ಡಿ.ಎಸ್.ಎನ್ ಅವರ ‘ಗಾಂಧಿ ಕಥನ’ವೆಂಬ ಗಾಂಧಿಯ ಗಂಧ: ಎಚ್.ಆರ್.ರಮೇಶ್ ಲೇಖನ
“ಗಾಂಧಿ ದಿನದಿನಕ್ಕೂ ಪ್ರಸ್ತುತವಾಗುತ್ತ ಹೋಗುತ್ತಾರೆ. ಗಾಂಧಿ ಲೋಕದ ಬದುಕಿನ ಭವಿಷ್ಯ. ಗಾಂಧಿಯನ್ನು ಯಾವರೂಪದಲ್ಲಾದರೂ ಎದುರಾಗಲೇಬೇಕು. ಅವರ ಚಿಂತನೆಗಳಿಲ್ಲದ ಮುಂದಿನ ಸಮಾಜವನ್ನು ಕಟ್ಟಲು ಆಗುವುದಿಲ್ಲ. ಅವರ ಸಂಕೀರ್ಣವಾದ ವ್ಯಕ್ತಿತ್ವದಿಂದಾಗಿಯೇ ಅವರ ಜೊತೆ ಜಗಳಕ್ಕೆ ವಿಫುಲವಾದ ಅವಕಾಶವೂ ಇದೆ. ಅವರು ನಿಜ ಅರ್ಥದಲ್ಲಿ ಹೀರೋ. ಬದುಕಿನ ತೀವ್ರತೆರನಾದ ಸಂದರ್ಭಗಳನ್ನು…”
ಮುನವ್ವರ್ ಜೋಗಿಬೆಟ್ಟು ಬರೆದ ಸಣ್ಣ ಕತೆ “ಎರಡನೇ ತಿರುವು”
“ಏನೋ ತೀರ್ಮಾನಿಸಿದವಳಂತೆ, ಮೆಟ್ಟಿಲಿಳಿದು ರಸ್ತೆಗೆ ಬಂದಳು. ನಿಡು ದೂರದಲ್ಲಿ ಕುತೂಹಲ ಹುಟ್ಟಿಸುವ ಆ ಎರಡನೇ ಅಡ್ಡ ರಸ್ತೆ. ಒಮ್ಮೆ ಉರಿದು ಮತ್ತೆ ನಂದುತ್ತಿರುವ ದಾರಿದೀಪ. ಸಾಲದ್ದಕ್ಕೆ ಲೈಟು ಕಂಬದಿಂದ “ಟ್ರೀ” ಎಂಬ ಶಾರ್ಟ್ ಸರ್ಕ್ಯೂಟಿನ ಸದ್ದು. ಬೆಳಕು ನಂದಿ ಹೊತ್ತುವಷ್ಟರಲ್ಲೇ ಕತ್ತಲ ಮಧ್ಯೆ ರಪ್ಪನೆ ಯಾರೋ ನುಗ್ಗಿದಂತಾಗಿ ಇವಳೆದೆಯ ತುಂಬಾ ಹಾಲಿನವನ ಪ್ರೇತ. ಮತ್ತೆ ಮತ್ತೆ ನಡೆದಳು.”
ಡಾ. ಬಸವರಾಜ ಸಾದರ ಅವರ ಅನುವಾದಿತ ಕತೆಗಳ ಸಂಕಲನದಿಂದ ಒಂದು ಕತೆ
“ಸಾಹೇಬ್ರೆ, ಎಲ್ಲಾ ನಾಚಿಕೆ ಬಿಟ್ಟು, ಇರೋ ಸತ್ಯಾನೆಲ್ಲಾ ನಿಮಗೆ ಹೇಳುತ್ತೇನೆ. ನನ್ನ ಹತ್ತಿರ ಒಂದೇ ಒಂದು ಒಳಲಂಗ ಇದೆ. ಅದನ್ನು ನನ್ನ ಮದುವೆಯಲ್ಲಿ ಕೊಟ್ಟಿದ್ದರು. ಹರಿದು ಹೋಗಿದ್ದ ಅದನ್ನು ನಾನು ಅದೆಷ್ಟೋ ಸಾರಿ ಹೊಲಿದು ರಿಪೇರಿ ಮಾಡಿಕೊಂಡಿದ್ದೇನೆ. ಅದು ಮತ್ತೆ ಹೊಲಿಯಲಾರದಷ್ಟು ಚಿಂದಿ ಚಿಂದಿಯಾಗಿತ್ತು. ಅದಕ್ಕಾಗಿ ಸಾಹೇಬ್ರೆ…. ಈ ಬ್ಯಾನರ್ ಅನ್ನು ಕಿತ್ತುಕೊಂಡು ಅದರಿಂದ ಒಂದು ಒಳಲಂಗವನ್ನು ನಾನೇ ಹೊಲಿದುಕೊಂಡಿದ್ದೇನೆ…”
