ನಾನೇಕೆ ಜಾತಿವಾದಿಯಲ್ಲ?
ನಾವೆಲ್ಲರೂ ಮನುಷ್ಯರೇ ತಾನೆ? ಈವತ್ತು ಸಮತೋಲಿತ ಮನಸ್ಸಿನಿಂದ ಕೂಡಿರುವವನು ಮುಂದೆ ಜಾತಿವಾದಿಯಾಗಬಹುದು. ಅಂತಹ ಪ್ರಲೋಭನೆ, ಒತ್ತಡಗಳು ಬರಬಹುದು. ಅಥವಾ ನಾವೇ ಅದನ್ನೆಲ್ಲ ಸೃಷ್ಟಿಸಿಕೊಂಡು ಈಗ ನಾನೇನು ಮಾಡಲಿ ಎಂದು ಅಸಹಾಯಕತೆ ನಟಿಸಿ ಜಾತಿವಾದಿಯಾಗಬಹುದು. ನಮ್ಮ ಆಪ್ತರೇ ಬಹಿರಂಗದಲ್ಲಿ ಸಮಾನಭಾವದವರಾಗಿದ್ದು, ಒಳಗಡೆ ತಮ್ಮ ಜಾತಿಯ ಬಗ್ಗೆ ಅನುಕೂಲವಾಗಿ ಭಾವಿಸುತ್ತಿರಬಹುದು, ನಡೆದುಕೊಳ್ಳುತ್ತಿರಬಹುದು.
ಕೆ. ಸತ್ಯನಾರಾಯಣ ಬರೆಯುವ “ಬೀದಿ ಜಗಳ ಮತ್ತು ಇತರೆ ಪ್ರಬಂಧಗಳು” ಸರಣಿಯ ಏಳನೆಯ ಪ್ರಬಂಧ ನಿಮ್ಮ ಓದಿಗೆ
ಇಳಿ ವಯಸ್ಸಿನ ಕಾಠಿಣ್ಯ ಸ್ವಾರ್ಥ ಇತ್ಯಾದಿ
ಜಗತ್ತಿನಲ್ಲಿ ಮನುಷ್ಯ ಬಂದಿರುವುದು, ಇರುವುದು, ಮಾಗಬೇಕಾದದ್ದು ಕೇವಲ ನಾಲ್ಕು ದಿನದ ಅತಿಥಿಯಾಗಿ ಮಾತ್ರ. ಸದಾ ಕಾಲದ ಜಹಗೀರ್ದಾರಿ ಅವನಿಗಿಲ್ಲ. ಇದು ಎಲ್ಲರಿಗೂ ಗೊತ್ತಾಗಲೆಂದೇ ಸಾವಿನ ಸಮಯದಲ್ಲಿ ಸೃಷ್ಟಿ ಒಂದು ಉಪಾಯ ಮಾಡಿದೆ. ಮನುಷ್ಯನಿಗೆ ಪ್ರಾಣ ಹೋಗಿದೆ ಎಂದು ಗೊತ್ತಾದ ಮೇಲೂ ಯಾರಿಗೂ ಗೊತ್ತಾಗದಂತೆ ಕೆಲಕಾಲ ಕ್ಷೀಣವಾಗಿ ಪ್ರಾಣ ಇರುತ್ತದೆ. ದೇಹದಲ್ಲಿ ಶಾಖ ಕೂಡ ಇರುತ್ತದೆ.
ಕೆ. ಸತ್ಯನಾರಾಯಣ ಬರೆಯುವ “ಬೀದಿ ಜಗಳ ಮತ್ತು ಇತರೆ ಪ್ರಬಂಧಗಳು” ಸರಣಿಯ ಆರನೆಯ ಪ್ರಬಂಧ ನಿಮ್ಮ ಓದಿಗೆ
ಉಗಿಬಂಡಿ ಯುಗದ ಫಾರ್ಸಿ ಇಂಜಿನಿಯರ್
ಲಂಡನ್ನಲ್ಲಿ ಮೊದಲ ಬಾರಿ ಕಳೆದದ್ದು ಒಂದು ವರ್ಷವಾದರೂ, ಉತ್ಸಾಹ ಪ್ರತಿಭೆ ಕೌಶಲಗಳಿಂದ ಬ್ರಿಟಿಷ್ ತಂತ್ರಜ್ಞರ ಗಮನ ಸೆಳೆದು, ಇಂಜಿನೀಯರುಗಳ ಸಮುದಾಯದಲ್ಲಿ ಅರ್ದೆಶೀರ್ ಪರಿಚಯ ಹೆಚ್ಚಿತು. ರಾಣಿ ವಿಕ್ಟೋರಿಯಾಳನ್ನು ಭೇಟಿ ಆಗುವ ಅವಕಾಶ ಒದಗಿಸಿತು. ಪ್ರಭಾವಿ ಪರಿಚಯಗಳೇ ಇನ್ಸ್ಟಿಟ್ಯೂಷನ್ ಆಫ್ ಸಿವಿಲ್ ಇಂಜಿನಿಯರಿಂಗ್ನಲ್ಲಿ ಅಸೋಸಿಯೇಟ್ ಹುದ್ದೆಗೆ ಆಯ್ಕೆಯಾಗಲೂ ಕಾರಣ ಆಯಿತು.
