ಓಬೀರಾಯನ ಕಾಲದ ಕಥಾಸರಣಿಯಲ್ಲಿ ಗುರುರಾಜ ಮಾರ್ಪಳ್ಳಿ ಬರೆದ ಕತೆ
“ಮನುಷ್ಯನಿಗೆ ಹಾಳಾಗಲಿಕ್ಕೆ ಒಂದು ಕಾಲ. ಒಳ್ಳೆಯದಾಗಲಿಕ್ಕೆ ಒಂದು ಕಾಲ. ಸಾಮಾನ್ಯ ಅದೇ ಟೈಮಿಗೆ ಇರಬಹುದು, ವೆಂಕಟರಾಯರ ದಂಡು ಮದರಾಸಿನಿಂದ ಹೆಂಡತಿಯನ್ನು ಕರೆದುಕೊಂಡು ಟಾಂಗಾದಿಂದ ಬರುತ್ತಿತ್ತು. ಆ ಬ್ಯಾಗು ಹೋಲ್ಡಾಲು, ಹೆಂಡತಿಯ ತುಟಿಗೆ ಮೆತ್ತುವ ರಂಗು; ಆ ಚಪ್ಪಲಿ, ಆ ಬೂಟ್ಸು, ಹ್ಯಾಟು, ಪ್ಯಾಂಟು, ಕೋಟು, ವಾಕಿಂಗ್ ಸ್ಟಿಕ್, ಐ ರಿಮೆಂಬರ್ ಎವರಿಥಿಂಗ್, ಅಂಡರ್ಸ್ಟೇಂಡ್…”
ಜಿ. ಎಸ್ ಅವಧಾನಿಯವರ ಪುಸ್ತಕದ ಕುರಿತು ಸುಧಾ ಆಡುಕಳ ಬರೆದ ಲೇಖನ
“ವರ್ತಮಾನದ ಸಂಗತಿಗಳಿಗೆ ಸದಾ ತುಡಿಯುವ ಅವಧಾನಿಯವರು ಸಾಕ್ಷರತಾ ಆಂದೋಲನ, ವಿಜ್ಞಾನ ಚಳುವಳಿಗಳ ಮುಂಚೂಣಿಯಲ್ಲಿದ್ದವರು. ಅನೇಕ ವಾದ, ವಿವಾದಗಳಿಗೆ ಮುಖಾಮುಖಿಯಾಗುತ್ತಲೇ ಮೌಢ್ಯ ಮತ್ತು ಕಂದಾಚಾರಗಳನ್ನು ಸದಾ ತಮ್ಮ ಮೊನಚು ಮಾತುಗಳಿಂದ ಟೀಕಿಸುತ್ತಿದ್ದರು. ಪ್ರಖರ ವೈಚಾರಿಕತೆಯನ್ನು ತಮ್ಮ ಶಿಷ್ಯವರ್ಗದಲ್ಲಿ ಬೆಳೆಸಲು ಅನೇಕ ಸೃಜನಶೀಲ…”
ನವೀನ್ ಮಧುಗಿರಿ ಬರೆದ ಕಥೆ “ಬೆಳಕು”
“ಇಷ್ಟೊತ್ತು ಗುಡುಗುತ್ತಿದ್ದ ಯಜಮಾನ ಈಗ ನಕ್ಕ. ‘ಎಲ್ಲಾ ನಂದೇ; ಇಲ್ಲಿರೋ ಕಾಡು, ಮರ, ಭೂಮಿ ಎಲ್ಲಾ ನಂದೇ..’ ಗಹಗಹಿಸಿ ಜೋರಾಗಿ ನಕ್ಕ. ಜೋರುಮಳೆ ಬಂದು ನಿಂತಂತೆ ಯಜಮಾನನ ನಗು ನಿಂತಿತು. ಐದಾರು ಬಾರಿ ಚಿಲುಮೆಯ ಕಿಡಿ ಕತ್ತಲಿನಲ್ಲಿ ಯಜಮಾನನ ಕೈ ಬಾಯಿಯ ಹಾದಿಯಲ್ಲಿ ಓಡಾಡಿತು. ಆ ಸಮಯ ಅಲ್ಲಿರುವ ಪ್ರತಿಯೊಬ್ಬರ ಉಸಿರಾಟದ ಶಬ್ದವು ಸ್ಪಷ್ಟವಾಗಿ ಕೇಳಿಸುವಷ್ಟು ನಿಶ್ಯಬ್ದ ಇತ್ತು. ಆ ನಿಶ್ಯಬ್ದವನ್ನು ಸೀಳಿ ಯಜಮಾನನ ಆಜ್ಞೆಯ ನುಡಿ ಬಂತು.”
ಮಂಜುಳ ಡಿ ಪುಸ್ತಕದ ಕುರಿತು ಎಂ.ಎನ್. ಸುಂದರ್ ರಾಜ್ ಲೇಖನ
“ಅಂಕಣ ಬರೆಯುವುದೆಂದರೆ, ಒಂದು ವಿಶಾಲಾರ್ಥವನ್ನು ನೀಡುವ ವಸ್ತುವನ್ನು ಕೆಲವೇ ಮಾತುಗಳಲ್ಲಿ ಹುದುಗಿಡುವಂತಹುದು. ಅಂದರೆ ಸಮುದ್ರವನ್ನು ಸಾಸಿವೆ ಕಾಳಲ್ಲಿ ತುಂಬಿದಂತೆ. ಏಕೆಂದರೆ ಒಂದೊಂದೂ ವಸ್ತುಗಳೂ ಸಹ ಕಾದಂಬರಿ ಬರೆಯುವಷ್ಟು ವಿಷಯಗಳನ್ನು ಹೊಂದಿರುತ್ತದೆ. ಉದಾಹರಣೆಗೆ ‘ಕಾಶ್ಮೀರದ ಕರಾಳತೆಯ ಹುದುಲಿನಲ್ಲಿ……’ ನಿಜಕ್ಕೂ ಇಂದಿನ ಕಾಶ್ಮೀರದ ಸ್ಥಿತಿಗೆ ಹಿಡಿದ ಕೈಗನ್ನಡಿ.”
ಓಬಿರಾಯನಕಾಲದ ಕಥಾಸರಣಿಯಲ್ಲಿ ಕುಕ್ಕೇಟಿ ಮಾಧವ ಗೌಡ ಬರೆದ ಕಥೆ
“ಅಜ್ಜ ಅಡ್ಕಾರಿಗೆ ಹೋದದ್ದು ಯಾಕೆ ಎಂದು ಅಮೇಲೆ ತಿಳಿಯಿತು. ಅವರು ಕ್ಷೌರ ಮಾಡಿಸಿಕೊಳ್ಳಲು ಹೋಗಿದ್ದರು. ಮರುದಿನ ಅಮ್ಮ ಅಜ್ಜನ ಸ್ವಚ್ಛ ಬಟ್ಟೆಗಳನ್ನು ಮಡಚಿ ತಂದು ಅಜ್ಜನಿಗೆ ಕೊಟ್ಟರು. ನಾನು ಕಿಸ್ತು ಕಟ್ಟಲು ಹೋಗುವ ನಮ್ಮ ಅಜ್ಜನ ಸಡಗರವನ್ನು ಗಮನಿಸುತ್ತಿದ್ದೆ. ಯಾವುದೋ ರಾಜಕಾರ್ಯಕ್ಕೆ ಹೋಗುವವರಂತೆ ಅಜ್ಜ ಸಂಭ್ರಮಿಸುತ್ತಿದ್ದರು. ಒಗೆದು ಶುಚಿಯಾಗಿದ್ದ ಮೊಣಕಾಲಿನ ಕೆಳಗೆ ಬರುವಂಥ ಮುಂಡು ಉಟ್ಟು”
ಸಾಹಿತ್ಯ ಸಮ್ಮೇಳನ ಮತ್ತು ಗೋಷ್ಠಿ: ಮಚ್ಚೇಂದ್ರ ಪಿ ಅಣಕಲ್ ಬರೆದ ಲಲಿತ ಪ್ರಬಂಧ
“‘ನನ್ ಹೆಸ್ರು ಕಾರ್ಡನ ಕವಿಗೊಷ್ಠಿಯಲ್ಲಿ ಕೊನೆಯದು’ ಅಂತ ಕಾರ್ಡಿನಲ್ಲಿ ಮುದ್ರಣಗೊಂಡಿತ್ತು. ಅದನ್ನು ಓದುತ್ತಾ ನಿರೂಪಣೆ ಮಾಡೊ ನಾಣಿಗೆ ‘ಅಣ್ಣಾ! ಇಲ್ಲಿ ಬಾ’ ಅಂತ ಮೆಲ್ಲಗೆ ಕರೆದು ಪರದಾ ಹಿಂದೆ ಯಾರಿಗೂ ಕಾಣದಂತೆ ಡಕ್ಕನೆ ಕಾಲ್ ಬಿದ್ದು “ಹ್ಯಾಂಗಾದ್ರು ಈ ಗೋಷ್ಠಿಯಿಂದ ನನ್ನ ಹೆಸ್ರು ಬೇಗ ಹೇಳಿ ಪಾರು ಮಾಡು ನಾಣಿ” ಅಂತ ಕೇಳ್ಕೊಂಡೆ.”
ಓ.ಎಲ್. ನಾಗಭೂಷಣಸ್ವಾಮಿ ಅನುವಾದಿಸಿದ ಒರ್ಹಾನ್ ಪಮುಕ್ ಕಾದಂಬರಿಯ ಆಯ್ದ ಭಾಗ
“ಜೂನ್ ತಿಂಗಳ ಮಧ್ಯಭಾಗದಲ್ಲಿ ಒಂದು ದಿನ ಪಕ್ಕದ ಜಮೀನಿಂದ ಜನ ಖುಷಿಯಾಗಿ ಕೂಗಾಡುವುದು, ಗುಂಡು ಹಾರಿಸುವುದು ಕೇಳಿಸಿತು. ಏನೆಂದು ನೋಡುವುದಕ್ಕೆ ಹೋದೆ. ಬಾವಿಯಲ್ಲಿ ನೀರು ಚಿಮ್ಮಿತ್ತು. ಆ ಒಳ್ಳೆಯ ಸುದ್ದಿ ಕೇಳಿದ ತಕ್ಷಣ ಜಮೀನಿನ ಯಜಮಾನ ಸಂಭ್ರಮಪಡುವುದಕ್ಕೆಂದು ರಯೀಸ್ ನಿಂದ ಬಂದಿದ್ದ. ಖುಷಿಯಲ್ಲಿ ಆಕಾಶಕ್ಕೆ ಗುಂಡು ಹಾರಿಸುತಿದ್ದ. ಗಾಳಿಯಲ್ಲಿ ಮದ್ದಿನ ಪುಡಿಯ ಘಾಟಿತ್ತು.”
ಎಂ.ಜಿ. ಶುಭಮಂಗಳ ಅನುವಾದಿಸಿದ ಪೆದ್ದಿಂಟಿ ಅಶೋಕ್ ಕುಮಾರ್ ಬರೆದ ಕತೆ
“ಇಬ್ಬರೂ ಮಾತನಾಡಿಕೊಳ್ಳುತ್ತಿರುವಂತೆಯೇ ಟ್ರ್ಯಾಕ್ಟರ್ ತುಂಬಾ ಕೂಲಿಗಳ ಮಂದೆ ದಬದಬನೆ ಇಳಿಯಿತು. ನಾಲ್ಕು ಬೆರಳಿಗೆ ನಾಲ್ಕು ಉಂಗುರಗಳು, ಡೊಳ್ಳು ಹೊಟ್ಟೆಯ ವ್ಯಕ್ತಿ ಸ್ಕೂಟರಿನಲ್ಲಿ ಬಂದು ಕೂಲಿಗಳಿಗೆ ತಲಾ ಹತ್ತು ರುಪಾಯಿ ಹಿಡಿದುಕೊಂಡು ತೊಂಭತ್ತು ರುಪಾಯಿ ಮಾತ್ರ ಕೊಡುತ್ತಿದ್ದಾನೆ. ಏಕೆಂದು ಅವರು ಕೇಳಲಿಲ್ಲ,. ಇವನು ಹೇಳಲೂ ಇಲ್ಲ. ‘ಇವನು ಗುತ್ತಿಗೆದಾರ. ಸ್ಕೂಟರಿನಲ್ಲಿ ಬೆಳಗ್ಗೆ ಮತ್ತು ಸಂಜೆ ಎರಡು ರೌಂಡ್ ಹಾಕುತ್ತಾನೆ. ಸದ್ಯ ಇವತ್ತು ಪರವಾಗಿಲ್ಲ. ..”
ಭಾರತಿ ಹೆಗಡೆ ಬರೆದ ‘ಮಣ್ಣಿನ ಗೆಳತಿ’ ಪುಸ್ತಕದಿಂದ ಒಂದು ಲೇಖನ
“ಹಾಗೆ ನೋಡಿದ್ರೆ ಅಜ್ಜಿಯ ದೃಷ್ಟಿಯಲ್ಲಿ ಕೃಷಿ ಕೆಲಸ ಈಗ ತುಂಬ ಸುಲಭ. `ಈಗೇನ್ ಕಣವ್ವಾ… ಬೇಕಾದಸ್ಟು ಯಂತ್ರಗಳು ಬಂದಿವೆ, ಸರ್ಕಾರದೋರು ಎಂತೆಂತದೋ ಕೊಡ್ತವ್ರೆ, ಆಗೆಲ್ಲ ಈಂಗೆಲ್ಲ ಇರ್ನಿಲ್ಲ. ಯಾತದಲ್ಲಿ ನೀರೆತ್ತಬೇಕಾಗಿತ್ತು. ಗುದ್ದಲಿಯಿಂದ ಅಗೀಬೇಕಾಗಿತ್ತು. ಎಲ್ಲ ನಾವೇ ಬೆಳೀತಾ ಇದ್ವು. ಆವಾಗ ಭಾಳಾ ತೊಂದರೆ. ಒಂದ್ ಕಿತಾ ಏಕಾಏಕಿ ಬರ ಬಂದು ಬಿಡ್ತು. ನೀರು ಸಮಸ್ಯೆ, ಎಷ್ಟೊಂದು ಜನ ಎಲ್ಲ ಸತ್ತೋದ್ರು.”









