾದರೆ ದೊಣ್ಣೆಯೊಂದಿಗೆ ಓಡಿಸಿಕೊಂಡು ಬರುತ್ತಿದ್ದರು. ಅವರ ಹತ್ತಿರ ಬಂದೂಕು ಇದೆ, ಅವರು ನಿರ್ದಯಿಗಳು, ಕಳ್ಳತನ ಮಾಡಿದರೆ ಗುಂಡು ಹಾರಿಸಿ ಸುಟ್ಟು ಬಿಡುತ್ತಾರೆಂದು…”

read more
ಮೂಕ ರಮೇಶಿಗೆ ತಾಗಿದ ಹಠಾತ್ ಸಾವು

ಮೂಕ ರಮೇಶಿಗೆ ತಾಗಿದ ಹಠಾತ್ ಸಾವು

ರಮೇಶಿಯ ಹೊಲಿಗೆ ನೈಪುಣ್ಯದ ಬಗೆಗೆ ಎರಡು ಮಾತಿಲ್ಲ. ಕಾಲಿಂಚೂ ಆಚೀಚೆ ಆಗದ ಅಳತೆಯ ಸ್ಪಷ್ಟತೆ,  ಚೂಡಿದಾರ ಹಾಗೂ ರವಿಕೆಗಳಿಗೆ, ತಾನೇ ಹುಡುಕಿಕೊಂಡು ಇಡುತ್ತಿದ್ದ ಹೊಸಾ ಹೊಸಾ ಕತ್ತಿನ ಡಿಸೈನುಗಳು, ತನ್ನ ಮೂಗಭಾಷೆಯಲ್ಲೇ ನಮಗೆಲ್ಲಾ ವಿವರಿಸಿ ಹೇಳಿ ಹೊಲೆಯುತ್ತಿದ್ದ ಹೊಸ ಶೈಲಿಗಳ ಬಟ್ಟೆಗಳು, ಬೇಡಬೇಡವೆಂದರೂ ಅವನೇ ಉಪಚಾರದ ಸಂಜ್ಞೆಗಳನ್ನು ಮಾಡಿ ತೊಡುವಂತೆ ಮಾಡುತ್ತಿದ್ದ ಡೀಪ್ ನೆಕ್ ಹಾಗೂ ಸಣ್ಣ ತೋಳಿನ ಬಟ್ಟೆಗಳು… ಇವೆಲ್ಲಾ ಹೆಂಗಸರನ್ನು ಉನ್ಮಾದಗೊಳಿಸುತ್ತಿದ್ದವು.
ಮಧುರಾಣಿ ಬರೆಯುವ ‘ಮಠದಕೇರಿ ಕಥಾನಕ’

read more
ವಿಜಾಪುರ ನಗರಿಯ ರಂಗು, ವಿಸ್ಮಯಗಳು

ವಿಜಾಪುರ ನಗರಿಯ ರಂಗು, ವಿಸ್ಮಯಗಳು

ವಿಜಾಪುರಕ್ಕೆ ಬಂದಮೇಲೆ ಬಹಳ ದಿನಗಳ ನಂತರ ನಾವು ಟಾಂಗಾದಲ್ಲಿ ಜೋಡಗುಂಬಜ ದರ್ಗಾಕ್ಕೆ ಹೋಗಿ ವಾಪಸ್ ಮನೆಯ ಸಮೀಪ ಬರುತ್ತಿರುವಾಗ ಅಲ್ಲೀಬಾದಿಯಲ್ಲಿ ನಾವು ಸಾಕಿದ ನಾಯಿ ಕಂಡಿತು. ಕಂಡೊಡನೆ ಅದು ಟಾಂಗಾದ ಬೆನ್ನು ಹತ್ತಿತು. ಅದರ ಅವಸ್ಥೆ ನೋಡಿ ನನ್ನ ಕರುಳು ಕಿತ್ತುಬಂದಂತಾಯಿತು. ನಾನು ಮುಟ್ಟುವ ಸ್ಥಿತಿಯಲ್ಲಿ ಅದು ಇರಲಿಲ್ಲ. ಆ ತೆಳ್ಳನೆಯ ಬಿಳಿ ನಾಯಿಯ ಮೈತುಂಬ ಚಿಕ್ಕ ಚಿಕ್ಕ ಹುಣ್ಣುಗಳಾಗಿ ರಕ್ತದ ಬಿಂದುಗಳಂತೆ ಕಾಣುತ್ತಿದ್ದವು. ಅದು ಬಹಳ ಆಯಾಸಗೊಂಡಿತ್ತು. ಆದರೆ ಟಾಂಗಾದ ಬೆನ್ನು ಬಿಡಲಿಲ್ಲ. ಮನೆ ಬಂದಿತು.
ರಂಜಾನ್ ದರ್ಗಾ ಬರೆಯುವ ‘ನೆನಪಾದಾಗಲೆಲ್ಲ’ ಸರಣಿಯ ಒಂಭತ್ತನೆಯ ಕಂತು.

read more
ಹಸಿವಿನ ವಿಕಾರದ ಮುಂದೆ ಸ್ವಾತಂತ್ರ್ಯಕ್ಕೆ ಬೆಲೆ ಎಲ್ಲಿ?

