ಅಬ್ದುಲ್ ರಶೀದ್ ವಿರಚಿತ ‘ರಕ್ತಚಂದನ’ ಎಂಬ ನೀಳ್ಗತೆಯು
ಚಾರುದತ್ತರ ಮರಣದ ಸುದ್ದಿ ನನಗೆ ಗೊತ್ತಾಗಿದ್ದು ಅವರು ತೀರಿಹೋಗಿ ಮಾರನೇ ದಿನ ಮಧ್ಯಾಹ್ನ. ಕೊರೋನಾದ ಮೊದಲ ಅಲೆ ಅದಾಗ ತಾನೇ ಉಲ್ಬಣಿಸುತ್ತಿದ್ದ ಕಾರಣ ಫೇಸ್ ಬುಕ್ಕು ಲೈವಿನಲ್ಲೇ ಅವರಿಗೆ ಅಭಿಮಾನಿಗಳು ಶ್ರದ್ಧಾಂಜಲಿ ಅರ್ಪಿಸುತ್ತಿದ್ದರು. ಲೇಖಕಿ ವಿಲಾಸಿನಿ ಹಾಸಿಗೆಯಲ್ಲಿ ಮಲಗಿದ್ದಲ್ಲೇ ಗೋಡೆಗೆ ಒರಗಿ ಕುಳಿತು ಕಣ್ಣು ಮುಖ ಊದಿಸಿಕೊಂಡು ಲೈವಿನಲ್ಲಿ ಮುಳುಮುಳು ಅಳುತ್ತಾ ನಡುನಡುವೆ ಸ್ಪಷ್ಟವಾಗಿ ಮಾತಾಡುತ್ತಿದ್ದಳು. …”
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಬಸವಣ್ಣೆಪ್ಪಾ ಪ. ಕಂಬಾರ ಬರೆದ ಕತೆ
ಕುಲಕರ್ಣಿ ದತ್ತು ಎದ್ದು ನಿಂತು “ಗುರಪಾದ ಹೆಣಾ ಮಣ್ಣ ಮಾಡಬ್ಯಾಡ. ಹಂಗೇನಾದರು ಆತಂದ್ರ ಪೋಲಿಷವರೆಗೆ ಹೋಗತದ ನೋಡು. ನಮ್ಮದಂತು ಕಬೂಲಿಲ್ಲ. ನಾ ನಡೀತೇನ ಅಂತಂದು ಎದ್ದು ಹೊರನಡೆದ. ಅವನ ಜೋಡ ಏಳೆಂಟಮಂದಿ ಎದ್ದರು. ಮಹಮ್ಮದ ಅಲಿ ಎದ್ದು ನಿಂತು ಗುರಪಾದನ ಕಡೀಗಿ ತಿರಿಗಿ “ಗುರುಪಾದನ್ನ ನಮ್ಮ ಜಾತಿಗಿ ವಿರುದ್ಧವಾಗಿ ನಾನೇನು ಮಾಡಂಗಿಲ್ಲ. ನಿಮಗ ಶಿವಾ ಹೆಂಗೋ ನಮಗ ಅಲ್ಲಾನು ಹಂಗ, ನಾವಿನ್ನ ಬರ್ತಿವಿ.. ಎಂದ್ಹೇಳಿ ಅವರು ಎಲ್ಲರು ಎದ್ದುಹೋದರು.”
‘ನಾನು ಮೆಚ್ಚಿದ ನನ್ನ ಕತೆʼಯ ಸರಣಿಯಲ್ಲಿ ಬಸವಣ್ಣೆಪ್ಪಾ ಪ. ಕಂಬಾರ
ಮಹಾಂತೇಶ ನವಲಕಲ್ ಬರೆದ ಈ ಭಾನುವಾರದ ಕತೆ
ಬೀಜವನ್ನು ರಕ್ಷಿಸುವ ಇಂತಹ ಅಮೂಲ್ಯವಾದ ಸಂಪತ್ತನ್ನು ಮುಂದಿನ ಕಾಲ ಘಟ್ಟದವರೆಗೆ ಕೊಂಡೊಯ್ಯುವ ಸಮರ್ಥ ವ್ಯಕ್ತಿಯನ್ನು ತಾತ, ನಮ್ಮ ತಂದೆಯಲ್ಲಿ ಕಾಣಲಿಲ್ಲ ಸರ್. ತಂದೆಯವರು ಸ್ವಲ್ಪ ಅಶಿಸ್ತು ಮತ್ತು ಕುಡಿತವನ್ನು ಅವಲಂಬಿಸಿರುವ ವ್ಯಕ್ತಿ. ನಾನು ಪಿಯುಸಿಯಲ್ಲಿ ಚೆನ್ನಾಗಿ ಮಾರ್ಕ್ ತೆಗೆದುಕೊಂಡರೂ, ಎಂಬಿಬಿಎಸ್ ಸೀಟು ದೊರಕಿದರೂ..”
