Advertisement
ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

ಕಣ್ರೆಪ್ಪೆ ಬಡಿದೇ ಹೇಳಿದ ಕತೆಯಿದು, ಅಲ್ಲಲ್ಲ.. ಜೀವನಚರಿತ್ರೆಯ ದೃಶ್ಯಗಳಿವು

ತಮ್ಮ ಆಸ್ಪತ್ರೆಯಲ್ಲಿರುವ ರೋಗಿಯೊಬ್ಬ ಪುಸ್ತಕವನ್ನು ಬರೆಯಬೇಕೆಂದ ಅಪೇಕ್ಷೆಯನ್ನು ಕೇಳಿ ಉಳಿದವರಿಗೆ ಆಶ್ಚರ್ಯವಾಗುತ್ತದೆ. ಡೊಮಿನಿಕ್ ಗೆ ಇದು ಅಸಾಧ್ಯವೆನಿಸುವುದಿಲ್ಲ. ಸ್ಪೀಚ್ ಥೆರಪಿಸ್ಟ್ ಹೇಳಿಕೊಟ್ಟ ಪ್ರಕಾರ ಸೂಚನೆಗಳನ್ನು ಅನುಸರಿಸಿ ಅಕ್ಷರಗಳನ್ನು ಹೆಣೆದು ಪದಗಳನ್ನು ಹೊಂದಿಸಿ ಬರೆಯುವವರು ಬೇಕೆಂದು ಬಯಸುತ್ತಾನೆ.
ಎ.ಎನ್. ಪ್ರಸನ್ನ ಬರೆಯುವ ʻಲೋಕ ಸಿನಿಮಾ ಟಾಕೀಸ್‌ʼನಲ್ಲಿ ಜೀನ್ ಡೊಮಿನಿಕ್ ಬಾಬಿ ಜೀವನಚರಿತ್ರೆಯನ್ನಾಧರಿಸಿದ ಫ್ರಾನ್ಸ್‌ನ ʻದ ಡೈವಿಂಗ್‌ ಬೆಲ್‌ ಅಂಡ್‌ ದ ಬಟರ್‌ಫ್ಲೈ ʼ ಸಿನಿಮಾ ಕುರಿತ ವಿಶ್ಲೇಷಣೆ

Read More

ಪ್ರತಿರೋಧ ಮಾರ್ಗಗಳ ಕತೆ ಹೇಳುವ ಸಿನಿಮಾ ʻಕೈರೋ 678’

ಫೈಜಾ಼ಳ ಗಂಡನಿಗೆ ಸರಿಯಾದ ಕೆಲಸವಿಲ್ಲ. ವರಮಾನದ ಅಭಾವವಿರುವ ಗಂಡ ಮತ್ತು ಸ್ಕೂಲಿಗೆ ಹೋಗುವ  ಇಬ್ಬರು ಮಕ್ಕಳನ್ನು ಆಕೆ ನಿಭಾಯಿಸಬೇಕು. ಆದಾಯದ ಕೊರತೆ. ಅದಕ್ಕಾಗಿ ಸಂಬಳ ವಿತರಿಸುವವನೊಂದಿಗೆ ಮಾಡುವ ಚರ್ಚೆ ವ್ಯರ್ಥ. ಜೊತೆಗೆ ಪ್ರತಿದಿನದ ಲೈಂಗಿಕ ಹಿಂಸೆಯಿಂದ ರಾತ್ರಿ ಕಾಡಿ, ಬೇಡಿ ಬರುವ ಗಂಡನನ್ನು ಹತ್ತಿರ ಬಿಟ್ಟುಕೊಳ್ಳಲು ಮನಸ್ಸಿರುವುದಿಲ್ಲ. ಗಂಡಸು ಎಂದರೆ ಸಾಕು ಉರಿದುಕ್ಕುವ ಹಿಂಸೆ ಆವರಿಸಿ ಗಂಡನನ್ನು ದೂರವಿಡಲು ಪ್ರತಿ ರಾತ್ರಿಯೂ ಈರುಳ್ಳಿ ತಿನ್ನುತ್ತಾಳೆ. ಗಂಡನಿಗೋ ಉಕ್ಕೇರಿ ಬರುವ ಅಭಿಲಾಷೆಯನ್ನು ಹತ್ತಿಕ್ಕುವ ಒದ್ದಾಟ.