ಹಸಿವಿನ ವಿಕಾರದ ಮುಂದೆ ಸ್ವಾತಂತ್ರ್ಯಕ್ಕೆ ಬೆಲೆ ಎಲ್ಲಿ?

ಕರೀಂ ಸಾಹೇಬರ ಮನೆಯಿಂದ ಇದಿನಬ್ಬ ಓಡಿ ಬಂದಿದ್ದ. ಓಡಿ ಓಡಿ ದಣಿವಾಗಿ ಒಂದೆಡೆ ಕುಳಿತಾಗಲೇ ಅವನಿಗೆ ಹಸಿವಿನ ನೆನಪಾಯಿತು. ಜೊತೆಗೆ ಮನೆಯವರ ನೆನಪೂ ಕಾಡತೊಡಗಿತು. ಭಯಂಕರ ಕ್ಷಾಮವು ಆ ಊರನ್ನು ಅಡರಿಕೊಂಡಿದ್ದರಿಂದ, ತಿನ್ನಲು, ಕುಡಿಯಲು ಏನೂ ಸಿಗುತ್ತಿರಲಿಲ್ಲ. ಹಸಿವಿನ ಹಿಂಸೆ ರುದ್ರನರ್ತನ ಮಾಡುತ್ತಿತ್ತು. ಇದಿನಬ್ಬ ಮೊದಲ ಬಾರಿಗೆ ತನ್ನನ್ನೇ ತಾನು ಮಾರಿಕೊಳ್ಳಲು ನಿರ್ಧರಿಸಿದ. ಮತ್ತೊಂದು ಮಾಲೀಕತ್ವವು ಇದಿನಬ್ಬನನ್ನು ಎಲ್ಲಿಗೆ ಕರೆದೊಯ್ದಿತು ?
ಮುನವ್ವರ್ ಜೋಗಿಬೆಟ್ಟು ಬರೆಯುವ ಡರ್ಬನ್ ಇದಿನಬ್ಬ ಕಿರು ಕಾದಂಬರಿಯ ಏಳನೇ ಕಂತು ಇಲ್ಲಿದೆ.

read more
ಗುರುಪ್ರಸಾದ್ ಕಂಟಲಗೆರೆ ಬರೆಯುವ ‘ಟ್ರಂಕು ತಟ್ಟೆ’ ಸರಣಿ ಇಂದಿನಿಂದ ಶುರು

ಗುರುಪ್ರಸಾದ್ ಕಂಟಲಗೆರೆ ಬರೆಯುವ ‘ಟ್ರಂಕು ತಟ್ಟೆ’ ಸರಣಿ ಇಂದಿನಿಂದ ಶುರು

ಹಾಸ್ಟೆಲ್ ಜೀವನವೆಂದರೆ ಬದುಕನ್ನು ಸ್ವಯಂ ಅನ್ವೇಷಿಸುವ ಮೊದಲ ಹೆಜ್ಜೆಯಂತೆ. ಸಮವಯಸ್ಕರ ಜೊತೆಗೆ ಬದುಕುವ ಅವಕಾಶ ಸಿಗುವುದರಿಂದ ಅಲ್ಲಿನ ನೋವು ನಲಿವುಗಳೊಡನೆ ನವಿರು ಭಾವವೊಂದು ಸೇರಿಕೊಂಡಿರುತ್ತದೆ. ಕಥೆಗಾರ ಗುರುಪ್ರಸಾದ್ ಕಂಟಲಗೆರೆ ತೀರಾ ಎಳವೆಯಲ್ಲಿಯೇ ಹಾಸ್ಟೆಲ್ ಬದುಕನ್ನು ಕಂಡವರು. ಆ ನೆನಪುಗಳನ್ನು ಅವರು ಪ್ರತಿವಾರ ‘ಟ್ರಂಕು ತಟ್ಟೆ’ ಎಂಬ ಸರಣಿಯಲ್ಲಿ ಬರೆಯಲಿದ್ದಾರೆ. ಈ ಬರಹಗಳು ಅಕ್ಷರಗಳನ್ನು ಮೀರಿದ ಕಥೆಯೊಂದನ್ನು ಹೇಳುತ್ತವೆಯೆನಿಸುತ್ತದೆ. ಮೊದಲ ಬರಹ ನಿಮ್ಮ ಓದಿಗಾಗಿ ಇಲ್ಲಿದೆ.

