ಪರಕೀಯತೆಯ ಪ್ರಜ್ಞೆ ಬಿಂಬಿಸುವ ತಿರುಮಲೇಶರ ಕತೆಗಳು
ಕವಿತೆ ಮತ್ತು ಕಾದಂಬರಿಗಳಲ್ಲಿ ನಡೆಸಿದ ವಾಸ್ತವ ನೆಲೆಯ ಹುಡುಕಾಟವನ್ನು ಅವರು ಇಲ್ಲೂ ನಡೆಸಿದ್ದಾರೆ. ‘ಜಾಗುವಾ ಮತ್ತು ಇತರರು’ ಕತೆಗಳಲ್ಲಿರುವಷ್ಟು ನವ್ಯದ ಪ್ರಖರತೆ ‘ಕೆಲವು ಕಥಾನಕಗಳ’ಲ್ಲಿ ಇಲ್ಲದಿದ್ದರೂ ಮುಖ್ಯ ಕಾಳಜಿಗಳು ಮಾತ್ರ ಮೊದಲಿನವೇ. ಜೀವನದ ಇರುವಿಕೆಯ ರೀತಿ, ರಹಸ್ಯಗಳ ಶೋಧನೆಗಳು ಮತ್ತು ಪರಕೀಯ ಪ್ರಜ್ಞೆಯ ಆಧಾರದಲ್ಲಿ ಮೂಡುವ ದಾರ್ಶನಿಕ ಒಳನೋಟಗಳು ಮುಖ್ಯವಾಗುತ್ತವೆ.
ಕೆ.ವಿ. ತಿರುಮಲೇಶರ ಕತೆಗಳ ಕುರಿತು ಬರೆದಿದ್ದಾರೆ ಡಾ. ಸುಭಾಷ್ ಪಟ್ಟಾಜೆ