ತೊರೆಯಲಾಗದ ಮಾಯೆ ಹಿಯಾ ಯಾಂಗ್ಕೆ
ದೂರವಾಗಿರುವ ತನ್ನ ಸಂಸಾರದ ಸದಸ್ಯರನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ನಿರತನಾದ ಹಾನ್ ದೈನಂದಿನ ನಿರ್ವಹಣೆಗಾಗಿ ಅತಿ ಕಳಪೆ ಮಟ್ಟದ ವಸತಿ ಮತ್ತು ಉದರ ಪೋಷಣೆಯಿಂದ ತೃಪ್ತನಾಗುತ್ತಾನೆ ಮತ್ತು ತನ್ನ ಶೋಧ ಕಾರ್ಯ ಮುಂದುವರಿಸುತ್ತಾನೆ. ಚಿತ್ರದುದ್ದಕ್ಕೂ ಕಟ್ಟಡ ಕೆಡವುತ್ತಿರುವ ಹಾಗೂ ಅದರ ಅವಶೇಷಗಳ ನಡುವೆಯೇ ಹಾನ್ ಸೇರಿದಂತೆ ಕೆಲಸಗಾರರ ಚಲನೆ ಕಾಣುತ್ತಿದ್ದು ಅವು ಅವನ ಅಂತರಂಗದ ತುಮುಲ ಮತ್ತು ಕಳವಳಗಳ ರೂಪಕಗಳಾಗುತ್ತವೆ. ಎ.ಎನ್. ಪ್ರಸನ್ನ ಬರೆಯುವ ಸಿನಿಮಾ ವಿಶ್ಲೇಷಣೆ
ನೀಲಿ ಬರೆಗಳ ಮುಟ್ಟಿ ಮುಟ್ಟಿ ನೋಡಿದ
ಅಂತೂ ಚಿಕ್ಕಪ್ಪ ಬಂದಿದ್ದ. ಯಾವತ್ತಿನಂತೆ ಎದ್ದು ನಿಂತು ಕೈ ಮುಗಿದೆ. ಬೀಗ ತೆಗೆದು; ‘ಐದು ನಿಮಿಷ ಇರಿ; ಪಲಾವ್ ತರ್ತೀನಿ’ ಎಂದು ಸೈಕಲೇರಿ ಹೋದ. ಪಲಾವ್ ಎನ್ನುವ ಹೆಸರನ್ನೆ ನಾನಾಗ ಕೇಳಿರಲಿಲ್ಲ. ಕೈಕಾಲು ಮುಖ ತೊಳೆದು ದೇವರಿಗೆ ಕಡ್ಡಿ ಹಚ್ಚು ಎಂದ ತಾತ. ಹಾಗೇ ಮಾಡಿದೆ. ಪಲಾವ್ ತಂದ ಚಿಕ್ಕಪ್ಪ. ಗಮ್ಮೆನ್ನುವ ಪೊಟ್ಟಣ. ತಾತನ ಮೆಲ್ಲಗೆ ‘ಇದೇನಪ್ಪಾ’ ಎಂದು ಕೇಳಿದ. ‘ಗಮುಲ್ದನ್ನ’ ಎಂದ. ಅಹಾ! ಅಂತಹ ಗಮಗಮಿಸುವ ಅನ್ನವ ನಾನೆಂದೂ ಉಂಡಿರಲಿಲ್ಲ. ಮೊಗಳ್ಳಿ ಗಣೇಶ್ ಬರೆಯುವ ಆತ್ಮಕತೆ ‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿಯ ಹದಿನೈದನೆಯ ಕಂತು
ಅಡಿಕೆ ಹೊತ್ತ ತಲೆಯ ಮೇಲೆ ಆನೆ ಕುಳಿತಾಗ
ದ್ವಿಚಕ್ರ ವಾಹನದಿಂದ ಬಿದ್ದು ಬಂದ ಒಬ್ಬರ ಹರಿದ ಗಾಯಕ್ಕೆ ಹೊಲಿಗೆ ಹಾಕಿ, ಮುರಿದ ಮೂಳೆಗೆ ತಾತ್ಕಾಲಿಕ ಪಟ್ಟಿ ಕಟ್ಟಿ ಆಗುವಷ್ಟರಲ್ಲಿ, ನಿದ್ರಾದೇವಿ ನಿನ್ನ ಸಹವಾಸ ನನಗೆ ಬೇಡ ಎಂದು ಬೇರೆಯವರನ್ನು ಅಪ್ಪಿಕೊಳ್ಳಲು