ಯೋಗೀಂದ್ರ ಮರವಂತೆ ಬರೆಯುವ ʻನೀಲಿ ಫಲಕಗಳಲ್ಲಿ ನೆನಪಾಗಿ ನಿಂದವರುʼ ಸರಣಿ
ಬದುಕು ಒಂದು; ಭಾವ ನೂರು
ಇಷ್ಟೆಲ್ಲ ರೂಢಿಗತವಾಗಿರುವ ರೀತಿಯಲ್ಲಿ ಚಿತ್ರದ ಚಲನೆ ಇದ್ದರೂ ನಿರ್ದೇಶಕನ ಆಶಯಕ್ಕೆ ತಕ್ಕ ರೀತಿಯಲ್ಲಿ ನಮ್ಮನ್ನು ಆವರಿಸಿ ಒಳಗೊಳ್ಳುವಂತೆ ಸಾಧ್ಯವಾಗುವುದರಲ್ಲಿ ಚಿತ್ರಕಥೆಯಷ್ಟೇ ಪ್ರಮುಖ ಕೊಡುಗೆ, ದೃಶ್ಯಗಳಲ್ಲಿ `ಅಭಿನಯ’ ಎನ್ನಬಹುದಾದ ನೂರಕ್ಕೆ ನೂರರಷ್ಟು ಸಹಜತೆಯನ್ನು ಮೇಳವಿಸಿಕೊಂಡ ನಟರ ಆಂಗಿಕ ವರ್ತನೆ ಮತ್ತು ಭಾವ ಪ್ರಕಟಣೆಗಳದ್ದು. ಇದರಿಂದಾಗಿ ಅಗತ್ಯವಿರುವಲ್ಲಿ ಭಾವತೀವ್ರತೆ ವ್ಯಕ್ತವಾಗುತ್ತದೆಯೇ ಹೊರತು ಭಾವಾವೇಶವಲ್ಲ. ಎ.ಎನ್. ಪ್ರಸನ್ನ ಬರೆಯುವ ʻಲೋಕ ಸಿನಿಮಾ ಸರಣಿʼ
ಜಾತಿ-ಧರ್ಮಗಳ ನಡುವೆ ಭೇದವಿಲ್ಲದ ಕಾಲದಲ್ಲಿ….
ಅವರು ನನ್ನ ಹೆಸರು ಕೇಳಿದರು. ತಮ್ಮ ಬಗ್ಗೆ ತಿಳಿಸಿದರು. ಅವರು ಬೆಳಗಾವಿ ಕಡೆಯವರು. ಜಮೀನುದಾರರು. ನನ್ನ ಹೆಸರು ಕೇಳಿದರು. ನನ್ನ ‘ಜಾಣತನ’ಕ್ಕೆ ಅವರು ಮೆಚ್ಚಿಕೊಂಡಿದ್ದರು. ತಮಗೆ ಮಕ್ಕಳಿಲ್ಲವೆಂದೂ ನನಗೆ ದತ್ತು ತೆಗೆದುಕೊಳ್ಳುವುದಾಗಿಯೂ ತಿಳಿಸಿದರು. ನನ್ನ ಅಭಿಪ್ರಾಯ ಕೇಳಿದರು. ನಾನು ಒಪ್ಪಿದೆ. (ಅವರಿಗಾಗಲಿ ನನಗಾಗಲಿ ಹಿಂದೂ ಮುಸ್ಲಿಂ ಎಂಬ ಭಾವವೇ ಇರಲಿಲ್ಲ.) ಹಾಗಾದರೆ ನಿಮ್ಮ ಮನೆಯ ವಿಳಾಸ ಹೇಳು ಎಂದಾಗ ಹೇಳಿದೆ. ಅವರು ತಮ್ಮ ಪುಟ್ಟ ಡೈರಿಯಲ್ಲಿ ಬರೆದುಕೊಂಡರು.
