Advertisement

ಸಾಹಿತ್ಯ

ಬಿಡುಗಡೆ: ಉಮೇಶ ದೇಸಾಯಿ ಬರೆದ ವಾರದ ಕಥೆ

ಬಿಡುಗಡೆ: ಉಮೇಶ ದೇಸಾಯಿ ಬರೆದ ವಾರದ ಕಥೆ

“ರಾತ್ರಿ ಮಗಳು ಫೋನ್ ಮಾಡಿದ್ದಳು. ಬಿಕ್ಕುತ್ತಲೇ ಮಾತನಾಡಿದಳು. ಮೇಲಿಂದ ಮೇಲೆ ಸಾರಿ ಕೇಳುತ್ತಿದ್ದಳು. ಅವಳಿಗೆ ವಿಶ್ವಾಸ ತುಂಬಿ ನಾಕು ಸಮಾಧಾನದ ಮಾತು ಹೇಳಿದಾಗ ರಾಧಾಳಲ್ಲೂ ನಿರಾಳತೆಯ ಭಾವ. ಆದರೆ ಬೆಳಿಗ್ಗೆ ಬಂದ ಫೋನು ಅವಳನ್ನು ವ್ಯಗ್ರಳನ್ನಾಗಿಸಿತು. ಅನಿಲ ಕಪೂರ ಫೋನ್ ಮಾಡಿದ್ದ. ಎಲ್ಲದಕ್ಕೂ ರಾಧಾಳೇ ಹೊಣೆ, ಅವಳ ಮಹತ್ವಾಕಾಂಕ್ಷೆಗೆ ಮಗಳು ಬೋರ್ಡಿಂಗ್ ಸೇರುವಂತಾಯಿತು.”

read more
ಶ್ರೀಕೃಷ್ಣ ಎನ್. ಬುಗಟ್ಯಾಗೋಳ ಪುಸ್ತಕದ ಕುರಿತು ಶ್ರೀದೇವಿ ಕೆರೆಮನೆ ಬರಹ

ಶ್ರೀಕೃಷ್ಣ ಎನ್. ಬುಗಟ್ಯಾಗೋಳ ಪುಸ್ತಕದ ಕುರಿತು ಶ್ರೀದೇವಿ ಕೆರೆಮನೆ ಬರಹ

“ಬಹಳಷ್ಟು ಕೈಲಾಸ ಯಾತ್ರೆಯ ಪುಸ್ತಕಗಳನ್ನು ಇಲ್ಲಿಯವರೆಗೆ ಓದಿದ್ದೇನೆ. ನಿರ್ಜೀವ ವರ್ಣನೆ ಹಾಗೂ ಭಕ್ತಿಯ ಪರಾಕಾಷ್ಟೆಯನ್ನಷ್ಟೇ ನಾವಿಲ್ಲಿ ಕಾಣುತ್ತಿರುವುದು. ಆದರೆ ‘ನಾ ಕಂಡ ಕೈಲಾಸ’ ಪುಸ್ತಕದಲ್ಲಿ ಭಕ್ತಿಯ ಉತ್ತುಂಗದಲ್ಲಿ ಉಳಿದ್ದನ್ನೆಲ್ಲ ಮರೆಮಾಚುವ ಮೂಢತನವಿಲ್ಲ. ಇದ್ದುದನ್ನು ಇದ್ದಹಾಗೇ ದಾಖಲಿಸುವ, ಕೆಲವೊಮ್ಮೆ ಇದನ್ನು ಸ್ವಲ್ಪ ಮರೆಮಾಚಬಹುದಿತ್ತೇನೋ ಎಂದು ಓದುಗರೇ ಅಂದುಕೊಳ್ಳುವಷ್ಟರ ಮಟ್ಟಿಗೆ ಎಲ್ಲವೂ ಖುಲ್ಲಾಂಖುಲ್ಲ.”

read more
ಸುನೈಫ್ ವಿಟ್ಲ ಅನುವಾದಿಸಿ ವೈಕಂ ಮುಹಮ್ಮದ್ ಬಷೀರ್ ಕತೆ “ಅಮ್ಮ”

ಸುನೈಫ್ ವಿಟ್ಲ ಅನುವಾದಿಸಿ ವೈಕಂ ಮುಹಮ್ಮದ್ ಬಷೀರ್ ಕತೆ “ಅಮ್ಮ”

