Advertisement
ಡಾ.ಲಕ್ಷ್ಮಿಕಾಂತ ಮಿರಜಕರ ಬರೆದ ಗಜಲ್ 

ಡಾ.ಲಕ್ಷ್ಮಿಕಾಂತ ಮಿರಜಕರ ಬರೆದ ಗಜಲ್ 

ಬರಡು ಎದೆಯಲ್ಲಿ ಪ್ರೀತಿ ಹುಡುಕಿದ್ದು ನನ್ನ ತಪ್ಪು
ಬಂಜರು ನೆಲದಲ್ಲಿ ಕಾಳು ಬಿತ್ತಿದ್ದು ನನ್ನ ತಪ್ಪು 

ಯಾವತ್ತೂ ತಲೆಯೆತ್ತಿ ಆಕಾಶ ನೋಡದವನು
ಅಮಾವಾಸ್ಯೆಯಲ್ಲಿ ಚಂದ್ರನ ಹುಡುಕಿದ್ದು ನನ್ನ ತಪ್ಪು

ಸುಲಭವಾಗಿ ಗಳಿಸುವ ಭ್ರಮೆಯಲ್ಲಿ ಬದುಕಿದ್ದೆ
ಮೀನು ಇರದ ಕೊಳಕ್ಕೆ ಬಲೆ ಬೀಸಿದ್ದು ನನ್ನ ತಪ್ಪು 

ಸಂಗೀತ ಕಲಿಯಲು ಸಂಸ್ಕಾರ ಅರ್ಹತೆ ಇರಬೇಕು
ನಿನ್ನ ದನಿಗೆ ನನ್ನ ದನಿ ಬೆರೆಸಿದ್ದು ನನ್ನ ತಪ್ಪು 

ನೀನು ಪ್ರೀತಿ ಪ್ರೇಮದ ಬೆಲೆ ತಿಳಿಯದ ಹೆಬ್ಬಂಡೆ
ಕಾಂತ”ನಿನ್ನ ಕೇಳದೆ ಪ್ರೀತಿಸಿದ್ದು ನನ್ನ ತಪ್ಪು

ಲಕ್ಷ್ಮಿಕಾಂತ ಮಿರಜಕರ ಮೂಲತಃ ಹಾವೇರಿ ಜಿಲ್ಲೆಯ ಶಿಗ್ಗಾಂವದವರು.
ʼಚಿಲುಮೆʼ ಇವರ ಪ್ರಕಟಿತ ಕೃತಿ.. “ಬಯಲೊಳಗೆ ಬಯಲಾಗಿ”ಗಜಲ್ ಸಂಕಲನ ಅಚ್ಚಿನಲ್ಲಿದೆ.
ಸದ್ಯ ಮೊಳಕಾಲ್ಮೂರು ತಾಲೂಕಿನ ದೇವಸಮುದ್ರದ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಪ್ರಭಾರ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