ರಂಜಾನ್ ದರ್ಗಾ ಬರೆಯುವ ಆತ್ಮಕತೆಯ ಸರಣಿ
ಮೌರ್ಯರ ಕಾಲದ ಆಡಳಿತ ಮತ್ತು ಮತ ಸ್ಥಾಪನೆಗಳು
ತನ್ನ ಸುವಿಶಾಲವಾದ ಸಾಮ್ರಾಜ್ಯವನ್ನು ಹರ್ಷನು ದಕ್ಷತೆಯಿಂದಲೂ, ಶ್ರದ್ಧೆಯಿಂದಲೂ ಪರಿಪಾಲಿಸುತ್ತಿದ್ದನು. ಹರ್ಷನು ಸ್ವತಃ ದೇಶದ ಪ್ರತಿಯೊಂದು ವಿಭಾಗವನ್ನು ಸಂದರ್ಶಿಸುತ್ತಿದ್ದನು. ರೈತರು ತಮ್ಮ ಆದಾಯದ ಅಂಶವನ್ನು ಕಂದಾಯ ರೂಪದಲ್ಲಿ ತೆರಬೇಕಾಗಿತ್ತು. ಕಠಿಣ ತೆರಿಗೆಯು ಹೇರಲ್ಪಡುತ್ತಿರಲಿಲ್ಲ. ರಾಜ್ಯದ ಆದಾಯದ ಕಾಲಂಶವನ್ನು ಸರಕಾರದ ಖರ್ಚಿಗೂ, ಇನ್ನೊಂದು ಅಂಶವನ್ನು ಅಧಿಕಾರಿಗಳ ವೇತನಕ್ಕೂ, ಮತ್ತೊಂದು ಅಂಶವನ್ನು ಸಾಹಿತ್ಯ, ಕಲೆಗಳ ಪ್ರೋತ್ಸಾಹಕ್ಕೂ, ಉಳಿದ ಅಂಶವನ್ನು ಧರ್ಮಗಳ ಪ್ರಸಾರಕ್ಕಾಗಿಯೂ ವಿನಿಯೋಗಿಸಲಾಗುತ್ತಿತ್ತು.
ಕೆ.ವಿ. ತಿರುಮಲೇಶ್ ಬರೆಯುವ ಸರಣಿ
ಸದಾ ಸ್ವಾಭಿನಂದನೆಯ ಯುಗ
ನಮ್ಮನ್ನು ನಾವೇ ಅಭಿನಂದಿಸಿಕೊಳ್ಳುತ್ತಿರುವುದು, ಹೊಗಳಿಕೊಳ್ಳುತ್ತಿರುವುದು ಇವೇ ನಮ್ಮ ನಿತ್ಯದ, ಕ್ಷಣಕ್ಷಣದ ದಂದುಗವಾಗಿದೆ. ಅಂದರೆ ನಾವು ನಮ್ಮನ್ನು ಅಭಿನಂದಿಸಿಕೊಂಡು ಬೆಚ್ಚಗೆ ಸುಖಪಡುತ್ತಾ ಮನೆಯೊಳಗೆ ಕುಳಿತಿರುತ್ತೇವೆಂದು ಅರ್ಥವಲ್ಲ. ಇನ್ನೊಬ್ಬರು, ಅಂದರೆ, ನಮ್ಮನ್ನು ಬಲ್ಲವರೆಲ್ಲರೂ ನಮ್ಮನ್ನು ಯಾವಾಗಲೂ ಅಭಿನಂದಿಸುತ್ತಲೇ ಸಾಧ್ಯವಾಗುವಂತಹ ಸುಲಭವಾಗುವಂತಹ ಅವಕಾಶಗಳನ್ನು ನಾವೇ ಸೃಷ್ಟಿಸುತ್ತಾ ಹೋಗುತ್ತೇವೆ.
