Advertisement
ಸರೋಜಿನಿ ಪಡಸಲಗಿ ಅನುವಾದಿಸಿ ಖಲೀಲ್‌ ಗಿಬ್ರಾನ್‌ ಬರೆದ ಒಂದು ಕವಿತೆ

ಸರೋಜಿನಿ ಪಡಸಲಗಿ ಅನುವಾದಿಸಿ ಖಲೀಲ್‌ ಗಿಬ್ರಾನ್‌ ಬರೆದ ಒಂದು ಕವಿತೆ

ಭೀತಿ (Fear)…..

ಅರಿಯದ ಕಡಲ ಸೇರುವ ಮುನ್ನ ಹರಿದು ಬಂದ ನದಿಗೂ ಭೀತಿಯ ನಡುಕ
ಸಾಗಿ ಬಂದ ದಾರಿಯುದ್ದಕ್ಕೂ ದಾಟಿ ಬಂದಿದ್ದರೂ
ಗಿರಿಯ ಕಡಿದಾದ ತುದಿಯಿಂದ
ಕೊರಕಲು – ತಿರುವು – ಹಳ್ಳ- ತಿಟ್ಟುಗಳಗುಂಟ
ಜೊತೆಗೇ ಸಮತಟ್ಟು ಬಯಲು ಜನಸಂದಣಿಯ ನಡುವಿಂದ
ಸಾಗಿ ಬಂದ ಹಾದಿ ಅದು ಬಲ್ಲದದನ
ಈಗ ಇದಿರಿಗುಂಟು ಅರಿಯದ ವಿಶಾಲ ಸಾಗರ
ಒಳಹೊಗಲೇ ಬೇಕಾದ ನೀಲ ನೀರ ಹರವು

ಈ ಕಡಲಲ್ಲಿ ಸೇರಿ ಕರಗಿ ಹೋದರೆ ಮತ್ತೆಲ್ಲಿ ಉಂಟು ಉಳಿವು
ಎಂದೆಂದಿಗೂ ಮಾಯ ಮರೆತು ಹೋದ ಇರುವು
ಆದರೆ ಹೋಗಲುಂಟೇ ಮರಳಿ ಬಂದ ದಾರಿಯಲಿ
ಕಾಲನ ಪಥದಲ್ಲಿ ಸಾಗಿ ಬಂದು ಕಡಲಿನ ಬಯಲಿನಂಚಿನಲ್ಲಿ ಬಂದು ನಿಂತ ಜೀವದಂತೆ
ಬಲು ಅಸಹಾಯಕ ಅದೂ
ಬೇಕೋ ಬೇಡವೋ ಒಂದಾಗಲೇ ಬೇಕು ಕಡಲ ಒಡಲಲ್ಲಿ
ಆವಾಗಲೇ ಅನುಭವಿಸೀತು ಭೀತಿ ದೂರಾಗಿ ಅದೇನೋ ಆನಂದವ
ತಿಳಿದೀತು ನನ್ನ ಅಸ್ತಿತ್ವ ಅಳಿದಿಲ್ಲ ಬೆಳೆದೆ ನಾ ಎಂದು
ಈ ಬಲು ವಿಸ್ತಾರದ ನೀಲ ನೀರ ಬಯಲಲ್ಲಿ ಸೇರಿ ಬಯಲಾದೆ ಎಂದು
ನಾನೀಗ ಕಡಲೊಡನೆ ಸೇರಿ ಕಡಲಾದೆ ಎಂದು||

About The Author

ಸರೋಜಿನಿ ಪಡಸಲಗಿ

ಸರೋಜಿನಿ ಪಡಸಲಗಿ ಬೆಂಗಳೂರು ವಾಸಿ. ಕವಿತೆ, ಕತೆ ಪ್ರಬಂಧಗಳನ್ನು ಬರೆಯುವುದು ಜೊತೆಗೆ ಕವನಗಳಿಗೆ ರಾಗ ಸಂಯೋಜನೆ ಮಾಡಿ ಹಾಡುವುದೂ ಇವರ ಹವ್ಯಾಸ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