“ನನಗೆ ಎರಡು ಆಸೆಗಳಿದ್ದವು. ಎರಡೆನೆಯದ್ದು ಒಂದು ಶಾಲು. ದ್ರಾಕ್ಷೆ ಬಳ್ಳಿಗಳ ಅಂಚು ಇರುವ ಖಾದಿ ಶಾಲನ್ನು ಮಿಸ್ಟರ್ ಅಚ್ಚುತನ್ ನನಗೆ ಕೊಡಿಸಿದರು. ಮೊದಲನೇ ಆಸೆ 270ನ್ನು ಕೊಲ್ಲಬೇಕು! ಅದಕೆ ನನ್ನ ಕೈಯಲ್ಲಿ ಆಯುಧಗಳೊಂದೂ ಇಲ್ಲ. ಒಂದು ರಿವಾಲ್ವರ್ ಸಿಕ್ಕಿದ್ದರೆ ಸಾಕಿತ್ತು! ಎಂದು ಮನಸು ಹೇಳುತ್ತಿತ್ತು. ಆತ ಪಾಳಯಂ ಅಲ್ಲಿ ಟ್ರಾಫಿಕ್ ಡ್ಯೂಟಿಯಲ್ಲಿದ್ದದ್ದನ್ನು ನಾನು ನೋಡಿದೆ…”

read more
ಸೋಮುರೆಡ್ಡಿ ಕಾದಂಬರಿ ಕುರಿತು ಅಮರೇಶ ನುಗಡೋಣಿ ಲೇಖನ

ಸೋಮುರೆಡ್ಡಿ ಕಾದಂಬರಿ ಕುರಿತು ಅಮರೇಶ ನುಗಡೋಣಿ ಲೇಖನ

“ವಾಡೆಯ ಮಂದಿಗೆ ವಿಧಿ ಕಾಡಾಟವೆಂದು ತಿಳಿದು ಅದನ್ನು ಹೋಗಲಾಡಿಸಲು ಕೈಗೊಳ್ಳುವ ಮಾಟ ಮಂತ್ರಗಳು ರಂಗಪ್ಪನ ಕೊರಳಿಗೆ ಉರುಲಾಗುತ್ತದೆ. ವಾಡೆಯ ಕಾಡಾಟಗಳನ್ನು ಓಡಿಸಲು ಬರುವ ‘ಹೂಲಗೇರಿಯ ಅಜ್ಜ’ನ ಮೇಲೆ ರಂಗಪ್ಪನಿಗೆ ನಂಬಿಕೆ ಇರಲಿಲ್ಲ. ಆದರೂ ಹೂಲಗೇರಿ ಅಜ್ಜನನ್ನು ಕರೆಯಿಸಿ ಪೂಜೆ ಮಾಡಿಸಿಯೇ ಬಿಡುತ್ತಾರೆ. ಅದರ ಅಂಗವಾಗಿ ರಂಗಪ್ಪನಿಗೆ ಒಂದು ಬಿಳಿ ಎಕ್ಕಿಗಿಡದ ಗೂಟವನ್ನು… “

