Advertisement
ಸುಜಾತ ಲಕ್ಷ್ಮೀಪುರ ಬರೆದ ಈ ದಿನದ ಕವಿತೆ

ಸುಜಾತ ಲಕ್ಷ್ಮೀಪುರ ಬರೆದ ಈ ದಿನದ ಕವಿತೆ

ಮತ್ತೊಂದು ಚಳಿಗಾಲ..

ಪ್ರತಿ ವರ್ಷದಂತೆ ಮತ್ತೊಂದು ಚಳಿಗಾಲ
ಬೇಸಿಗೆಯ ಗಾಯಕೆ ಮದ್ದೆರೆಯುವ ಹುನ್ನಾರ
ಸುಟ್ಟು ಬೆಂದ ಅಸಂಖ್ಯ ಒಡಲು
ತಂಪಾಗುವುದೆಂದರೆ ಸುಮ್ಮನೆಯೆ!?

ಧಗಧಗನೆ ಉರಿವ ಶತಮಾನದ ಬೇಗೆ
ಆರುವುದೆಂದು ಭ್ರಮಿಸುವುದೇ ಭ್ರಮೆ
ಅವಮಾನದ ಕಿಚ್ಚಲಿ ನಿತ್ಯ ಸುಡುತ್ತಿದ್ದು
ತಣ್ಣನೆಯ ಚಾದರ ಹೊದ್ದು ಮಲಗಿದರೂ
ಸಂಕಟದ ಶಾಖ ಕ್ಷೀಣಿಸುವುದೇನು!?

ನಂಜನ್ನೇ ಸುರಿದು ಹಚ್ಚಿದ ಬೆಂಕಿಯಲಿ
ವಿಷಕನ್ಯೆಯಾಗಿಯೇ ಅಗ್ನಿಯುಗುಳುತ
ಸುಟ್ಟುಕೊಳ್ಳುತ್ತಲೆ ಬೆಳಗಿಕೊಳ್ಳುತ್ತಾ
ನೋವುಣ್ಣುತ್ತಲೆ ಬೆಳಕಾದವಳನು
ಮಳೆ ಚಳಿಯೇನು ಮಾಡಿತ್ತು!?

ಬರಲಿ ಮತ್ತೆ ಮತ್ತೆ ಚಳಿಗಾಲ!
ಹಿಮದರಾಶಿಯೇ ಸುರಿಯಲಿ ರಾಶಿ ರಾಶಿ
ಸಾವಿರದ ನಾಲಿಗೆಯ ಚಾಚಿ ಬಿಸಿ ಹೊತ್ತಿಸಿ
ಕರಗಿಸಿ,ಕುದಿಸಿ, ಅಗ್ನಿವೇಶವನ್ನೇ ತೊಡಿಸಿ
ಆಪೋಶನಗೈಯುವೆನು ನನ್ನವ್ವನ ರೀತಿ.

About The Author

ಡಾ. ಸುಜಾತ ಲಕ್ಷ್ಮೀಪುರ

ಡಾ. ಸುಜಾತ ಲಕ್ಷ್ಮೀಪುರ ಪ್ರಸ್ತುತ ಬೆಂಗಳೂರಿನ ಮಲ್ಲೇಶ್ವರಂ ಬಾಲಕಿಯರ ಸರ್ಕಾರಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಹಲವಾರು ಕವಿತೆ, ಲೇಖನಗಳು ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿದೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