Advertisement
ಸುಬ್ರಹ್ಮಣ್ಯ ಹೆಗಡೆ ಬರೆದ ಈ ದಿನದ ಕವಿತೆ

ಸುಬ್ರಹ್ಮಣ್ಯ ಹೆಗಡೆ ಬರೆದ ಈ ದಿನದ ಕವಿತೆ

ಹೊಸವರ್ಷಕ್ಕೊಂದು, ಸುಂದರ-
ಹೊಸ ಕವನ ‘ಹೊಸೆ’ಯ ಬೇಕೆಂದು
ಲೇಖನಿ ಹಿಡಿದು ಕುಳಿತಾಗ,
ಸಾಲು, ಸಾಲು ಹಳೇ ರೂಪಕಗಳ
ಮೆರವಣಿಗೆ, ಉರವಣಿಗೆ ಕಣ್ಮುಂದೆ.

ನಿನ್ನೆ ತೊಟ್ಟ ಗಲೀಜು, ಗಬ್ಬುನಾರುವ,
ಕೊಳೆಯಾದ ಹಳೆಯಂಗಿ ಕಳಚಿ,
ತೊಳೆದು ಶುಭ್ರವಾಗಿಸಿ, ‘ಇಸ್ತ್ರಿ’ ಮಾಡಿಟ್ಟ,
ಗರಿ ಗರಿ, ಹಳೆಯಂಗಿಯನ್ನೇ…..
ತೊಟ್ಟು ಖುಷಿಪಟ್ಟಂತೆ..!

ಮೂಲೆ ಸೇರಿದ ಮಬ್ಬು,
ಹಳೆ ಪಾತ್ರೆಯೊಂದ ಹುಡುಕಿ,
ಸೋಪಿನಿಂದ ಚನ್ನಾಗಿ ಉಜ್ಜಿ, ತಿಕ್ಕಿ, ತೀಡಿ
ತೊಳೆದು ‘ಲಕ,ಲಕಿಸಿ’,’ ಪಿಲ್ಟರ್’ ಮಾಡಿ,
ಕುದಿಸಿದ ಹಳೇ ನೀರ ತುಂಬಿಸಿ,
ಹೊಸತೆಂದು ಸಂಭ್ರಮಿಸಿದಂತೆ…!

ಅಜ್ಜ ಕಟ್ಟಿದ ಮೂರಂಕಣದ
ಹಳೇ ಮನೆ ರಿಪೇರಿಮಾಡಿಸಿ,
ಬಣ್ಣ ಬಳಿದು ಹೊಸದೆಂದುಕೊಂಡಂತೆ…!

ಹೊಸದಾಗಿ ಬರೆಯಲೇನೂ ಉಳಿದಿಲ್ಲ-
ವೆನ್ನಿಸಿ, ಕೊನೆಗೆ ಹಳೆ ‘ಬಾಲ್ಪೆನ್’–
ಮೊಳೆ ಬದಲಾಯಿಸಿ,
ಎದುರು ಹಳೇಗೋಡೆಗೆ ಹೊಡೆದ-
ಹಳೇ ಮೊಳೆಗೆ ನೇತಾಡುವ,
ಹೊಸವರ್ಷದ ‘ಕ್ಯಾಲೆಂಡರ್’ ಮೇಲೊಂದು
ಕವನ ಬರೆದೆ ಹೊಸವರ್ಷಕ್ಕೆ.

ಸುಬ್ರಹ್ಮಣ್ಯ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದವರು
ನಾನು ವೃತ್ತಿಯಲ್ಲಿ ಕ್ರಷಿಕರಾಗಿರುವ ಇವರು ಸಾಹಿತ್ಯಾಸಕ್ತರು.
ಇವರ ಬರಹಗಳು ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ಈಗಾಗಲೇ ಒಂದು ಕಾದಂಬರಿ ಪ್ರಕಟವಾಗಿದ್ದು, ಕವನ ಸಂಕಲನ ಪ್ರಕಟಣೆಯ ಹಂತದಲ್ಲಿದೆ.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