ಎಚ್.ಆರ್.ರಮೇಶ್ ಬರೆದ ಈ ಭಾನುವಾರದ ಕತೆ
ಒಂದು ಕಂದು ಬಣ್ಣದ ನಾಯಿ ಅವನ ಜೊತೆಗೆ. ಅದರ ಮೂತಿ ಕಪ್ಪಾಗಿದೆ. ನೆಲವನ್ನು ಮೂಸುತ್ತ ಬರುತ್ತಿದೆ. ಮೊಣಕಾಲು ಮಟ್ಟದ ಬರ್ಮುಡ ಮತ್ತು ಟಿ ಶರ್ಟ್ ಧರಿಸಿದ್ದಾನೆ. ಅದರ ತುಂಬ ಆಕರ್ಷಣೀಯವಾದ ಬಣ್ಣದಲ್ಲಿ ಮುದ್ರೆಯನ್ನು ಒತ್ತಿರುವ ಚಿತ್ರಗಳು. ಮುದ್ರೆ ಒತ್ತಿರುವ ಕಪ್ಪು ಬಣ್ಣದ ಕೆಂಪು ಚುಕ್ಕಿಗಳಿರುವ ಜೀರುಂಡೆ ಮತ್ತು ಕಪ್ಪು ಬಣ್ಣದ ಮಣ್ಣಿನ ದೀಪಗಳಿರುವ ಚಿತ್ರಗಳು. ಜೀರುಂಡೆಗಳ ಸಾಲು ನೇರವಾಗಿದೆ.”
ಡರ್ಬನ್ ಇದಿನಬ್ಬ: ಬಸಳೆ ಮಾರುವವನ ಕೂಗು
ಇದಿನಬ್ಬ ನಚ್ಚಬೆಟ್ಟು ಬಳಿಯ ಊರಿಗೆ ಹೊರಡುವ ಮೂತಾಪನ ದೋಣಿಗೆ ಮೂತಮ್ಮನ ಸಹಾಯದಿಂದ ಏರಿದ. ದೋಣಿ ಫಾತಿಮಾರ ಗಂಡ ಇಸ್ಮಾಯಿಲರದ್ದೇ, ಅಂದರೆ ಶಾಮಣ್ಣ ಗೌಡರ ದೋಣಿಗೆ ಅವರೇ ಅಂಬಿಗ. ಸದ್ಯ ಮುಂಗೋಪಿ ತಂದೆಯ ಕೈಯಿಂದ ಮಗನನ್ನು ರಕ್ಷಿಸಿದೆನಲ್ಲ ಎಂಬ ಖುಷಿ ಹಲೀಮಾರಿಗೆ. ಆದರೆ ಖುಷಿ ಬಹಳ ದಿನ ಉಳಿಯಲಿಲ್ಲ.
ಮುನವ್ವರ್ ಜೋಗಿಬೆಟ್ಟು ಬರೆಯುವ ‘ಡರ್ಬನ್ ಇದಿನಬ್ಬ’ ಕಾದಂಬರಿಯ ಎರಡನೆಯ ಕಂತು
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಆಶಾ ಜಗದೀಶ್ ಬರೆದ ಕಥೆ
ಅದು ವಯಸ್ಸಾದ ತಂದೆ, ತಾಯಿ, ಮಡದಿ, ಮಕ್ಕಳಿದ್ದ ತುಂಬು ಕುಟುಂಬ, ಈ ಜೇನಿನ ಗೂಡಿಗೆ ಕಲ್ಲು ಹೊಡೆದುಬಿಟ್ಟೆನಾ! ನಡುಗಿ ಹೋಗಿದ್ದೆ. ಲಕ್ಷ್ಮಿ ಗುದ್ದಾಡಿದಳು, ಹಾದಿಬೀದಿ ರಂಪ ಮಾಡಿದಳು, ಯಾವಾಗ ನನ್ನ ಸೀರೆ, ಪೋಲ್ಕ ಜಗ್ಗಾಡಿ ನನ್ನ ಮೇಲೆ ಕೈ ಎತ್ತಿದಳೋ, ಮಾದೇವ ಕಡ್ಡಿ ತುಂಡು ಮಾಡಿಬಿಟ್ಟ.