read more
ಐಕ್ಯಗಾನ ಮೊಳಗಿಸಿದ, ಜನಪರ ಕವಿ ಕಯ್ಯಾರ ಕಿಞ್ಞಣ್ಣ ರೈ

ಐಕ್ಯಗಾನ ಮೊಳಗಿಸಿದ, ಜನಪರ ಕವಿ ಕಯ್ಯಾರ ಕಿಞ್ಞಣ್ಣ ರೈ

1933 ರ ಹೊತ್ತಿಗಾಗಲೇ ಹದಿನೆಂಟರ ಯುವಕ ಕಯ್ಯಾರರು ಒಳ್ಳೆಯ ಕವಿಯಾಗಿ ಗುರುತಿಸಿಕೊಂಡದ್ದಕ್ಕೆ ಒಂದು ಉದಾಹರಣೆ: ಪುತ್ತೂರಿನಲ್ಲಿ ಕಾರಂತರು ನಡೆಸುತ್ತಿದ್ದ ನಾಡಹಬ್ಬದಲ್ಲಿ ಬೇಂದ್ರೆಯವರ ಅಧ್ಯಕ್ಷತೆಯ ಕವಿಗೋಷ್ಠಿಯಲ್ಲಿ ಅವರು ‘ಊರ್ಮಿಳಾ’ ಎಂಬ ಕವನ ಓದಿದರು. ಅದನ್ನು ಕೇಳಿದ ಬೇಂದ್ರೆಯವರು ಕಯ್ಯಾರ ಅವರಿಂದ ಇನ್ನೊಂದುಕವಿತೆಯನ್ನು ಓದಿಸಿದರು.
‘ಕರಾವಳಿಯ ಕವಿರಾಜಮಾರ್ಗ’ ಸರಣಿಯಲ್ಲಿ ಕಯ್ಯಾರ ಕಿಞ್ಞಣ್ಣ ರೈ ಕುರಿತು ಬರೆದಿದ್ದಾರೆ ಡಾ.ಬಿ. ಜನಾರ್ದನ ಭಟ್.

read more
ಭರಣಿ ಕೃತಿಕೆ ನಂಬಿದ ಅಪ್ಪ, ಪಡಿಪಾಟಲು ಅನುಭವಿಸಿದ ನಾನು

ಭರಣಿ ಕೃತಿಕೆ ನಂಬಿದ ಅಪ್ಪ, ಪಡಿಪಾಟಲು ಅನುಭವಿಸಿದ ನಾನು

ಊರಿನಿಂದ ಬೆಳಿಗ್ಗೆ ಪ್ರಯಾಣಮಾಡಿ ಕಾಲೇಜಿನಲ್ಲಿ ಓಡಾಟ, ಹಾಸ್ಟೆಲ್ಲಿನ ಜಂಜಾಟ, ಎಲ್ಲಾ ಆಗುವಾಗ ಅಂದು ರಾತ್ರಿ ನನಗೆ ಬಂದದ್ದು ತಡೆಯಲಾರದ ತಲೆನೋವು. ಪರಿಚಯ ಇಲ್ಲದ ಜನ, ಗೊತ್ತಿಲ್ಲದ ಮನೆ.. ಇತ್ತ ತಲೆನೋವು ಜೋರಾಗಿ ವಾಂತಿ ಬರುತ್ತಿದೆ. ಯಾರಲ್ಲಿ ಹೇಳಿಕೊಳ್ಳುವುದು ನನ್ನ ಪರಿಸ್ಥಿತಿ. ಬಾತ್ರೂಮಿನಲ್ಲಿ ಹೋಗಿ ವಾಂತಿ ಮಾಡುತ್ತಿದ್ದ ನನ್ನನ್ನು ಕಂಡ ದೊಡ್ಡಗೌಡ್ರು ಕೂಡಲೇ ಬಂದು ನನ್ನ ತಲೆಯನ್ನು ಹಿಡಿದುಕೊಂಡರು. ಸ್ವಲ್ಪ ಹೊತ್ತಿಗೆ ವಾಂತಿ ಆಗಿ ತಲೆನೋವು ಸ್ವಲ್ಪ ಕಡಿಮೆಯಾದಂತೆ ಅನ್ನಿಸಿತು. ಪಾಪದ ಜನ ಅವರು.
ಡಾ. ಕೆ.ಬಿ. ಸೂರ್ಯಕುಮಾರ್ ಬರೆಯುವ ‘ನೆನಪುಗಳ ಮೆರವಣಿಗೆ’

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