ಓಬಿರಾಯನ ಕಾಲದ ಕಥಾ ಸರಣಿಯಲ್ಲಿ ಎಸ್. ವೆಂಕಟರಾಜ ಬರೆದ ಕತೆ
“ಏನೋ ರಾಷ್ಟ್ರಗೀತೆ! ಪ್ರಾಯಶಃ ಪಿಕೆಟಿಂಗಿಗೆ ಹೋಗುತ್ತಾರಂತ ಕಾಣ್ತದೆ. (ಜ್ಞಾಪಿಸಿಕೊಂಡು) ಹೌದು. ಇವತ್ತು ಮಿರ್ಜಾ ಬ್ರದರ್ಸ್ ರ ಅಂಗಡಿ ಮುಂದೆ ಪಿಕೆಟಿಂಗ್ ಇದೆಯಂತೆ! (ನಗುತ್ತಾ) ಏ! ಮತ್ತೊಂದು ವಿಷಯ – ಆ ಪೈಕಿ ಒಂದು ಹುಡುಗಿ ಏನು ಚೆಂದ ಇದೆ ಗೊತ್ತಿದೆಯೆ? ಅದನ್ನು ನೋಡಿ ನಾನು ಕೂಡ ಪಿಕೆಟಿಂಗಿಗೆ ಸೇರೋಣಾಂತ… “
ಶ್ರೀಧರ ಬಳಗಾರ ಕಾದಂಬರಿಯ ಕುರಿತು ಶ್ರೀದೇವಿ ಕೆರೆಮನೆ ಬರಹ
“ಇಡೀ ಕಾದಂಬರಿಯಲ್ಲಿ ಗಮನ ಸೆಳೆಯುವುದು ಹವ್ಯಕ ಭಾಷೆಯ ಮಾತುಗಳು. ಇಡೀ ಉತ್ತರ ಕನ್ನಡದಲ್ಲಿ ಪ್ರತಿ ಜನಾಂಗಕ್ಕೂ ಅದರದ್ದೇ ಆದ ಒಂದೊಂದು ಭಾಷೆ ಇದೆ. ಅದರದ್ದೇ ಆದ ಏರಿಳಿತಗಳಿವೆ. ಹಾಗೆಯೆ ಒಂದು ಪ್ರದೇಶದಲ್ಲಿ ಯಾವ ಜನಾಂಗ ಪ್ರಬಲವಾಗಿದೆಯೋ ಆ ಜನಾಂಗದ ಮಾತನ್ನು ಸಾಮಾಜಿಕವಾಗಿ ಕೆಳವರ್ಗದ ಜನಾಂಗಗಳೂ ಅನುಸರಿಸುತ್ತವೆ. ಅಂತಹದ್ದೊಂದು ರೂಢಿ ಇಲ್ಲಿದೆ. ಉಗ್ರಾಣಿ ಶಂಕ್ರನಿಂದ ಹಿಡಿದು ಹೆರಿಗೆಯ ಕೆಲಸಕ್ಕೆ ಬರುವ ಲಕ್ಷ್ಮಿಯವರೆಗೆ….”
“ಮೂರ್ತಣ್ಣ”: ದರ್ಶನ್ ಜೆ. ಬರೆದ ಈ ವಾರದ ಕತೆ
“ಹೀಗೆ ನಡೆಯುತ್ತಿರುವಾಗಲೊಮ್ಮೆ, ಕೃಷ್ಣಪ್ಪನ ಹೋಟೆಲ್ಲಿಗೆ ನಾಲ್ಕು ಬಿಂದಿಗೆ ನೀರು ಸೇದಿ, ಸೈಕಲ್ ನ ಕ್ಯಾರಿಯರ್ ಮೇಲೆರಡು ಬಿಂದಿಗೆ ಕಟ್ಟಿ, ಮುಂದಿನ ಬಾರಿನ ಮೇಲೆರಡಿಟ್ಟು, ಬಿರಬಿರನೆ ಬರುತ್ತಿರುವಾಗ ಯಾರೋ ಎದುರಿನಿಂದ ಹಂದಿಗಳನ್ನು ಓಡಿಸುತ್ತಾ ಬಂದರು. ಮೂರ್ನಾಲಕ್ಕು ಕೊಚ್ಚೆ ಮೈನ ಹಂದಿಗಳು ಒಮ್ಮೆಗೆ ಇದಿರಾದದ್ದರಿಂದ ಮತ್ತು ಹಂದಿಯನ್ನು ಮುಟ್ಟಿಸಿಕೊಂಡರೆ ಸೈಕಲ್ ಮಾರಬೇಕಾದ ಪ್ರಸಂಗದ ಬಗ್ಗೆ ಹೆದರಿ, ಅದನ್ನು ತಪ್ಪಿಸಲು ಹೋಗಿ…”
ಎ.ಎನ್. ಪ್ರಸನ್ನ ಅವರ ಕಥಾ ಸಂಕಲನಕ್ಕೆ ಓ.ಎಲ್. ನಾಗಭೂಷಣ ಸ್ವಾಮಿ ಬರೆದ ಮಾತುಗಳು
