Advertisement
ಅಕ್ಷಯ ಕಾಂತಬೈಲು ಬರೆದ ಎರಡು ಹೊಸ ಕವಿತೆಗಳು

ಅಕ್ಷಯ ಕಾಂತಬೈಲು ಬರೆದ ಎರಡು ಹೊಸ ಕವಿತೆಗಳು

1

ಪ್ರತಿಯೊಂದು ದಿನ
ಪ್ರತಿಯೊಂದು ಕ್ಷಣ
ನಿನ್ನ ಪ್ರೇಮದ ಮೊನಚು
ನನಗೆ ಮಾತ್ರ ನೆಟ್ಟಿದ್ದರೆ
ಮುಜುಗರ ಗೊಂದಲ ತಳಮಳ
ರೆಕ್ಕೆಯಿದ್ದರೂ ಹಾರಲು ತಿಳಿಯದ
ಹಕ್ಕಿಯು
ಹಿಕ್ಕೆ ಹಾಕಲೂ ಹೆದರಿಕೊಂಡು
ಅಪ್ಪಣೆಗಾಗಿ ಕಾಯುವಂತೆ

2

ಆವತ್ತಿನ ಸ್ಥಿತಿ ಗೊತ್ತಾ?
“ಏನಿರುತ್ತದೆ, ಹೊಳಪಿನಿಂದ
ಕೂಡಿರುತ್ತದೆ”
ಹಾಗಾದರೆ ಇವತ್ತು
ಕಂಡ ಮಿಂಚುಹುಳ ನಾಳೆ
ಯಾವ ಕಾಡಿನಲ್ಲಿ ಮಿನುಗುವುದು ಹೇಳುವೆಯಾ?
“ಪವಿತ್ರ ಕತ್ತಲೆಯ ಕಲಕದಿರುವ ಜೀವವ ತಿಳಿಸು”
ಬಸವನಹುಳು ತುಟಿಯ ಮೇಲೆ ತೆವಳಿದರೆ ಹೇಗೆ?
“ಇಸ್ಸಿ!”
ಅದೇ ಪರಿಸ್ಥಿತಿಯಿತ್ತು ಆವತ್ತು

ಅಕ್ಷಯ ಕಾಂತಬೈಲು ತರುಣ ಕವಿ.
ಎಂಜಿನಿಯರಿಂಗ್ ಪದವಿಯ ನಂತರ ಅಪ್ಪನಿಗೆ ಕೃಷಿಯಲ್ಲಿ ಸಹಾಯ ಮಾಡುತ್ತಿರುವವರು.
ಸಾಹಿತ್ಯ, ಕೃಷಿ ಇಷ್ಟದ ವಿಷಯಗಳು.

 

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