Read More

ನಿಗೂಢತೆಯೆಡೆಗೆ ಚಲಿಸುವ ಇರಾನ್‌ನ ʻಸರ್ಟಿಫೈಡ್‌ ಕಾಪಿʼ

ಅಬ್ಬಾಸ್ ಕಿಯರೋಸ್ತಮಿ ತನ್ನ ನೆಚ್ಚಿನ ಮನೋಭೂಮಿಕೆಗೆ ಹತ್ತಿರವಾದ ಮನುಷ್ಯನ ಅಂತರಂಗದಲ್ಲಿ ಹುದುಗಿರುವ ಭಾವನೆಗಳ ಏರಿಳಿತವನ್ನು ತೀರಾ ಸರಳವಾದ ನಿರೂಪಣಾ ವಿಧಾನದಿಂದ ಪ್ರಸ್ತುತಪಡಿಸುತ್ತಾನೆ. ಅವನ ಚಿತ್ರಗಳ ಪಾತ್ರಗಳ ಸೃಷ್ಟಿಕ್ರಿಯೆ ಹಲವು ಪದರುಗಳಲ್ಲಿ ಜರುಗುವುದು ಸಾಮಾನ್ಯ. ಇವುಗಳು ಅಷ್ಟಕ್ಕೆ ನಿಲ್ಲದೆ ತೀರ ಗಹನ ವಿಷಯಗಳನ್ನು ಅತ್ಯಂತ ಕಡಿಮೆ ಘಟನೆಗಳನ್ನು ಉಪಯೋಗಿಸಿ ಪ್ರಸ್ತುತಪಡಿಸುವುದು ಅವನ ಶೈಲಿಯಾಗಿದೆ. …

Read More

ಸೌತ್‌ ಕೊರಿಯಾದ ʻಓಲ್ಡ್‌ಬಾಯ್’: ಚುರುಕು ನಿರೂಪಣೆಯ ಚೌಕಟ್ಟುಗಳು

ಕೋಣೆಯೊಳಗೆ ಅತ್ತಿಂದಿತ್ತ ಓಡಾಡಲು ಒಂದಿಷ್ಟು ಜಾಗ ಮತ್ತು ಹೊರಗಿನಿಂದ ಊಟ ಕೊಡಲು ಉಕ್ಕಿನ ಬಾಗಿಲಿನಲ್ಲಿ ಅಂಗೈ ಅಗಲದ ಕಿಂಡಿ. ಇಷ್ಟಲ್ಲದೆ ಉರುಳುವ ಗಂಟೆಗಳು ಸುಮ್ಮನೆ ಅವನನ್ನು ಸುತ್ತಿ ಚಿಂದಿ ಮಾಡುವುದನ್ನು ತಪ್ಪಿಸಿ, ಬೇರೆ ಕಡೆ ದೃಷ್ಟಿ ಹರಿಸುವಂತೆ ಮಾಡಲು ಸದಾ ಕಾಲ ಆನ್‌ ಆಗಿಯೇ ಇರುವ ಟೀವಿ. ಅದೇ ಅವನ ಸಂಗಾತಿ. ಉಳಿದಂತೆ ಆಗಾಗ ಹೊರಗೆಲ್ಲೋ ದೂರದಿಂದ ಅವನಿಗೆ ಆಗಾಗ ವಾಹನಗಳ ಓಡಾಟ ಇತ್ಯಾದಿಗಳ ಶಬ್ದ.

Read More

ಮಧ್ಯಮ ವರ್ಗದ ತಳಮಳಕ್ಕೆ ಕಥನರೂಪ ಕೊಡುವ ʻತ್ರೀ ಮಂಕೀಸ್ʼ

ಮಗ ಇಸ್ಮಾಯಿಲ್ ಗೆ ಮನೆಯ ಹತ್ತಿರ ಇರುವ ರೈಲ್ ಲೈನಿನ ಬದಿಯಲ್ಲಿರುವ ಸಿಮೆಂಟ್‌ ಕಂಬಗಳ ಕಾಂಪೌಂಡ್ ಮೇಲೇರಿ ದಾಟಿ ಹೋಗುವ ಅಭ್ಯಾಸ. ಅವನ ಮನಸ್ಸಿನ ಪರಿಯನ್ನು ನಿರೂಪಿಸುವ ಈ ದೃಶ್ಯ ರೂಪಕ್ಕೆ ಬೆಂಬಲವಾಗಿ, ಓಡುವ ರೈಲಿನ ಶಬ್ದವನ್ನೂ ನಿರ್ದೇಶಕ ಬಳಸಿಕೊಳ್ಳುತ್ತಾನೆ. ಇಷ್ಟೇ ಅಲ್ಲದೆ ರೈಲಿನಲ್ಲಿ ಕುಳಿತು ಗಾಳಿಗೆದುರಾಗಿ ಮುಖವಿಟ್ಟು, ಮನಸ್ಸು ಹರಿಬಿಟ್ಟು‌, ತನ್ನದೇ ಲೋಕ ರಚಿಸಿಕೊಳ್ಳುವ ಸ್ಥಿತಿಯಲ್ಲಿದ್ದಾನೆ ಅವನು.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