‘ನಾನು ಮೆಚ್ಚಿದ ನನ್ನ ಕತೆʼಯ ಸರಣಿಯಲ್ಲಿ ಆಶಾ ಜಗದೀಶ್ ಬರೆದ ಕತೆ ‘ಎಲೆ ಉದುರುವ ಕಾಲಕ್ಕೆʼ
ಮುನವ್ವರ್ ಬರೆಯುವ ʼಡರ್ಬನ್ ಇದಿನಬ್ಬʼ ಕಾದಂಬರಿ ಇಂದಿನಿಂದ…
ನೇತ್ರಾವತಿ ದಂಡೆಯ ಅಜಿಲಮೊಗರು ಎಂಬ ಊರಿನ ಇದಿನಬ್ಬನಿಗೆ, ಆಫ್ರಿಕಾದ ಡರ್ಬನ್ ನಂಟು ಅಂಟಿದ ಕತೆಯಿದು. ನದಿಯ ಹರಿವಿನಂತೆ ಸಾಗುವ ಈ ಕಥೆಯಲ್ಲಿ ಅನಿರೀಕ್ಷಿತ ತಿರುವುಗಳು ಓದಿನ ಕುತೂಹಲವನ್ನು ಹೆಚ್ಚಿಸುತ್ತವೆ. ಕಥೆ ಹೇಳುತ್ತ ಗುಲಾಮ ಪದ್ಧತಿಯಲ್ಲಿರುವ ಕ್ರೌರ್ಯದ ಅನಾವರಣ ಮಾಡಿರುವ ಕಾದಂಬರಿಕಾರ ಮುನವ್ವರ್ ಜೋಗಿಬೆಟ್ಟು, ಬರವಣಿಗೆಯನ್ನು ಬಹಳ ಪ್ರೀತಿಸುತ್ತಾರೆ.”
ಅಕ್ಷತಾ ಕೃಷ್ಣಮೂರ್ತಿ ಬರೆದ ಭಾನುವಾರದ ಕತೆ ‘ಅಬ್ಬೋಲಿ’
”ಕಾಳಿ ನದಿ ಆಣೆಕಟ್ಟಿನ ಕೆಲಸ ನೋಡಿಕೊಳ್ಳುವ ಅಧಿಕಾರಿಗಳು ರಾತ್ರಿ ಊಟಕ್ಕೆ ಬರುತ್ತಿದ್ದರು. ಅವರಿಗೆ, ‘ಒರಿಜನಲ್ಲೂ ಮತ್ತೆಲ್ಲೂ ಸಿಗದು.ತಾಜಾ ಮಾಲು’ ಎಂದು ಕಳ್ಳು ಮಾರಿ ಹಣ ವಸೂಲಿ ಮಾಡುತ್ತಿದ್ದ. ಅದರ ಅರ್ಧ ಪಾಲು ಸಡಗೋನಿಗೂ ಹೋಗುತ್ತಿತ್ತು.ಇಂತಹುದೆಲ್ಲ ವ್ಯವಹಾರ ಮಾಡುತ್ತಾ ಸಡಗೋ ಕಳ್ಳಿನ ದಾಸನಾದ. ಡಿಸೆಂಬರನಿಂದ ಫೆಬ್ರುವರಿಯವರೆಗು ಸಿಗುವ ಕಳ್ಳು ಕುಡಿಯುತ್ತ ಕಾಡಿನ ಯಾವುದೊ ಮರದ ಅಂಚಲ್ಲಿ…”
ಕ್ರೌರ್ಯ-ಹಿಂಸೆಯ ಅನಾವರಣಕ್ಕೆ ಕಾರಣವೇ ಬೇಕಿಲ್ಲ
ಶಶಿಧರ್ ಹಾಲಾಡಿ ಅವರು ಬರೆದ ‘ಕಾಲಕೋಶ’ ಕಾದಂಬರಿಯ ಹರವು 1947 ರಿಂದ ಪ್ರಾರಂಭವಾಗಿ 1984ರ ವರೆಗೂ ಮುಂದುವರೆದಿದೆ. 2002ರ ಗುಜರಾತ್ ಹಾಗೂ ಅದಕ್ಕೂ ನಂತರ ಬರಬಹುದಾದ ಅನೇಕ ವಿಪ್ಲವಗಳ ಕುರಿತಾದ ಮುನ್ಸೂಚನೆಯೂ ಈ ಕಾದಂಬರಿಯಲ್ಲಿದೆ. ಮನುಷ್ಯ ಮೂಲತಃ ಸಂಘಜೀವಿ ಎನ್ನುವದಕ್ಕೇ ಅನುಮಾನ ಬರುವ ಅನೇಕ ಸಂಗತಿಗಳನ್ನು ಇಂದು ನಾವು ಜನಾಂಗೀಯ ಹಿಂಸೆಯಲ್ಲಿ ಕಾಣುತ್ತೇವೆ. ಕಥಾನಾಯಕನ..”