read more
ಸತೀಶ್ ಚಪ್ಪರಿಕೆ ಕಥಾಸಂಕಲನಕ್ಕೆ ಅವರೇ ಬರೆದ ಮುನ್ನುಡಿಯ ಮಾತುಗಳು

ಸತೀಶ್ ಚಪ್ಪರಿಕೆ ಕಥಾಸಂಕಲನಕ್ಕೆ ಅವರೇ ಬರೆದ ಮುನ್ನುಡಿಯ ಮಾತುಗಳು

” ‘ಗರ್ಭ’ ಹುಟ್ಟಿದ್ದು ಮತ್ತು ನಾನು ಆ ಇಡೀ ಕಥೆಯನ್ನು ಬರೆದಿದ್ದು ಆಸ್ಪತ್ರೆಯೊಂದರ ಮುಂದೆ. ಕಾರಿನಲ್ಲಿ ಕೂತು, ನಡುರಾತ್ರಿಯಲ್ಲಿ ನಾನೊಬ್ಬನೇ ಬಲವಂತವಾಗಿ ನಿದ್ರೆ ಮಾಡುವ ಯತ್ನ ಮಾಡುತ್ತಿದ್ದಾಗ. ಮೇಲೆ ಐಸಿಯುವಿನಲ್ಲಿದ್ದ ಜೀವಕ್ಕಾಗಿ ಚಡಪಡಿಸುತ್ತಲೇ, ಸೋತು ಹೋಗಿದ್ದ ನನ್ನ ಜೀವವನ್ನು ಕೊಡವಿ ಮೇಲೇಳಿಸಿದ ಕಥೆ ‘ಗರ್ಭ.’ ಆ ಕಥೆ ಮೊಳಕೆಯೊಡೆದ ಮರುಕ್ಷಣ, ಬ್ಯಾಗಿನಲ್ಲಿದ್ದ ಲ್ಯಾಪ್ ಟಾಪ್ ತೆಗೆದು ಒಂದೇ ಉಸಿರಿನಲ್ಲಿ ಬರೆಯಲಾರಂಭಿಸಿದಾಗ…”

read more
ಓಬಿರಾಯನ ಕಾಲದ ಕಥಾಸರಣಿಯಲ್ಲಿ ಪಡುಕೋಣೆ ರಮಾನಂದರಾವ್ ಬರೆದ ಕತೆ

ಓಬಿರಾಯನ ಕಾಲದ ಕಥಾಸರಣಿಯಲ್ಲಿ ಪಡುಕೋಣೆ ರಮಾನಂದರಾವ್ ಬರೆದ ಕತೆ

“ಹೊರಗಿನಿಂದ ಆ ಬಡ ಜನರ ಗಲಾಟೆ ಇನ್ನೂ ಅವನಿಗೆ ಕೇಳಿಸುತ್ತಿತ್ತು. ಆದರೆ ಅವರ ಮೇಲಿದ್ದ ಅವನ ಕೋಪವೂ ತಾತ್ಸಾರವೂ ಈಗ ಬಹಳ ಮಟ್ಟಿಗೆ ಕಡಿಮೆಯಾದುವು. ಅವರಲ್ಲೊಬ್ಬರಿಗೆ ಒಂದೊಂದು ಅರ್ಧಪಾವು ಅಕ್ಕಿ ಹಾಕಿ ಅವರನ್ನೆಲ್ಲ ಕಳುಹಿಸಿಬಿಡಲೇ ಎಂದು ಆಲೋಚಿಸಿದನು. ಆದರೆ ಅವರ ಗೋಳು ಭಿಕ್ಷೆಯನ್ನೆತ್ತುವುದಕ್ಕಲ್ಲ, ಅಕ್ಕಿಯ ಧಾರಣೆಯನ್ನು ಕಡಿಮೆ ಮಾಡುವುದಕ್ಕೆ ಎಂದು ಅವನು ಚೆನ್ನಾಗಿ ತಿಳಿದಿದ್ದನು. ಅದು ಅವನ ನೆನಪಿಗೆ ಬರುತ್ತಲೆ ಮೆಲ್ಲಮೆಲ್ಲನೆ ದ್ರವಿಸುತ್ತಿರುವ ಅವನ ಹೃದಯ.. “

read more
ಪ್ರವೀಣ ಕವನಸಂಕಲನದ ಕುರಿತು ಕಿರಸೂರ ಗಿರಿಯಪ್ಪ ಬರೆದ ಲೇಖನ

ಪ್ರವೀಣ ಕವನಸಂಕಲನದ ಕುರಿತು ಕಿರಸೂರ ಗಿರಿಯಪ್ಪ ಬರೆದ ಲೇಖನ

ಹುಳಕ್ಕೆ ಎಲ್ಲೆಲ್ಲಿಯ ಕನೆಕ್ಷನ್ನುಗಳಿವೆ? ಎನ್ನುವುದರ ಮೂಲಕ ಮುಗ್ಧ ಜನರಿಗೆ ಈ ಹಸಿವೆಂಬ ಹುಳ ಅದ್ಹೇಗೆ ತನ್ನ ಹಿಡಿತ ಸಾಧಿಸಿದೆ ಎಂಬುದನ್ನು ಮನದಟ್ಟು ಮಾಡುತ್ತಾ ಸಾಗುತ್ತದೆ. ‘ಹೂವುಗಳ್ಯಾಕೋ ಮೊಗ್ಗಿನಲೆ ಕಮರುತ್ತಿವೆ’ ಎನ್ನುವ ಸಾಲಿನಲ್ಲಿಯೂ ಮುಗ್ಧ ಹೃದಯಗಳ ಆತಂಕ ಎತ್ತಿ ತೋರಿಸುತ್ತದೆ. ಮತ್ತೆ ಮುಂದುವರೆದು ‘ಹೂವು ಅರಳಿಲ್ಲ’ ಎನ್ನುವ ಕವಿತೆಯಲ್ಲಿ ಬೆಳಕಿನ ಬೆಂಬತ್ತಿ ಹೋಗಿ, ಎಷ್ಟೆ ದಾರಿ ಸವಿಸಿದರೂ ಗಾಢಕತ್ತಲೆಯಲ್ಲಿ…”