ಹೋಗಿದ್ದಳು. ಅಷ್ಟರಲ್ಲೇ ಇನ್ನೊಂದು ಹುಡುಗಿ. ಆಗಷ್ಟೇ ಹೈಸ್ಕೂಲು ಮುಗಿಸಿದ ಆಕೆ, ತಾನು ಲವ್ ಮಾಡಿದ ಹುಡುಗನನ್ನು ಮದುವೆಯಾಗಲು ತಂದೆ ತಾಯಿ ಒಪ್ಪಲಿಲ್ಲ ಎಂಬ ಕಾರಣಕ್ಕಾಗಿ ಮೇಟಾಸಿಡ್ ಕುಡಿದು ಬಂದಿದ್ದಳು. ಅವಳಿಗೆ ಚಿಕಿತ್ಸೆ ನೀಡಿದ ಬಳಿಕ ಇಬ್ರಾಹಿಂ ಎಂಬ ಮತ್ತೊಬ್ಬ ಪೇಷೆಂಟು ಬಂದಿದ್ದ. ಅವನ ಸ್ಥಿತಿ ನೋಡಿ, ಯಾಕೋ ಸಂಶಯ ಮೂಡಿತು. ಡಾ. ಕೆ.ಬಿ. ಸೂರ್ಯಕುಮಾರ್ ಬರಹ
ಮಲೆನಾಡಿನ ಬಿಸುಪು, ಹವಿಗನ್ನಡದ ಸೊಗಸು
ನನಗೆ ಒಂದು ಆಶ್ಚರ್ಯ ಅಂತ ಅನ್ನಿಸಿದ್ದು, ಕತೆ ನಡೆಯವ ಆ ಸಮಯ ಏನಿದೆ ಆಗ ಸಿದ್ದಾಪುರದಲ್ಲಿ ಸ್ವಾತಂತ್ರ್ಯ ಹೋರಾಟ ಏರುಗತಿಯಲಿದ್ದ ಸಮಯ. ಪ್ರತಿ ಮನೆಯಲ್ಲೂ ಒಬ್ಬರಲ್ಲಾ ಒಬ್ಬರು ಜೈಲಿಗೆ ಹೋಗಿದ್ದ ಪರಿಸ್ಥಿತಿ ಇತ್ತು. ಮನೆ ಗಂಡಸ್ರೆಲ್ಲಾ ಜೈಲಲ್ಲಿ, ಈ ಕಡೆ ಜಪ್ತಿ ಮಾಡಲೆ ಬಂದಾಗ ಹೆಂಗಸ್ರೇ ಅಡ್ಡ ನಿಂತು ಪೋಲೀಸರ ವಿರುದ್ಧ ಹೋರಾಡಿದ ಸನ್ನಿವೇಶದ ಘಟನೆಗಳು ಬಹಳ ನಡೆದಿವೆ.
“ಓದುವ ಸುಖ” ಅಂಕಣದಲ್ಲಿ ವಿ.ಟಿ. ಶೀಗೇಹಳ್ಳಿ ಬರೆದ ತಲೆಗಳಿ ಕಾದಂಬರಿಯ ಬಗ್ಗೆ ಬರೆದಿದ್ದಾರೆ ಗಿರಿಧರ್ ಗುಂಜಗೋಡ್
ಇನ್ಸುಲಿನ್ ಎಂಬ ‘ಜೀವಕಾರಕ’ದ ವಿಕಾಸ
ಎರಡು ವರ್ಷ ಮೆಡಿಕಲ್ ಓದಿದ. ಆ ಶಿಕ್ಷಣ ಮುಗಿಸುವ ಮುನ್ನವೇ ಮಿಲಿಟರಿ ಸೇರಲು ಅರ್ಜಿ ಹಾಕಿದ. ಅವರು ಸೇರಿಸಿಕೊಳ್ಳಲಿಲ್ಲ. ಕೆಲವು ತಿಂಗಳು ಬಿಟ್ಟು ಮತ್ತೆ ಪ್ರಯತ್ನಿಸಿದ. ಮತ್ತೆ ನಕಾರ. ಒಂದು ವರ್ಷದ ನಂತರ ಮಗದೊಮ್ಮೆ ಪ್ರಯತ್ನಿಸಿದ. ಅಷ್ಟರಲ್ಲಾಗಲೇ, ಮೊದಲ ಮಹಾಯುದ್ಧ ಪೂರ್ಣ ಭರಾಟೆಯಲ್ಲಿ ಸಾಗಿತ್ತು. “ಸೇನೆಗೆ ಸೇರ್ತೀನಿ” ಅನ್ನುವವರನ್ನು “ಬೇಡ” ಅನ್ನುವ ಪರಿಸ್ಥಿತಿಯಲ್ಲಿ ಅಂತೂ ಕೆನಡಾ ಇರಲಿಲ್ಲ. ಅದರಲ್ಲೂ, ರಣರಂಗದಲ್ಲಿ ವೈದ್ಯರ ಕೊರತೆ ಕಾಡುತ್ತಿತ್ತು. ಈ ಬಾರಿ ಅವನ ಅರ್ಜಿ ಫಲಿಸಿತು.
ಶೇಷಾದ್ರಿ ಗಂಜೂರು ಬರೆಯುವ ವಿಜ್ಞಾನ ಸರಣಿ
ಕುಲಪಂಚಾಯ್ತಿ ವ್ಯವಸ್ಥೆ ಮತ್ತು ರಾಜಕೀಯ ಪ್ರಾತಿನಿಧ್ಯ
ಮದುವೆ ಸಂದರ್ಭದಲ್ಲಿ ಬ್ಯಾಟಿ ಕೊಡದಿದ್ದರೆ ಕುಲದಿಂದ ಬಹಿಷ್ಕಾರ ಹಾಕುವ ಪದ್ಧತಿಯಿತ್ತು. ಮದುವೆ ದೈವಕ್ಕೆ ಬರದಿದ್ದರೆ ಆತನನ್ನು ಬಹಿಷ್ಕಾರ ಹಾಕುವ ಪದ್ಧತಿ ಇತ್ತು. ಇದರಲ್ಲಿ ಚಾಜಾ ಏರುಕಟ್ಟುವ ಪದ್ಧತಿ ಚಾಲ್ತಿಯಲ್ಲಿತ್ತು. ಅಂದರೆ ಒಂದಷ್ಟು ಮಾಂಸದ ತುಂಡನ್ನು ಅರಿವೆಯಲ್ಲಿ ಗಂಟುಕಟ್ಟಿ ಅದನ್ನು ಮೇಲೆ ಕಟ್ಟಿದರೆ `ಏರುಗಟ್ಟೋದು’ ಎಂದು ಕರೆಯುತ್ತಿದ್ದರು. ಈ ಪದ್ಧತಿ ಮೂಲಕ ಕುಲದಿಂದ ಬಹಿಷ್ಕಾರ ಹಾಕುವುದಿತ್ತು.ಹೀಗೆ ಮದುವೆಯಲ್ಲಿ ಮಾಡುತ್ತಿದ್ದ ಮಾಂಸಾಹಾರ ಇಂತಹ ಸಮಸ್ಯೆಗಳಿಗೆ ಮುಳುವಾಯಿತು.
ಡಾ. ಅರುಣ್ ಜೋಳದಕೂಡ್ಲಿಗಿ ಬರೆಯುವ ಗಂಟಿಚೋರರ ಕಥನ ಸರಣಿಯ ಹದಿನೇಳನೆಯ ಕಂತು
ಅಚಲ ಅಸಾಮಾನ್ಯ ಸುಧಾರಕನ ಅಳಿಯದ ನೆನಪುಗಳು
ರಾಜಾರಾಮಮೋಹನ ರಾಯರು ಇಂಗ್ಲೆಂಡ್ ನ ಉತ್ತರಕ್ಕಿರುವ ಬಂದರು ನಗರ ಲಿವರ್ಪೂಲ್ ಅನ್ನು ತಲುಪಿದರು. ಲಿವರ್ಪೂಲ್ ಬಂದರನ್ನು ಜಗತ್ತಿನ ಮೊದಲ ಜಲ ಹಡಗುಕಟ್ಟೆ ಎನ್ನುತ್ತಾರೆ. ಭಾರತದಿಂದ ಹೊರಟು ಲಿವರ್ಪೂಲ್ ಸೇರಿದ ಹಡಗಿನಲ್ಲಿ ರಾಮಮೋಹನರಾಯರ ಜೊತೆಯಲ್ಲಿ, ಸಾಕು ಮಗ ,ಇಬ್ಬರು ನೌಕರರು ಹಾಗು ಅವರ ನಿತ್ಯದ ಹಾಲಿನ ಬೇಡಿಕೆಯನ್ನು ಪೂರೈಸಲು ಕೆಲವು ದನಗಳು ಇದ್ದವಂತೆ. ಯೋಗೀಂದ್ರ ಮರವಂತೆ ಸರಣಿ
ನಾನು ಕೂಡ ಜಾಡಮಾಲಿಯಾಗಿದ್ದೆ
ಆ ಬಳೆಗಳ ಅಸಹಾಯಕತೆಗೂ ತಾಯ ಆಲಾಪಕ್ಕೂ ವ್ಯತ್ಯಾಸವೇ ಇರಲಿಲ್ಲ. ಅಪ್ಪನ ಜೊತೆ ಮೊದಲ ಬಾರಿಗೆ ಕೈ ಮಾಡಿದ್ದಳು. ಅವಳಿಗೆ ಗೊತಿತ್ತೇನೊ; ತಾನಿನ್ನು ಹೆಚ್ಚು ಕಾಲ ಉಳಿಯುವುದಿಲ್ಲವೆಂದು! ಅಬ್ಬರಿಸಿದಳು. ಬೀಸಿದ್ದ ಬೆತ್ತವ ತಟಕ್ಕನೆ ಹಿಡಿದಿದ್ದಳು. ಅಪ್ಪ ಉಷಾರಾದ. ದೊಣ್ಣೆಯ ಎರಡೂ ತುದಿಗಳ ಬಲವಾಗಿ ಹಿಡಿದುಕೊಂಡ, ತಾಯ ಅದರ ಮಧ್ಯ ಭಾಗವ ಹಿಡಿದು ಶಕ್ತಿ ಮೀರಿ ಅವನನ್ನು ಹಿಂದಕ್ಕೆ ನೂಕಿಕೊಂಡು ಹೋಗಿ ಗೋಡೆಗೆ ಒತ್ತರಿಸಿಕೊಂಡು ತನ್ನ ಕಾಲುಗಳ ಬಲವಾಗಿ ಹಿಂದಕ್ಕೆ ಊರಿ ಆ ಬೆತ್ತವನ್ನು ಅವನ ಗೋಣಿನತ್ತ ತಳ್ಳುತ್ತಿದ್ದಳು.
ಮೊಗಳ್ಳಿ ಗಣೇಶ್ ಬರೆಯುವ ‘ನನ್ನ ಅನಂತ ಅಸ್ಪೃಶ್ಯ ಆಕಾಶʼ ಸರಣಿಯ ಹತ್ತನೆಯ ಕಂತು.
ಶಾಕ್ತಾರಾಧನೆ, ಹನುಮಾರಾಧನೆ ಮತ್ತು ಮೊಹರಂ
`ಮೊಹರಂ’ ಎಂದರೆ ನಿಷಿದ್ಧವಾದುದು ಎಂದರ್ಥ. ಶ್ರದ್ಧಾವಂತ ಮುಸ್ಲಿಮರ ಪಾಲಿಗಿದು ಸೂತಕದ ಮಾಸ. ಈ ಮಾಸದಲ್ಲಿ ಅವರು ಮದುವೆಯಂತಹ ಶುಭಕಾರ್ಯ ಹಮ್ಮಿಕೊಳ್ಳುವುದಿಲ್ಲ. ದುರಂತ ಸಾವು ವಸ್ತುವಾಗಿರುವ ಮೊಹರಂ ಸಾಹಿತ್ಯವೂ ಒಂದರ್ಥದಲ್ಲಿ ಸೂತಕದ ಸಾಹಿತ್ಯವೇ. ವಿಶೇಷವೆಂದರೆ, ಅರಬರ ಈ ದಾಯಾದಿ ಸಂಘರ್ಷದ ರಾಜಕೀಯ ಚರಿತ್ರೆ, ಮೊಹರಂ ಆಚರಣೆಯ ರೂಪತಾಳಿದ ಬಳಿಕ, ಇಸ್ಲಾಮಿನ ಜತೆಜತೆಗೆ ಜಗತ್ತಿನ ನಾನಾ ಭಾಗಗಳಿಗೆ ಹೋಯಿತು ಮತ್ತು ಅರಬೇತರ ದೇಶಗಳಲ್ಲಿ ವಿಭಿನ್ನ ರೂಪಾಂತರ ಪಡೆಯಿತು.
ಡಾ. ಅರುಣ್ ಜೋಳದಕೂಡ್ಲಿಗಿ ಬರಹ









