Advertisement

ಸರಣಿ

ನೈಸರ್ಗಿಕ ಜಗತ್ತಿಗೆ ಒಬ್ಬ ಅವಿಶ್ರಾಂತ ಮಾರ್ಗದರ್ಶಿ: ಎಸ್. ಜಯಶ್ರೀನಿವಾಸ ರಾವ್ ಸರಣಿ

ನೈಸರ್ಗಿಕ ಜಗತ್ತಿಗೆ ಒಬ್ಬ ಅವಿಶ್ರಾಂತ ಮಾರ್ಗದರ್ಶಿ: ಎಸ್. ಜಯಶ್ರೀನಿವಾಸ ರಾವ್ ಸರಣಿ

ರೆಯ್ನಾಲ್ಡ್ಸ್ ಗಮನಿಸಿದಂತೆ, “ಈ ಸ್ವಯಂ ಪ್ರಜ್ಞೆಯು ಸಮೃದ್ಧವಾದ ಮತ್ತು ಸುಲಲಿತವಾದ ಸೇರ್ಪಡೆಯಾಗಿದೆ.” ಆಲಿವರ್‌-ರ ಕಾವ್ಯದಲ್ಲಿ ಕಂಡುಬರುವ ವಿಷಯಗಳಿಗೆ ಸಂಬಂಧಿಸಿದಂತೆ ವಿಸ್ಮಯದ ವ್ಯಾಪಕ ಸ್ವರವಿದೆ. ಆಲಿವರ್ ಅವರ ಕಾವ್ಯ “ಕವಿ ವಿಲಿಯಮ್ ಬ್ಲೇಕ್-ನ ಕವಿದೃಷ್ಟಿಯ ದಿವ್ಯದರ್ಶನದ ಗುಣ” ಹೊಂದಿವೆ ಎಂದು ರೆಯ್ನಾಲ್ಡ್ಸ್ ಅರಿತರು.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಅಮೇರಿಕಾ ದೇಶದ ಕವಿ ಮೇರಿ ಆಲಿವರ್-ರವರ (Mary Oliver, 1935-2019) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

read more
ಸೀಮೆಯಿಂದ…. ಸುಗ್ಗಿವರೆಗೆ: ಸುಮಾವೀಣಾ ಸರಣಿ

ಸೀಮೆಯಿಂದ…. ಸುಗ್ಗಿವರೆಗೆ: ಸುಮಾವೀಣಾ ಸರಣಿ

“ನೀವು ತಿಂದದ್ದಕ್ಕೆ ಹಣ ಕೊಡಬೇಕಿಲ್ಲ ಎಂಥಾ ಸೌಲಭ್ಯವಿದು? ಪುಕ್ಕಟೆಯೇ? ಎಂದು ನೀವು ಕೇಳಬಹುದು ಇಲ್ಲ ಇದಕ್ಕೆ ಉದ್ರಿ ಎನ್ನುವರು. ಕೌಂಟರ್ ಮುಂದೆ ‘ನನ್ನ ಹೆಸರ್ಲೆ ಹಚ್ರಿ ಎಂದು ಹೇಳಿದರೆ ಸಾಕು ಹಚ್ಚುವುದೊಂದೇ ಹಳ್ಳಿ ಫಳಾರದಂಗಡಿಯ ಮಾಲಿಕನ ಕರ್ಮ. ಸುಗ್ಗಿಗೊಮ್ಮೆ ನಾಲ್ಕುಚೀಲ ಜೋಳ ತಂದು ಹೋಟೆಲಿಗೆ ಹಚ್ಚಿದರೆ ಬಾಕಿ ಚುಕ್ತಾ ಆಯ್ತು. ವರ್ಷದವರೆಗೂ ಪೂರಿ, ಬಜಿಗಳನ್ನು ತಿನ್ನುತ್ತಾ ಊರಸುದ್ದಿಯನ್ನು, ಮಾತನಾಡುತ್ತಾ ಎದುರಿಗಿರಲಾರದವರ ಗೇಲಿ ಮಾಡುತ್ತಾ ಹೊತ್ತನ್ನು ಕಳೆಯಬಹುದು” ಎಂಬ ಸಾಲುಗಳು ವೀರೆಂದ್ರ ಸಿಂಪಿಯವರ ‘ಹಳ್ಳಿಯ ಚಹಾ ಹೋಟೆಲುಗಳು’ ಲಲಿತ ಪ್ರಬಂಧದ ಸಾಲುಗಳು.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿ

read more
ಸಿಕ್ಕೀತೆ ಮುಂದಿನ ದಾರಿ …: ಗುರುಪ್ರಸಾದ ಕುರ್ತಕೋಟಿ ಸರಣಿ

ಸಿಕ್ಕೀತೆ ಮುಂದಿನ ದಾರಿ …: ಗುರುಪ್ರಸಾದ ಕುರ್ತಕೋಟಿ ಸರಣಿ

ಅಮೆರಿಕೆಯಲ್ಲಿನ ಸಿರಿತನ ಬಡತನ ಎರಡೂ ನೋಡಿದೆ. ಅತಿಯಾಗಿ ಖರ್ಚು ಮಾಡುವವರನ್ನೂ ಕಂಡೆ, ಮಿತವಾಗಿ ಹಾಸಿಗೆ ಇದ್ದಷ್ಟು ಕಾಲು ಚಾಚುವವರನ್ನೂ ನೋಡಿದ್ದೆ. ನನ್ನ ಜೊತೆಗೆ ಕೆಲಸ ಮಾಡುತ್ತಿದ್ದ ಜಿಮ್ ಎಂಬ ಒಬ್ಬ ಸಹೋದ್ಯೋಗಿ ಹತ್ತು ಡಾಲರ್‌ಗೆ ತೊಳೆದು ಇಸ್ತ್ರಿ ಮಾಡಿ ಮಾರುತ್ತಿದ್ದ ಸಂಸ್ಥೆಯೊಂದರಿಂದ ಸೆಕಂಡ್ ಹ್ಯಾಂಡ್ ಟೀ ಶರ್ಟ್ ಕೊಂಡೆ ಅಂತ ಹೆಮ್ಮೆಯಿಂದ ಬೀಗಿದ್ದನ್ನು ನೋಡಿದ್ದೆ. ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಕೊನೆಯ ಬರಹ

read more
ಹುಚ್ಚಾಟಗ್ಳು: ಸುಮಾ ಸತೀಶ್ ಸರಣಿ

ಹುಚ್ಚಾಟಗ್ಳು: ಸುಮಾ ಸತೀಶ್ ಸರಣಿ

ಸ್ಯಾನೆ ಟೇಮಿದ್ರೆ ಉಂಗುರ ಸೆಂದಾಗಿ ಮಾಡ್ತಿದ್ವಿ. ವೈನಾಗಿ ಜಡೆ ಹೆಣ್ದು ಅದುನ್ನ ಬೆಳ್ಳಿನ್ ಗಾತ್ರುಕ್ಕೆ ಸರ್ಯಾಗಿ ಬಗ್ಗಿಸಿ, ಸುತ್ತಿ‌ ಬಾಲ ಇಲ್ದಂಗೆ ಮಾಡೀವಿ. ಆತ್ರ ಇದ್ರೆ ತಿಥಿ ಮಾಡ್ಸಾ ಐನೋರು ದರ್ಬೇನಾಗೆ (ಒಣಗಿದ್ ಹುಲ್ಲು) ಸುಮ್ಕೆ ಒಂದು ಗಂಟು ಆಕಿ, ಬೆಟ್ಟಷ್ಟು ಉದ್ದೂಕೆ ನಿಟಾರ್ ಅಂತ ನಿಂತಿರಾ ಹುಲ್ಲು ಕೊಟ್ಟು ಉಂಗ್ರ ಆಕ್ಕಳಿ ಅಂಬಲ್ವೇ ಅಂಗೇ ನಾವೂ ಸುಮ್ಕೆ ಒಂದು ಗಂಟು ಹಾಕಿ, ಉದ್ದೂಕೆ ಗರಿ ಅಂಗೇ ಬುಟ್ಟು, ಕೈಯಾಗೆ ಏರ್ಸಿ ಓಡ್ತಿದ್ವಿ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿ

read more
ಪರೀಕ್ಷೆ ತಪ್ಪಿಸಿಕೊಳ್ಳಲು ಮಾಡಿದ ಐಡಿಯಾ!!!: ಬಸವನಗೌಡ ಹೆಬ್ಬಳಗೆರೆ ಸರಣಿ

ಪರೀಕ್ಷೆ ತಪ್ಪಿಸಿಕೊಳ್ಳಲು ಮಾಡಿದ ಐಡಿಯಾ!!!: ಬಸವನಗೌಡ ಹೆಬ್ಬಳಗೆರೆ ಸರಣಿ

ನನಗೆ ಹಲವಾರು ಬಾರಿ ನಮ್ಮನೆ ಕಂಡೀಶನ್‌ಗೆ ಚೆನ್ನಾಗಿ ಓದಬೇಕು ಆದರೆ ಈ ರೀತಿ ಯಾಕೆ ಮಾಡ್ತಾ ಇದೀನಿ ಅನಿಸೋದು. ಆದರೆ ನಾನು, ಲಿಂಗರಾಜ, ಸುಧಾಕರ ಅಕ್ಟೋಬರ್ ವೇಳೆಗಾಗಲೇ ಈ ವರ್ಷ ರಿಜೆಕ್ಟ್ ಮಾಡಬೇಕು ಅಂತಾ ತೀರ್ಮಾನ ಮಾಡಿದ್ವಿ. ನಾನೂ ಈ ತೀರ್ಮಾನಕ್ಕೆ ಬರೋದಿಕ್ಕೂ ಒಂದು ಕಾರಣ ಇತ್ತು. ನಾನು ಮೊದಲ ಪಿಯೂಸಿಯಿಂದ ದ್ವಿತೀಯ ಪಿಯೂಸಿಗೆ ಕಾಲೇಜ್ ಬದಲಾಯಿಸಬೇಕು ಅಂತಾ ಹೋದಾಗ 2 ರಿಂದ 3 ತಿಂಗಳು ಬೋರ್ಡ್‌ಗೆ ಓಡಾಟದ ಮೂಲಕ ಸಮಯ ವ್ಯರ್ಥವಾಗಿ ಹೋಗಿತ್ತು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ

read more
ಕಾಮ್ರೇಡ್ ಹೆಚ್.ಕೆ. ರಾಮಚಂದ್ರಪ್ಪ ಸ್ಮರಣೆ: ರಂಜಾನ್ ದರ್ಗಾ ಸರಣಿ

ಕಾಮ್ರೇಡ್ ಹೆಚ್.ಕೆ. ರಾಮಚಂದ್ರಪ್ಪ ಸ್ಮರಣೆ: ರಂಜಾನ್ ದರ್ಗಾ ಸರಣಿ

ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಯಲ್ಲಿ ಬಹಳ ಬದಲಾವಣೆಗಳಾಗಿವೆ. ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣದ ಸುಲಿಗೆ ಯೋಜನೆ ಮೂಲಕ ಇಡೀ ಜಗತ್ತಿನ ಕಾರ್ಮಿಕರ ಆರ್ಥಿಕ ಸ್ಥಿತಿ ಕುಸಿಯಿತು. ಈ ಎಲ್ಲ ಕಾರಣಗಳಿಂದಾಗಿ ದಾವಣಗೆರೆಯ ಸಂಗಾತಿಗಳ ಸಾಧನೆ ಗತವೈಭವದಂತೆ ಕಾಣತೊಡಗಿತು. ಅಂಥ ಸಂದರ್ಭದಲ್ಲಿ ಕೂಡ ಹೆಚ್.ಕೆ. ರಾಮಚಂದ್ರಪ್ಪ ಅವರು ಎದೆಗುಂದಲಿಲ್ಲ. ಬದುಕಿನ ಕೊನೆಯ ಉಸಿರು ಇರುವವರೆಗೂ ಅವರು ನಗುಮುಖದಿಂದ ಕಾರ್ಮಿಕರ ಒಳಿತಿಗಾಗಿ ದುಡಿದದ್ದು ಇಂದು ಇತಿಹಾಸವಾಗಿದೆ.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 92ನೇ ಕಂತು ನಿಮ್ಮ ಓದಿಗೆ

read more
ಬೇಡದ್ದಲ್ಲೇ ಸೈಟು ಖರೀದಿಸಿದ್ದು: ಎಚ್. ಗೋಪಾಲಕೃಷ್ಣ ಸರಣಿ

ಬೇಡದ್ದಲ್ಲೇ ಸೈಟು ಖರೀದಿಸಿದ್ದು: ಎಚ್. ಗೋಪಾಲಕೃಷ್ಣ ಸರಣಿ

ತೆಪ್ಪಗೆ ಜೇಬಿಂದ ಎರಡು ಹತ್ತರ ನೋಟು ಬಿಡಿಸಿ ಕೊಟ್ಟೆ. ಇನ್ನೂ ಬೇಕು.. ಅಂದ. ಮೂರು ನೋಟು ಅವನ ಕೈ ಸೇರಿದ ಮೇಲೆ ಅದನ್ನು ಅವನ ಜೇಬಿಗೆ ತುರುಕಿಕೊಂಡ. ನಂತರ ನನ್ನ ಬೆರಳು ಬಾಂಡ್ ಪೇಪರಿನ ಮೇಲೆ ಬಲವಾಗಿ ಊರಿ ಅವನ ಭಾರ ಎಲ್ಲಾ ಬಿಟ್ಟು ಹೊರಳಿಸಿದ. ಅವನು ಎಷ್ಟು ಕೋಪ ರೋಷದಿಂದ ಬೆರಳನ್ನು ಹೊರಳಿಸಿದ್ದ ಅಂದರೆ ಒಂದು ಕಾಲ ಮೇಲೆ ನಿಂತು ಇಡೀ ಅವನ ತೂಕವನ್ನು ನನ್ನ ಬೆರಳಿಗೆ ಹೊರೆಸಿದ್ದ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ನಲವತ್ತೊಂಭತ್ತನೆಯ ಕಂತು ನಿಮ್ಮ ಓದಿಗೆ

