Advertisement

Month: May 2024

ನಾವು ತಿನ್ನುವ ಆಹಾರದ ಮೂಲ ಯಾವುದು?

ನಾವು ತಿನ್ನುವ ಆಹಾರದ ಬಗ್ಗೆ ಬೆಳೆದ ಪ್ರಜ್ಞೆಯಿಂದ ಒಂದಷ್ಟು ಕಂಪೆನಿಗಳು ಹೊಸ ರೀತಿಯಲ್ಲಿ ಲಾಭಮಾಡಿಕೊಳ್ಳಲಾರಂಭಿಸಿದ್ದು ಒಂದೆಡೆಯಾದರೆ, ಮತ್ತೊಂದಷ್ಟು ಜನ ತೀರಾ ಮತ್ತೊಂದು ಹಾದಿಯಲ್ಲಿ ಯೋಚಿಸಲಾರಂಭಿಸಿದ್ದರು. ನಾವು ತಿನ್ನುವ ತರಕಾರಿಗಳನ್ನು ನಾವೇ ಬೆಳೆದುಕೊಂಡರೆ ಹೇಗೆ? ಹೀಗಂದುಕೊಂಡ ಬಹುತೇಕ ಜನರು ಇದ್ದದ್ದು ಬೆಂಗಳೂರಿನಂಥ ಮಹಾನಗರಗಳಲ್ಲಿ. ಮನೆ ಕಟ್ಟಲಿಕ್ಕೆ ಒಂದು ಸೈಟಿಗೆ ಸಾಕಷ್ಟು ಒದ್ದಾಡಬೇಕಾದಾಗ ಇನ್ನು ತರಕಾರಿಗಳನ್ನು ಬೆಳೆದುಕೊಳ್ಳುವುದು ಹೇಗೆ ಅನ್ನುವ ಜಿಜ್ಞಾಸೆಯ ಸಮಯದಲ್ಲೇ ಕೆಲವೊಂದಷ್ಟು ಜಾಣರು ಟೆರೆಸ್‌ ಗಾರ್ಡನಿಂಗ್‌ ಆರಂಭಿಸಿಯೇ ಬಿಟ್ಟರು. ರೂಪಶ್ರೀ ಕಲ್ಲಿಗನೂರ್‌ ಬರಹ

Read More

ಪಾಂಡೇಶ್ವರ ಗಣಪತಿರಾವ್‌ ಬರೆದ “ಕನ್ನಡ ತಾಯ ಪಾದಕ್ಕೆ” ಕವಿತೆ ಇಂದಿನ ಕಾವ್ಯ ಕುಸುಮ

“ಕನ್ನಡದ ಕವಿಚೂತವನ ಚೈತ್ರನೊಲು ನಿನ್ನ
ಭಾಗೋತ್ಸವಕೆ ಮಧುವ ತರಲಾರೆನು;
ಬಣಗು ಕವಿಗಳನು ಲೆಕ್ಕಿಸದ ಕಬ್ಬಿಗರಾಯ
ನೊಲು ನಿನ್ನ ಕೀರ್ತಿಗಾನವ ಹಾಡೆನು.”- ಕನ್ನಡ ಕಾವ್ಯ ಕುಸುಮ ಸರಣಿಯಲ್ಲಿ, ಪಾಂಡೇಶ್ವರ ಗಣಪತಿರಾವ್‌ ಬರೆದ ಕನ್ನಡ ತಾಯ ಪಾದಕ್ಕೆ ಎಂಬ ಕವನ ಇಂದಿನ ಓದಿಗಾಗಿ

Read More

ಹೊಸ ತಲೆಮಾರಿನ ಕಥೆಗಳು

‘ಕೊನೇ ಊಟ’ ಈ ಸಂಕಲನದ ಅತ್ಯಂತ ಮುಖ್ಯವಾದ ಅಷ್ಟೇ ಹೃದಯಸ್ಪರ್ಶಿ ಕಥೆ. ಸಂಯುಕ್ತ ಸಂಸ್ಥಾನಗಳ ನೇವಾರ್ಡ ರಾಜ್ಯದಲ್ಲಿ ಪೂರ್ವಕ್ಕಿರುವ ಕುಪ್ರಸಿದ್ಧ ಕಾರಾಗೃಹ ಈಲಿಯ ಜೈಲು. ಜೈಲಿನ ಸುತ್ತಲಿನ ಗೋಡೆಯನ್ನು ಹರಿತವಾದ ರೇಜರ್ ಬ್ಲೇಡುಗಳಿಂದ ನಿರ್ಮಿಸಿದ್ದಾರೆಂದರೆ ಒಳಗಡೆ ಇನ್ನೆಷ್ಟು ಭಯಾನಕ ಯಾತನಾಮಯ ದಬ್ಬಾಳಿಕೆ ನಡೆದಿರುತ್ತದೆಯೆಂಬುದು ಕೇವಲ ಊಹೆಗೆ ಬಿಟ್ಟ ವಿಷಯ, ಯಾವ ಕೈದಿಯೂ ಇಲ್ಲಿಂದ ಜೀವಂತ ಬಿಡುಗಡೆಯಾಗಿ ಹೊರಗೆ ಬಂದಿಲ್ಲ ಅಥವಾ ಗೋಡೆ ಜಿಗಿದು ಪಾರಾಗಿ ಓಡಿಹೋಗಿಲ್ಲ..
ಕಾವ್ಯಾ ಕಡಮೆ ಕಥಾ ಸಂಕಲನ “ಮಾಕೋನ ಏಕಾಂತ”ದ ಕುರಿತು ವಿಶ್ಲೇಷಣೆ ಬರೆದಿದ್ದಾರೆ ವ್ಯಾಸ ದೇಶಪಾಂಡೆ 