ಕೆ. ಸತ್ಯನಾರಾಯಣ ಬರೆಯುವ “ಬೀದಿ ಜಗಳ ಮತ್ತು ಇತರೆ ಪ್ರಬಂಧಗಳು” ಸರಣಿಯ ಐದನೆಯ ಪ್ರಬಂಧ ನಿಮ್ಮ ಓದಿಗೆ
ಮೆಳ್ಳಿಗೇರಿ ಸರ್ ಸಲುವಾಗಿ ಶಾಲೆಯನ್ನೇ ಬದಲಾಯಿಸಿದ್ದೆ!
ವಿದ್ಯಾರ್ಥಿಗಳನ್ನು ನಾಲ್ಕು ಗುಂಪಾಗಿ ವಿಂಗಡಿಸಿ ಪ್ರತಿ ಗುಂಪಿಗೆ ಒಬ್ಬೊಬ್ಬ ಗಣಿತ ಪರಿಣತ ವಿದ್ಯಾರ್ಥಿಯನ್ನು ನಾಯಕನನ್ನಾಗಿ ಮಾಡಿದ್ದರು. ನನಗೆ ಒಂದು ಗುಂಪಿನ ಜಬಾಬ್ದಾರಿ ಕೊಟ್ಟಿದ್ದರು. ದೊಡ್ಡದಾಗಿರುವ ಮನೆಯ ಸಹಪಾಠಿಗಳ ಕೋಣೆಯೊಂದರಲ್ಲಿ ರಾತ್ರಿ ಕುಳಿತು ಗಣಿತ ಬಿಡಿಸುತ್ತಿದ್ದೆವು. ಅಲ್ಲೇ ಮಲಗಿ ಬೆಳಿಗ್ಗೆ ಮನೆಗೆ ಹೋಗುತ್ತಿದ್ದೆವು. ಹೀಗೆ ಸಹಪಾಠಿಗಳ ಮನೆಗೆ ಹೋಗಿ ಪಾಠ ಹೇಳುವುದನ್ನು ಮೊದಲಿನಿಂದಲೂ ಮಾಡುತ್ತಿದ್ದೆ. ಶ್ರೀಮಂತ ಹುಡುಗರ ತಾಯಂದಿರು ಬಡ ಹುಡುಗನ ತಾಯಿಯ ಮನೆಗೆ ಬಂದು “ಇವತ್ತು ನಿಮ್ಮ ಮಗನನ್ನು ನಮ್ಮ ಮನೆಗೆ ಕಳಿಸಿರಿ” ಎಂದು ಕೇಳುವುದು ನನಗೆ ಖುಷಿ ಕೊಡುತ್ತಿತ್ತು.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿ
ಸಾಮಾಜಿಕ ಜನಜೀವನ: ಭಾಗ ಒಂದು
ರಾಜರ ಸಹಾಯಕ್ಕಾಗಿ ಒಂದು ಬೋಧಕ ಮಂಡಳಿಯಿತ್ತು. ಪುರೋಹಿತನು ಇದರ ಪ್ರಧಾನಿಯಾಗಿದ್ದನು. ಸೇನಾನಿ ಮತ್ತು ಗ್ರಾಮದ ಮುಖ್ಯಸ್ಥ ಗ್ರಾಮಣಿಯು ಯುದ್ಧದಲ್ಲಿ ರಾಜನಿಗೆ ಸಹಾಯಕರಾಗಿರುತ್ತಿದ್ದರು. ಸಮಿತಿ ಮತ್ತು ಸಭ ಎಂಬ ಎರಡು ಸಂಸ್ಥೆಗಳಿದ್ದುವು. ರಾಜ್ಯವು ವಿಸ್ತಾರವಾಗುತ್ತ, ರಾಜನ ಅಧಿಕಾರವು ಹೆಚ್ಚುತ್ತಾ ಬಂದು, ವಾಜಪೇಯ, ರಾಜಸೂಯ, ಅಶ್ವಮೇಧವೆಂಬ ಯಾಗಗಳನ್ನು ಮಾಡುವ ಅರಸರ ರಾಜ್ಯಗಳು ರಾಜ್ಯ, ವೈರಾಜ್ಯ, ಸಾಮ್ರಾಜ್ಯಗಳೆಂದು ಕರೆಯಲ್ಪಡುತ್ತಿದ್ದುವು. ಕೆ.ವಿ. ತಿರುಮಲೇಶ್ ಬರೆಯುವ ‘ನನ್ನ ಹಿಸ್ಟರಿ ಪುಸ್ತಕ’ ಸರಣಿ