read more
ಡಿ.ಎಸ್.ಎನ್ ಅವರ ‘ಗಾಂಧಿ ಕಥನ’ವೆಂಬ ಗಾಂಧಿಯ ಗಂಧ: ಎಚ್.ಆರ್.ರಮೇಶ್ ಲೇಖನ

ಡಿ.ಎಸ್.ಎನ್ ಅವರ ‘ಗಾಂಧಿ ಕಥನ’ವೆಂಬ ಗಾಂಧಿಯ ಗಂಧ: ಎಚ್.ಆರ್.ರಮೇಶ್ ಲೇಖನ

“ಗಾಂಧಿ ದಿನದಿನಕ್ಕೂ ಪ್ರಸ್ತುತವಾಗುತ್ತ ಹೋಗುತ್ತಾರೆ. ಗಾಂಧಿ ಲೋಕದ ಬದುಕಿನ ಭವಿಷ್ಯ. ಗಾಂಧಿಯನ್ನು ಯಾವರೂಪದಲ್ಲಾದರೂ ಎದುರಾಗಲೇಬೇಕು. ಅವರ ಚಿಂತನೆಗಳಿಲ್ಲದ ಮುಂದಿನ ಸಮಾಜವನ್ನು ಕಟ್ಟಲು ಆಗುವುದಿಲ್ಲ. ಅವರ ಸಂಕೀರ್ಣವಾದ ವ್ಯಕ್ತಿತ್ವದಿಂದಾಗಿಯೇ ಅವರ ಜೊತೆ ಜಗಳಕ್ಕೆ ವಿಫುಲವಾದ ಅವಕಾಶವೂ ಇದೆ. ಅವರು ನಿಜ ಅರ್ಥದಲ್ಲಿ ಹೀರೋ. ಬದುಕಿನ ತೀವ್ರತೆರನಾದ ಸಂದರ್ಭಗಳನ್ನು…”

read more
ಮುನವ್ವರ್ ಜೋಗಿಬೆಟ್ಟು ಬರೆದ ಸಣ್ಣ ಕತೆ “ಎರಡನೇ ತಿರುವು”

ಮುನವ್ವರ್ ಜೋಗಿಬೆಟ್ಟು ಬರೆದ ಸಣ್ಣ ಕತೆ “ಎರಡನೇ ತಿರುವು”

“ಏನೋ ತೀರ್ಮಾನಿಸಿದವಳಂತೆ, ಮೆಟ್ಟಿಲಿಳಿದು ರಸ್ತೆಗೆ ಬಂದಳು. ನಿಡು ದೂರದಲ್ಲಿ ಕುತೂಹಲ ಹುಟ್ಟಿಸುವ ಆ ಎರಡನೇ ಅಡ್ಡ ರಸ್ತೆ. ಒಮ್ಮೆ ಉರಿದು ಮತ್ತೆ ನಂದುತ್ತಿರುವ ದಾರಿದೀಪ. ಸಾಲದ್ದಕ್ಕೆ ಲೈಟು ಕಂಬದಿಂದ “ಟ್ರೀ” ಎಂಬ ಶಾರ್ಟ್ ಸರ್ಕ್ಯೂಟಿನ ಸದ್ದು. ಬೆಳಕು ನಂದಿ ಹೊತ್ತುವಷ್ಟರಲ್ಲೇ ಕತ್ತಲ ಮಧ್ಯೆ ರಪ್ಪನೆ ಯಾರೋ ನುಗ್ಗಿದಂತಾಗಿ ಇವಳೆದೆಯ ತುಂಬಾ ಹಾಲಿನವನ ಪ್ರೇತ. ಮತ್ತೆ ಮತ್ತೆ ನಡೆದಳು.”

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