Read More

ಗಂಟಿನೊಳಗಿದ್ದ ಹೆಬ್ಬಾವು ಮಾಯವಾಗಿದೆಯೆಂದರೆ..

ಮರವನ್ನು ಸುತ್ತಿದ್ದ ಹೆಬ್ಬಾವು ಪೊಟರೆಯೊಳಕ್ಕೆ ಬಾಯಿಡಲು ಹವಣಿಸುತ್ತಿದೆ. ಒಂದೆಡೆ ಅಳಿವಿನಂಚಿನ ಜೀವಿಯ ಭವಿಷ್ಯದ ಆಶಾಕಿರಣವಾದ ಮೂರು ಮರಿಹಕ್ಕಿಗಳು. ಮತ್ತೊಂದೆಡೆ ಪ್ರಕೃತಿ ಸಹಜವಾಗಿ ಹಸಿದ ಹಾವು. ಏನೂ ಮಾಡದೇ ಹಾವು ಆ ಹಕ್ಕಿ ಮರಿಗಳನ್ನು ನುಂಗಲು ಬಿಡಲೇ ಅಥವಾ ಮಧ್ಯ ಪ್ರವೇಶಿಸಿ ಅದರ ಊಟವನ್ನು ಕಸಿದುಕೊಳ್ಳಲೇ? ವಿಚಿತ್ರ ಸಂದಿಗ್ಧ ಪರಿಸ್ಥಿತಿ. ಅದು ಅಳಿವಿನಂಚಿನ ಹಕ್ಕಿಯೆಂದು ಹೆಬ್ಬಾವಿಗೇನು ಗೊತ್ತು ಪಾಪ.
ಹಕ್ಕಿ ಮತ್ತು ಹಾವುಗಳ ಒಡನಾಟದಲ್ಲಿ ಪುಟಿದ ಜಿಜ್ಞಾಸೆಗಳಿಗೆ ಅಕ್ಷರ ರೂಪ ನೀಡಿದ್ದಾರೆ ಪ್ರಸನ್ನ ಆಡುವಳ್ಳಿ.

Read More

ಸುರಿವ ಮಳೆಯಲ್ಲಿ ಅಪ್ಪ ಮತ್ತು ನಾನು

ಈ ಯೂರಿಯಾ ಹಾಕುವ ದಿನಗಳಲ್ಲಿ ಗದ್ದೆಗಳನ್ನು ಬಹಳ ಜಾಗುರೂಕತೆಯಿಂದ ಕಾವಲು ಕಾಯಬೇಕಾಗುತ್ತದೆ. ಆ ದಿನ ಮಳೆ ಬಂದರೆ ಎಲ್ಲವೂ ಹರಿದು ಹೋಗುವ ಭಯ ಒಂದು ಕಡೆಯಾದರೆ ಇನ್ನೊಂದು ಭಯವೂ ಇದೆ. ಸಂಜೆಯ ವೇಳೆಗೆ ಯೂರಿಯಾ ಹಾಕಿ ಹಾಗೆಯೇ ಹೋದರೆ ಮರುದಿನ ಬೆಳಗ್ಗೆ ಅದು ಬೇರೆ ಗದ್ದೆಯ ಪಾಲಾಗುವುದು ಹೆಚ್ಚು. ಕೆಳಗಿನ ಗದ್ದೆಗಳಿಗೆ ನೀರಿಲ್ಲ ಅಂತ ನೆಪ ಮಾಡಿ ನಮ್ಮ ಗದ್ದೆಯಿಂದ ಅವರ ಗದ್ದೆಗಳಿಗೆ ನೀರು ಹಾಯಿಸುವ ನೆಪದಲ್ಲಿ ಗದ್ದೆಯ ಬದು ಸ್ವಲ್ಪ ಸರಿಸಿದರೆ ಯೂರಿಯವೆಲ್ಲಾ ಆ ಗದ್ದೆಯ ಪಾಲು. ಉಳುಮೆಯ ಸುಖದುಃಖಗಳ ಕುರಿತು ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅವರ ಲೇಖನ  ಇಲ್ಲಿದೆ.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