read more
ಹುಡುಗಾಟಗ್ಳು: ಸುಮಾ ಸತೀಶ್ ಸರಣಿ

ಹುಡುಗಾಟಗ್ಳು: ಸುಮಾ ಸತೀಶ್ ಸರಣಿ

ಔಟೂಂದ್ರೆ ಅಂಗೇ ಕಣ್‌ ಬುಟ್ಟು ನೋಡಿ, ದಿಟ್ವಾಗ್ಲೂ ಔಟೇನಾ‌ ಎಂಗೆ ಅಂಬ್ತ ತಿಳ್ಕಂಡೇ ಕಾಲು ‌ಪಕ್ಕುಕ್ಕೆ‌ ಮಡಗ್ಬೇಕು. ಎದುರ್ನವೇನಾರಾ ಸುಮ್ ಸುಮ್ಕೆ ಯೋಳಿ ಕಿಸೀತಾವಾ ಅಂಬ್ತ ಮೊದ್ಲು ಅವ್ರ ಮಕ ನೋಡೀವು. ಆಮ್ಯಾಕೆ ಕಾಲು ಗೆರೆ‌ ಮ್ಯಾಗೆ ಮಡಗೈತಾ ಅಂಬ್ತ ಕಂಡ್ಕಂಡು ಆಚೀಕ್ ಬರಾದು. ಅದೆಂತದು ಅಮ್ಮಾಟೇ‌ ಅಂದ್ರೆ ಅದು ಆಮ್‌ ಐ ರೈಟ್ ಅಂಬ್ತ ಇಂಗ್ಲಿಷ್ ‌ನಾಗೆ ಕ್ಯೋಳೋದು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಅವರ ಬಾಲ್ಯದ ಆಟಗಳನ್ನು ಕುರಿತು ಬರೆದಿದ್ದಾರೆ

read more
ಕೂರಾಪುರಾಣ ೧೧: ಅವನಿದ್ದರೆ ಮನೆ ತುಂಬಿದಂತೆ, ಮನಸ್ಸು ಅರಳಿದಂತೆ…

ಕೂರಾಪುರಾಣ ೧೧: ಅವನಿದ್ದರೆ ಮನೆ ತುಂಬಿದಂತೆ, ಮನಸ್ಸು ಅರಳಿದಂತೆ…

ನಮ್ಮನ್ನು ಕಾಡುತ್ತಿದ್ದ ಒಂದು ಸಂಗತಿಯೆಂದರೆ ಇಡೀ ದಿನ ಅವರು ನಾಯಿಯನ್ನು ಮನೆಯಲ್ಲಿಯೇ ಬಿಟ್ಟು ಹೋಗುತ್ತಿದ್ದುದು. ಕೂರಾನಿಗೆ ಅದು ಅಭ್ಯಾಸವಿರದೇ ಇದ್ದುದ್ದರಿಂದ ಅವನು ಹೇಗೆ ವರ್ತಿಸುತ್ತಾನೋ ಎಂಬ ಚಿಂತೆ. ಅವರ ಮನೆಯಲ್ಲಿನ ವೈರ್, ಬೆಡಶೀಟ್, ಟವೆಲ್ ಎಲ್ಲವನ್ನು ಕಚ್ಚಿ ಹಾಕುವವನೇ.. ನಾವು ಭಾರತಕ್ಕೆ ಹಾರಿದ ಮೇಲೆ ಇಲ್ಲಿ ಅವನಿಗೆ ತೊಂದರೆಯಾದರೆ ಎಂದೆಲ್ಲ ಯೋಚನೆಗಳು ಬರತೊಡಗಿ ಮತ್ತಾರಾದರು ಆ ಆಪ್‌ನಲ್ಲಿ ನಮಗೆ ಹೊಂದುವಂತವರು ಸಿಗುತ್ತಾರೇನೋ ಎಂದು ನೋಡಹತ್ತಿದೆವು.
ಸಂಜೋತಾ ಪುರೋಹಿತ ಬರೆಯುವ “ಕೂರಾಪುರಾಣ” ಸರಣಿ

read more

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