“ಕಳೆದ ಇಪ್ಪತ್ತು ವರ್ಷಗಳಲ್ಲಿ ಮಧ್ಯಮ ವರ್ಗದಲ್ಲೇ ಆಗಿರುವ ಬದಲಾವಣೆಗಳನ್ನು ಕಂಡವರಿಗೆ ಈ ಕಥೆಗಳು ಇಪ್ಪತ್ತನೆಯ ಶತಮಾನದ ಕೊನೆಯ ಮೂರು ದಶಕಗಳ ಶ್ರೀಸಾಮಾನ್ಯ ಬದುಕಿನ ಸಾಹಿತ್ಯಕ, ಕಾವ್ಯಾತ್ಮಕ ದಾಖಲೆಗಳಾಗಿ ಕಾಣಬಹುದು. ಇದು ಕಥೆಗಳ ಮಿತಿಯಲ್ಲ, ಓದುಗರಿಗೆ ದೊರೆಯುವ ಅವಕಾಶ. ಇಂದಿನ ಬದುಕನ್ನು ಅಂದಿನ ಬದುಕನ್ನು, ಇಂದಿನ ಮನೋಧರ್ಮವನ್ನು ಅಂದಿನ ಮನೋಧರ್ಮವನ್ನು…”
ಓಬಿರಾಯನ ಕಾಲದ ಕಥಾಸರಣಿಯಲ್ಲಿ ಸಿಕಂದರ್ ಕಾಪು ಬರೆದ ಕತೆ
“ಘರ್ಷಣೆಗೆ ಕಸುವೇರಲು ಓರ್ವ ಪೋಲೀಸ್ ವೀರ ದರ್ಪದಿಂದ ಧಾವಿಸಿ ಬಂದು ಸುನಂದೆಯ ಬಳಿಯಲ್ಲಿದ್ದ ಒಬ್ಬ ಹುಡುಗಿಯ ತಲೆಗೆ ಲಾಥಿಯಿಂದ ಪ್ರಹಾರ ಮಾಡಿದ. ಉತ್ತರ ಕ್ಷಣ ಅವಳು ಚಟ್ಟನೆ ಚೀರಿ ಬಿದ್ದು ಬಿಟ್ಟಳು. ಈ ದೃಶ್ಯವನ್ನು ಕಂಡು ಕುಪಿತಳಾದ ಸುನಂದೆ ಕೆರಳಿದ ಕೇಸರಿಯಂತೆ ಮುಂಬರಿದು ‘ಎಲೋ ದುರಾತ್ಮಾ, ಬೆತ್ತದೇಟಿನ ಆಜ್ಞೆಯಿರಲು ಹುಡುಗಿಗೆ ದೊಣ್ಣೆಯಿಂದ ಹೊಡೆದೆಯಾ? ನಿನ್ನ ಪೊಳ್ಳು ಪೌರುಷಕ್ಕೆ ಬೆಂಕಿ ಬೀಳಲಿ’ ಎಂದು ಘರ್ಜಿಸಿದಳು….”
ಸದಾಶಿವ ಸೊರಟೂರ ಕವನ ಸಂಕಲನಕ್ಕೆ ಆಶಾಜಗದೀಶ್ ಮುನ್ನುಡಿ
“ದಿನನಿತ್ಯದ ಸಾಮಾನ್ಯ ವಾರ್ತೆಯೂ ಕವಿತೆಯಾಗಬಲ್ಲದು. ಸಾಮಾನ್ಯ ಎನಿಸುವ ಸಣ್ಣ ವರ್ತಮಾನವೂ ಕವಿಗೆ ಭಿನ್ನವಾಗಿ ಕಾಣಬಹುದು. ಅಂತಹ ಭಿನ್ನತೆಯಲ್ಲಿಯೇ ವರ್ತಮಾನದ ಕಾವ್ಯ ಹೊಸತನ ಪಡೆದುಕೊಳ್ಳುತ್ತದೆ. ಆದರೆ ಕವಿತೆ ಎನ್ನುವುದು ಒಂದು ಭಾಷೆಯ ಸೌಂದರ್ಯ ಸಾಧನವಾಗಿರುತ್ತದೆ. ಕಡಿಮೆ ಪದಗಳಲ್ಲಿ ಹೆಚ್ಚಿನದನ್ನು ಹೇಳಲಿಕ್ಕೆ ಕಾವ್ಯ ನೆರವಾಗುತ್ತದೆ. ಕಾವ್ಯಕ್ಕೆ ಪದಗಳ ದುಂದು, ತುಂಡರಿಸಿಟ್ಟ ಗದ್ಯದ ಭಾಗ ಎನಿಸುವಂತಹ ರಚನೆಗಳು ಸಲ್ಲುವುದಿಲ್ಲ.”









